ಭಾರತದ ಕುರಿತು ಟ್ರಂಪ್ ಅವಹೇಳನಕಾರಿ ಹೇಳಿಕೆಗೆ ಒಂದು ಪ್ರತಿಕ್ರಿಯೆ
ನಾನು ಅಮೆರಿಕಕ್ಕೆ ಪ್ರಥಮ ಬಾರಿಗೆ ಕಾಲಿಟ್ಟಿದ್ದು ಮೂರೂವರೆ ದಶಕಗಳಿಗೂ ಹಿಂದೆ. ಈ ಸಮಯದಲ್ಲಿ ಆ ದೇಶ ನನಗೆ ಅಪಾರ ಪ್ರೀತಿ ಮತ್ತು ಅವಕಾಶಗಳನ್ನು ನೀಡಿದೆ. ಅಲ್ಲಿನ ರಾಜಕೀಯ, ಧಾರ್ಮಿಕತೆ, ವ್ಯಾಪಾರ, ಆರ್ಥಿ ಕತೆ, ಇತಿಹಾಸ, ವಿದೇಶಾಂಗ ನೀತಿ, ನ್ಯಾಯಾಂಗ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ನಾನು ನನ್ನ ಅಮೆರಿಕನ್ ಮಿತ್ರರೊಂದಿಗೆ ಕಟು ಟೀಕೆಯ ಮಾತುಗಳಾಡಿದ್ದೇನೆ. ಚರ್ಚಿಸಿದ್ದೇನೆ.
ಬರೆದಿದೆ ನೆ ಸಹ. ಆದರೆ, ಇವು, ಒಮ್ಮೆಯೂ ನನಗೆ ಭಯ-ಆತಂಕದ ಅನುಭವ ನೀಡಿಲ್ಲ. ೨೦೦೧ ರ ಸೆಪ್ಟೆಂಬರ್ ೧೧ ರ ಘಟನೆ ನನ್ನ ಜೀವನದ ಅತ್ಯಂತ ಭಯಾನಕ ಕ್ಷಣ. ಆ ದಿನ ಅಲ್ ಕೈದಾ ದುರುಳರ ದಾಳಿಗೆ ವರ್ಲ್ಡ್ ಟ್ರೇಡ್ ಸೆಂಟರ್ ಕುಸಿಯುವಾಗ ಅಕ್ಷರಶಃ ನಾನು ಅದರ ಕೆಳಗೆ ಸಿಲುಕಿದ್ದೆ. ನಂತರದಲ್ಲಿ ನನ್ನಲ್ಲಿ ಒಂದು ಆತಂಕವಿತ್ತು- ಈ ದೇಶ ನಮ್ಮಂತಹ ವಿದೇಶಿಯರನ್ನು ಹೇಗೆ ನೋಡಬಹುದು ಅಂತ. ಆದರೆ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಅವರು, ಆ ದಿನ ಮುಸ್ಲಿಂ ಮತ್ತು ಅರಬ್ ಅಮೆರಿಕನ್ನರ ಪಕ್ಕದಲ್ಲಿ ನಿಂತು, ಭಯೋತ್ಪಾದನೆಗೂ ಸಾಮಾನ್ಯ ಜನರಿಗೂ ಸಂಬಂಧವಿಲ್ಲ ಎಂದು ಹೇಳಿ ದೇಶವನ್ನು ಒಂದಾಗಿಟ್ಟರು.
ಹೊರಗಿನಿಂದ ಬಂದವರು ಎಸಗಿದ ದಾಳಿಯಲ್ಲಿ ಮೂರು ಸಾವಿರ ಅಮೆರಿಕನ್ನರು ಹತರಾಗಿದ್ದರೂ ಬಹುಮಟ್ಟಿಗೆ ಇಡೀ ದೇಶ ಅದಕ್ಕೆ ಶಾಂತಿಯಿಂದಲೇ ಪ್ರತಿಕ್ರಿಯಿಸಿತು. ನನ್ನ ಆತಂಕ ಹೆಚ್ಚು ದಿನ ಉಳಿಯಲಿಲ್ಲ. ವೈಯಕ್ತಿಕವಾಗಿ ನನಗೆ ಯಾವುದೇ ಜನಾಂಗೀಯ ನಿಂದನೆಯ ಅನುಭವ ಆಗಿಲ್ಲ. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಟ್ರಂಪ್ ಅಂತಹ ನಾಯಕರಿಂದಾಗಿ, ದ್ವೇಷ ಸಾಮಾನ್ಯವಾಗುವುದನ್ನು ಕಂಡಾಗ, ಅಮೆರಿಕದಲ್ಲೇ ನೆಲೆ ಕಂಡು ಕೊಂಡಿರುವ ನನ್ನ ಇಬ್ಬರು ಮಕ್ಕಳಂತಹವರ ಭವಿಷ್ಯದ ಬಗ್ಗೆ ಖಂಡಿತ ಆತಂಕ ಮೂಡುತ್ತದೆ. ಹಿಟ್ಲರ್ ಕಾಲದ ಜರ್ಮನ್ ಸಮಾಜದ ಬಗೆ ಮಾರ್ಟಿನ್ ನಿಮ್ಮೊಲ್ಲರ್ ಹೇಳಿದ ಮಾತುಗಳನ್ನು ನೆನಪಿಸುತ್ತವೆ:
” ‘ಅವರು ಬೇರೆಯವರಿಗೆಂದು ಬಂದಾಗ ನಾನು ಸುಮ್ಮನಿದ್ದೆ, ಕೊನೆಗೆ, ಅವರು ನನಗೆಂದು ಬಂದಾಗ ನನ್ನ ಪರ ನಿಲ್ಲಲು ಯಾರೂ ಇರಲಿಲ್ಲ’. ಅಂತಹ ಪರಿಸ್ಥಿತಿ ನಮಗೆ ಬರಬಾರದು ಅಷ್ಟೇ.”
-ಶೇಷಾದ್ರಿ ಗಂಜೂರು, ಮಾಧ್ಯಮ ತಜ್ಞರು
ಹನೂರು: ತಾಲ್ಲೂಕಿನ ಮಾರ್ಟಳ್ಳಿ ಸಮೀಪದ ವಡ್ಡರದೊಡ್ಡಿ ಗ್ರಾಮದಲ್ಲಿ ಮನೆಯೊಂದರಲ್ಲಿ ಕಳ್ಳತನ ನಡೆದಿರುವ ಕುರಿತು ವರದಿಯಾಗಿದೆ. ಗ್ರಾಮದ ನಿವಾಸಿ ಸೆಲ್ವಂ ಅವರು…
ಹೊಸದಿಲ್ಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ…
ಗುಂಡ್ಲುಪೇಟೆ: ಪಟ್ಟಣದ ಹೊರವಲಯದ ಕಲ್ಯಾಣಿ ಕೊಳದ ಬಳಿ ಸೇತುವೆಯಿಂದ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ನಡೆದಿದೆ. ಮಂಡ್ಯ ಮೂಲದ…
ಸೋಮವಾರಪೇಟೆ: ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮುಂದುವರೆದಿದ್ದು, ಬೆಳೆ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ಎರಡು…
ಬೆಂಗಳೂರು: ರಾಜ್ಯದಲ್ಲಿ ಒಂದು ವಾರ ಮುಂಗಾರು ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್.28ರವರೆಗೂ ಕರ್ನಾಟಕದಲ್ಲಿ ಮಳೆ…
ನವದೆಹಲಿ: ನೀಟ್ ಮರು ಪರೀಕ್ಷೆ ಅಂಗವಾಗಿ ಭಾರತದಲ್ಲಿ ಟೆಲಿಗ್ರಾಂ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ. ಸದ್ಯ ಪ್ಲೇ ಸ್ಟೋರ್ ಹಾಗೂ…