Andolana originals

‘ಅಮೆರಿಕದಲ್ಲಿ ನೆಲೆ ಕಂಡುಕೊಂಡಿರುವ ಮಕ್ಕಳ ಭವಿಷ್ಯದ ಬಗ್ಗೆ ಭಯವಾಗುತ್ತದೆ…’

ಭಾರತದ ಕುರಿತು ಟ್ರಂಪ್ ಅವಹೇಳನಕಾರಿ ಹೇಳಿಕೆಗೆ ಒಂದು ಪ್ರತಿಕ್ರಿಯೆ

ನಾನು ಅಮೆರಿಕಕ್ಕೆ ಪ್ರಥಮ ಬಾರಿಗೆ ಕಾಲಿಟ್ಟಿದ್ದು ಮೂರೂವರೆ ದಶಕಗಳಿಗೂ ಹಿಂದೆ. ಈ ಸಮಯದಲ್ಲಿ ಆ ದೇಶ ನನಗೆ ಅಪಾರ ಪ್ರೀತಿ ಮತ್ತು ಅವಕಾಶಗಳನ್ನು ನೀಡಿದೆ. ಅಲ್ಲಿನ ರಾಜಕೀಯ, ಧಾರ್ಮಿಕತೆ, ವ್ಯಾಪಾರ, ಆರ್ಥಿ ಕತೆ, ಇತಿಹಾಸ, ವಿದೇಶಾಂಗ ನೀತಿ, ನ್ಯಾಯಾಂಗ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ನಾನು ನನ್ನ ಅಮೆರಿಕನ್ ಮಿತ್ರರೊಂದಿಗೆ ಕಟು ಟೀಕೆಯ ಮಾತುಗಳಾಡಿದ್ದೇನೆ. ಚರ್ಚಿಸಿದ್ದೇನೆ.

ಬರೆದಿದೆ ನೆ  ಸಹ. ಆದರೆ, ಇವು, ಒಮ್ಮೆಯೂ ನನಗೆ ಭಯ-ಆತಂಕದ ಅನುಭವ ನೀಡಿಲ್ಲ. ೨೦೦೧ ರ ಸೆಪ್ಟೆಂಬರ್ ೧೧ ರ ಘಟನೆ ನನ್ನ ಜೀವನದ ಅತ್ಯಂತ ಭಯಾನಕ ಕ್ಷಣ. ಆ ದಿನ ಅಲ್ ಕೈದಾ ದುರುಳರ ದಾಳಿಗೆ ವರ್ಲ್ಡ್ ಟ್ರೇಡ್ ಸೆಂಟರ್ ಕುಸಿಯುವಾಗ ಅಕ್ಷರಶಃ ನಾನು ಅದರ ಕೆಳಗೆ ಸಿಲುಕಿದ್ದೆ. ನಂತರದಲ್ಲಿ ನನ್ನಲ್ಲಿ ಒಂದು ಆತಂಕವಿತ್ತು- ಈ ದೇಶ ನಮ್ಮಂತಹ ವಿದೇಶಿಯರನ್ನು ಹೇಗೆ ನೋಡಬಹುದು ಅಂತ. ಆದರೆ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಅವರು, ಆ ದಿನ ಮುಸ್ಲಿಂ ಮತ್ತು ಅರಬ್ ಅಮೆರಿಕನ್ನರ ಪಕ್ಕದಲ್ಲಿ ನಿಂತು, ಭಯೋತ್ಪಾದನೆಗೂ ಸಾಮಾನ್ಯ ಜನರಿಗೂ ಸಂಬಂಧವಿಲ್ಲ ಎಂದು ಹೇಳಿ ದೇಶವನ್ನು ಒಂದಾಗಿಟ್ಟರು.

ಹೊರಗಿನಿಂದ ಬಂದವರು ಎಸಗಿದ ದಾಳಿಯಲ್ಲಿ ಮೂರು ಸಾವಿರ ಅಮೆರಿಕನ್ನರು ಹತರಾಗಿದ್ದರೂ ಬಹುಮಟ್ಟಿಗೆ ಇಡೀ ದೇಶ ಅದಕ್ಕೆ ಶಾಂತಿಯಿಂದಲೇ ಪ್ರತಿಕ್ರಿಯಿಸಿತು. ನನ್ನ ಆತಂಕ ಹೆಚ್ಚು ದಿನ ಉಳಿಯಲಿಲ್ಲ. ವೈಯಕ್ತಿಕವಾಗಿ ನನಗೆ ಯಾವುದೇ ಜನಾಂಗೀಯ ನಿಂದನೆಯ ಅನುಭವ ಆಗಿಲ್ಲ. ಆದರೆ,  ಇಂದು ಪರಿಸ್ಥಿತಿ ಬದಲಾಗಿದೆ. ಟ್ರಂಪ್ ಅಂತಹ ನಾಯಕರಿಂದಾಗಿ, ದ್ವೇಷ ಸಾಮಾನ್ಯವಾಗುವುದನ್ನು ಕಂಡಾಗ, ಅಮೆರಿಕದಲ್ಲೇ ನೆಲೆ ಕಂಡು ಕೊಂಡಿರುವ ನನ್ನ ಇಬ್ಬರು ಮಕ್ಕಳಂತಹವರ ಭವಿಷ್ಯದ ಬಗ್ಗೆ ಖಂಡಿತ ಆತಂಕ ಮೂಡುತ್ತದೆ.  ಹಿಟ್ಲರ್ ಕಾಲದ ಜರ್ಮನ್ ಸಮಾಜದ ಬಗೆ  ಮಾರ್ಟಿನ್ ನಿಮ್ಮೊಲ್ಲರ್ ಹೇಳಿದ ಮಾತುಗಳನ್ನು ನೆನಪಿಸುತ್ತವೆ:

” ‘ಅವರು ಬೇರೆಯವರಿಗೆಂದು ಬಂದಾಗ ನಾನು ಸುಮ್ಮನಿದ್ದೆ,  ಕೊನೆಗೆ, ಅವರು ನನಗೆಂದು ಬಂದಾಗ ನನ್ನ ಪರ ನಿಲ್ಲಲು ಯಾರೂ ಇರಲಿಲ್ಲ’. ಅಂತಹ ಪರಿಸ್ಥಿತಿ ನಮಗೆ ಬರಬಾರದು ಅಷ್ಟೇ.”

-ಶೇಷಾದ್ರಿ ಗಂಜೂರು,  ಮಾಧ್ಯಮ ತಜ್ಞರು

 

 

ಆಂದೋಲನ ಡೆಸ್ಕ್

Recent Posts

ಹೋಟೆಲ್,ರೆಸ್ಟೋರೆಂಟ್‌ಗಳ ಮೇಲೆ ಮುಂದುವರೆದ ದಾಳಿ

ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…

40 seconds ago

ನಂ.ಗೂಡು | ಮತ್ತೆ ಕಳಚಿ ಬೀಳುತ್ತಿರುವ ಸೇತುವೆಯ ಸೀಲಿಂಗ್ ಕಾಂಕ್ರೀಟ್

ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…

2 hours ago

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…

3 hours ago

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…

3 hours ago

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

6 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

7 hours ago