Andolana originals

ಗಾಂಧಿ ಅಭಿಯಾನ ಅರಿವಿನ ಯಾನ ; ಗಾಂಧಿ ಮುಟ್ಟಿದ ನನ್ನೂರಿನ ಮನಸುಗಳು…

• ಎಸ್.ಗಂಗಾಧರಯ್ಯ

ಗಾಂಧಿ ಎಂಬುದೊಂದು ತಾಯ್ತನದ ಭಾವ, ಅದು ಅಂದು ಇಂದು ಮುಂದೆ ಯಾವತ್ತೂ ಎದೆಯ ಕತ್ತಲಿಗೆ ಹಚ್ಚಿದ ತುಂಬಿಹೋಗದ ಕೈ ದೀಪ. ಅಂಥ ದೀಪವನ್ನು ದಾರಿ ದೀಪವಾಗಿಸಿಕೊಂಡು ಈ ಜಾತಿ, ಧರ್ಮ, ದೇಶ, ಭಾಷೆಗಳ ಹಂಗಿನ ಬೇಲಿಯನ್ನು ದಾಟಿ ಮನುಕುಲದ ದಾರಿಯಲ್ಲಿ ನಡೆದವರು, ನಡೆಯುತ್ತಿರುವ ವರು ಈ ಲೋಕದಗಲಕ್ಕೂ ಹರವಿಕೊಂಡಿದ್ದಾರೆ.

ಅದು ಮನುಷ್ಯತ್ವವನ್ನು ಪೊರೆವ ಪರಿಗೆ ಅದೆಷ್ಟೋ ಹೊಚ್ಚ ಹೊಸ ಮನಸ್ಸುಗಳು ಈ ಚಣದಲ್ಲೂ ಆ ತಾಯ್ತನದಡಿಯ ನೆರಳಿನಲ್ಲಿ ನಡೆಯ ಬಯಸುತ್ತಿರುವುದು, ಎದೆಯ ಕೇಡುಗಳಿಗೆ ಮಹಾ ಮದ್ದಾಗು ತಿರುವುದು ಅದರ ಸವಿಯುಂಡವರಿಗೆ ಸೋಜಿಗದ ಸಂಗತಿ ಅಲ್ಲವೇ ಅಲ್ಲ.

ಇಂಥದ್ದೊಂದು ಮಹಾ ಬೆಳಕು ಎಟಕಿಸಿ ಕೊಳ್ಳದ ತಾವಿಲ್ಲ. ಇದು ಕೇವಲ ಪಟ್ಟಣಗಳ ಆಸುಪಾಸಿನಲ್ಲೋ, ಇಲ್ಲಾ ವಿದ್ಯಾವಂತ ಎನಿಸಿಕೊಂಡವರ ಮರ್ಜಿಯಲ್ಲೋ ಲೊಪ್ಪದೆ ದೇಶದ ಹಳ್ಳಿ ಹಳ್ಳಿಗಳಿಗೂ ತಲು ಪಾಕಿಕೊಂಡದ್ದು ಹಾಗೂ ಅಲ್ಲಿ ಸ್ವಾತಂತ್ರ್ಯದ ಕಿಚ್ಚಿನೊಂದಿಗೆ ಹಚ್ಚಿದ ಮನುಷ್ಯತ್ವದ ಸ್ವಾಭಿಮಾನದ ಕಿಡಿ ಇಂದಿಗೂ ಮಾಸಲೊ ಪದು. ಹಂಗಾಗಿ ಗಾಂಧಿ ಎಂಬುದೊಂದು ಕಾಲಾತೀತವಾದ, ದಣಿವರಿಯದೆ ಹರಿವ ಶುದ್ಧಾತಿ ಶುದ್ಧ ನೀರಿನ ಹೊಳೆ. ಅದೊಂದು ಬದುಕ ನೋಡುವ ಕ್ರಮ. ಬದುಕುತ್ತಾ ಮನುಷ್ಯರಾಗುವ ಕ್ರಮ.

ಬೆಳಗ ನಾನು ಗಾಂಧೀಜಿಯ ಹೆಸರು ಕೇಳಿದ್ದು ಪಠ್ಯ ಪುಸ್ತಕಕ್ಕಿಂತ ಮೊದಲು, ನನ್ನ ಅಜ್ಜನ ಬಾಯಿಂದ. ಅಷ್ಟೊಂದು ಓದಿರದಿದ್ದ ಅಜ್ಜ ಗಾಂಧಿಯ ಪರಮಭಕ್ತ. ಗಾಂಧಿ ಬದುಕಿನ ಬಗೆಗಿನ ಅನೇಕ ಸಂಗತಿಗಳನ್ನು ನನಗೆ ಹೇಳುತ್ತಾ ನನ್ನೊಳಗೆ ಗಾಂಧಿ ಬಗೆಗಿನ ಅಪಾರ ಒಲವನ್ನು ಬೆಳೆಸಿದ್ದು ಈ ಅಜ್ಜ. ಗಾಂಧಿಯೆಡೆಗೆ ಅಜ್ಜನ ಅಂಥ ಒಲವಿಗೆ ಕಾರಣವೊಂದಿತ್ತು.

ಅದೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿ ಒಮ್ಮೆ ನನ್ನ ಹಳ್ಳಿಯ ಹತ್ತಿರದ ತಿಪ ಟೂರು ಪಟ್ಟಣಕ್ಕೆ ಬಂದಿದ್ದರಂತೆ. ಆಗ ಅಜ್ಜ ಮತ್ತವರ ಗೆಣೆಕಾರರು ಗಾಂಧಿಯನ್ನು ನೋಡಲೋಸುಗ ಎತ್ತಿನ ಗಾಡಿಯನ್ನು ಕಟ್ಟಿಕೊಂಡು ತಿಪಟೂರಿಗೆ ಹೋಗಿ ಅಲ್ಲಿಯೇ ಎರಡು ದಿನ ಇದ್ದರಂತೆ. ಆಗ ಸೇರಿದ್ದ ಆ ಜನ, ಆಗ ಗಾಂಧಿ ಆಡಿದ್ದ ಆ ಮಾತುಗಳು ನನ್ನ ಅಜ್ಜನೊಳಗೆ ಆ ಕೊನೆಯವರೆಗೂ ಹಂಗೇ ಹಳ್ಳಿಯವರೊಬ್ಬರು ತನ್ನ ಮಗನಿಗೆ ಗಾಂಧಿ ಎಂದು ಹೆಸರಿಟ್ಟು ದಿನವೂ ಅವನೊಳಗೆ ಗಾಂಧಿಯನ್ನು ನೋಡಲೆತ್ನಿಸುತ್ತಿದ್ದರು. ಮತ್ತೊಬ್ಬರು ನನ್ನ ಊರಿನವರು. ನನ್ನ ಅಜ್ಜನ ಜೊತೆಗಾರರು. ನಾನವರ ಬಗ್ಗೆ ಕೇಳಿದ್ದೆ ಅಷ್ಟೇ. ಊರಾಚೆಯ ದನಗಳು ಮೇಯಲು ಹೋಗುತ್ತಿದ್ದ ಪುಟ್ಟ ಕಾಡಿನಲ್ಲಿ ಪುಟ್ಟ ಪುಟ್ಟ ಕರುಗಳಿಗೋಸ್ಕರವೇ ಪುಟ್ಟದೊಂದು ಕೆರೆಯನ್ನು ಕಟ್ಟಿ ಅದಕ್ಕೆ ಗಾಂಧಿ ಕಟ್ಟೆ ಅಂತ ಹೆಸರಿಟ್ಟಿದ್ದರಂತೆ. ಆ ನಂತರ ಆ ಕಟ್ಟೆ ಬರಬರುತ್ತಾ ಊರವರ ಬಾಯಲ್ಲಿ ಕರುವಿನ ಕಟ್ಟೆಯಾಗಿತ್ತು. ಅದೇರೀತಿ, ನನಗೆ ತುಂಬಾ ಹತ್ತಿರದಿಂದ ಗೊತ್ತಿದ್ದ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವ ಹಿಸಿದ್ದವರೊಬ್ಬರು ಆ ದಿನ ಗಾಂಧಿಯ ಕೈಯಿಂದ ತೆಂಗಿನ ಸಸಿಯೊಂದನ್ನು ಮುಟ್ಟಿಸಿ ತಂದು ಅದನ್ನು ‘ಗಾಂಧಿ ಮುಟ್ಟಿದ ಗಿಡ’ ಅಂತಲೇ ಹೆಸರಿಡಿದು ಕರೆದು ಪೋಷಿಸಿದ್ದರಂತೆ. ಆದರೆ ಅದೊಂದು ದಿನ ಅದನ್ನು ಮಳೆ ಗಾಳಿ ತಿರುಚಿ ಹಾಕಿ ಬಿಟ್ಟಿತ್ತಂತೆ. ಅದು ಆ ಗಾಂಧಿ ವ್ಯಕ್ತಿಗೆ ಅಪ್ಪಟ ಅಪಶಕುನದಂತೆ ಕಂಡಿತ್ತಂತೆ. ಕಾಕತಾಳೀಯ ಎಂಬಂತೆ ಅದಾದ ಕೆಲ ಬದಲಿಸಿದ ದಿನಕ್ಕೆ ಗಾಂಧಿಯ ಎದೆಗೆ
ಬದುಕುಗಳುಉಳಿದು ಬಿಟ್ಟಿದ್ದವು. ಆ ಚಣಗಳನ್ನು, ಆ ಮಾತುಗಳನ್ನು ನನ್ನೊಳಕ್ಕೆ ದಾಟಿಸುತ್ತಿದ್ದ ಅಜ್ಜನ ಆ ತನ್ಮಯತೆ, ಆ ಧನ್ಯತಾ ಭಾವ ನನ್ನೊಳಗೆ ಈಗಲೂ ಹಾಗೆಯೇ ಇದೆ. ಅಂದು ಗಾಂಧಿ ಉಳಿದಿದ್ದ ಮನೆ ಈಗಲೂ ಇದೆ.

ಇನ್ನು ತಿಪಟೂರಿನ ಆಸುಪಾಸಿನ ಸೀಮೆ ಯಲ್ಲಿ ಗಾಂಧಿ ನಡೆದಾಡಿದ ಮಣ್ಣಿನಲ್ಲಿ ಓಡಾಡಿದ್ದ ಅದೆಷ್ಟೋ ಮಂದಿ ಗಾಂಧಿಯನ್ನು ದಿನವೂ ಕಾಣಬಯಸುವ ಸಲುವಾಗಿ ಹತ್ತು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದರು. ಅವತ್ತು ಗಾಂಧಿ ಯನ್ನು ಕಂಡಿದ್ದ ತಿಪಟೂರಿನ ಹತ್ತಿರದ

ಹಳ್ಳಿಯವರೊಬ್ಬರು ತನ್ನ ಮಗನಿಗೆ ಗಾಂಧಿ ಎಂದು ಹೆಸರಿಟ್ಟು ದಿನವೂ ಅವನೊಳಗೆ ಗಾಂಧಿಯನ್ನು ನೋಡಲೆತ್ನಿಸುತ್ತಿದ್ದರು. ಮತ್ತೊಬ್ಬರು ನನ್ನ ಊರಿನವರು. ನನ್ನ ಅಜ್ಜನ ಜೊತೆಗಾರರು. ನಾನವರ ಬಗ್ಗೆ ಕೇಳಿದ್ದೆ ಅಷ್ಟೇ. ಊರಾಚೆಯ ದನಗಳು ಮೇಯಲು ಹೋಗುತ್ತಿದ್ದ ಪುಟ್ಟ ಕಾಡಿನಲ್ಲಿ ಪುಟ್ಟ ಪುಟ್ಟ ಕರುಗಳಿಗೋಸ್ಕರವೇ ಪುಟ್ಟದೊಂದು ಕೆರೆಯನ್ನು ಕಟ್ಟಿ ಅದಕ್ಕೆ ಗಾಂಧಿ ಕಟ್ಟೆ ಅಂತ ಹೆಸರಿಟ್ಟಿದ್ದರಂತೆ. ಆ ನಂತರ ಆ ಕಟ್ಟೆ ಬರಬರುತ್ತಾ ಊರವರ ಬಾಯಲ್ಲಿ ಕರುವಿನ ಕಟ್ಟೆಯಾಗಿತ್ತು.

ಅದೇರೀತಿ, ನನಗೆ ತುಂಬಾ ಹತ್ತಿರದಿಂದ ಗೊತ್ತಿದ್ದ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವ ಹಿಸಿದ್ದವರೊಬ್ಬರು ಆ ದಿನ ಗಾಂಧಿಯ ಕೈಯಿಂದ ತೆಂಗಿನ ಸಸಿಯೊಂದನ್ನು ಮುಟ್ಟಿಸಿ ತಂದು ಅದನ್ನು ‘ಗಾಂಧಿ ಮುಟ್ಟಿದ ಗಿಡ’ ಅಂತಲೇ ಹೆಸರಿಡಿದು ಕರೆದು ಪೋಷಿಸಿದ್ದರಂತೆ. ಆದರೆ ಅದೊಂದು ದಿನ ಅದನ್ನು ಮಳೆ ಗಾಳಿ ತಿರುಚಿ ಹಾಕಿ ಬಿಟ್ಟಿತ್ತಂತೆ. ಅದು ಆ ವ್ಯಕ್ತಿಗೆ ಅಪ್ಪಟ ಅಪಶಕುನದಂತೆ ಕಂಡಿತ್ತಂತೆ. ಕಾಕತಾಳೀಯ ಎಂಬಂತೆ ಅದಾದ ಕೆಲ ದಿನಕ್ಕೆ ಗಾಂಧಿಯ ಎದೆಗೆ ಗುಂಡೇಟು ಬಿದ್ದಿತ್ತಂತೆ. ತೊಂಬತ್ತು ವರ್ಷಗಳನ್ನಾಗಲೇ ದಾಟಿದ್ದ, ಬೊಚ್ಚು ಬಾಯಿಯ ಆ ಅಜ್ಜ ಅದನ್ನು ಹೇಳುವ ಹೊತ್ತಲ್ಲಿ ಅಜ್ಜನ ಮುಪ್ಪ ಡರಿದ್ದ ಮುಖದಲ್ಲಿ ಸಂಕಟದ ಗೆರೆಗಳು ಮೂಡುತ್ತಾ ಅಜ್ಜ ಮೌನಕ್ಕೆ ಜಾರಿಬಿಡುತ್ತಿ ದ್ದರು. ಆಗ ನನಗೆ ಆ ಅಜ್ಜನ ಮುಖ ಥೇಟ್ ಗಾಂಧಿಯ ಮುಖದಂತೆಯೇ ಕಾಣುತ್ತಿತ್ತು. ಹಂಗಾಗಿ, ಗಾಂಧಿ ಎಂಬುದು ಕೇವಲ ಭೂತಕಾಲದ ವಿದ್ಯಮಾನವಲ್ಲ. ಎಲ್ಲ ಕಾಲಕ್ಕೂ ಸಲ್ಲುವ ಸಮ್ಮೋಹನ ಕ್ರಿಯೆ.
sgangadharaiah@gmail.com

ಆಂದೋಲನ ಡೆಸ್ಕ್

Recent Posts

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ-ನಾಗರಹೊಳೆ ಸಫಾರಿ ಆರಂಭಿಸಿ: ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ

ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌…

5 hours ago

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ

ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…

6 hours ago

ರಾಜಸ್ಥಾನದಲ್ಲಿ ಪ್ಯಾರಾಮೆಡಿಕಲ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ನಾಲ್ವರು ಅರೆಸ್ಟ್‌

ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್‌ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್‌ ಮೇಲೆ ಪೊಲೀಸರು…

6 hours ago

ಎಸ್‌ಐಆರ್‌ ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್‌

ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌…

7 hours ago

ನಾಡಿನ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್‌ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ‌ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…

7 hours ago

ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲೇ ಮೂರನೇ ಬಾರಿ ದೇಶದಲ್ಲಿ ಮಳೆ ಕೊರತೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೇ ಜೂನ್‌ ತಿಂಗಳಿನಲ್ಲಿ ಮೂರನೇ…

8 hours ago