Andolana originals

ನಂಜನಗೂಡಿಗೆ ಬಸ್ ಹತ್ತಿದರೆ ತಿ.ನರಸೀಪುರದ ಟಿಕೆಟ್!

ಎಸ್.ಎಸ್.ಭಟ್

ನಂಜನಗೂಡು: ಮೈಸೂರು ನಗರದಿಂದ ನಂಜನಗೂಡಿಗೆ ತೆರಳುವ ಬಸ್ ಹತ್ತುವ ಪ್ರಯಾಣಿಕ ಆಘಾತಕ್ಕೆ ಒಳಗಾಗುವುದು ಗ್ಯಾರಂಟಿ. ಮೈಸೂರು ಬಸ್ ನಿಲ್ದಾಣದಿಂದ ನಂಜನಗೂಡು ತಲುಪಲು ಅಶ್ವಮೇಧ ಬಸ್ ಹತ್ತಿದವರೆಲ್ಲರಿಗೂ ಈ ಆಘಾತ ಎದುರಾಗಿದೆ.

ಆ ಬಸ್‌ನಲ್ಲಿ ಮೈಸೂರಿನಿಂದ ನಂಜಗೂಡಿಗೆ ಅಥವಾ ನಂಜನಗೂಡಿನಿಂದ ಮೈಸೂರಿಗೆ ಟಿಕೆಟ್ ಕೇಳಿದರೆ ಬಸ್ ನಿರ್ವಾಹಕ ಮೈಸೂರು-ತಿ.ನರಸೀಪುರ ಅಥವಾ ತಿ.ನರಸೀಪುರ-ಮೈಸೂರು ಎಂದು ಮುದ್ರಿತವಾಗಿರುವ ಟಿಕೆಟ್ ನೀಡುತ್ತಾರೆ. ಹಾಗಂತ ಪ್ರಯಾಣಿಕರೇನು ಗಾಬರಿಪಡಬೇಕಿಲ್ಲ. ಏಕೆಂದರೆ ಆ ಬಸ್ ತಿ.ನರಸೀಪುರಕ್ಕೆ ಹೋಗುವುದಿಲ್ಲ. ಅದು ನೇರವಾಗಿ ನಂಜನಗೂಡಿಗೆ ತಲುಪುತ್ತದೆ. ನಂಜನಗೂಡಿಂದಾದರೆ ಮೈಸೂರು ನಗರಕ್ಕೆ ಬರುತ್ತದೆ.

ಆದರೆ ಪ್ರಯಾಣಿಕರು ಆ ಬಸ್ ಹತ್ತಿ ಪ್ರಯಾಣ ಮಾಡಿದ ತಪ್ಪಿಗೆ ೪೬ ರೂ. ಬದಲಿಗೆ ೪೮ ರೂ. ಅಂದರೆ ೨ ರೂ. ಹೆಚ್ಚು ದರ ನೀಡಬೇಕಾಗುತ್ತದೆ. ಈ ೨ ರೂ. ಹೆಚ್ಚಳವಾಗಿರುವುದು ೧೨-೨-೨೦೨೬ ಗುರುವಾರದಿಂದ. ಈ ಹೆಚ್ಚಳದ ಕುರಿತಂತೆ ಸಾರಿಗೆ ನಿಗಮದ ನಂಜನಗೂಡು ಡಿಪೋದ ಅDiಕಾರಿ ಸುಮಾ ಅವರನ್ನು ಪ್ರಶ್ನಿಸಿದರೆ, ಈ ವಿಚಾರ ನನ್ನ ಗಮನಕ್ಕೇನೂ ಬಂದಿಲ್ಲ. ಹಾಗಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ.

” ಮಲೆ ಮಹದೇಶ್ವರ ಬೆಟ್ಟಕ್ಕೆ ೧೩-೨-೨೦೨೬ರಿಂದ ೩೦ ಅಶ್ವಮೇಧ ಬಸ್‌ಗಳನ್ನು ಬಿಡಲಾಗಿದ್ದು ಅವರು ನಂಜನಗೂಡಿಗೆ ಟ್ರಿಪ್ ಹೋಗುವ ಹಾಗೇ ಇಲ್ಲ. ಟಿಕೆಟ್ ನೀಡುವಂತೆಯೂ ಇಲ್ಲ. ನಂಜನಗೂಡು-ಮೈಸೂರು ನಡುವಿನ ಪ್ರಯಾಣ ದರ ಹೆಚ್ಚಳವಾಗಿಯೇ ಇಲ್ಲ. ಅದನ್ನು ಈಗ ನಾವು ಪರಿಶೀಲಿಸಬೇಕಿದೆ.”

ವೀರೇಶ, ಡಿಸಿ, ಸಾರಿಗೆ ನಿಗಮ

” ಮೈಸೂರು-ತಿ.ನರಸೀಪುರ ಮಾರ್ಗದ ಮುದ್ರಿತ ಟಿಕೆಟ್ ಪಡೆದು ನಂಜನ ಗೂಡಿಗೆ ಪ್ರಯಾಣ ಬೆಳೆಸಿದರೆ ಆಗುವ ಅನಾಹುತದ ಅರಿವು ಯಾರಿಗೂ ಇಲ್ಲ. ಅಕಸ್ಮಿಕ ವಾಗಿ ಮೈಸೂರು-ನಂಜನಗೂಡು ರಸ್ತೆಯಲ್ಲಿ ಆ ಬಸ್ ಅಪಘಾತವಾದರೆ ವಿಮೆಯ ಜಾರಿಯಲ್ಲಿ ಭಾರೀ ತೊಡಕಾಗುವುದು ಖಚಿತ. ಹಾಗಾದಾಗ ಯಾರು ಜವಾಬ್ದಾರರು?”

ಎಂ.ಎನ್.ಚಂದ್ರಶೇಖರ್, ಜೆ.ಪಿ.ನಗರ, ಮೈಸೂರು

 

 

ಆಂದೋಲನ ಡೆಸ್ಕ್

Recent Posts

ಎರಡನೇ ಆಷಾಢ ಶುಕ್ರವಾರದ ಸಂಭ್ರಮ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ

ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರವಾದ ಇಂದು ನಾಡ ಅಧಿದೇವತೆ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.…

8 hours ago

ಓದುಗರ ಪತ್ರ: ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಖಂಡನೀಯ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದಿಲ್ಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರದ ಕುಮ್ಮಕ್ಕು ಹಾಗೂ ಪೊಲೀಸರ…

11 hours ago

ಓದುಗರ ಪತ್ರ: ಗ್ರಂಥಪಾಲಕರಿಲ್ಲದ ಗ್ರಂಥಾಲಯಗಳು

ಕಳೆದ ೨೫ ವರ್ಷಗಳಿಂದ ರಾಜ್ಯದಲ್ಲಿ ೧೦ ಸಾವಿರ ಗ್ರಂಥಪಾಲಕ ಹುದ್ದೆಗಳನ್ನು ಭರ್ತಿ ಮಾಡದಿರುವುದು ಸರ್ಕಾರದ ಅಕ್ಷಮ್ಯ ನಿರ್ಲಕ್ಷ್ಯ. ೧,೨೦೦ ಸರ್ಕಾರಿ…

11 hours ago

ಓದುಗರ ಪತ್ರ: ಮುಚ್ಚಿರುವ ಪಿಎಚ್‌ಸಿ ಕೇಂದ್ರ ತೆರೆಯುವುದು ಎಂದು?

ಮೈಸೂರಿನ ಕುವೆಂಪು ನಗರದ ಎಂ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು, ಕಳೆದ ಮೂರು ತಿಂಗಳಿಂದ ಮುಚ್ಚಿದೆ. ಇದಕ್ಕೆ ಕಾರಣ ತಿಳಿದಿಲ್ಲ.…

11 hours ago

ಇದು ನಮಿತ್ ಮಲ್ಹೋತ್ರ ‘ರಾಮಾಯಣ’ ದರ್ಶನ

 ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ  ‘ತಿಣಿಕಿದನು -ಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂ ತಿಣೀಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ’ ಎಂದು…

11 hours ago

ಮಡಿಕೇರಿಯಲ್ಲಿ ಬಳಂಜಿಗಿಲ್ಲ ಬೇಡಿಕೆ

ಪುನೀತ್ ಜಿಲ್ಲೆಯಲ್ಲಿ ಕ್ಷೀಣಿಸಿದ ಮಳೆಯಿಂದ ಬೇಡಿಕೆ ಕುಸಿತ; ಕುಲಕಸುಬಿಗೆ ಹೊಡೆತ  ಮಡಿಕೇರಿ: ಜಿಲ್ಲೆಯಲ್ಲಿ ಧಾರಾಕಾರ ಮಳೆಯ ವಾತಾವರಣ ಇಲ್ಲದ ಕಾರಣ…

12 hours ago