ಎಸ್.ಎಸ್.ಭಟ್
ನಂಜನಗೂಡು: ಮೈಸೂರು ನಗರದಿಂದ ನಂಜನಗೂಡಿಗೆ ತೆರಳುವ ಬಸ್ ಹತ್ತುವ ಪ್ರಯಾಣಿಕ ಆಘಾತಕ್ಕೆ ಒಳಗಾಗುವುದು ಗ್ಯಾರಂಟಿ. ಮೈಸೂರು ಬಸ್ ನಿಲ್ದಾಣದಿಂದ ನಂಜನಗೂಡು ತಲುಪಲು ಅಶ್ವಮೇಧ ಬಸ್ ಹತ್ತಿದವರೆಲ್ಲರಿಗೂ ಈ ಆಘಾತ ಎದುರಾಗಿದೆ.
ಆ ಬಸ್ನಲ್ಲಿ ಮೈಸೂರಿನಿಂದ ನಂಜಗೂಡಿಗೆ ಅಥವಾ ನಂಜನಗೂಡಿನಿಂದ ಮೈಸೂರಿಗೆ ಟಿಕೆಟ್ ಕೇಳಿದರೆ ಬಸ್ ನಿರ್ವಾಹಕ ಮೈಸೂರು-ತಿ.ನರಸೀಪುರ ಅಥವಾ ತಿ.ನರಸೀಪುರ-ಮೈಸೂರು ಎಂದು ಮುದ್ರಿತವಾಗಿರುವ ಟಿಕೆಟ್ ನೀಡುತ್ತಾರೆ. ಹಾಗಂತ ಪ್ರಯಾಣಿಕರೇನು ಗಾಬರಿಪಡಬೇಕಿಲ್ಲ. ಏಕೆಂದರೆ ಆ ಬಸ್ ತಿ.ನರಸೀಪುರಕ್ಕೆ ಹೋಗುವುದಿಲ್ಲ. ಅದು ನೇರವಾಗಿ ನಂಜನಗೂಡಿಗೆ ತಲುಪುತ್ತದೆ. ನಂಜನಗೂಡಿಂದಾದರೆ ಮೈಸೂರು ನಗರಕ್ಕೆ ಬರುತ್ತದೆ.
ಆದರೆ ಪ್ರಯಾಣಿಕರು ಆ ಬಸ್ ಹತ್ತಿ ಪ್ರಯಾಣ ಮಾಡಿದ ತಪ್ಪಿಗೆ ೪೬ ರೂ. ಬದಲಿಗೆ ೪೮ ರೂ. ಅಂದರೆ ೨ ರೂ. ಹೆಚ್ಚು ದರ ನೀಡಬೇಕಾಗುತ್ತದೆ. ಈ ೨ ರೂ. ಹೆಚ್ಚಳವಾಗಿರುವುದು ೧೨-೨-೨೦೨೬ ಗುರುವಾರದಿಂದ. ಈ ಹೆಚ್ಚಳದ ಕುರಿತಂತೆ ಸಾರಿಗೆ ನಿಗಮದ ನಂಜನಗೂಡು ಡಿಪೋದ ಅDiಕಾರಿ ಸುಮಾ ಅವರನ್ನು ಪ್ರಶ್ನಿಸಿದರೆ, ಈ ವಿಚಾರ ನನ್ನ ಗಮನಕ್ಕೇನೂ ಬಂದಿಲ್ಲ. ಹಾಗಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ.
” ಮಲೆ ಮಹದೇಶ್ವರ ಬೆಟ್ಟಕ್ಕೆ ೧೩-೨-೨೦೨೬ರಿಂದ ೩೦ ಅಶ್ವಮೇಧ ಬಸ್ಗಳನ್ನು ಬಿಡಲಾಗಿದ್ದು ಅವರು ನಂಜನಗೂಡಿಗೆ ಟ್ರಿಪ್ ಹೋಗುವ ಹಾಗೇ ಇಲ್ಲ. ಟಿಕೆಟ್ ನೀಡುವಂತೆಯೂ ಇಲ್ಲ. ನಂಜನಗೂಡು-ಮೈಸೂರು ನಡುವಿನ ಪ್ರಯಾಣ ದರ ಹೆಚ್ಚಳವಾಗಿಯೇ ಇಲ್ಲ. ಅದನ್ನು ಈಗ ನಾವು ಪರಿಶೀಲಿಸಬೇಕಿದೆ.”
ವೀರೇಶ, ಡಿಸಿ, ಸಾರಿಗೆ ನಿಗಮ
” ಮೈಸೂರು-ತಿ.ನರಸೀಪುರ ಮಾರ್ಗದ ಮುದ್ರಿತ ಟಿಕೆಟ್ ಪಡೆದು ನಂಜನ ಗೂಡಿಗೆ ಪ್ರಯಾಣ ಬೆಳೆಸಿದರೆ ಆಗುವ ಅನಾಹುತದ ಅರಿವು ಯಾರಿಗೂ ಇಲ್ಲ. ಅಕಸ್ಮಿಕ ವಾಗಿ ಮೈಸೂರು-ನಂಜನಗೂಡು ರಸ್ತೆಯಲ್ಲಿ ಆ ಬಸ್ ಅಪಘಾತವಾದರೆ ವಿಮೆಯ ಜಾರಿಯಲ್ಲಿ ಭಾರೀ ತೊಡಕಾಗುವುದು ಖಚಿತ. ಹಾಗಾದಾಗ ಯಾರು ಜವಾಬ್ದಾರರು?”
ಎಂ.ಎನ್.ಚಂದ್ರಶೇಖರ್, ಜೆ.ಪಿ.ನಗರ, ಮೈಸೂರು
ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್ಬಿ) ಯಿಂದ ಮನೆಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಿದ್ದು…
ರಾಜ್ಯದಲ್ಲಿ, ಸುಮಾರು ಮೂರು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಗೊಂಡು, ಈ ಶಾಲೆಗಳು ಕುಸಿಯುವ ಹಂತ ತಲುಪಿವೆ ಎಂದು,…
ಎಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದಿಂದ ಕೆಂಡಗಣ್ಣಸ್ವಾಮಿ ಗದ್ದಿಗೆ ಮಾರ್ಗವಾಗಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯ ಎರಡೂ ಬದಿಗಳಲ್ಲಿರುವ ಬಹುತೇಕ…
ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡ ಕಟ್ಟಡಗಳು ಇಂದಿಗೂ ಸದೃಢವಾಗಿ ಕಂಗೊಳಿಸುತ್ತಿರುವುದು ಮೈಸೂರಿನ ಭವ್ಯ ಪರಂಪರೆಗೆ ಸಾಕ್ಷಿಯಾಗಿವೆ. ಇಂತಹ ಪಾರಂಪರಿಕ ಕಟ್ಟಡಗಳ…
ಮಡಿಕೇರಿ: ಓದುವ ಛಲ, ಆತ್ಮವಿಶ್ವಾಸ, ಪ್ರೋತ್ಸಾಹ, ಮಾರ್ಗದರ್ಶನವಿದ್ದರೆ ಮಕ್ಕಳು ಸರ್ಕಾರಿ ಕಾಲೇಜಿನಲ್ಲಿ ಓದಿದರೂ ಉತ್ತಮ ಅಂಕ ಗಳಿಸಲು ಸಾಧ್ಯವಿದೆ. ಇದಕ್ಕೆ…
ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಪಿರಿಯಾಪಟ್ಟಣ: ತಂಗಿಗೆ ಆಸ್ತಿಯನ್ನು ನೀಡಲೇಬಾರದು ಎಂದು ತೀರ್ಮಾನಿಸಿ ತನ್ನ ಸೋದರ ಅಳಿಯನನ್ನು ಕೊಲ್ಲಲು…