Andolana originals

ಓದುಗರ ಪತ್ರ: ಗರಿಕೆಕಂಡಿ – ಪಾಲಾರ್ ನಡುವೆ ರಸ್ತೆ ನಿರ್ಮಿಸಿ

ಹನೂರು ತಾಲ್ಲೂಕಿನ ನಾಲ್‌ರೋಡ್-ಗರಿಕೆಕಂಡಿ ರಸ್ತೆಯನ್ನು ದುರಸ್ತಿಗೊಳಿಸುವ ಬಗ್ಗೆ ಆಂದೋಲನ ದಿನಪತ್ರಿಕೆಯಲ್ಲಿ ಜೂ. 21ರಂದು ವರದಿಯಾಗಿದೆ. ಇದು ಕರ್ನಾಟಕದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತರ ರಾಜ್ಯ ರಸ್ತೆಯಾಗಿದ್ದು, ಭಾರೀ ವಾಹನಗಳ ಸಂಚಾರದಿಂದ ಹದಗೆಟ್ಟಿತ್ತು.

ಕೊಳ್ಳೇಗಾಲ ಭಾಗದಿಂದ ಸೇಲಂ ಮತ್ತು ಈರೋಡ್ ಕಡೆಗೆ ಹೋಗಲು ಕ್ರಮವಾಗಿ ಮಹದೇಶ್ವರಬೆಟ್ಟ ಮತ್ತು ಅಂದಿಯೂರು ಮಾರ್ಗಗಳಿವೆ. ಇವೆರಡು ಮಾರ್ಗಗಳೂ ಬೆಟ್ಟಗುಡ್ಡಗಳಿಂದ ಕೂಡಿದ್ದು, ಭಾರೀ ವಾಹನಗಳ ಸಂಚಾರ ಕಷ್ಟಕರ ಮಾತ್ರವಲ್ಲದೆ , ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಇದಕ್ಕೆ ಪರ್ಯಾಯವಾಗಿ ಗರಿಕೆಕಂಡಿಯಿಂದ ಪಾಲಾರ್ ವರೆಗೆ ಹೊಸದಾಗಿ ರಸ್ತೆಯನ್ನು ನಿರ್ಮಿಸಿದರೆ, ಒಂದು ಗಂಟೆಯಷ್ಟು ಪ್ರಯಾಣದ ಅವಧಿಯನ್ನು ಉಳಿಸಬಹುದಾಗಿದೆ.

ಗರಿಕೆಕಂಡಿಯಿಂದ ಪಾಲಾರ್‌ವರೆಗೆ ಸುಮಾರು 25 ಕಿ.ಮೀ. ದೂರವಿದ್ದು, ಈ ಪ್ರದೇಶ ಯಾವುದೇ ಬೆಟ್ಟಗುಡ್ಡಗಳಿಲ್ಲದೆ ಸಮತಟ್ಟಾಗಿದೆ. ಉಭಯ ರಾಜ್ಯಗಳ ಗಡಿಯನ್ನು ನಿರ್ಣಯಿಸುವ ಪಾಲಾರ್ ನದಿ ಇದೇ ಮಾರ್ಗವಾಗಿ ಹರಿಯುತ್ತಿದ್ದು, ನದಿಯ ಎಡ ಭಾಗದಲ್ಲಿ ಈಗಾಗಲೇ ಮಣ್ಣಿನ ರಸ್ತೆ ಇದೆ.

ಇದು 1970ರ ದಶಕದಲ್ಲಿ ಆಮ್ಜಾನ್ ಎಂಬ ಗುತ್ತಿಗೆದಾರರು ಇಲ್ಲಿನ ಅರಣ್ಯ ಪ್ರದೇಶದಿಂದ ಬಿದಿರುಗಳನ್ನು ಸಾಗಿಸಲು ನಿರ್ಮಿಸಿದ ರಸ್ತೆಯಾಗಿದೆ. 1925ರಲ್ಲಿ ಮೆಟ್ಟೂರು ಅಣೆಕಟ್ಟೆ ನಿರ್ಮಿಸುವಾಗ, ಶಿವನಸಮುದ್ರದಿಂದ ಇದೇ ಮಾರ್ಗವಾಗಿ ಕಂಬಗಳನ್ನು ಹಾಕಿ ಮೆಟ್ಟೂರಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿತ್ತು. ಅಲ್ಲದೆ ಸಾರಿಗೆ ಸೌಲಭ್ಯಗಳು ಇಲ್ಲದಿದ್ದ ದಿನಗಳಲ್ಲಿ ಮಾರ್ಟಳ್ಳಿ ಭಾಗದಿಂದ ಮೆಟ್ಟೂರು, ಕೊಳತ್ತೂರು ಕಡೆಗೆ ಕಾಲ್ನಡಿಗೆ ಮತ್ತು ಎತ್ತಿನಗಾಡಿಗಳಲ್ಲಿ ಜನರು ಈ ಮಾರ್ಗವಾಗಿ ಸಂಚರಿಸುತ್ತಿದ್ದರು.

ಈ ಹಳೆಯ ಮಾರ್ಗವನ್ನು ಅಭಿವೃದ್ಧಿಪಡಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ, ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗುವುದಲ್ಲದೆ, ಅಂತರರಾಜ್ಯ ವ್ಯಾಪಾರ ವೃದ್ಧಿಗೂ ಸಹಕಾರಿಯಾಗಲಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಗಮನ ಹರಿಸುವಂತಾಗಲಿ.

– ಡಾ. ಐ. ಸೇಸುನಾಥನ್, ಮಾರ್ಟಳ್ಳಿ, ಹನೂರು ತಾಲ್ಲೂಕು

ಆಂದೋಲನ ಡೆಸ್ಕ್

Recent Posts

ಎಕ್ಸ್ ಬಿಟ್ಟು ಇನ್‌ಸ್ಟಾ ಹಿಡಿದ ರಾಜಕಾರಣ : ಮೋದಿಗೆ ಜೆನ್-ಝೀ ಕಾಟ

ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…

9 hours ago

ಓದುಗರ ಪತ್ರ: ಕಠಿಣ ಕ್ರಮ ಅಗತ್ಯ

ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್‌ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…

17 hours ago

ಓದುಗರ ಪತ್ರ: ಕಸ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಅಗತ್ಯ

ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…

17 hours ago

ಕೇಂದ್ರ ಸರ್ಕಾರದ ಮೇಲೆ ಜೆನ್ ಝೀ ಚಳುವಳಿಯ ತೂಗುಗತ್ತಿ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…

17 hours ago

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

20 hours ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

20 hours ago