ಓದುಗರ ಪತ್ರ
ಕಳೆದ ಒಂದು ವಾರದಿಂದ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನ, ಡಿ. ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾದ ನಂತರ ಮೊದಲ ಅಧಿವೇಶನ.
ಮುಂದಿನ ವಾರ ಐದು ದಿನಗಳ ಕಾಲ ಮಾತ್ರ ಅಧಿವೇಶನ ನಡೆಯಲಿದೆ. ಇಲ್ಲಿಯವರೆಗೆ ನಡೆದಿರುವ ಕಲಾಪಗಳಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳಾದ, ಬರ ಪರಿಸ್ಥಿತಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ, ಜನ – ಜನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ, ಸರ್ಕಾರಿ ಉದ್ಯೋಗದ ನೇಮಕಾತಿಯಲ್ಲಿ ಮಯೋಮಾನ ಮಿತಿ ಸಡಿಲಿಕೆ, ಸರ್ಕಾರದ ಗೃಹಲಕ್ಷ್ಮಿಯೋಜನೆಯ ಹಣವನ್ನೇ ನಂಬಿ ಜೀವನ ನಡೆಸುತ್ತಿರುವವರಿಗೆ ಸಕಾಲದಲ್ಲಿ ಹಣ ತಲುಪದೇ ಆಗುತ್ತಿರುವ ತೊಂದರೆ ಇಂತಹ ಹಲವಾರು ಸಮಸ್ಯೆಗಳ ಚರ್ಚೆಯೇ ನಡೆದಿಲ್ಲ. ಸಚಿವ ನಾಗೇಂದ್ರ ಅವರ ವಜಕ್ಕೆ ಆಗ್ರಹಿಸಿ ವಿರೋಧ ಪಕ್ಷಗಳು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಡೋಂಟ್ ಕೇರ್ ಎನ್ನುವಂತೆ ವರ್ತಿಸುತ್ತಿರುವುದು ಸರ್ಕಾರದ ಹಠಮಾರಿ ಧೋರಣೆಯ ಪ್ರದರ್ಶನವಾಗಿದೆ. ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಸದನದೊಳಗೆ, ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ನಾಗೇಂದ್ರ ಅವರ ರಾಜೀನಾಮೆ ಪಡೆಯದಿರಲು ಕಾರಣವೇನು? ಇವರನ್ನು ರಕ್ಷಣೆ ಮಾಡುತ್ತಿರುವ ಹಿಂದಿನ ಅಜೆಂಡವೇನು ? ಹಿಂದೆ ಸಚಿವರಾಗಿದ್ದ ಈಶ್ವರಪ್ಪ ಅವರ ವಿರುದ್ಧ ಇದೇ ಕಾಂಗ್ರೆಸ್ ಪಕ್ಷ ಅವರ ರಾಜೀನಾಮೆಗೆ ಆಗ್ರಹಿಸಿ ರಾಜೀನಾಮೆ ಪಡೆಯಲಿಲ್ಲವೇ? ನೀವು ವಿರೋಧ ಪಕ್ಷದಲ್ಲಿದ್ದಾಗ ಒಂದು ನ್ಯಾಯ, ಅಧಿಕಾರದಲ್ಲಿದ್ದಾಗ ಮತ್ತೊಂದು ನ್ಯಾಯವೇ ?
– ಬೂಕನಕೆರೆ ವಿಜೇಂದ್ರ, ಮೈಸೂರು
ಚೌಕಾಸಿ...! ಸಾಮಾನ್ಯವಾಗಿ ಫುಟ್ಟ್ಪಾತ್ ವ್ಯಾಪಾರದಲ್ಲಿ ನಡೆಯುವುದು ಚೌಕಾಸಿ... ಈಗ, ಫುಟ್ಪಾತ್ನಲ್ಲಿ ಪಾದಚಾರಿ-ವ್ಯಾಪಾರಿಗಳ ನಡುವೆಯೂ ನಡೆಯಬಹುದು ಓಡಾಡುವ ರಸ್ತೆಗಾಗಿ ಚೌಕಾಸಿ !…
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿಯ ಸಭೆಯಲ್ಲಿ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್…
ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ನಿಧನದಿಂದ ಮೌಲ್ಯನಿಷ್ಠ ರಾಜಕಾರಣದ ಒಂದು ಕೊಂಡಿಕಳಚಿದಂತಾಗಿದೆ. ಸರಳ ಹಾಗೂ ಪ್ರಾಮಾಣಿಕ ರಾಜಕಾರಣಿಯಾಗಿದ್ದ ನಾಗೇಶ್…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಅವರ ವಾರದ ಅಂಕಣ ಹನ್ನೆರಡು ವರ್ಷಗಳ ನಂತರ ನಡೆದ ದಕ್ಷಿಣ ರಾಜ್ಯಗಳ ಎರಡು ದಿನಗಳ…