ಓದುಗರ ಪತ್ರ
ಕಳೆದ ಗುರುವಾರ ದಸರಾ ಸಾಂಸ್ಕೃತಿಕ ಉಪಸಮಿತಿಯ ಅಧಿಕಾರೇತರ ಸದಸ್ಯರನ್ನು ಅಭಿನಂದಿಸಲು ಮೈಸೂರಿನ ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭೋಜನಕ್ಕೆ ಮಾಂಸಾಹಾರವನ್ನು ಉಣಬಡಿಸಿರುವುದಾಗಿ ವರದಿಯಾಗಿದ್ದು, ಇದಕ್ಕೆ ಕೆಲವರಿಂದ ಆಕ್ಷೇಪಗಳೂ ಕೇಳಿಬರುತ್ತಿವೆ.
ಕಲಾಮಂದಿರ ಸಭಾಂಗಣದ ಒಳಾವರಣದಲ್ಲಿ ಯಾವುದೇ ರೀತಿಯ ಭೋಜನ ಅಥವಾ ಆಹಾರ ನೀಡುವ ವ್ಯವಸ್ಥೆಯ ವಿರುದ್ಧ ಹಿಂದೆಯೂ ಆಕ್ಷೇಪ ವ್ಯಕ್ತವಾಗಿತ್ತು. ಶುಚಿತ್ವದ ಸಮಸ್ಯೆ ಎದುರಾಗುತ್ತದೆ ಎಂಬ ಕಾರಣಕ್ಕೆ ಒಳಾವರಣದ ಬದಲಿಗೆ ಹೊರ ಆವರಣದಲ್ಲಿ ಭೋಜನ ವ್ಯವಸ್ಥೆ ಮಾಡಲು ಸೂಚಿಸಲಾಗಿತ್ತು. ಕಲಾಮಂದಿರ ರಾಜ್ಯದ ಸಂಸ್ಕೃತಿ ಇಲಾಖೆಗೆ ಸೇರಿದ್ದು, ಇದು ಈಗಾಗಲೇ ಮೂರೂ ದಿಕ್ಕುಗಳಿಂದ ಈ ಸಂಪ್ರದಾಯವಾದಿಗಳ ದಾಳಿಯಿಂದ
ಸಂಕುಚಿತವಾಗಿರುವ ‘ಸಂಸ್ಕೃತಿ’ ಎಂಬ ಪದವನ್ನು ಇಲ್ಲಿಗೂ ವಿಸ್ತರಿಸಿ, ಈ ಆವರಣದಲ್ಲಿ, ಎಲ್ಲ ಸಮುದಾಯದವರೂ ಬಂದು ಹೋಗುವುದರಿಂದ ಮಾಂಸಾಹಾರ ಒದಗಿಸುವುದು ಸೂಕ್ತವಲ್ಲ ಎಂದು ಹೇಳುವುದು, ಬಹು ಸಂಸ್ಕೃತಿಗೆ ವಿರುದ್ಧವಾಗಿದೆ. ಇಲ್ಲಿನ ಬಹುತೇಕ ಕಾರ್ಯಕ್ರಮಗಳಿಗೆ ಎಲ್ಲ ಸಮುದಾಯದವರು ಬರುವುದರಿಂದಲೇ ರುಚಿಸುವ ಆಹಾರ ನೀಡುವ ವಿಶಾಲ ಮನೋಭಾವ ನಮ್ಮೊಳಗಿರಬೇಕಲ್ಲವೇ? ಡಾ.ಬಿ.ಆರ್.ಅಂಬೇಡ್ಕರ್ ಅವರ ‘ಸಹಭೋಜನ’ದ ಕರೆ ಕೇವಲ ಒಟ್ಟಿಗೆ ಕುಳಿತು ಊಟ ಮಾಡುವುದಕ್ಕೆ ಸೀಮಿತವಾಗಿರುವುದಲ್ಲ. ಅದರ ಹಿಂದೆ ಎಲ್ಲ ವಿಧದ ಆಹಾರಗಳನ್ನೂ ಒಟ್ಟಿಗೆ ಕುಳಿತು ಸೇವಿಸುವ ಒಂದು ವಿಶಾಲ ಚಿಂತನ ಇದೆ.
ಇಷ್ಟಕ್ಕೂ ಕಲಾಮಂದಿರದಲ್ಲಿ ಮಾಂಸಾಹಾರ ನೀಡುವುದರಿಂದ ಯಾವ/ಯಾರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ? ಸಸ್ಯಾಹಾರವನ್ನಷ್ಟೇ ನೀಡಬೇಕು ಎಂದು ಶಾಸನ ವಿಧಿಸಲು ಅದೇನು ಧಾರ್ಮಿಕ ಕ್ಷೇತ್ರವೇ? ಅದು ನಾಡಿನ ಸಾಂಸ್ಕೃತಿಕ ವೈವಿಧ್ಯತೆಗೆ ಬೌದ್ಧಿಕ ನೆಲೆ ಒದಗಿಸುವ ಒಂದು ಜಾಗ. ಅಲ್ಲಿ ಬಹುಸಂಸ್ಕೃತಿಯ ಚಿಂತನೆಗಳು ಮೊಳೆಯಬೇಕೇ ಹೊರತು ಸಮಾಜವನ್ನು ಹಿಂದಕ್ಕೆ ಎಳೆದೊಯ್ಯುವ ಮನಸ್ಥಿತಿಯನ್ನು ಸೃಷ್ಟಿಸುವಂತಾಗಬಾರದು.
-ನಾ.ದಿವಾಕರ, ಮೈಸೂರು.
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…
ಇತ್ತೀಚಿನ ದಿನಗಳಲ್ಲಿ, ಟೂತ್ ಪೇಸ್ಟ್ಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶ ಪತ್ತೆಯಾಗಿದ್ದು, ಇದರ ಸೇವನೆಯಿಂದ ಹಲವು ಮಕ್ಕಳು ತೊಂದರೆಗೊಳಗಾಗಿರುವ ಘಟನೆಗಳು…
ಮೈಸೂರಿನ ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ರಸ್ತೆ, ಗದ್ದಿಗೆ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ವಿದ್ಯಾರಣ್ಯಪುರಂ -…
ಆಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಜಾರಿಗೆ ತಂದ ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ…
ತಿ.ನರಸೀಪುರ : ಬೈಕ್ ಗೆ ಎದುರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿ ಘಟನೆ ತಾಲೂಕಿನ…