Andolana originals

ಮಾಂದಲಪಟ್ಟಿಯಲ್ಲಿ ಮುಂದುವರಿದ ರಸ್ತೆ ದುರಸ್ತಿ ಕಾರ್ಯ

ಬೃಹತ್ ಯಂತ್ರ ಬಳಸದೆ ಕೆಲಸ; ಇನ್ನೂ 10-15 ದಿನ ಪ್ರವಾಸಿಗರ ಪ್ರವೇಶಕ್ಕಿಲ್ಲ ಅವಕಾಶ

ನವೀನ್ ಡಿಸೋಜ

ಮಡಿಕೇರಿ : ಕೊಡಗಿನ ಪ್ರಸಿದ್ಧ ಪ್ರವಾಸಿತಾಣ ಮಾಂದಲಪಟ್ಟಿಯಲ್ಲಿ ರಸ್ತೆ ದುರಸ್ತಿ ಕೆಲಸ ಮುಂದುವರಿದಿದ್ದು, ಪ್ರವಾಸಿಗರಿಗೆ ಪ್ರವೇಶ ಸಿಗುವುದು ಇನ್ನಷ್ಟು ತಡವಾಗಲಿದೆ.

ಮಡಿಕೇರಿಯ ಮಾಂದಲಪಟ್ಟಿ ಪ್ರವಾಸಿ ತಾಣಕ್ಕೆ ಒಂದು ತಿಂಗಳಿನಿಂದ ತಾತ್ಕಾಲಿಕವಾಗಿ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾ ಗಿದ್ದು, ರಸ್ತೆ ದುರಸ್ತಿ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿ ಮುಗಿಯಲು ಇನ್ನೂ 10 ರಿಂದ 15 ದಿನಗಳ ಕಾಲಾವಕಾಶ ಬೇಕಾಗಲಿದ್ದು, ಅಲ್ಲಿಯವರೆಗೆ ಮುಗಿಲುಪೇಟೆ ಬಂದ್ ಆಗಿರಲಿದೆ.

ಫೆ.16ರಿಂದ ಮಾಂದಲಪಟ್ಟಿ ಒಳಗಿನ ರಸ್ತೆ ದುರಸ್ತಿ ಮತ್ತು ಕಲ್ಲು ಹಾಸು ಅಳವಡಿಕೆಗಾಗಿ ಪ್ರವಾಸಿಗರಿಗೆ ಪ್ರವೇಶವನು ನಿರ್ಬಂಧಿಸಲಾಗಿದೆ. ಫೆ.28ಕ್ಕೆ ಕೆಲಸ ಮುಗಿಸಬೇಕೆಂದು ಅಂದಾಜಿಸಿ ಅಲ್ಲಿಯವರೆಗೆ ಪ್ರವೇಶವನ್ನು ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಕಾಮಗಾರಿ ಆರಂಭವಾಗಿ ಒಂದು ತಿಂಗಳಾಗಿದ್ದು, ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ನಿರ್ಬಂಧವನ್ನು ಮುಂದುವರಿಸಲಾಗಿದೆ. ಕೆಲಸ ಮುಗಿ ಯುವುದು ಇನ್ನೂ ತಡವಾಗಲಿದ್ದು ಏಪ್ರಿಲ್ ಮೊದಲ ವಾರವೂ ಮುಗಿಲುಪೇಟೆ ಪ್ರವೇಶ ದುರ್ಲಭವಾಗಲಿದೆ.

ಮಾಂದಲಪಟ್ಟಿ ಪ್ರವಾಸಿತಾಣಕ್ಕೆ ಕೊಡಗಿಗೆ ಬರುವ ಬಹುತೇಕ ಪ್ರಕೃತಿ ಪ್ರಿಯರು ಭೇಟಿ ನೀಡಲು ಬಯಸುತ್ತಾರೆ. ಆದರೆ ಈಗ ಈ ತಾಣ ಬಂದ್ ಆಗಿರುವುದು ಪ್ರವಾಸೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದೀಗ ಮಕ್ಕಳಿಗೆ ಪರೀಕ್ಷೆಯ ಸಮಯವಾಗಿದ್ದು, ಟೂರಿಸಂಗೆ ಇದು ಅನ್ ಸೀಜನ್, ಈ ತಿಂಗಳ ಅಂತ್ಯಕ್ಕೆ ಪರೀಕ್ಷೆಗಳು ಬಹುತೇಕ ಮುಕ್ತಾಯವಾಗಲಿದ್ದು, ಬೇಸಿಗೆ ಪ್ರವಾಸೋದ್ಯಮ ಮತ್ತೆ ತೆರೆದು ಕೊಳ್ಳಲಿದೆ. ಈ ಸಮಯಕ್ಕೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣದ ಆಕರ್ಷಣೆಯೇ ಜನರು ನೋಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರವಾಸಿಗರು ಕೊಡಗಿಗೆ ಬರಲು ಹಿಂದೇಟು ಹಾಕುವ ಸಾಧ್ಯತೆ ಇದೆ.

ಇತ್ತೀಚೆಗೆ ಮಾಂದಲಪಟ್ಟಿಗೆ ಆಗಮಿಸಿದ್ದ ಪ್ರವಾಸಿಗರಿಂದ ಜೀಪು ಚಾಲಕನೋರ್ವ ಹೆಚ್ಚಿನ ಹಣ ಪಡೆದ ಘಟನೆ ಬೆಳಕಿಗೆ ಬಂದ ನಂತರ ನಡೆದ ಬೆಳವಣಿಗೆಗಳಲ್ಲಿ ಅಲ್ಲಿನ ರಸ್ತೆ ದುರಸ್ತಿ ಪಡಿಸುವುದೂ ಒಂದಾಗಿದೆ. ಸದ್ಯ ಪ್ರಗತಿ ಯಲ್ಲಿರುವ ಕಾಮಗಾರಿ ಮುಕ್ತಾಯವಾದರೂ, ಮಾಂದಲಪಟ್ಟಿಗೆ ಪ್ರವೇಶ ಸಮಯ ಬದಲಾಗುವ ಸಾಧ್ಯತೆ ಇದೆ. ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿ ಇಂತಹ ಬದಲಾವಣೆಗಳ ಅಗತ್ಯವೂ ಇದೆ. ಆದರೆ ಮಾಂದಲಪಟ್ಟಿ ಬಂದ್ ಆಗಿರುವುದರಿಂದ ನ್ಯಾಯಯುತವಾಗಿ ಜೀಪ್ ಬಾಡಿಗೆ ಕೆಲಸ ಮಾಡುತ್ತಿದ್ದ ನೂರಾರು ಜೀಪ್ ಚಾಲಕರಿಗೆ ತೊಂದರೆಯಾಗಿದೆ.

ನಂದಿ ಮೊಟ್ಟೆ, ಮಾಂದಲಪಟ್ಟಿ ಮುಂಭಾಗದಲ್ಲಿ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದೆ. ಇನ್ನೇನು ಪ್ರವಾಸಿಗರು ಬಂದು ಪ್ರವಾಸೋದ್ಯಮ ಮತ್ತೆ ಲಯಕ್ಕೆ ಮರಳ ಬೇಕೆನ್ನುವಷ್ಟರಲ್ಲಿ ಮಾಂದಲಪಟ್ಟಿಗೆ ಪ್ರವೇಶ ನಿರ್ಬಂಧ ಮುಂದುವರಿದಿರುವುದು ಜೀಪು ಚಾಲಕರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲಿದೆ.

ದುರಸ್ತಿ ಕಾರ್ಯ ತಡವಾಗುತ್ತಿರುವುದೇಕೆ?
ಮಾಂದಲಪಟ್ಟಿಯಲ್ಲಿ ಈಗಿರುವ ಕಚ್ಚಾ ರಸ್ತೆಯಲ್ಲಿನ ಬೃಹತ್ ಕಲ್ಲುಗಳನ್ನು ತೆಗೆದು ಕಲ್ಲುಹಾಸು ಅಳವಡಿಸಬೇಕಿದೆ. ಅರಣ್ಯ ಮತ್ತು ಸೂಕ್ಷ್ಮ ಪ್ರದೇಶವಾಗಿರುವುದರಿಂದ ದೊಡ್ಡ ಯಂತ್ರಗಳನ್ನು ಬಳಸಿ ಕೆಲಸ ಮಾಡುವುದು ಅಸಾಧ್ಯ. ಬಹುತೇಕ ಕೆಲಸ ಕಾರ್ಮಿಕರಿಂದಲೇ ಆಗಬೇಕಿದೆ. ಈಗಿನ್ನೂ ರಸ್ತೆಯ ನಡುವಿನ ಕಾಡು ಕಲ್ಲುಗಳ ತೆರವು ಕೆಲಸ ನಡೆಯುತ್ತಿದ್ದು, ಇನ್ನಷ್ಟೇ ಕಲ್ಲು ಹಾಸು ಹಾಕಬೇಕಿದೆ. ಮ್ಯಾನುವಲ್ ಆಗಿಯೇ ಕೆಲಸ ಮಾಡುತ್ತಿರುವುದರಿಂದ ಕಾಮಗಾರಿ ತಡವಾಗುತ್ತಿದೆ. ಕೆಲಸ ಪೂರ್ಣಗೊಳ್ಳಲು ಇನೂ 10-15 ದಿನಗಳಾದರೂ ಬೇಕಾಗಲಿದೆ.

ಇದು ಮಕ್ಕಳಿಗೆ ಪರೀಕ್ಷೆ ಸಮಯ, ಪ್ರವಾಸಿಗರ ಆಗಮನ ಕಡಿಮೆ ಇರುವ ಹಿನ್ನೆಲೆಯಲ್ಲಿ ಈಗ ಕಾಮಗಾರಿ ನಡೆಸಲು ಯೋಜಿಸಲಾಯಿತು. ಅದರಂತೆ ಕೆಲಸ ನಡೆಯುತ್ತಿದೆ. ಬಹುತೇಕ ಮ್ಯಾನುವಲ್ ಕೆಲಸ ಆಗಬೇಕಿರುವುದರಿಂದ ತಡವಾಗುತ್ತಿದೆ. ಇನೂ 10 ರಿಂದ 15 ದಿನಗಳಲ್ಲಿ ಕಾಮಗಾರಿ ಮುಗಿಯುವ ನಿರೀಕ್ಷೆಯಿದ್ದು, ಕಾಮಗಾರಿ ಮುಗಿದ ಕೂಡಲೇ ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಳಿಸಲಾಗುವುದು.
-ಅಭಿಷೇಕ್, ಡಿಸಿಎಫ್, ಮಡಿಕೇರಿ ಅರಣ್ಯ ವಲಯ

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

9 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

14 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

18 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

18 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

18 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

21 hours ago