Andolana originals

ರೈತರನ್ನು ಕೈಬೀಸಿ ಕರೆಯುತ್ತಿರುವ ಕೃಷಿ ಮೇಳ

ಶ್ರೀಧರ್ ಆರ್.ಭಟ್

ನಂಜನಗೂಡು: ಸುತ್ತೂರು ಶ್ರೀ ಶಿವರಾತ್ರೀಶ್ವರರ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಕ ಕೇಂದ್ರವಾಗಿ ಹೊರಹೊಮ್ಮಿರುವುದು ಈ ಕೃಷಿ ತೋಟ.

ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ಶತ ದಿನಗಳ ಶ್ರಮದ ಫಲವನ್ನು ಜಾತ್ರೆಗೆ ಬಂದವರೆಲ್ಲರೂ ಈ ಕೃಷಿ ತೋಟದಲ್ಲಿ ಕಾಣಬಹುದಾಗಿದೆ. ಕೃಷಿಕರಿಂದಲೇ ತುಂಬಿರುವ ಸಮಾಜದಲ್ಲಿ ಆಧುನಿಕ ಕೃಷಿಯೊಂದಿಗೆ ಪ್ರಾಚೀನ ಕೃಷಿ ಪದ್ಧತಿಯನ್ನು ಅನಾವರಣಗೊಳಿಸಿರುವುದು ಸುತ್ತೂರು ಜಾತ್ರೆಯ ಕೃಷಿಮೇಳದ ಹೆಗ್ಗಳಿಕೆಯಾಗಿದೆ.

ಕೃಷಿಮೇಳವನ್ನು ಪ್ರವೇಶಿಸುತ್ತಿದ್ದಂತೆ ಎಡ-ಬಲಗಳಲ್ಲಿ ನಮಗೆ ಕಾಣುವುದು ಮಾನವನ ಸಮಗ್ರ ಆಹಾರಗಳಾದ ಏಕದಳ, ದ್ವಿದಳ, ಎಣ್ಣೆಕಾಳುಗಳು, ವಾಣಿಜ್ಯಬೆಳೆಗಳು, ತೋಟಗಾರಿಕೆ ಬೆಳೆಗಳಾದ ಸೊಪ್ಪು- ತರಕಾರಿ, ಹನಿ ನೀರಾವರಿ ಬಳಸಿಕೊಂಡು ಬೆಳೆದ ಆಹಾರ ಪದಾರ್ಥಗಳು ನೋಡುಗರ ಕಣ್ಮನ ಸೆಳೆಯುತ್ತವೆ.

ಕೃಷಿ ಬೆಳೆಯೊಂದಿಗೆ ವಿವಿಧ ಜಾತಿಯ ಹೂವುಗಳನ್ನೂ ಬೆಳೆದು ರೈತರ ಆದಾಯವನ್ನು ಹೆಚ್ಚಿಸಬಹುದಾದ ಪದ್ಧತಿಯನ್ನು ಇಲ್ಲಿ ತೋರಿಸಿರುವುದಲ್ಲದೇ ಆ ಬೆಳೆಗಳ ಮಾರುಕಟ್ಟೆ ದರಗಳ ಪರಿಚಯವನ್ನು ಆಸಕ್ತ ಕೃಷಿಕರಿಗೆ ಉಣಬಡಿಸುವುದು ಈ ಮೇಳದ ಆಯೋಜಕರಾದ ಕೆವಿಕೆಯ ಹೆಗ್ಗಳಿಕೆ.

ಕೃಷಿಯ ಅವಿಭಾಜ್ಯ ಅಂಗವಾಗಿರುವ ಪಶು ಸಂಗೋ ಪನೆ ಮತ್ತು ಅದರಿಂದಾಗುವ ಲಾಭಗಳನ್ನೂ ಇಲ್ಲಿ ಪರಿಚಯಿಸಲಾಗುತ್ತಿದೆ.

ಪ್ರತಿವರ್ಷ ಒಂದೆರಡು ವಿಜ್ಞಾನ ಆವಿಷ್ಕಾರಗಳನ್ನು ಕೃಷಿಕರಿಗೆ ಪರಿಚಯಿಸುವ ವ್ಯವಸ್ಥೆ ಎರಡು ದಶಕ  ಗಳಿಂದಲೂ ಈ ಕೃಷಿಮೇಳದಲ್ಲಿ ನಡೆದು ಬಂದಿದೆ.

ಅತೀ ಸಣ್ಣ ರೈತರ ಅಭ್ಯುದಯವನ್ನು ಮನದಲ್ಲಿಟ್ಟುಕೊಂಡ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಒಂದು ಎಕರೆ ಪ್ರದೇಶದಲ್ಲಿ ಇಲ್ಲಿ ಸೃಷ್ಟಿಸಿದ ಕೃಷಿ ಬ್ರಹ್ಮಾಂಡ ಕಡಿಮೆ ಖರ್ಚಿನಲ್ಲಿ ಸುಸ್ಥಿರ ಕೃಷಿಲೋಕವನ್ನು ಅನಾವರಣಗೊಳಿಸಿದೆ. ಇದರೊಂದಿಗೆ ಕಬ್ಬು ಕಟಾವು ಮಾಡುವ ಬೃಹತ್ ಯಂತ್ರ ಗಮನ ಸೆಳೆಯುತ್ತಿದ್ದು,ಈ ಯಂತ್ರದ ಸಹಾಯದಿಂದ ಪ್ರತಿ ಟನ್ ಕಬ್ಬಿನ ಶೇ. ೪೫ರಷ್ಟು ವೆಚ್ಚ ಕಡಿಮೆಯಾಗುವುದರೊಂದಿಗೆ ಇದೇ ಯಂತ್ರ ಕಬ್ಬಿನ ಸೋಗನ್ನು ಪುಡಿಮಾಡುವುದರಿಂದ ಈ ಯಂತ್ರ ರೈತನಿಗೆ ಸಹಕಾರಿಯಾಗುವುದನ್ನು ಇಲ್ಲಿ ತೋರಿಸಿಕೊಡಲಾಗುತ್ತದೆ.

ಆ ಮೂಲಕ ಕೃಷಿಕರಲ್ಲಿ ಅರಿವು ಮೂಡಿಸುವ ಯತ್ನ ಸಾಗಿದೆ. ಕೃಷಿಯೊಂದಿಗೆ ಪಶು ಸಂಗೋಪನೆಗೆ ಒತ್ತು ಕೊಟ್ಟಿರುವುದು ಕೃಷಿಮೇಳದ ಹಿರಿಮೆಯಾಗಿದೆ. ಈ ಬಾರಿ ಕೃಷಿ ಮೇಳದ ಪ್ರಮುಖ ಆಕರ್ಷಣೆಯಾಗಿರುವುದು ಜೈವಿಕ ಇದ್ದಿಲು (ಬಯೋಚಾರ್). ಕೃಷಿ ಭೂಮಿಯನ್ನು ಸುಧಾರಿಸುವ ಉದ್ದೇಶದಿಂದ ಬಯೋಚಾರ್‌ನ್ನು iಣ್ಣಿನಲ್ಲಿ ಸೇರಿಸಿ ಆ ಪ್ರದೇಶವನ್ನು ನೈಸರ್ಗಿಕ ಹಸಿರು ಪ್ರದೇಶವಾಗಿಸುವ ಯತ್ನ ಪ್ರಾತ್ಯಕ್ಷಿಕೆ ಇಲ್ಲಿ ಸಾಕಾರಗೊಂಡಿದೆ. ಜೈವಿಕ ವಸ್ತುಗಳನ್ನು ಮಿತವಾದ ಆಮ್ಲ ಜನಕದ ಪೂರೈಕೆಯೊಂದಿಗೆ ಕಾಯಿಸಿದಾಗ ಸಿಗುವುದೇ ಬಯೋಚಾರ್.

ತರಗೆಲೆ, ಸೋಗೆ, ಹಾಳೆ, ಗರಿಗಳು, ಅಡಕೆ ಸಿಪ್ಪೆ, ತೆಂಗಿನ ಮಟ್ಟೆಗಳನ್ನು ಸುಟ್ಟಾಗ ದೊರೆಯುವ ಬಯೋ ಚಾರ್‌ನ್ನು ಕೃಷಿಕನೇ ಉತ್ಪಾದಿಸಿಕೊಳ್ಳುವ ಪ್ರಾತ್ಯಕ್ಷಿಕೆಯನ್ನು ಸಹ ಇಲ್ಲಿ ಕೈಗೊಳ್ಳಲಾಗಿದೆ. ಈ ರೀತಿಯಾಗಿ ಉತ್ಪಾದನೆಯಾಗುವ ಬಯೋಚಾರ್ ಮಣ್ಣಿನಲ್ಲಿ ಬಹಳ ಕಾಲ ಉಳಿಯುವುದರೊಂದಿಗೆ ರೋಗ ನಿರೋಧಕ ಶಕ್ತಿಯನ್ನೂ ಪಡೆದುಕೊಂಡಿರುತ್ತದೆ. ಈ ಬಯೋಚಾರ್ ನಿಂದ ತೈಲ ಮತ್ತು ಅನಿಲ ಉತ್ಪಾದನೆಯನ್ನು ಸಿದ್ಧಪಡಿಸುವ ಆವಿಷ್ಕಾರವನ್ನು ಇಲ್ಲಿ ಕಾಣಬಹುದು. ೨೦೦ ಲೀಟರ್ ಸಾಮರ್ಥ್ಯದ ಲೋಹದ ಡ್ರಮ್‌ನ್ನು ಉಪಯೋಗಿಸಿಕೊಂಡು ಅತೀ ಕಡಿಮೆ ಖರ್ಚಿನಲ್ಲಿ ಬಯೋಚಾರ್ ಕುಲುಮೆ ಉತ್ಪಾದಿಸುವುದನ್ನು ಇಲ್ಲಿ ರೈತರಿಗೆ ಪರಿಚಯಿಸಲಾಗುತ್ತಿದೆ.

ಆಂದೋಲನ ಡೆಸ್ಕ್

Recent Posts

ಉತ್ತರ ಪ್ರದೇಶ: ಕಟ್ಟಡದಲ್ಲಿ ಅಗ್ನಿ ಅವಘಡ: 15 ವಿದ್ಯಾರ್ಥಿಗಳು ಸಾವು

ಲಖನೌ: ಉತ್ತರ ಪ್ರದೇಶದ ಅಲಿಗಂಜ್‌ನಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡವೊಂದರಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ 15 ವಿದ್ಯಾರ್ಥಿಗಳು…

11 hours ago

ಕಾಂಗೋದಲ್ಲಿ ಎಬೋಲಾ ಅಟ್ಟಹಾಸ: 1000 ಗಡಿ ದಾಟಿದ ಸೋಂಕಿತರ ಸಂಖ್ಯೆ

ಕೀನ್ಯಾ: ಕಾಂಗೋದಲ್ಲಿ ಎಬೋಲಾ ವೈರಸ್‌ನ ಅಟ್ಟಹಾಸ ಮುಂದುವರಿದಿದ್ದು, ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 1003ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರ…

12 hours ago

ಗಾಣಾಳು ಜಲಪಾತದಲ್ಲಿ ಈಜಲು ಹೋದ ಯುವಕ ಸಾವು

ಹಲಗೂರು: ಇಲ್ಲಿಗೆ ಸಮೀಪದ ಗಾಣಾಳು ಜಲಪಾತದಲ್ಲಿ ಈಜಲು ಇಳಿದಿದ್ದ ಯುವಕನೊಬ್ಬ ನೀರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.…

13 hours ago

ರಾಜ್ಯದಲ್ಲಿ ಮೂರು ದಿನ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…

13 hours ago

ಶೀಘ್ರದಲ್ಲೇ ಬಸ್‌ ಪ್ರಯಾಣ ದರ ಹೆಚ್ಚಳ?

ಬೆಂಗಳೂರು: ದಿನದಿಂದ ದಿನಕ್ಕೆ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಶೀಘ್ರದಲ್ಲೇ ರಾಜ್ಯ ಸರ್ಕಾರ ಬಸ್ ಪ್ರಯಾಣ…

14 hours ago

ಎರಡೇ ವರ್ಷಕ್ಕೆ ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ರಾಜೀನಾಮೆ

ಲಂಡನ್:‌ ನಿರೀಕ್ಷೆಯಂತೆ ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಡಳಿತಾರೂಢ ಲೇಬರ್‌ ಪಕ್ಷದೊಳಗೆ…

15 hours ago