Andolana originals

ಸೆಕ್ಯೂರಿಟಿ ಗಾರ್ಡ್ ಪುತ್ರಿಗೆ 3ನೇ ಸ್ಥಾನ; ಅಪ್ಪನ ಶ್ರಮಕ್ಕೆ ಮೌಲ್ಯ ತಂದಿತ್ತ ವಿದ್ಯಾಭವನದ ಜಾಹ್ನವಿ

ಮೈಸೂರು: ಮಗಳನ್ನು ಚೆನ್ನಾಗಿ ಓದಿಸಬೇಕೆಂಬ ಹಂಬಲ ಅಪ್ಪನದು. ಅಪ್ಪ-ಅಮ್ಮನ ಕನಸನ್ನು ನೆರವೇರಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕೆಂದು ಹಗಲಿರುಳು ಓದಿದ ಫಲವಾಗಿ ಎಸ್.ಜಾಹ್ನವಿ ಜಿಲ್ಲೆಗೆ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಈಕೆ ಜೆಎಸ್‌ ಎಸ್ ಮೆಡಿಕಲ್ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರುವ ಹೆಬ್ಬಾಳು ಎರಡನೇ ಹಂತದ ನಿವಾಸಿ ಶಿವಕುಮಾರ್ ಅವರ ಪುತ್ರಿಯಾಗಿದ್ದು, ಮುಂದೆ ಪಿಯುಸಿಯಲ್ಲೂ ಉತ್ತಮ ಅಂಕ ಪಡೆಯುವ ಅಭಿಲಾಷೆ ಹೊಂದಿದ್ದಾಳೆ.

ವಿಜಯನಗರದ ಐಶ್ವರ್ಯ ಪೆಟ್ರೋಲ್ ಬಂಕ್ ಸಮೀಪವಿರುವ ಭಾರತೀಯ ವಿದ್ಯಾಭವನದ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ಎಸ್.ಜಾಹ್ನವಿ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳನ್ನು ಪಡೆದುಕೊಂಡು ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ. ವಿಜಯನಗರದ ಸದ್ವಿದ್ಯಾ ಶಾಲೆಯ ಡಿ.ಎಸ್.ಧನ್ವಿ ಕೂಡ 625ಕ್ಕೆ 623 ಅಂಕ ಪಡೆದಿರುವ ಕಾರಣ ಇಬ್ಬರೂ ಜಿಲ್ಲೆಗೆ ಪ್ರಥಮರಾಗಿದ್ದಾರೆ.

ಕೆಆರ್‌ಎಸ್‌ ರಸ್ತೆಯಲ್ಲಿರುವ ಫಾಲ್ಕನ್ ಟೈರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ತಮ್ಮ ಮಗಳನ್ನು ಚೆನ್ನಾಗಿ ಓದಿಸುವ ಕನಸು ಹೊತ್ತಿದ್ದರು. ಆದರೆ, ಸ್ಥಗಿತಗೊಂಡ ಮೇಲೆ ಕುಟುಂಬ ನಿರ್ವಹಣೆಯ ಜತೆಗೆ ಮಗಳನ್ನು ಓದಿಸಬೇಕೆಂಬ ತುಡಿತದಿಂದಾಗಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಸೇರಿಕೊಂಡಿದ್ದರು. ದೂರದ ಹೆಬ್ಬಾಳುವಿನಿಂದ ಬೆಂಗಳೂರು ರಸ್ತೆಯ ಜೆಎಸ್ಎಸ್ ಮೆಡಿಕಲ್ ಕಾಲೇಜಿಗೆ ಬಂದು ಕಾರ್ಯ ನಿರ್ವಹಿಸುತ್ತಿದ್ದರೂ ಮಗಳ ಓದಿನ ಹಿಂದೆ ನಿಂತಿದ್ದರು.

ಮಗಳು ಚೆನ್ನಾಗಿ ಓದಬೇಕೆಂದು ರಾತ್ರಿ 11 ಗಂಟೆ ತನಕ ಮತ್ತು ಬೆಳಿಗ್ಗೆ 5 ರಿಂದ ಎದ್ದು ಓದುವಂತೆ ನೋಡಿಕೊಳ್ಳುತ್ತಿದ್ದರು.ಅದೇ ರೀತಿ ಜಾಹ್ನವಿ ಕೂಡ ಸಮಯಕ್ಕೆ ಸರಿಯಾಗಿ ಓದುತ್ತಿದ್ದರು. ಈ ವೇಳೆ ಪ್ರಥಮ ಸ್ಥಾನ ಬಂದಿದ್ದಕ್ಕೆ ಖುಷಿ ಹಂಚಿಕೊಂಡ ಎಸ್.ಜಾಹ್ನವಿ, ಶಾಲೆಯಲ್ಲಿ ಶಿಕ್ಷಕರು ತುಂಬಾ ಹೋಮ್ ವರ್ಕ್ ಮಾಡಿಸುತ್ತಿದ್ದರು. ಟಾಪ್ ಸ್ಟೂಡೆಂಟ್‌ಗಳನ್ನು ಗುರುತಿಸಿ ವಿಶೇಷ ತರಗತಿಗಳನ್ನು ಮಾಡುತ್ತಿದ್ದರಿಂದ ತುಂಬಾ ನೆರವಾಯಿತು. ಅಪ್ಪ, ಅಮ್ಮ ಕೂಡ ಸಹಕಾರ ನೀಡಿದ್ದರಿಂದ ಇಷ್ಟೊಂದು ಅಂಕ ಬರಲು ಕಾರಣವಾಯಿತು. ಕಷ್ಟಪಟ್ಟು ಓದಿದ್ದಕ್ಕೆ 623 ಅಂಕಗಳು ಬಂದಿದೆ, ದ್ವಿತೀಯ ಪಿಯುಸಿಯಲ್ಲೂ ಇದೇ ರೀತಿ ಟಾಪ್ ಆಗಿ ಬರುವ ಕನಸು ಹೊತ್ತಿದ್ದೇನೆ ಎಂದು ಹೇಳಿದರು. ಮಗಳನ್ನು ಓದಿಸಬೇಕೆಂದು ಸೆಕ್ಯೂರಿಟಿ ಗಾರ್ಡ್ ಆಗಿದ್ದರೂ ಶ್ರಮಿಸಿದ್ದೇನೆ. ಮಗಳು ಜಿಲ್ಲೆಗೆ ಮೊದಲಿಗರಾಗಿ ಬಂದಿದ್ದು ಸಂತೋಷ. ನಾನು ಫಾಲ್ಕನ್ ಟೈರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರು ತುಂಬಾ ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದರು.

ಕೆ.ಬಿ. ರಮೇಶ ನಾಯಕ

ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ನಾನು ಮೂಲತಃ ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆಯ ಕಣ್ಣೇಗಾಲ ಗ್ರಾಮದವನು. ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಪ್ರಾಥಮಿಕ,ಪ್ರೌಢಶಿಕ್ಷಣ, ಚಾಮರಾಜನಗರದಲ್ಲಿ ಪಿಯುಸಿ ವ್ಯಾಸಂಗ ಮಾಡಿದ ನಾನು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದೇನೆ. 1992ರಿಂದ 2002ರವರೆಗೆ ಮೈಸೂರು ಮಿತ್ರ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದ ಬಳಿಕ 2002ರಿಂದ 2012ರವರೆಗೆ ಸಂಯುಕ್ತ ಕರ್ನಾಟಕ ಮೈಸೂರು ಪ್ರಾದೇಶಿಕ ಕಚೇರಿಯಲ್ಲಿ ವರದಿಗಾರನಾಗಿ, 2013ರಿಂದ 2015ರವರೆಗೆ ಹಾಸನ ಮತ್ತು ಮೈಸೂರಿನಲ್ಲಿ ವಿಜಯ ಕರ್ನಾಟಕ ಹಿರಿಯ ವರದಿಗಾರನಾಗಿ, 2015ರಿಂದ 2017ರವರೆಗೆ ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರನಾಗಿ, 2017ರಿಂದ 2020 ಜೂನ್‌ವರಗೆ ವಿಶ್ವವಾಣಿ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದೇನೆ.

Recent Posts

2030ರ ವೇಳೆಗೆ 2 ಮಿಲಿಯನ್‌ ಉದ್ಯೋಗ ಸೃಷ್ಟಿ, ಅಭಿವೃದ್ಧಿ ಪರ ಆಯವ್ಯಯ : ಸಂಸದ ಯದುವೀರ್‌

ಮೈಸೂರು : ಯುವ ಸಮುದಾಯಕ್ಕೆ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡುವ ಮೂಲಕ ವಿಕಸಿತ…

6 hours ago

ಜನರನ್ನು ದಿಕ್ಕು ತಪ್ಪಿಸುತ್ತಿರುವ ಎನ್‌ಸಿಬಿ : ಎಂ.ಲಕ್ಷ್ಮಣ್‌ ಆರೋಪ

ಮೈಸೂರು : ನಗರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎನ್ನಲಾದ ವಸ್ತುಗಳಿಗೆ ಸಂಬಂಸಿದಂತೆ ಎನ್‌ಸಿಬಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರವೇ ಬೇರೆ.…

7 hours ago

ಬಡತನ ಪ್ರಮಾಣ ಗಣನೀಯ ಇಳಿಕೆ: ನಿರ್ಮಲಾ

ಹೊಸದಿಲ್ಲಿ: ಕಳೆದ 12 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಶಿಸ್ತುಬದ್ಧ ಆರ್ಥಿಕ ನಿರ್ವಹಣೆ ನಡೆಯುತ್ತಿರುವುದರಿಂದ ಭಾರತದ ಜಿಡಿಪಿ ದರ…

7 hours ago

ಕೇಂದ್ರ ಬಜೆಟ್‌ | 17.2 ಲಕ್ಷ ಕೋಟಿ ರೂ. ಸಾಲ

ಹೊಸದಿಲ್ಲಿ : ಕೇಂದ್ರ ಸರ್ಕಾರ 2026-27 ನೇ ಸಾಲಿಗೆ 17.2 ಲಕ್ಷ ಕೋಟಿ ರೂ. ಸಾಲ ಪಡೆಯಲಿದೆ ಎಂದು ಹಣಕಾಸು…

7 hours ago

ಕೇಂದ್ರ ಬಜೆಟ್‌ | ಯಾವುದು ಅಗ್ಗ, ಯಾವುದು ದುಬಾರಿ ?

ಹೊಸದಿಲ್ಲಿ : ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಆಯವ್ಯಯದಲ್ಲಿ…

7 hours ago

ಕರ್ನಾಟಕ ವಿರೋಧಿ ಬಜೆಟ್‌ : ಎಚ್‌ಸಿಎಂ ವ್ಯಂಗ್ಯ

ಬೆಂಗಳೂರು : ಹಣಕಾಸು ತಜ್ಞೆ ಅಲ್ಲದ ಕೇಂದ್ರದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ೯ನೇ ಕಳಪೆ ಬಜೆಟ್ ಇದಾಗಿದೆ.…

7 hours ago