ಡಿಸೆಂಬರ್ 5 ರಾತ್ರಿ 8.30ರ ವೇಳೆ ನಾನು ಮೈಸೂರಿನಿಂದ ನಂಜನಗೂಡಿಗೆ ಹೋಗುತ್ತಿದ್ದೆ. ನನ್ನ ಕಾರಿನಲ್ಲಿ ಫಾಸ್ಟ್ಯಾಗ್ ಇದ್ದರೂ ಟೋಲ್ ಸಿಬ್ಬಂದಿ ಸಾಫ್ಟ್ವೇರ್ ಅಪ್ಡೇಟ್ ಆಗುತ್ತಿದೆ ಎಂದು ಹೇಳಿ ನನ್ನ ಬಳಿ 30 ರೂ. ಟೋಲ್ ಶುಲ್ಕ ವಸೂಲಿ ಮಾಡಿ ರಶೀದಿ ನೀಡಿದರು.
ನಾನು ಇರಬಹುದೇನೊ ಎಂದು ಭಾವಿಸಿ ಸುಮ್ಮನಾದೆ. ಕೆಲ ಸಮಯದ ಬಳಿಕ ನನ್ನ ಫಾಸ್ಟ್ಯಾಗ್ ಖಾತೆಯಿಂದ ೬೦ ರೂ. ಕಡಿತಗೊಂಡಿರುವ ಬಗ್ಗೆ ನನಗೊಂದು ಸಂದೇಶ ಬಂತು. ಅಲ್ಲಿಗೆ ನನ್ನ ಖಾತೆಯ ಹಣ ಮತ್ತು ನಾನು ಟೋಲ್ನಲ್ಲಿ ನೀಡಿದ ಹಣ ಸೇರಿ ಮೈಸೂರಿನಿಂದ ನಂಜನಗೂಡಿಗೆ ೯೦ ರೂ. ಟೋಲ್ ದರ ಪಾವತಿಸಿದಂತಾಯಿತು. ನಂಜನಗೂಡಿನಲ್ಲಿ ಕೆಲಸ ಮುಗಿಸಿ ವಾಪಸ್ ಮೈಸೂರಿಗೆ ಬರುವ ವೇಳೆ ನಾನು ಟೋಲ್ ಸಿಬ್ಬಂದಿಗೆ ಈ ರೀತಿಯಾಗಿ ಹಣ ಕಡಿತಗೊಂಡಿದೆ ಎಂದು ವಿವರಿಸಿದರೆ ಅಲ್ಲಿನ ಸಿಬ್ಬಂದಿ ಇದು ಸಾಫ್ಟ್ ವೇರ್ ಸಮಸ್ಯೆ ಎಂದು ಬೇಜವಾಬ್ದಾರಿಯಿಂದ ಉತ್ತರಿಸಿದರು. ಸಾಲದ್ದಕ್ಕೆ ಅಲ್ಲಿನ ಸಿಬ್ಬಂದಿಗೆ ಕನ್ನಡ ಬರುವುದಿಲ್ಲ.
ಇದು ನನ್ನೊಬ್ಬನ ಸಮಸ್ಯೆ ಮಾತ್ರವಲ್ಲ. ಸಾಕಷ್ಟು ಜನರಿಗೆ ಇದೇ ಸಮಸ್ಯೆ ಎದುರಾಗಿದ್ದು, ಹೆಚ್ಚಿಗೆ ಹಣ ಪಾವತಿಸಿರುವ ಉದಾಹರಣೆಗಳಿವೆ. ಈ ರೀತಿ ಹಣಕ್ಕೆ ಕತ್ತರಿ ಹಾಕುವ ಟೋಲ್ಗಳ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು.
-ಎನ್. ಹರೀಶ, ಟಿ. ಕೆ. ಬಡಾವಣೆ, ಮೈಸೂರು
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…