ಡಿಸೆಂಬರ್ 5 ರಾತ್ರಿ 8.30ರ ವೇಳೆ ನಾನು ಮೈಸೂರಿನಿಂದ ನಂಜನಗೂಡಿಗೆ ಹೋಗುತ್ತಿದ್ದೆ. ನನ್ನ ಕಾರಿನಲ್ಲಿ ಫಾಸ್ಟ್ಯಾಗ್ ಇದ್ದರೂ ಟೋಲ್ ಸಿಬ್ಬಂದಿ ಸಾಫ್ಟ್ವೇರ್ ಅಪ್ಡೇಟ್ ಆಗುತ್ತಿದೆ ಎಂದು ಹೇಳಿ ನನ್ನ ಬಳಿ 30 ರೂ. ಟೋಲ್ ಶುಲ್ಕ ವಸೂಲಿ ಮಾಡಿ ರಶೀದಿ ನೀಡಿದರು.
ನಾನು ಇರಬಹುದೇನೊ ಎಂದು ಭಾವಿಸಿ ಸುಮ್ಮನಾದೆ. ಕೆಲ ಸಮಯದ ಬಳಿಕ ನನ್ನ ಫಾಸ್ಟ್ಯಾಗ್ ಖಾತೆಯಿಂದ ೬೦ ರೂ. ಕಡಿತಗೊಂಡಿರುವ ಬಗ್ಗೆ ನನಗೊಂದು ಸಂದೇಶ ಬಂತು. ಅಲ್ಲಿಗೆ ನನ್ನ ಖಾತೆಯ ಹಣ ಮತ್ತು ನಾನು ಟೋಲ್ನಲ್ಲಿ ನೀಡಿದ ಹಣ ಸೇರಿ ಮೈಸೂರಿನಿಂದ ನಂಜನಗೂಡಿಗೆ ೯೦ ರೂ. ಟೋಲ್ ದರ ಪಾವತಿಸಿದಂತಾಯಿತು. ನಂಜನಗೂಡಿನಲ್ಲಿ ಕೆಲಸ ಮುಗಿಸಿ ವಾಪಸ್ ಮೈಸೂರಿಗೆ ಬರುವ ವೇಳೆ ನಾನು ಟೋಲ್ ಸಿಬ್ಬಂದಿಗೆ ಈ ರೀತಿಯಾಗಿ ಹಣ ಕಡಿತಗೊಂಡಿದೆ ಎಂದು ವಿವರಿಸಿದರೆ ಅಲ್ಲಿನ ಸಿಬ್ಬಂದಿ ಇದು ಸಾಫ್ಟ್ ವೇರ್ ಸಮಸ್ಯೆ ಎಂದು ಬೇಜವಾಬ್ದಾರಿಯಿಂದ ಉತ್ತರಿಸಿದರು. ಸಾಲದ್ದಕ್ಕೆ ಅಲ್ಲಿನ ಸಿಬ್ಬಂದಿಗೆ ಕನ್ನಡ ಬರುವುದಿಲ್ಲ.
ಇದು ನನ್ನೊಬ್ಬನ ಸಮಸ್ಯೆ ಮಾತ್ರವಲ್ಲ. ಸಾಕಷ್ಟು ಜನರಿಗೆ ಇದೇ ಸಮಸ್ಯೆ ಎದುರಾಗಿದ್ದು, ಹೆಚ್ಚಿಗೆ ಹಣ ಪಾವತಿಸಿರುವ ಉದಾಹರಣೆಗಳಿವೆ. ಈ ರೀತಿ ಹಣಕ್ಕೆ ಕತ್ತರಿ ಹಾಕುವ ಟೋಲ್ಗಳ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು.
-ಎನ್. ಹರೀಶ, ಟಿ. ಕೆ. ಬಡಾವಣೆ, ಮೈಸೂರು
ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್ಗಳು ಈಗ ಇನ್ಸ್ಟಾಗ್ರಾಂ…
ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…
ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…
ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…
ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…