Categories: Andolana originals

ಕೊಡಗಿನಲ್ಲಿ ಅಂತರ್ಜಲ ಮಟ್ಟ ಸುಧಾರಣೆ

೩ ಮೀಟರ್‌ನಷ್ಟು ಏರಿಕೆ; ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಡಿಮೆಯಾಗುವ ಸಾಧ್ಯತೆ
ನವೀನ್ ಡಿಸೋಜ
ಮಡಿಕೇರಿ: ಕಳೆದ ವರ್ಷ ಮಳೆ ಇಲ್ಲದೆ ಕೊಡಗು ಜಿಲ್ಲೆಯಲ್ಲಿ ದಶಕದಲ್ಲಿಯೇ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿತ್ತು. ಮುಂಗಾರಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಸುಮಾರು ೩ ಮೀಟರ್‌ನಷ್ಟು ಏರಿಕೆಯಾಗಿದೆ.

೨೦೨೩ರ ವರ್ಷಾಂತ್ಯಕ್ಕೆ ಜಿಲ್ಲೆಯ ಅಂತರ್ಜ ಲದ ಮಟ್ಟ ಭೂಮಿಯಿಂದ ೧೫. ೭೯ ಮೀಟರ್ ನಷ್ಟು ಕೆಳಭಾಗದಲ್ಲಿತ್ತು. ಈ ವರ್ಷ ಜನವರಿ , ಫೆಬ್ರವರಿಯಲ್ಲಿ ಕೊಂಚ ಏರಿಕೆ ಕಂಡು ಬಂದರೂ ಏಪ್ರಿಲ್ ವೇಳೆಗೆ ಮತ್ತೆ ೧೫. ೩೯ ಮೀ. ಗಳಿಗೆ ತಲುಪಿದ್ದ ಅಂತರ್ಜಲ ಮಟ್ಟ ಮಳೆ ಆರಂಭವಾದ ಬಳಿಕ ನಿರಂತರವಾಗಿ ಚೇತರಿಕೆ ಕಂಡಿದ್ದು, ೯. ೬೨ ಮೀ. ಗೆ ತಲುಪಿದೆ. ಇದರಿಂದ ಸದ್ಯ ಜಿಲ್ಲೆಯ ಸರಾಸರಿ ಅಂತರ್ಜಲದ ಮಟ್ಟ ೧೨. ೦೬ ಮೀ. ಗಳಿಗೆ ಏರಿಕೆಯಾಗಿದೆ.

೩ ಬಾರಿ ಬರ ಪರಿಸ್ಥಿತಿ: ಕಳೆದ ಒಂದು ದಶಕದಲ್ಲಿ ೩ ಬಾರಿ ಜಿಲ್ಲೆ ಬರ ಪರಿಸ್ಥಿತಿಯನ್ನೆದು ರಿಸಿದೆ. ೨೦೧೫ ಮತ್ತು ೨೦೧೭ರಲ್ಲಿಯೂ ಜಿಲ್ಲೆಯಲ್ಲಿ ಮಳೆ ಕೊರತೆ ಉಂಟಾಗಿತ್ತು. ಅಂತರ್ಜಲ ಮಟ್ಟ ೨೦೧೫ರಲ್ಲಿ ೧೪. ೩೫, ೨೦೧೭ರಲ್ಲಿ ೧೪. ೨೭ ಮೀ. ಗಳನ್ನು ತಲುಪಿತ್ತು. ೨೦೧೫ರ ೧೪. ೩೫ ಮೀ. ಅತಿ ಕಡಿಮೆ ಎನಿಸಿಕೊಂಡಿತ್ತು.

೨೦೨೩ರಲ್ಲಿ ಉಂಟಾದ ಭೀಕರ ಬರಗಾಲ ದಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿತ್ತು. ವರ್ಷಾಂತ್ಯದ ವೇಳೆಗೆ ಅಂತರ್ಜಲದ ಸ್ಥಿರ ಮಟ್ಟ ೧೫. ೭೯ಕ್ಕೆ ತಲುಪಿತ್ತು. ಇದು ಕಳೆದ ಒಂದು ದಶಕದಲ್ಲಿಯೇ ಜಿಲ್ಲೆಯಲ್ಲಿ ದಾಖಲಾದ ಕಡಿಮೆ ಮಟ್ಟವಾಗಿತ್ತು.

ಕಳೆದ ಬಾರಿ ಅಂತರ್ಜಲ ಕುಸಿತದಿಂದ ಕೆರೆ, ಕಟ್ಟೆ, ಬಾವಿ, ತೋಡು ಸೇರಿದಂತೆ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿ ಸಾಕಷ್ಟು ಸಮಸ್ಯೆಯಾಗಿತ್ತು.

ಮಡಿಕೇರಿ ನಗರ, ವಿರಾಜಪೇಟೆ, ಕುಶಾಲನಗರ ಸೇರಿದಂತೆ ಹಲವೆಡೆ ಕುಡಿ ಯುವ ನೀರಿಗೂ ಪರದಾಡುವಂತಾಗಿತ್ತು. ಜಿಲ್ಲಾಡಳಿತ ನದಿ, ಕೆರೆ ಕಟ್ಟೆ ಸೇರಿದಂತೆ ಯಾವುದೇ ಜಲ ಮೂಲದಿಂದ ಕೃಷಿ ಮತ್ತಿತರ ಯಾವುದೇ ಚಟುವಟಿಕೆಗೆ ನೀರನ್ನು ಬಳಸಬಾರದೆಂದು ಆದೇಶ ಹೊರಡಿಸಿತ್ತು. ಆದರೆ ಈ ಬಾರಿ ಉತ್ತಮ ಮಳೆಯಾಗಿರು ವುದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬಹುತೇಕ ಕಡಿಮೆಯಾಗಲಿದೆ.

ಕಳೆದ ಬಾರಿ ಬರ ಪರಿಸ್ಥಿತಿ ಇದ್ದ ಹಿನ್ನೆಲೆಯಲ್ಲಿ ೧೦ ವರ್ಷಗಳಲ್ಲಿಯೇ ಅತಿ ಕಡಿಮೆ ಮಟ್ಟಕ್ಕೆ ಅಂತರ್ಜಲ ಕುಸಿತ ಕಂಡಿತ್ತು. ಈ ಬಾರಿ ಆರಂಭದಿಂದಲೇ ಮುಂಗಾರು ಉತ್ತಮವಾಗಿದ್ದು, ಹಿಂಗಾರು ಮಳೆಯೂ ಉತ್ತಮವಾಗಿ ಸುರಿದಿರುವುದರಿಂದ ಜಿಲ್ಲೆಯ ಅಂತರ್ಜಲ ಮಟ್ಟ ಸಮೃದ್ಧವಾಗಿದೆ.
-ಸೌಮ್ಯ ಕೆ. ಜಿ. , ಹಿರಿಯ ಭೂವಿಜ್ಞಾನಿ(ಹೆಚ್ಚುವರಿ, ಪ್ರಭಾರ) ಜಿಲ್ಲಾ ಅಂತರ್ಜಲ ಕಚೇರಿ

 

ಆಂದೋಲನ ಡೆಸ್ಕ್

Recent Posts

ಅಲಯನ್ಸ್ ಸ್ಕ್ವೇರ್ ಪ್ರಾಪರ್ಟೀಸ್‌ಗೆ 20ನೇ ವರ್ಷದ ಸಂಭ್ರಮ

ಅದು ೨೦೦೬ರ ಸಮಯ. ಮೈಸೂರು ಈಗಿನಂತಿರಲಿಲ್ಲ. ಆದರೂ ಮೈಸೂರು ಇಂದಿಗಿಂತ ಹಿಂದೆಯೇನೂ ಇರಲಿಲ್ಲ. ಈಗಿನಷ್ಟೇ ಪ್ರವಾಸಿಗರು, ಹೂಡಿಕೆದಾರರನ್ನು ಆಕರ್ಷಿಸುತ್ತಿತ್ತು. ಮೈಸೂರಿನಲ್ಲಿ…

40 mins ago

ಓದುಗರ ಪತ್ರ: ಮನೆ ಗೇಟುಗಳ ಮುಂದೆ ಅಪರಿಚಿತರ ‘ಕಾರುಬಾರು’

ಮನೆಗಳ ಗೇಟಿನ ಮುಂದೆಯೇ ಅಪರಿಚಿತರ ಕಾರು ನಿಲ್ಲಿಸುವ ಕೆಟ್ಟ ಪರಂಪರೆಯನ್ನು ಅನೇಕ ಕಡೆ ಕಾಣಬಹುದು. ಸೂರ್ಯಬೇಕರಿ ಬಳಿಯ ಎರಡನೇ ಅಡ್ಡರಸ್ತೆಯಲ್ಲಿ…

4 hours ago

ಓದುಗರ ಪತ್ರ: ರೈಲು ನೀರಿನ ಬಾಟಲಿಗೆ ಒಂದು ರೂ. ಹೆಚ್ಚು ವಸೂಲಿ!

ಭಾರತೀಯ ರೈಲ್ವೆಯನ್ನು ನೆಚ್ಚಿಕೊಂಡಿರುವವರು ಕೊಟ್ಯಂತರ ಮಂದಿ ಇದ್ದಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ರೈಲು ನಿಲ್ದಾಣಗಳಲ್ಲಿ ರೈಲು ನೀರಿನ ಬಾಟಲಿಗಳ…

4 hours ago

ಓದುಗರ ಪತ್ರ: ಹೆಚ್ಚಿನ ಟಿಕೆಟ್ ದರ ನೀಡಲು ಸಿದ್ಧರಾಗಬೇಕಾ?

ಬೆಲೆ ಹೆಚ್ಚಳವೆಂಬುದು ಈಗ ಅನಿರೀಕ್ಷಿತವಲ್ಲವೆಂಬುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಸದ್ಯದಲ್ಲೆ ಇದಕ್ಕೆ ಸೇರ್ಪಡೆಯಾಗುವಂತಿದೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್…

4 hours ago

ಬಡಮಕ್ಕಳಿಗೆ ಬೆಚ್ಚಗಿನ ಬದುಕು ನೀಡುವ ಕುಶಾಲ್ ರಾಜ್

ಪಂಜು ಗಂಗೊಳ್ಳಿ ಅವರ ವಾರದ ಅಂಕಣ  ಮಕ್ಕಳ ಶಿಕ್ಷಣಕ್ಕೆ ನೆರವಾಗಲು ‘ಲೋಟಸ್ ಪೆಟಲ್ ಫೌಂಡೇಶನ್’ ಸ್ಥಾಪನೆ  ಜಾರ್ಖಂಡಿನ ರಾಂಚಿಯ ಕುಶಾಲ್ ರಾಜ್…

4 hours ago

ಬಸವನಹುಳು ಸಾಕಣೆಯೂ ಲಾಭದಾಯಕ

ಕೇಶವ್ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಿಂದ ಅಚ್ಚರಿಯ ಸಂಶೋಧನೆ! ಮೈಸೂರು: ಬಸವನಹುಳುಗಳನ್ನು ಜಮೀನುಗಳಲ್ಲಿ ರೈತರು ನೋಡಿದರೆ, ನಮ್ಮ…

4 hours ago