Andolana originals

ಮಾಫಿಯಾ ಮಾರ್ಗದಲ್ಲಿ ಮೈಕ್ರೊ ಫೈನಾನ್ಸ್‌ ಸಂಸ್ಥೆಗಳು?

ಅನೈತಿಕ ಮಾರ್ಗದಲ್ಲಿ ಸಾಲ ವಸೂಲಿಗೆ ಮುಂದಾಗಿರುವ ಅನುಮಾನ

ಶೇ.36ರಷ್ಟು ಬಡ್ಡಿ ದರ ಆರೋಪ

ಸಂಸ್ಥೆಗಳ ಪ್ರತಿನಿಧಿಗಳ  ವರ್ತನೆಯೂ ಸಂಶಯ

ಶ್ರೀಧರ್‌ ಭಟ್‌ 

ನಂಜನಗೂಡು: ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಶೇ. ೩೬ ರಷ್ಟು ಬಡ್ಡಿ, ಚಕ್ರಬಡ್ಡಿಗಳ ದಾಹಕ್ಕೆ ಸಿಲುಕಿ ಸಾಮಾನ್ಯ ಜನರು ಅದರಲ್ಲೂ ಮಹಿಳೆಯರು ಸಾಲದ ಶೂಲಕ್ಕೇರುವಂತಾಗಿದೆ.

ಸುಲಭವಾಗಿ ಸಿಗುವ ಸಾಲ ಎಂದು ಸಾಲಗಾರ ನಾಗುವ ವ್ಯಕ್ತಿ ಫೈನಾನ್ಸ್ ಸಂಸ್ಥೆಯಲ್ಲಿ ೧ ಲಕ್ಷ ರೂ. ಸಾಲ ಪಡೆದು ಅದನ್ನು ಬಳಸಿಕೊಂಡು ಮರುಪಾವತಿಸ ಲಾಗದೇ ಹೆಣಗಾಡಿ ಕೊನೆಗೆ ಇನ್ನೊಂದು ಸಂಸ್ಥೆಯಿಂದ ೧. ೨೫ ಲಕ್ಷ ರೂ. ಪಡೆಯುವುದು, ಈ ಸಾಲ ತೀರಿಸಲು ಮತ್ತೊಂದು ಸಂಸ್ಥೆಯಿಂದ ಸಾಲ ಮಾಡುತ್ತಲೇ ಸಮಸ್ಯೆ ಗಳ ಸುಳಿಯಲ್ಲಿ ಸಿಲು ಕುವಂತಾಗಿದೆ. ಇದು ನಂಜನ ಗೂಡು ಸೇರಿದಂತೆ ಮೈಸೂರು ಜಿಲ್ಲೆಯ ತಾಲ್ಲೂಕು ಗಳ ಹಲವಾರು ಜನರ ಗೋಳಾಗಿದೆ. ರಾಷ್ಟ್ರೀಕೃತ ಬ್ಯಾಂಕು ಗಳು ಸಾಲ ನೀಡಲು ಹಿಂಜರಿಯುವಂತಹ ವ್ಯಕ್ತಿಗೇ ಹತ್ತಾರು ಲಕ್ಷ ರೂ. ಗಳನ್ನು ಸುಲಭವಾಗಿ ಮೈಕ್ರೊ ಫೈನಾನ್ಸ್ ನೀಡುತ್ತವೆ. ಅಲ್ಲದೆ, ಈ ಸಂಸ್ಥೆಗಳು ಕೇವಲ ೨ ವರ್ಷದ ಆರು ತಿಂಗಳುಗಳಲ್ಲಿ ತಾವು ನೀಡಿದ ಸಾಲದ ಎರಡರಷ್ಟು ಹಣವನ್ನು ವಸೂಲಿ ಮಾಡುತ್ತವೆ. ಆದರೂ ಸಾಲ ತೀರಿಲ್ಲ ಎಂದು ಸಾಲ ಪಡೆದವರ ಮನೆ – ಮಠದ ಹಾರಾಜಿಗೆ ಮುಂದಾಗುವ ಮೂಲಕ ಸಾಲ ಪಡೆವರು ಗ್ರಾಮಗಳನ್ನೇ ಖಾಲಿ ಮಾಡಬೇಕಾದ ಅಮಾನವೀಯ ಘಟನೆಗಳಿಗೆ ಫೈನಾನ್ಸ್ ಸಂಸ್ಥೆಗಳು ಕಾರಣವಾಗಿರುವುದು ಇದೀಗ ಬೆಳಕಿಗೆ ಬರಲಾರಂಭಿಸಿದೆ.

ಮೈಕ್ರೊ ಫೈನಾನ್ಸ್ ಶೋಷಣೆಗಳು ದೌರ್ಜನ್ಯಗಳು ಕೇವಲ ಹಣಕಾಸಿಗೆ ಮಾತ್ರ ಮೀಸಲಾಗದೆ ಸಾಲ ಪಡೆ ದವರ ವೈಯಕ್ತಿಕ ಬದುಕನ್ನು ನರಕವಾಗಿಸುತ್ತಿರುವುದು ಢಮನೆಯ ಮಹಿಳೆಯರ ಮಾನ ಮರ್ಯಾದೆಗಳನ್ನು ಬೀದಿಪಾಲು ಮಾಡಿ ಕುಟುಂಬಗಳ ಮನಸ್ಸುಗಳನ್ನು ಛಿದ್ರಗೊಳಿಸಿದ ಘಟನೆಗಳು ಜಿಲ್ಲೆಯ ಹಲವು ಗ್ರಾಮ ಗಳಲ್ಲಿ ನಡೆದಿವೆ ಎನ್ನಲಾಗಿದೆ. ಫೈನಾನ್ಸ್ ಸಂಸ್ಥೆಗಳು ಈಗ ಹಿಂಸೆ, ದೌರ್ಜನ್ಯದ ಮಾಫಿಯಾ ಆಗಿ ಬದಲಾಗಿವೆ ಎಂಬುದು ಚರ್ಚೆಗೆ ಗ್ರಾಸ ಒದಗಿಸಿದೆ.

ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಫೈನಾನ್ಸ್ ಕಂಪೆನಿಗಳು ಸಾಲ ನೀಡಲು ಹಾಗೂ ಅದರ ವಸೂಲಿ ಗಾಗಿ ಆಕರ್ಷಕ ಸಂಬಳದ ಆಸೆ ತೋರಿಸಿ ಯುವಕರನ್ನು ನೇಮಿಸಿಕೊಳ್ಳುತ್ತಿವೆ. ಅವರಿಗೆ ಸಾಲ ನೀಡಿಕೆ ಹಾಗೂ ವಸೂಲಿ ಮಾಡದಿದ್ದರೆ ಸಂಬಳ, ಭತ್ಯೆ, ಯಾವುದೂ ಇಲ್ಲ ಎಂಬ ಷರತ್ತುಗಳನ್ನು ವಿಧಿಸುತ್ತಿರುವುದೇ ಈ ಅನಾ ಹುತಗಳಿಗೆ ಕಾರಣವಾಗಿದೆ. ಈ ನಿಬಂಧನೆಗಳಿಗೆ ಸಿಲುಕಿ ಕೊಂಡ ಯುವ ಪಡೆ ವಸೂಲಾತಿಗಾಗಿ ಮಹಿಳೆಯರ ಶೋಷಣೆಯೂ ಸೇರಿದಂತೆ ಅನೈತಿಕ ಮಾರ್ಗಗಳನ್ನೂ ಅನುಸರಿಸುತ್ತಿವೆ ಎಂಬ ಅಪವಾದಗಳೂ ಕೇಳಿಬಂದಿವೆ.

ಬಹುತೇಕ ಕುಟುಂಬಗಳು ಫೈನಾನ್ಸ್ ಸಂಸ್ಥೆಗಳಿಂದ ಪಡೆದ ಸಾಲವನ್ನು ದ್ವಿಚಕ್ರ ವಾಹನಗಳ ಖರೀದಿ ಸೇರಿದಂತೆ ಮಕ್ಕಳ ಶೋಕಿಗಾಗಿ ಖರ್ಚು ಮಾಡುತ್ತವೆ ಎಂಬ ಮಾಹಿತಿ ಇದೆ. ನಂತರ ಈ ಸಂಸ್ಥೆಗಳ ಶೇ. ೩೬ ರಷ್ಟು ಬಡ್ಡಿಯ ಸಾಲ ತೀರಿಸಲಾಗದೇ ಹುಟ್ಟಿದೂರನ್ನೇ ಬಿಟ್ಟು ಗುಳೆ ಹೊರಡಬೇಕಾದ ಅನಿವಾರ್ಯತೆ ಸೃಷ್ಟಿ ಯಾಗುತ್ತಿದೆ.

ನಂಜನಗೂಡು ತಾಲ್ಲೂಕಿನಲ್ಲೇ ವಾರ್ಷಿಕ ನಾಲ್ಕಾರು ಕೋಟಿಗಳಿಂದ ನೂರಾರು ಕೋಟಿ ರೂ. ಗಳಷ್ಟು ವಹಿವಾಟು ನಡೆಸುವ ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಸಾಲ ವಸೂಲಾತಿಯ ಅಮಾನವೀಯ ಕೃತ್ಯಕ್ಕೆ ಸಿಲುಕಿದ ಬಹಳಷ್ಟು ಜನರು ಸ್ವಂತ ಮನೆಯನ್ನು ಖಾಲಿ ಮಾಡಿದ್ದಾರೆ. ಸಾಲ ವಸೂಲಿಗಾಗಿ ಮನೆ ಬಾಗಿಲಿಗೆ ಬಂದ ಸಂಸ್ಥೆಯವರು ‘ಮನೆಯನ್ನು ಜಪ್ತಿ ಮಾಡಲಾಗಿದೆ’ ಎಂಬ ನೊಟೀಸ್ ಅಂಟಿಸಿದ ಪ್ರಕರಣಗಳು ನಂಜನಗೂಡು ತಾಲ್ಲೂಕಿನ ಶಿರಮಳ್ಳಿ, ಕುರಿಹುಂಡಿ, ರಾಂಪುರ, ಹುಲ್ಲಹಳ್ಳಿ, ಕಗ್ಗಲೂರು, ಹೆಗ್ಗಡಳ್ಳಿ ಮುದ್ದಹಳ್ಳಿ ಸೇರಿದಂತೆ ೨೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಡೆದಿರುವುದು ಆತಂಕ ಮೂಡಿಸಿದೆ.

ಸರ್ಕಾರ ಈಗಲಾದರೂ ಮಧ್ಯೆ ಪ್ರವೇಶಿಸಿ ಈ ಮೈಕ್ರೊ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕದಿದ್ದಲ್ಲಿ ಭವಿಷ್ಯದಲ್ಲಿ ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿ ಕೊಳ್ಳುವವರ ಸರಣಿಗಳನ್ನೇ ಎದುರಿಸಬೇಕಾದೀತು. ಅದರೊಂದಿಗೆ ತಾಲ್ಲೂಕಿನ ಕೃಷಿ ಭೂಮಿ ಹಾಗೂ ಮನೆಗಳು ಮೈಕ್ರೊ ಫೈನಾನ್ಸ್ ಕಂಪೆನಿಗಳಿಗೆ ಸೇರ ಬಹುದು ಎಂಬ ಆತಂಕ ನಾಗರಿಕ ಸಮಾಜದ್ದಾಗಿದೆ.

ಊರು ತೊರೆದವರ ಪತ್ತೆಗಾಗಿ ಬೌನ್ಸರ್‌

ಪಡೆದ ಸಾಲವನ್ನು ಮರುಪಾವತಿಸಲಾಗದೆ, ಫೈನಾನ್ಸ್ ಸಂಸ್ಥೆಗಳವರ ದೌರ್ಜನ್ಯವನ್ನು ತಾಳಿಕೊಳ್ಳಲೂ ಆಗದೆ ಊರು ತೊರೆದಿರುವ ಜನರನ್ನು ಪತ್ತೆ ಹಚ್ಚಿ, ಹಿಂಸೆ ನೀಡುವ ಸಲುವಾಗಿ ಬೆಂಗಳೂರಿನಿಂದ ಎಸಿ ಕಾರುಗಳಲ್ಲಿ ಬಂದಿರುವ ಬೌನ್ಸರುಗಳ ಪಡೆ ಸಿದ್ಧವಾಗಿದೆ.

ದೌರ್ಜನ್ಯಕ್ಕೀಡಾದವರು ದೂರು ನೀಡಿ

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳಿಂದ ಶೋಷಣೆ ಅಥವಾ ದೌರ್ಜನ್ಯಕ್ಕೆ ಒಳಗಾದ ಸಾಲ ಪಡೆದವರು ಸ್ಥಳೀಯ ಠಾಣೆಯಲ್ಲಿ ದೂರು ಸಲ್ಲಿಸಬೇಕು ಅಥವಾ ನೇರವಾಗಿ ತಮಗೆ ದೂರು ನೀಡಬಹುದು. –ಡಾ. ಎನ್. ವಿಷ್ಣುವರ್ಧನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

 

 

ಆಂದೋಲನ ಡೆಸ್ಕ್

Recent Posts

ಸಂಧಾನ ಯಶಸ್ವಿ : ಮುಷ್ಕರ ಹಿಂಪಡೆದ ವೈದ್ಯರು

 ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಾಳೆಯಿಂದ  (ಮಾರ್ಚ್ 11) ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು…

5 hours ago

ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಜೆಡಿಎಸ್‌ಗೆ 1 ಸೀಟು

ಬೆಂಗಳೂರು : ಕರ್ನಾಟಕ ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಮೈತ್ರಿ ಪಕ್ಷ ಜೆಡಿಎಸ್‌ಗೆ ಒಂದು…

7 hours ago

ಎಲ್‌ಪಿಜಿ ಸಿಲಿಂಡರ್‌ ವ್ಯತ್ಯಯ, ಬೆಲೆ ಏರಿಕೆ : ಬಾಯಿ ಬಿಡದ ಬಿಜೆಪಿ ; ಡಿ.ಕೆ.ಶಿವಕುಮಾರ್‌ ಆರೋಪ

ಬೆಂಗಳೂರು : ಅಂತರರಾಷ್ಟ್ರೀಯ ಮಹಿಳಾ ದಿನದಂದೆ ಗ್ಯಾಸ್ ಸಿಲಿಂಡರ್ ಬೆಲೆಯನ್ನ ಕೇಂದ್ರ ಸರ್ಕಾರ 60 ರೂಪಾಯಿ ಏರಿಕೆ ಮಾಡಿದೆ. ಜೊತೆಗೆ…

7 hours ago

ಹುಲಿ ದಾಳಿಗೆ ಹಸು ಬಲಿ ; ರೈತ ಪಾರು

ಗುಂಡ್ಲುಪೇಟೆ : ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿಯೊಂದು ದಾಳಿ ನಡೆಸಿದೆ. ಈ ವೇಳೆ ರೈತ ತನ್ನ ಹಸು ರಕ್ಷಿಸಲು…

8 hours ago

ಎಲ್‌ಪಿಜಿ ಕೊರತೆ | ಕೇಂದ್ರದಿಂದ 1955ರ ಕಾಯ್ದೆ ಜಾರಿ ; ಏನಿದು ಅಗತ್ಯ ಸರಕು ಕಾಯ್ದೆ?

ಹೊಸದಿಲ್ಲಿ : ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯ ಮೇಲೆ ಹೆಚ್ಚುತ್ತಿರುವ ಒತ್ತಡದ ನಡುವೆ, ದೇಶೀಯ ಇಂಧನ ಮಾರುಕಟ್ಟೆಯನ್ನು…

8 hours ago

ನ್ಯಾಯಾಂಗ ಭ್ರಷ್ಟಾಚಾರ ಕುರಿತ ಅಧ್ಯಾಯ ವಿವಾದ ; ಸಾರ್ವಜನಿಕ ಕ್ಷಮೆ ಯಾಚಿಸಿದ ಎನ್‌ಸಿಇಆರ್‌ಟಿ

ಹೊಸದಿಲ್ಲಿ : ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಇತ್ತೀಚೆಗೆ ಪ್ರಕಟಿಸಿದ್ದ 8ನೇ ತರಗತಿಯ ಸಮಾಜ ವಿಜ್ಞಾನ…

8 hours ago