Andolana originals

ಗ್ರಾಮೀಣ ಪ್ರತಿಭೆ ನಿತಿಲ್ ಈಗ ಚಲನಚಿತ್ರ ನಾಯಕ ನಟ

ಮಂಜು ಕೋಟೆ

ಕೋಟೆ: ಯುವಕನ ಪ್ರತಿಭೆ ಗುರುತಿಸಿ ಅವಕಾಶ ನೀಡಿರುವ ಕಾಲಘಟ್ಟ ಚಿತ್ರತಂಡ; ಜೂ.೧೯ರಂದು ಚಿತ್ರ ಬಿಡುಗಡೆ 

ಎಚ್.ಡಿ.ಕೋಟೆ: ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪ್ರತಿಭೆ, ಪಾತ್ರೆ ವ್ಯಾಪಾರಿಯ ಮಗ ನಿತಿಲ್ ಚಲನಚಿತ್ರ ನಾಯಕನಟನಾಗಿ ಅಭಿನಯಿಸಿರುವ ‘ಕಾಲಘಟ್ಟ’ ಚಲನಚಿತ್ರ ಬಿಡುಗಡೆ ಗೊಳ್ಳುತ್ತಿರುವುದು ತಾಲ್ಲೂಕಿನ ಜನತೆಯಲ್ಲಿ ಸಂತಸ ಮೂಡಿಸಿದೆ.

ತಾಲ್ಲೂಕಿನ ಗಿರಿಜನ ಪ್ರತಿಭೆ ರಾಜೇಶ್, ಸುನಾಮಿ ಕಿಟ್ಟಿ, ಗುಳಿಕಟ್ಟೆ ಸೂರ್ಯ ಕುಮಾರ್, ಅಮೃತ್ ಅವರುಗಳು ಈಗಾಗಲೇ ಚಲನಚಿತ್ರ ರಂಗಕ್ಕೆ ಪ್ರವೇಶಿಸಿ ನಾಯಕ ನಟನಾಗಿ ಹಾಗೂ ಖಳನಾಯಕರಾಗಿ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಪಟ್ಟಣದ ಹ್ಯಾಂಡ್‌ಪೋಸ್ಟ್ ಯರಹಳ್ಳಿ ಗ್ರಾಮದ ಪಾತ್ರೆ ವ್ಯಾಪಾರಿ ಬಡ ಕುಟುಂಬದ ಮಂಜುರಾವ್ ಮತ್ತು ದಿವ್ಯ ದಂಪತಿಯ ಪುತ್ರ ಎಚ್.ಎಂ.ನಿತಿಲ್ ‘ಕಾಲಘಟ್ಟ’ ಎಂಬ ಚಲನಚಿತ್ರದಲ್ಲಿ ನಾಯಕ ನಟ ನಾಗಿ ಅಭಿನಯಿಸಿದ್ದಾರೆ. ಅವರ ಜೊತೆ ನಾಯಕ ನಟಿಯಾಗಿ ಮೇಘನ ಖುಷಿ ಅಭಿನಯಿಸಿದ್ದಾರೆ.

೨೦೧೮ರಲ್ಲಿ ಮಲೇಶಿಯಾದ ಕೊಲಾಲಂಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಸ್ಥಾನ ಪಡೆದು ತಾಲ್ಲೂಕಿನಲ್ಲಿ ಗುರುತಿಸಿಕೊಂಡರು. ನಿತಿಲ್ ಅವರ ಸ್ವಭಾವ, ಗುಣ, ಪ್ರತಿಭೆಯನ್ನು ಗಮ ನಿಸಿದ ಕಾಲಘಟ್ಟ ಸಿನಿಮಾದ ನಿರ್ದೇಶಕ ರಾದ ಕೆ.ಪ್ರಕಾಶ ಅಂಬಳೆ, ಚಿತ್ರದ ನಿರ್ಮಾಪಕ ಚಿಕ್ಕೇಗೌಡ ತಳಗವಾದಿ ಅವರು ನಿತಿಲ್‌ಗೆ ಕಾಲಘಟ್ಟ ಚಲನಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುವ ಅವಕಾಶ ಮಾಡಿಕೊಟ್ಟರು.

ಈ ಚಿತ್ರದಲ್ಲಿ ಹಿರಿಯ, ಕಿರಿಯ ನಟ- ನಟಿಯರು ಅಭಿನಯಿಸಿದ್ದು, ಚಿತ್ರೀಕರಣ ಪೂರ್ಣಗೊಂಡಿದೆ. ಇದೇ ಜೂ.೧೯ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ಚಲನಚಿತ್ರ ನಾಯಕನಟನಾಗಿ ತಾಲ್ಲೂಕಿನ ಬಡ ಕುಟುಂಬದ ಯುವಕನಿಗೆ ಅವಕಾಶ ದೊರಕಿದ್ದರಿಂದ ತಾಲ್ಲೂ ಕಿನ ಸಂಘ-ಸಂಸ್ಥೆಗಳವರು, ಶಾಸಕರು, ರಾಜ್ಯದ ಇನ್ನಿತರ ಕಲಾವಿದರು ಸಂತಸ ವ್ಯಕ್ತಪಡಿಸಿ ಶುಭಕೋರಿ ಚಲನಚಿತ್ರದ ಪ್ರಚಾರ ಮಾಡಿದ್ದಾರೆ.

ತಾಲ್ಲೂಕಿನಲ್ಲಿ ಅನೇಕ ಪ್ರತಿಭೆಗಳಿಗೆ ಚಲನಚಿತ್ರ, ಧಾರಾವಾಹಿ, ಕಿರುಚಿತ್ರ,ರಿಯಾಲಿಟಿ ಶೋ ಮುಂತಾದ ಅನೇಕ ಕಾರ್ಯಕ್ರಮಗಳಲ್ಲಿ ಅವಕಾಶ ಸಿಕ್ಕಿವೆ. ಇವುಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟಕ್ಕೆ ಬೆಳೆದಾಗ ಅವರ ಭವಿಷ್ಯವೂ ಉಜ್ವಲವಾಗುವ ಜತೆಗೆ ತಾಲ್ಲೂಕಿಗೂ ಹೆಮ್ಮೆಯ ಸಂಗತಿಯಾಗಲಿದೆ.

” ನಾನು ಪಾತ್ರೆ ವ್ಯಾಪಾರಿಯಾಗಿದ್ದು, ನನ್ನ ಮಗನಿಗೆ ಉತ್ತಮ ಕಥೆ ಇರುವ ‘ಕಾಲಘಟ್ಟ’ ಚಲನಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುವ ಅವಕಾಶವನ್ನು ಚಿತ್ರತಂಡದವರು ನೀಡಿರುವುದು ನಮಗೆ ಮತ್ತು ತಾಲ್ಲೂಕಿನ ಜನರಿಗೆ ಸಂತೋಷ ತಂದಿದೆ. ನನ್ನ ಮಗನ ಬೆಳವಣಿಗೆಗೆ ಎಲ್ಲರ ಸಹಕಾರ ಮುಖ್ಯವಾಗಿದೆ.”

-ಮಂಜು ರಾವ್, ಪಾತ್ರೆ ವ್ಯಾಪಾರಿ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಒಡಿಶಾ: ಉಚಿತ ಶಿಕ್ಷಣ ಶ್ಲಾಘನೀಯ

ಒಡಿಶಾ ರಾಜ್ಯದ ಮುಖ್ಯಮಂತ್ರಿ ಮೋಹನ ಚರಣ ಮಾಂಝಿ ಅವರು ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿಯವರೆಗೆ ( ವೈದ್ಯಕೀಯ, ಇಂಜಿನಿಯರಿಂಗ್, ಫಾರ್ಮಸಿ, ಕೃಷಿ,…

1 hour ago

ಓದುಗರ ಪತ್ರ: ನಾಯಿ ಕಡಿತಕ್ಕೆ ಲಸಿಕೆ ಸರಬರಾಜು ಮಾಡಿ

ಮೈಸೂರು ನಗರದಲ್ಲಿ ಬೀದಿ ನಾಯಿಗಳ ಉಪಟಳ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿದಿನ ನಾಯಿ ಕಡಿತದ ನೂರಾರು ಪ್ರಕರಣಗಳು ವರದಿಯಾಗುತ್ತಿವೆ. ಮೈಸೂರು…

1 hour ago

ಓದುಗರ ಪತ್ರ: ಕಸಾಪ ಭ್ರಷ್ಟರ ಕೈಗೆ ಸಿಗದಂತಾಗಲಿ

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದಿದೆ ಎನ್ನಲಾದ ಎರಡು ಕೋಟಿ ರೂ.ಗಳಿಗೂ ಅಧಿಕ ಅನುದಾನ ದುರ್ಬಳಕೆಯ ಹಗರಣ ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆಗೆ…

1 hour ago

ಓದುಗರ ಪತ್ರ: ಸ್ವಾಗತಾರ್ಹ ಸದಾಶಯ!

ಪಂಚ ಗ್ಯಾರಂಟಿಗಳ ಪೈಕಿ ‘ಗೃಹಲಕ್ಷ್ಮಿ’, ‘ಗೃಹಜ್ಯೋತಿ’ ಯೋಜನೆಗಳು ದುರುಪಯೋಗ ಆಗುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇವುಗಳ ಪರಿಷ್ಕರಣೆಗೆ ಸರ್ಕಾರ ಮುಂದಾಗಿರುವುದು…

1 hour ago

ಕೈಕೊಟ್ಟ ಮಳೆ; ಬಾಡಿದ ಸೂರ್ಯಕಾಂತಿ ಬೆಳೆ

ಮಹೇಂದ್ರ ಹಸಗೂಲಿ ನಷ್ಟ ಹೊಂದಿದ ರೈತರಿಗೆ ಬೆಳೆ ವಿಮೆ ನೋಂದಣಿ ಜೊತೆಗೆ ಎಕರೆಗೆ ೫೦ ಸಾವಿರ ರೂ. ಪರಿಹಾರ ಭರಿಸಲು…

1 hour ago

ಗಟ್ಟವಾಡಿಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಪಿ.ಶಿವಕುಮಾರ್ ಜೆಜೆಎಂ ಯೋಜನೆ ವಿಫಲ; ನೀರಿಗಾಗಿ ಪಂಪ್‌ಸೆಟ್‌ಗಳಿಗೆ ಅಲೆದಾಡುತ್ತಿರುವ ಗ್ರಾಮಸ್ಥರು ದೊಡ್ಡ ಕವಲಂದೆ: ನಂಜನಗೂಡು ತಾಲ್ಲೂಕಿನ ಗಟ್ಟವಾಡಿಪುರ ಗ್ರಾಮದಲ್ಲಿ ಒಂದು…

1 hour ago