Andolana originals

ನೀರಿನ ಸಂಪರ್ಕವೇ ಇಲ್ಲ; ಬಿಲ್ ಪಾವತಿ!

ನಂ.ಗೂಡು ತಾಲ್ಲೂಕಿನ ದುಗ್ಗಹಳ್ಳಿ ಗ್ರಾಪಂನ ಮಂಗಳೂರಿನಲ್ಲಿ ಪ್ರಕರಣ

• ಶ್ರೀಧರ ಆರ್ ಭಟ್
ನಂಜನಗೂಡು: ಜಲಜೀವನ್ ಯೋಜನೆ ಮಂಜೂರಾಗಿ ನಾಲ್ಕು ವರ್ಷಗಳು ಕಳೆದರೂ ಗ್ರಾಮಕ ಹನಿ ನೀರೂ ಬಂದಿಲ್ಲ. ಹಾಗಂತ ಕಾಮಗಾರಿಯ ಹಣವೂ ಇಲಾಖೆಯಲ್ಲಿ ಇಲ್ಲ. ಇಂಥ ಸ್ಥಿತಿ ತಾಲ್ಲೂಕಿನ ದುಗ್ಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಗಳೂರು ಗ್ರಾಮದಲ್ಲಿ ನಿರ್ಮಾಣವಾಗಿದೆ.

ಕಂದಾಯ ಇಲಾಖೆ ಹಾಗೂ ತಾಪಂ ಲೆಕ್ಕದಲ್ಲಿ ಕೇವಲ 3 ಮನೆಗಳಿರುವ ತಾಲ್ಲೂಕಿನ ಅತ್ಯಂತ ಪುಟ್ಟ ಗ್ರಾಮ ಮಂಗಳೂರು, ಸರ್ಕಾರಿ ದಾಖಲೆಗಳ ಪ್ರಕಾರ ಈ ಗ್ರಾಮದಲ್ಲಿ ರುವುದು ಮೂರೇ ಮನೆಗಳು. ಆದರೆ ಜಲಜೀವನ ಯೋಜನೆಯ ಪ್ರಕಾರ ಗ್ರಾಮದಲ್ಲಿರುವುದು 8 ಮನೆಗಳು, ಜಲಜೀವನ್ ಮಿಷನ್‌ನವರು ಕಂಡು ಹಿಡಿದ ಇನ್ನುಳಿದ 5 ಮನೆಗಳು ಮಾತ್ರ ಯಾರ ಕಣ್ಣಿಗೂ ಕಂಡಿಲ್ಲ. ಜಲಜೀವನ್ ಯೋಜನೆ ಆರಂಭ ಗೊಂಡಿದ್ದು 2020-21ರಲ್ಲಿ ಇರುವ 3 ಮನೆಗಳ ಬದಲಿಗೆ 8 ಮನೆಗಳು ಎಂದ ಇಲಾಖೆ, ಆ ಮನೆಗಳಿಗೆ ನೀರು ಕೊಡಬೇಕಿತ್ತು.

ಕೊಳವೆ ಹಾಕಿದ್ದಾರೋ ಇಲ್ಲವೋ ಯಾರಿಗೂ ಗೊತ್ತಿಲ್ಲ. ಓವರ್‌ ಹೆಡ್ ಟ್ಯಾಂಕ್ ನಿರ್ಮಿಸಿ ಗ್ರಾಮದ 3 ಮನೆಗಳಿಗೆ ನಲ್ಲಿ ಹಾಕಿ ಹೋದ ಅಧಿಕಾರಿಗಳು 4 ವರ್ಷಗಳಾದರೂ ಗ್ರಾಮದತ್ತ ಸುಳಿಯಲಿಲ್ಲ. ಆ ನಲ್ಲಿಗಳು ನೀರನ್ನೇ ಕಾಣದೆ ತುಕ್ಕು ಹಿಡಿದು ತಾಲ್ಲೂಕಿನ ಜಲಜೀವನ್ ಯೋಜನೆಯ ನಿಜ ಬಣ್ಣವನ್ನು ಹೊರಜಗತ್ತಿಗೆ ಇಂದಿಗೂ ಸಾರುತ್ತಲೇ ಇವೆ.

ಜೆಜೆಎಂನ ಮನೆ ಮನೆಗೆ ಗಂಗೆ ಯೋಜನೆಯ ಕಾಮಗಾರಿ ಮೊತ್ತ 11.57 ಲಕ್ಷ ರೂ. ಇದ್ದು, ಇಲಾಖೆ ಗುತ್ತಿಗೆದಾರರಿಗೆ ಹೆಚ್ಚುವರಿ ಕೆಲಸ ಸೇರಿಸಿ 12 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು 2021ರಲ್ಲೇ ಪಾವತಿಸಿದೆ ಎನ್ನಲಾಗಿದೆ. ನೀರೇ ಇಲ್ಲದಿದ್ದರೂ ಗುತ್ತಿಗೆದಾರರಿಗೆ ಹಣ ಪಾವತಿಸಿರುವುದು ಗ್ರಾಸವಾಗಿದೆ.

3 ಮನೆಗಳ ಬದಲು 8 ಮನೆಗಳಿವೆ ಎಂದಿರುವುದು ಹಾಗೂ ಕಾಮಗಾರಿಯ ಬಿಲ್ ಪಾವತಿಸಿ 4 ವರ್ಷವಾದರೂ ನೀರಿನ ಸಂಪರ್ಕ ಕಲ್ಪಿಸದಿ ರುವುದು ಇದೀಗ ನನ್ನ ಗಮನಕ್ಕೆ ಬಂದಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ.
ಜೆರಾಲ್ಡ್ ರಾಜೇಶ, ಇಒ

ಗ್ರಾಮಕ್ಕೆ ಭೇಟಿ ನೀಡಿ ಜಲಜೀವನ್ ಯೋಜನೆಯ ಕಾಮಗಾರಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
-ದರ್ಶನ್, ಶಾಸಕ

ನಾನು ನಂಜನಗೂಡಿನ ಜಲಜೀವನ್‌ ಯೋಜನೆಯ ಜವಾಬ್ದಾರಿ ಸ್ವೀಕರಿಸಿ ಕೇವಲ 2 ತಿಂಗಳುಗಳಾಗಿವೆ.ನೀರು ಹರಿಯದೆ ನಲ್ಲಿಗಳು ತುಕ್ಕು ಹಿಡಿದಿರಬಹುದು. ಅವುಗಳನ್ನು ಬದಲಾಯಿಸಿ ವಾರದೊಳಗೆ ನೀರು ತಲುಪಿಸಲು ಪ್ರಯತ್ನಿಸುವೆ.

-ಶಿವಕುಮಾರ, ಎಇಇ, ಜೆಜೆಎಂ

ಗ್ರಾಮದಲ್ಲಿರುವುದು ಮೂರೇ ಮನೆಗಳು, ಆ ಗ್ರಾಮದಲ್ಲಿ ನೀರಿದೆ. ಆದರೆ ಜಲಜೀವನ್ ಮಿಷನ್‌ ಯೋಜನೆಯ ಮನೆ ಮನೆಗೆ ಗಂಗೆಯ ಸಂಪರ್ಕ ಮಾತ್ರ ಈವರೆಗೂ ನೀಡಿಲ್ಲ.

-ಹೇಮಾವತಿ, ಪಿಡಿಒ, ದುಗ್ಗಹಳ್ಳಿ

ಕಂದಾಯ ದಾಖಲೆಯಲ್ಲೂ ಮಂಗಳೂರು ಗ್ರಾಮದಲ್ಲಿರುವುದು ಮೂರೇ ಮನೆಗಳು.

-ಪ್ರಕಾಶ, ರಾಜಸ್ವ ನಿರೀಕ್ಷಕ, ಹುಲ್ಲಹಳ್ಳಿ

ಆಂದೋಲನ ಡೆಸ್ಕ್

Recent Posts

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ಇಂದು ಸಂಜೆಯಿಂದಲೇ ಆನೆಗಳಿಗೆ ತಾಲೀಮು ಆರಂಭ: ಡಿಸಿಎಫ್‌ ಡಾ.ಪ್ರಭುಗೌಡ

ಮೈಸೂರು: ಮೊದಲ ಹಂತದಲ್ಲಿ ಆಗಮಿಸಿರುವ ದಸರಾ ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಗಿದೆ. ಶ್ರೀಕಂಠ ಆನೆ ಹೆಚ್ಚು ತೂಕ ಹೊಂದಿದೆ. ಆದರೆ…

49 mins ago

ಮೈಸೂರು ದಸರಾ ಗಜಪಡೆ ಆನೆಗಳ ತೂಕ ಪರೀಕ್ಷೆ: ತೂಕದಲ್ಲಿ ಶ್ರೀಕಂಠನಿಗೆ ಮೊದಲ ಸ್ಥಾನ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಗೆ ಇಂದು ತೂಕ ಪರೀಕ್ಷೆ…

1 hour ago

ಓದುಗರ ಪತ್ರ: ಬಾಗೂರು ಅಣೆಕಟ್ಟೆಗೆ ನೀರು ತುಂಬಿಸಿ

ನಂಜನಗೂಡು ತಾಲ್ಲೂಕು ಬಾಗೂರು ಅಣೆಕಟ್ಟೆ ದೊಡ್ಡ ಅಣೆಕಟ್ಟೆಯಾಗಿದೆ. ಹಿಂದೆ ಅನೇಕ ಹಳ್ಳಿಗಳಿಗೆ ಕೋಡಿ ತುಂಬಿ ಯಥೇಚ್ಛವಾಗಿ ಇದರಿಂದ ನೀರು ಹರಿದು…

4 hours ago

ಓದುಗರ ಪತ್ರ: ಈ ‘ಕೆಲಸ’ ಮುಂಚೆಯೇ ಆಗಬೇಕಿತ್ತು

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಇದೇ ಹಗರಣಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ…

4 hours ago

ಓದುಗರ ಪತ್ರ: ದಂಡ ವಸೂಲಿಯೇ ಪೊಲೀಸರ ಆದ್ಯತೆ ಆಗಬಾರದು

ಸಾಂಸ್ಕೃತಿಕ ನಗರಿ, ಅರೆಮನೆ ನಗರಿ, ಸ್ವಚ್ಛನಗರಿ, ಹಿರಿಯ ನಾಗರಿಕರ ಸ್ವರ್ಗ ಎಂದೆಲ್ಲಾ ಹೆಸರುವಾಸಿಯಾಗಿರುವ ಮೈಸೂರಿನಲ್ಲೂ ಈಗಿನ ಕಾನೂನು ವ್ಯವಸ್ಥೆಯ ಬಗ್ಗೆ…

4 hours ago

ವ್ಯವಸ್ಥೆಯನ್ನು ಪ್ರಶ್ನಿಸುವವರು ದಿಮಾಗಿ ನಕ್ಸಲರೇ?

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ದೇವರು, ಧರ್ಮ ಮತ್ತು ಪುರಾಣಗಳ ಗೊತ್ತಿಲ್ಲದ ಮತ್ತು ಅನುಮಾನಗೊಂಡ ಹಾಗೂ ಅರ್ಥವಾಗದ ವಿಷಯಗಳ…

4 hours ago