Andolana originals

ಏ.೧೦ರಿಂದ ವಸ್ತು ಪ್ರದರ್ಶನದಲ್ಲಿ ಬೇಸಿಗೆ ಮೇಳ

ದಿನೇಶ್‌ಕುಮಾರ್ ಹೆಚ್.ಎಸ್

ಮೈಸೂರು: ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಬರುತ್ತಿರುವ ಹಿನ್ನೆಲೆಯಲ್ಲಿ ಏ.೧೦ ರಿಂದ ಮೇ ೩೦ರವರೆಗೆ ೫೦ ದಿನಗಳ ಕಾಲ ನಗರದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಬೇಸಿಗೆ ಮೇಳ ಆಯೋಜಿಸಲಾಗುತ್ತಿದೆ.

ವಸ್ತು ಪ್ರರ್ದಶನ ಎಂಬುದು ನಾಡಹಬ್ಬ ದಸರಾಗೆ ಸೀಮಿತವಾಗದೆ ವರ್ಷದಲ್ಲಿ ನಾಲ್ಕೈದು ಬಾರಿಯಾದರೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಜನರನ್ನು ಆಕರ್ಷಿಸಬೇಕು ಎಂಬುದು ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್ ಆಲೋಚನೆ.

ವಸ್ತು ಪ್ರದರ್ಶನ ಆವರಣದಲ್ಲಿ ಕೈಗಾರಿಕಾ ಮೇಳ ಆಯೋಜನೆ, ವಿವಿಧ ಸಮ್ಮೇಳನಗಳನ್ನು ನಡೆಸಲು ಅನುವು ಮಾಡಿಕೊಡಬೇಕು, ವಿವಾಹ ಸಮಾರಂಭಗಳಿಗೆ ಸ್ಥಳಾವಕಾಶ ಒದಗಿಸುವ ಮೂಲಕ ವರ್ಷಪೂರ್ತಿ ವಸ್ತು ಪ್ರದರ್ಶನ ಆವರಣ ಚಟುವಟಿಕೆಯಿಂದ ಕೂಡಿರುವಂತೆ ಮಾಡಲು ಯೋಜನೆ ರೂಪಿಸಲಾಗಿದೆ. ವಸ್ತುಪ್ರದರ್ಶನ ಆವರಣದಲ್ಲಿ ಕಳೆದ ೧೦ ವರ್ಷಗಳಿಂದಲೂ ಬೇಸಿಗೆ ಮೇಳೆ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಮೇಳದ ರೂಪುರೇಷೆ ಬದಲಾಗುತ್ತಿದೆ. ಅದರಂತೆ ಈ ಬಾರಿ ಕೂಡ ಮೇಳದಲ್ಲಿ ಹಲವು ವಿಶೇಷತೆಗಳಿವೆ.

೬೦ ಮಳಿಗೆಗಳು: ವಸ್ತುಪ್ರರ್ದಶನ ಆವರಣದಲ್ಲಿ ಬೇಸಿಗೆ ಮೇಳದ ವೇಳೆ ಸ್ಥಳೀಯ ಹಾಗೂ ರಾಜ್ಯದ ವಿವಿಧೆಡೆಗಳಿಂದ ಬರುವ ಸುಮಾರು ೬೦ ಮಂದಿ ಮಳಿಗೆಗಳನ್ನು ತೆರೆದು ವ್ಯಾಪಾರ ನಡೆಸಲಿದ್ದಾರೆ. ಮಹಿಳೆಯರ ಅಲಂಕಾರಿಕ ವಸ್ತುಗಳು, ಮಹಿಳೆಯರ ಹಾಗೂ ಪುರುಷರ ಬಟ್ಟೆಗಳು, ಗೃಹ ಬಳಕೆಯ ವಸ್ತುಗಳು, ಕೆತ್ತನೆಗಳು, ಮಕ್ಕಳ ಅಟಿಕೆಗಳು, ಸಿದ್ಧಪಡಿಸಿದ ಆಹಾರ ಪ್ಯಾಕೆಟ್ ಗಳು ಹೀಗೆ ಹಲವು ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತದೆ.

ಮನೋರಂಜನೆ: ಇನ್ನು ವಸ್ತುಪ್ರದರ್ಶನದ ಮುಖ್ಯದ್ವಾರದ ಸಮೀಪವೇ ಅಮ್ಯೂಸ್‌ಮೆಂಟ್ ಪಾರ್ಕ್ ಆರಂಭಿಸಲು ಉದ್ದೇಶಿಸಲಾಗಿದೆ. ವಸ್ತುಗಳ ಪ್ರದರ್ಶನ ಹಾಗೂ ಆಟೋಟಗಳು ಒಂದೆಡೆ ಇದ್ದು, ಜನರನ್ನು ಆಕರ್ಷಿಸಲು ಸಿದ್ಧವಾಗುತ್ತಿದೆ.

ಡ್ರ್ಯಾಗನ್ ಪಾಂಡ್: ವಸ್ತು ಪ್ರದರ್ಶನಕ್ಕೆ ಬರುವವರನ್ನು ಬಹು ಮುಖ್ಯವಾಗ ಆಕರ್ಷಿಸುವುದು ಡ್ರ್ಯಾಗನ್ ಪಾಂಡ್. ಅಲ್ಲಿನ ಆವರಣದಲ್ಲಿ ನಡೆಯುವ ಲೇಸರ್ ಷೋ ಜನಾಕರ್ಷಣೀಯವಾಗಲಿದೆ. ಇನ್ನು ಅಲ್ಲಿನ ಸಂಗೀತ ಕಾರಂಜಿ ಎಲ್ಲರ ಗಮನವನ್ನೂ ಸೆಳೆಯಲಿದೆ. ತಿಂಡಿ, ತಿನಿಸುಗಳು: ವಸ್ತುಪ್ರದರ್ಶನ ಆವರಣಕ್ಕೆ ಬರುವ ಮಕ್ಕಳು ಹಾಗೂ ಇತರರಿಗೆ ಅಲ್ಲಿ ಐಸ್‌ಕ್ರೀಂ, ಡೆಲ್ಲಿ ಹಪ್ಪಳ, ಚುರುಮುರಿ, ಮಲ್ಲಿಗೆ ಇಡ್ಲಿ, ಮೆಣಸಿನಕಾಯಿ ಬಜ್ಜಿ, ಗೋಬಿ ಮಂಚೂರಿ, ಮಸಾಲೆ ದೋಸೆ ಹೀಗೆ ನಾನಾತರದ ತಿಂಡಿ ತಿನಿಸುಗಳು ಪ್ರವಾಸಿಗರ ಜಿಹ್ವಾ ಚಾಪಲ್ಯವನ್ನು ನೀಗಿಸಲಿವೆ.

” ವಸ್ತುಪ್ರರ್ದಶನ ಆವರಣ ಸದಾ ಚಟುವಟಿಕೆಯಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಹಲವು ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೇಸಿಗೆ ಮೇಳ ಹಾಗೂ ಸೀರೆ ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಸೀರೆ ಮಾರಾಟ ಮೇಳದಲ್ಲಿ ಮಹಿಳಾ ವ್ಯಾಪಾರಸ್ಥರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜನರಿಗೆ ಹೊರೆಯಾಗದ ರೀತಿಯಲ್ಲಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ.”

ಅಯೂಬ್‌ಖಾನ್, ಅಧ್ಯಕ್ಷರು, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ.

ಇಂದಿನಿಂದ ಸೀರೆ ಮೇಳ: 

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ವಸ್ತುಪ್ರದರ್ಶನ ಆವರಣದಲ್ಲಿ ೧೦ ದಿನಗಳ ಕಾಲ ಸೀರೆ ಮಾರಾಟ ಹಾಗೂ ಪ್ರದರ್ಶನ ಮೇಳವನ್ನು ಆಯೋಜಿಸಲಾಗಿದೆ. ಶನಿವಾರ ಮೇಳ ಆರಂಭವಾಗಲಿದ್ದು, ರಾಜ್ಯದ ವಿವಿಧೆಡೆಯಿಂದ ಸೀರೆ ವ್ಯಾಪಾರಸ್ಥರು ಮೈಸೂರಿಗೆ ಬರಲಿದ್ದಾರೆ. ಇದಕ್ಕಾಗಿ ಆವರಣದಲ್ಲಿ ೪೦ ಮಳಿಗೆಗಳನ್ನು ಮೀಸಲಿಡಲಾಗಿದೆ. ೧೫೦ ರೂ.ನಿಂದ ೧೦ ಸಾವಿರ ರೂ.ಗೂ ಹೆಚ್ಚು ಬೆಲೆಯ ಸೀರೆಗಳು ಮೇಳದಲ್ಲಿ ಲಭ್ಯವಾಗಲಿವೆ. ಜೊತೆಗೆ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಆಹಾರ ಮಾರಾಟ ಮಳಿಗೆಗಳೂ ತೆರೆಯಲಿವೆ. ಮಧ್ಯಾಹ್ನ ೩ ರಿಂದ ರಾತ್ರಿ ೧೦ ಗಂಟೆವರೆಗೆ ಮೇಳ ನಡೆಯಲಿದೆ. ೨೫ ರೂ. ಪ್ರದೇಶ ದರ ನಿಗದಿಪಡಿಸಲಾಗಿದೆ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಖಂಡನೀಯ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದಿಲ್ಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರದ ಕುಮ್ಮಕ್ಕು ಹಾಗೂ ಪೊಲೀಸರ…

2 hours ago

ಓದುಗರ ಪತ್ರ: ಗ್ರಂಥಪಾಲಕರಿಲ್ಲದ ಗ್ರಂಥಾಲಯಗಳು

ಕಳೆದ ೨೫ ವರ್ಷಗಳಿಂದ ರಾಜ್ಯದಲ್ಲಿ ೧೦ ಸಾವಿರ ಗ್ರಂಥಪಾಲಕ ಹುದ್ದೆಗಳನ್ನು ಭರ್ತಿ ಮಾಡದಿರುವುದು ಸರ್ಕಾರದ ಅಕ್ಷಮ್ಯ ನಿರ್ಲಕ್ಷ್ಯ. ೧,೨೦೦ ಸರ್ಕಾರಿ…

2 hours ago

ಓದುಗರ ಪತ್ರ: ಮುಚ್ಚಿರುವ ಪಿಎಚ್‌ಸಿ ಕೇಂದ್ರ ತೆರೆಯುವುದು ಎಂದು?

ಮೈಸೂರಿನ ಕುವೆಂಪು ನಗರದ ಎಂ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು, ಕಳೆದ ಮೂರು ತಿಂಗಳಿಂದ ಮುಚ್ಚಿದೆ. ಇದಕ್ಕೆ ಕಾರಣ ತಿಳಿದಿಲ್ಲ.…

2 hours ago

ಇದು ನಮಿತ್ ಮಲ್ಹೋತ್ರ ‘ರಾಮಾಯಣ’ ದರ್ಶನ

 ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ  ‘ತಿಣಿಕಿದನು -ಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂ ತಿಣೀಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ’ ಎಂದು…

2 hours ago

ಮಡಿಕೇರಿಯಲ್ಲಿ ಬಳಂಜಿಗಿಲ್ಲ ಬೇಡಿಕೆ

ಪುನೀತ್ ಜಿಲ್ಲೆಯಲ್ಲಿ ಕ್ಷೀಣಿಸಿದ ಮಳೆಯಿಂದ ಬೇಡಿಕೆ ಕುಸಿತ; ಕುಲಕಸುಬಿಗೆ ಹೊಡೆತ  ಮಡಿಕೇರಿ: ಜಿಲ್ಲೆಯಲ್ಲಿ ಧಾರಾಕಾರ ಮಳೆಯ ವಾತಾವರಣ ಇಲ್ಲದ ಕಾರಣ…

3 hours ago

ಕಾವೇರಿ ಕಣಿವೆ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿತ

ಕೆ.ಬಿ.ರಮೇಶನಾಯಕ ೨೦೧೫, ೨೦೧೬ರ ಅವಧಿಯಲ್ಲಿ ಇದ್ದಷ್ಟೇ ಈ ಬಾರಿಯೂ ಜಲಾಶಯಗಳಲ್ಲಿ ನೀರು ಮೈಸೂರು: ಕೇರಳದ ವಯನಾಡು, ಕೊಡಗಿನ ಭಾಗಮಂಡಲ ಭಾಗದಲ್ಲಿ…

3 hours ago