ಓದುಗರ ಪತ್ರ
ನಂದಿನಿ ‘ಸಮೃದ್ಧಿ’ ಹಾಲನ್ನು ಒಂದು ತಿಂಗಳು ಪ್ರಮೋಷನ್ಗಾಗಿ ಅರ್ಧ ಲೀ.ಗೆ ೨೫ ರೂ.ನಂತೆ ಸರಬರಾಜು ಮಾಡುತ್ತಿದ್ದರು. ಹಾಲು ಗಟ್ಟಿಯಾಗಿತ್ತು. ಒಳ್ಳೆ ಕೆನೆಗಟ್ಟುತ್ತಿತ್ತು. ಬೆಣ್ಣೆಯೂ ಚೆನ್ನಾಗಿ ಬರುತ್ತಿತ್ತು. ಇದೀಗ ಕಳೆದ ಒಂದು ವಾರದಿಂದ ೩ ರೂ. ದರ ಹೆಚ್ಚಿಸಿ ಅರ್ಧ ಲೀ.ಗೆ ೨೭ ರೂ. ನಿಗದಿಪಡಿಸಿದ್ದಾರೆ. ದರವೇನೊ ಹೆಚ್ಚಿಸಿದರು. ಆದರೆ ಗುಣಮಟ್ಟ ಉಳಿಸಿಕೊಳ್ಳಲಿಲ್ಲ.
ಈಗ ದರ ಹೆಚ್ಚು ತೆತ್ತರೂ ಹಾಲು ಮೊದಲಿನಂತೆ ಕೆನೆಗಟ್ಟುವುದೂ ಇಲ್ಲ. ಬೆಣ್ಣೆಯೂ ಬರುವುದಿಲ್ಲ. ಸ್ಪೆಷಲ್ ಹಾಲನ್ನು ಸಮೃದ್ಧಿ ಪ್ಯಾಕೆಟ್ನಲ್ಲಿ ಸರಬರಾಜು ಮಾಡಿ ಗ್ರಾಹಕರನ್ನು ಡೇರಿ ವಂಚಿಸುತ್ತಿರುವಂತಿದೆ. ಇದು ಖಂಡನೀಯ. ತಕ್ಷಣ ಡೇರಿ ಮೊದಲಿನ ಗುಣಮಟ್ಟದಲ್ಲಿ ಸಮೃದ್ಧಿ ಹಾಲು ಪೂರೈಸಲಿ.
-ಹರೀಶ ಬಂದಗದ್ದೆ, ಪತ್ರಕರ್ತ, ಮೈಸೂರು
ಪುನೀತ್ ಮಡಿಕೇರಿ ೨೦೨೭ರ ಏಪ್ರಿಲ್-ಮೇನಲ್ಲಿ ನಡೆಯಲಿರುವ ಹಾಕಿ ಉತ್ಸವಕ್ಕೆ ಸಿದ್ಧತೆ; ಟರ್ಫ್, ಹೊನಲು ಬೆಳಕಿನ ಪಂದ್ಯಾವಳಿಗೆ ಚಿಂತನೆ ಮಡಿಕೇರಿ: ೨೬ನೇ…
ಮಂಜು ಕೋಟೆ ಮೇವು, ಕುಡಿಯುವ ನೀರಿಗಾಗಿ ಬರುವ ವನ್ಯಪ್ರಾಣಿಗಳನ್ನು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು ಎಚ್.ಡಿ.ಕೋಟೆ: ಬಿಸಿಲಿನ ತಾಪಮಾನದಿಂದ ಮೇವು ಮತ್ತು ಕುಡಿಯುವ…
೧೦೦ ಕಿ.ಮೀ.ಹೆಚ್ಡಿಪಿಇ ಪೈಪ್ ಅಳವಡಿಕೆ ಪ್ರಗತಿಯಲ್ಲಿ; ಕಾವೇರಿ ನೀರು ಪೂರೈಸಲು ನಗರಸಭೆ ಕ್ರಮ ಪ್ರಸಾದ್ ಲಕ್ಕೂರು ಚಾಮರಾಜನಗರ: ನಗರದಲ್ಲಿ…
ಗಿರೀಶ್ ಹುಣಸೂರು ರಾಜ್ಯದ ೫.೫೫ ಕೋಟಿ ಮತದಾರರ ಪರಿಷ್ಕರಣೆ ನಡೆಸಲಿರುವ ಬಿಎಲ್ಒಗಳು ಮೈಸೂರು:ಕಳೆದ ಎಲೆಕ್ಷನ್ನಲ್ಲಿ ಇದೇ ಬೂತ್ನಲ್ಲಿ ವೋಟ್ ಮಾಡಿದ್ದೆ,…
ಮಾಸ್ಕೋ: ಉಕ್ರೇನ್ ಶನಿವಾರ ರಾತ್ರೋರಾತ್ರಿ ಮಾಸ್ಕೋ ಸೇರಿದಂತೆ ರಷ್ಯಾದ ಅನೇಕ ಭಾಗಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದೆ. ಈ ವೈಮಾನಿಕ…