Andolana originals

ಗೌರಿ ಗಣೇಶ ಹಬ್ಬ; ಮೊರಗಳ ಮೊರೆತ

ಚಿರಂಜೀವಿ ಸಿ. ಹುಲ್ಲಹಳ್ಳಿ

ಮೈಸೂರಲ್ಲಿ ಕರಕುಶಲ ಕರ್ಮಿಗಳ ಮೊಗದಲ್ಲಿ ಸಂಭ್ರಮ

ಕಣ್ಸೆಳೆಯುವ ಬಗೆಬಗೆಯ ಮೊರಗಳು

ಚಿಕ್ಕ ಮೊರ, ಬಾಗಿನ ಮೊರ, ಚಿಬ್ಲು ಇತ್ಯಾದಿ

ಕುಲಕಸುಬು ಚೇತರಿಕೆಗೆ ಆರ್ಥಿಕ ನೆರವಿಗೆ ಒತ್ತಾಯ

ಮೈಸೂರು: ಗೌರಿ-ಗಣೇಶ ಹಬ್ಬ ಹತ್ತಿರವಾಗುತ್ತಿದ್ದಂತೆ ಸಂಭ್ರಮದ ಚಟುವಟಿಕೆಗಳು ಗರಿಗೆದರಿವೆ. ಗೌರಿ ಹಬ್ಬವು ಹೆಣ್ಣು ಮಕ್ಕಳಿಗೆ ವಿಶೇಷ ಎಂಬ ಪ್ರತೀತಿ ಇದೆ. ಏಕೆಂದರೆ ಹಬ್ಬದ ದಿನ ಬಹುತೇಕ ಮನೆಗಳಲ್ಲಿ ಹೆಣ್ಣು ಮಕ್ಕಳಿಗೆ ಬಾಗಿನ ನೀಡುತ್ತಾರೆ. ಈ ಸಂಪ್ರದಾಯದಲ್ಲಿ ಮೊರದ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಸದ್ಯಕ್ಕೆ ಮೊರಕ್ಕೆ ಬೇಡಿಕೆ ಹೆಚ್ಚಾಗಿದೆ.

ಗೌರಿ-ಗಣೇಶನ ಹಬ್ಬ ಬಂತೆಂದರೆ ಸಾಕು ಹೆಣ್ಣು ಮಕ್ಕಳಲ್ಲಿ ಎಲ್ಲಿಲ್ಲದ ಸಡಗರ ಸಂಭ್ರಮ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳಂತೂ ತವರು ಮನೆಯಿಂದ ಹೊತ್ತು ತರುವ ಬಾಗಿನಕ್ಕಾಗಿ ಎದುರು ನೋಡುವುದು ಸರ್ವೇ ಸಾಮಾನ್ಯ. ಮದುವೆ ಮಾಡಿಕೊಟ್ಟ ತಮ್ಮ ಮಗಳನ್ನು ಇತರ ದಿನ ಹೋಗಿ ನೋಡಿಬರಲು ಸಾಧ್ಯವಾಗದಿದ್ದರೂ, ಗೌರಿ ಹಬ್ಬಕ್ಕೆ ಮಾತ್ರ ತವರಿಂದ ತಪ್ಪದೇ ಹೋಗಿ ಆಕೆಗೆ ಬಾಗಿನ ಕೊಟ್ಟು ಬರುವ ಸಂಪ್ರದಾಯ ಈಗಲೂ ಮುಂದುವರಿದಿದೆ. ಹೀಗಾಗಿ ಹೆಣ್ಣು ಮಕ್ಕಳಿಗೆ ಬಾಗಿನ ಕೊಡಲು ಬಳಸುವ ಬಿದಿರಿನ ಮೊರಕ್ಕೆ ಈಗ ಬೇಡಿಕೆ ಹೆಚ್ಚಾಗಿದೆ.

ನಗರದ ಅಗ್ರಹಾರದಲ್ಲಿರುವ ನೂರೊಂದು ಗಣಪತಿ ದೇವಸ್ಥಾನದ ಆವರಣದಲ್ಲಿ ಒಂದು ವಾರದಿಂದ ಹಲವಾರು ಮಂದಿ ಮೊರಗಳನ್ನು ತಯಾರಿಸುತ್ತಿದ್ದಾರೆ. ನಗರ ಮತ್ತು ಜಿಲ್ಲೆಯ ಸುತ್ತಮುತ್ತಲಿನ ಜನರು ಮೊರ ಖರೀದಿಗಾಗಿ ಧಾವಿಸುತ್ತಿದ್ದಾರೆ.

ಹಬ್ಬದ ಕಾರಣಕ್ಕೆ ತುಸು ಬೆಲೆ ಜಾಸ್ತಿಯಾದರೂ ಮೊರದ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಮೊರಗಳ ಅಳತೆಗೆ ತಕ್ಕಂತೆ ಬೆಲೆ ನಿಗಪಡಿಸಲಾಗಿದೆ. ದೊಡ್ಡದಾದರೆ ೧೫೦ ರೂ., ಚಿಕ್ಕದಾದರೆ ೧೦೦ ರೂ. ದರದಲ್ಲಿ ಬಿಕರಿ ಮಾಡಲಾಗುತ್ತಿದೆ. ಇದರ ಜೊತೆಗೆ ಹಬ್ಬದ ವಿಶೇಷ ಖಾದ್ಯವಾಗಿ ಇಡ್ಲಿ ತಯಾರು ಮಾಡುವುದು ವಾಡಿಕೆಯಾದ್ದರಿಂದ ಚಿಬ್ಲು ಇಡ್ಲಿಯನ್ನು ತಯಾರಿಸುವ ಮೊರಕ್ಕೂ ಬೇಡಿಕೆ ಹೆಚ್ಚಾಗಿದ್ದು, ಇವುಗಳ ದರ ಡಜನ್‌ಗೆ ೨೫೦ ರೂ. ಆಗಿದೆ.

೨೦ಕ್ಕೂ ಹೆಚ್ಚು ಜನರಿಂದ ಸಿದ್ಧತೆ: ನಂಜನಗೂಡಿನ ಚಾಮಲಾಪುರ ಬೀದಿಯಿಂದ ವಾರದ ಹಿಂದೆ ಬಂದಿರುವ ೨೦ಕ್ಕೂ ಹೆಚ್ಚು ಬುಟ್ಟಿ ಹೆಣೆಯುವವರು ಮೊರಗಳನ್ನು ಸಿದ್ಧ ಮಾಡುತ್ತಿದ್ದಾರೆ. ಮುಂಜಾನೆ ೭ರಿಂದ ಕೆಲಸ ಆರಂಭಿಸಿ, ನಿತ್ಯವೂ ಒಬ್ಬರು ೮ರಿಂದ ೧೦ ಮೊರಗಳನ್ನು ತಯಾರಿಸುತ್ತೇವೆ ಎಂದು ಕುಶಲಕರ್ಮಿ ಸಿದ್ದಯ್ಯ ‘ಆಂದೋಲನ’ಕ್ಕೆ ತಿಳಿಸಿದರು.

ಕೊಡಗಿನ ಮಡಿಕೇರಿ, ವಿರಾಜಪೇಟೆಯಿಂದ ಬಿದಿರಿನ ಬಂಬೂಗಳನ್ನು ತಂದು, ಇಲ್ಲಿ ಒಡೆದು ಸೀಳಿ, ಚೂಪುಗೊಳಿಸಿ ಮೊರಗಳ ಹೆಣಿಗೆಗೆ ಬಳಸಲಾಗುತ್ತದೆ. ಒಂದು ಮೊರವನ್ನು ಸಿದ್ಧಪಡಿಸಲು ಕನಿಷ್ಠ ಒಂದು ಗಂಟೆ ಅಗತ್ಯ. ದಿನಕ್ಕೆ ಒಬ್ಬರು ಐದಾರು ಮೊರಗಳನ್ನು ಹೆಣೆಯುತ್ತಾರೆ. ನಾನು, ನನ್ನ ಹೆಂಡ್ತಿ ಸುಮಾರು ೫೦ ವರ್ಷಗಳಿಂದ ಈ ಕುಲಸುಬು ಮಾಡಿಕೊಂಡು ಬಂದಿದ್ದೇವೆ ಎಂದು ಅವರು ಹೇಳಿದರು

ವಿವಿಧ ಬಗೆಯ ಮೊರಗಳು:  ಇಲ್ಲಿ ಮೊರಗಳನ್ನು ತಯಾರಿಸುತ್ತಿರುವ ಕುಶಲಕರ್ಮಿಗಳು ಚಿಕ್ಕ ಮೊರ, ಬಾಗಿನ ಮೊರ, ಏಳಡಿ ಮೊರ, ಚಿಬ್ಲು, ಅಕ್ಕಿ ಮೊರ, ಗೂಡೆ ಮೊರ ಇತ್ಯಾದಿಗಳನ್ನು ಹೆಣೆಯುತ್ತಿದ್ದಾರೆ. ಪ್ರತಿಯೊಂದಕ್ಕೂ ಒಂದೊಂದು ದರ ನಿಗದಿಪಡಿಸಿದ್ದಾರೆ.

” ನಮ್ಮ ಕೆಲಸದಲ್ಲಿ ಅಷ್ಟೊಂದು ಲಾಭ ಇರುವುದಿಲ್ಲ. ಕುಲಕಸುಬು ಆಗಿರುವುದಿಂದ ಮುಂದುವರಿಸಿಕೊಂಡು ಬಂದಿದ್ದೇವೆ. ಗೌರಿ-ಗಣೇಶ ಹಬ್ಬ ಬರುವುದರಿಂದ ಇದೊಂದು ವಾರ ವ್ಯಾಪಾರ ಜೋರಾಗಿ ನಡೆಯಲಿದೆ ಅಷ್ಟೇ. ಅದೂ ಕೂಡ ಬಿದಿರಿಗೆ ನಮ್ಮ ಕೂಲಿಗೆ ಸರಿಯಾಗಲಿದೆ.”

-ನೀಲಮ್ಮ, ಮೊರ ಹೆಣೆಯುವವರು

” ಹಬ್ಬ ಕಳೆಯುವವರೆಗೆ ಮೊರಗಳಿಗೆ ಬೇಡಿಕೆ ಇರುತ್ತದೆ. ಸಾಲ ಮಾಡಿಯೇ ಜೀವನ ನಡೆಸಬೇಕಾಗಿದೆ. ಶುಭ ಕಾರ್ಯಗಳಿಗೆ ಚಪ್ಪರ ಹಾಕೋದು, ಕೂಲಿ ಕೆಲಸ ಮಾಡಿಕೊಂಡುಜೀವನ ಮಾಡುತ್ತೇವೆ. ಯಾವ ಸರ್ಕಾರ ಬಂದರೂ ನಮಗೆ ನಾಕಾಣೆ ಕೊಡುವುದಿಲ್ಲ. ನಮ್ಮಂತೆ ಕುಲಕಸುಬನ್ನೇನಂಬಿಕೊಂಡು ಬದುಕುತ್ತಿರುವವರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ಒದಗಿಸಬೇಕು.”

-ಸಿದ್ದಯ್ಯ, ಕರಕುಶಲಕರ್ಮಿ

ಆಂದೋಲನ ಡೆಸ್ಕ್

Recent Posts

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

1 hour ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

1 hour ago

ಅಳಿಯ ಅಲ್ಲ, ಮಗಳ ಗಂಡ!

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…

1 hour ago

ವಿರಾಜಪೇಟೆ: ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಪಾರಮ್ಯ

ಕಾಂಗೀರ ಬೋಪಣ್ಣ ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ…

1 hour ago

ಇದು ಅಂತ್ಯವಲ್ಲ-ಹೊಸ ಆರಂಭ

ರೇಣುಕಾ ನಿಡುಗುಂದಿ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ತಾತ್ಕಾಲಿಕ ನೈತಿಕ ಗೆಲುವು ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ…

1 hour ago

ಎಸ್‌ಐಆರ್ ಅರ್ಜಿ; ಅನಿವಾರ್ಯ ಮರ್ಜಿ

ಚಿರಂಜೀವಿ ಸಿ ಹುಲ್ಲಹಳ್ಳಿ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ…

1 hour ago