Andolana originals

ಕರಿನಂಜನಪುರ ರಸ್ತೆಗೆ ಕೊನೆಗೂ ಕಾಂಕ್ರೀಟ್ ಭಾಗ

ಪ್ರಸಾದ್‌ ಲಕ್ಕೂರು 

ಕುಂಟುತ್ತ, ತೆವಳುತ್ತ ಸಾಗಿದ್ದ ಕಾಮಗಾರಿಗೆ ಮುಕ್ತಿ 

ಚಾಮರಾಜನಗರ: ನಗರದ ಕರಿನಂಜನಪುರ ರಸ್ತೆಗೆ ಕೊನೆಗೂ ಕಾಂಕ್ರಿಟೀಕರಣ ಭಾಗ್ಯ ದೊರಕಿದೆ. ಕುಂಟುತ್ತ, ತೆವಳುತ್ತಾ ಸಾಗಿದ್ದ ಕಾಮಗಾರಿ ಕೊನೆಗೂ ಮುಕ್ತಾಯದ ಹಂತ ತಲುಪಿದೆ.

ಡಿವೈಎಸ್ಪಿ ಕಚೇರಿ ಬಳಿಯಿಂದ ಆರಂಭವಾಗುವ ನ್ಯಾಯಾಲಯದ ರಸ್ತೆ ಕರಿನಂಜನಪುರ ರಸ್ತೆ ಮಾರ್ಗವಾಗಿ ಸತ್ಯಮಂಗಲ ರಸ್ತೆಯನ್ನು ಸಂಪರ್ಕಿಸುತ್ತದೆ. ಡಿವೈಎಸ್ಪಿ ಕಚೇರಿಯಿಂದ ನ್ಯಾಯಾಲಯದ ತನಕ ಕಾಂಕ್ರಿಟೀಕರಣ ಆಗಿದೆ. ಸತ್ಯಮಂಗಲ ರಸ್ತೆಯಿಂದ ನಿಜಗುಣ ರೆಸಾರ್ಟ್ ಸಮೀಪದ ಸೇತುವೆತನಕ ಕಾಂಕ್ರಿಟೀಕರಣವಾಗಿದೆ. ಈ ಎರಡರ ನಡುವೆ ಇರುವ ೨೧೭ ಮೀಟರ್ ಅಂತರದ ರಸ್ತೆ ಕಾಂಕ್ರಿಟೀಕರಣ ಆಗಿರಲಿಲ್ಲ.

೬ ತಿಂಗಳ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್ ಭವನ, ನಿಜಗುಣ ರೆಸಾರ್ಟ್ ಮುಂಭಾಗ ಸುಮಾರು ೧೦೦ ಮೀಟರ್ ರಸ್ತೆ ಕಾಂಕ್ರಿಟೀಕರಣವಾಯಿತು. ನ್ಯಾಯಾಲಯದ ಮುಂಭಾಗ ಒಂದು ತಿಂಗಳ ಹಿಂದೆ ೪-೫ ಮೀಟರ್ ಕಾಂಕ್ರಿಟೀಕರಣಗೊಂಡಿತು. ವಿವಿಧ ಕಾರಣಗಳಿಂದ ಕಾಮಗಾರಿ ಮುಂದಕ್ಕೆ ಹೋಗಲಿಲ್ಲ. ಈ ರಸ್ತೆಯನ್ನು ೧೦ ಮೀಟರ್ ಅಗಲಕ್ಕೆ ಕಾಂಕ್ರಿಟೀಕರಣ ಮಾಡಬೇಕು ಎಂದು ನಗರಸಭೆ ಮುಂದಾಗಿತ್ತು. ಆದರೆ, ರಸ್ತೆಯ ಅಕ್ಕಪಕ್ಕದ ಜಾಗದವರು ಹಿಂದೆ ರಸ್ತೆ ಎಷ್ಟು ಅಗಲಿವಿತ್ತು ಅಷ್ಟಕ್ಕೇ ಮಾಡಬೇಕು. ನಮ್ಮ ಜಾಗ ಬೇಕಾದರೆ ನ್ಯಾಯಯುತ ಪರಿಹಾರ ನೀಡಿ ಎಂದು ತಕರಾರು ತೆಗೆದರು. ಆದ್ದರಿಂದಲೇ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು.

ಕೇವಲ ೮ರಿಂದ ೧೦ ಮೀಟರ್ ಅಗಲಕ್ಕೆ ರಸ್ತೆ ಕಾಂಕ್ರಿಟೀಕರಣವಾಗಿದೆ. ಈ ರಸ್ತೆಯನ್ನು ಪೂರ್ಣಗೊಳಿಸಲು ೭ ವರ್ಷ ಬೇಕಾಯಿತು. ಈ ರಸ್ತೆಯನ್ನು ೮೦ ಅಡಿಗಳ ರಸ್ತೆ ಮಾಡಲು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ, ರಸ್ತೆ ಅಕ್ಕಪಕ್ಕದ ಭೂಮಿಯನ್ನು ಕಾನೂನುಬದ್ಧವಾಗಿ ಸ್ವಾಧಿನ ಮಾಡಿಕೊಳ್ಳದ ಕಾರಣ ಇಷ್ಟೊಂದು ವಿಳಂಬವಾಯಿತು ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ನಗರಸಭೆಯ ವಿಶೇಷ ಅನುದಾನ ೩.೫೦ ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಕೊಪ್ಪಳ ಜಿಲ್ಲೆಯ ಗಂಗಾವತಿಯ ರವೀಂದ್ರನಾಥ್ ಕನ್ಸ್‌ಟ್ರಕ್ಷನ್ ಅಂಡ್ ಪ್ರೈವೇಟ್ ಲಿಮಿಟೆಡ್ ಈ ರಸ್ತೆ ಕಾಮಗಾರಿಯನ್ನು ಗುತ್ತಿಗೆಗೆ ಪಡೆದಿದೆ. ಒಂದು ವರ್ಷದ ಹಿಂದೆ ಕಾಮಗಾರಿ ಆರಂಭವಾಗಿತ್ತು.

ಚರಂಡಿ, ಲೈಟ್, ಫುಟ್‌ಪಾತ್ ಇಲ್ಲ: 

ಡಿವೈಎಸ್ಪಿ ಕಚೇರಿಯಿಂದ ನ್ಯಾಯಾಲಯಗಳ ಸಂಕೀರ್ಣದ ತನಕ ರಸ್ತೆ ಕಾಂಕ್ರಿಟೀಕರಣಗೊಂಡಿದೆ. ಚರಂಡಿ ವ್ಯವಸ್ಥೆಯೂ (ಎಡಬದಿ) ಆಗಿದೆ. ಇಲ್ಲಿಂದ ಮುಂದಕ್ಕೆ ಅಂಬೇಡ್ಕರ್ ಭವನದತನಕ ಚರಂಡಿ, ಪಾದಚಾರಿ ರಸ್ತೆ (ಫುಟ್‌ಪಾತ್) ಆಗಿಲ್ಲ. ಬೀದಿ ದೀಪ ಅಳವಡಿಸಿಲ್ಲ. ಇದೇ ರಸ್ತೆಯ (ಬಲ ಬದಿ) ಜಿಲ್ಲಾ ಕಾರಾಗೃಹದಿಂದ ನಿಜಗುಣ ರೆಸಾರ್ಟ್‌ತನಕ ಚರಂಡಿ ಆಗಿಲ್ಲ. ಬೀದಿ ದೀಪ ಅಳವಡಿಸಿಲ್ಲ. ಪಾದಚಾರಿ ರಸ್ತೆಯೂ ಆಗಿಲ್ಲ.

” ರಸ್ತೆಯ ಬದಿಯಲ್ಲಿ ಅಗತ್ಯವಿರುವ ಭೂಮಿಯನ್ನು ಪಡೆದು ದೊಡ್ಡದಾಗಿ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಕಾರಣಾಂತರಗಳಿಂದ ಇರುವ ರಸ್ತೆಯನ್ನು ಕಾಂಕ್ರಿಟೀಕರಣ ಮಾಡುತ್ತಿದ್ದೇವೆ.”

-ಪ್ರಕಾಶ್, ಎಇಇ, ನಗರಸಭೆ 

 

 

ಆಂದೋಲನ ಡೆಸ್ಕ್

Recent Posts

ಕಾರ್ಮಿಕರ ಮೇಲೆ ಕಾಡಾನೆ ದಾಳಿ: ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…

1 hour ago

ಕಾವೇರಿ ವನ್ಯಜೀವಿಧಾಮದಲ್ಲಿ ಎನ್‌ಕೌಂಟರ್: ಮೃತ 3 ಕುಟುಂಬಗಳಿಗೆ ಶಾಸಕ ಎಂ.ಆರ್. ಮಂಜುನಾಥ್ 15 ಲಕ್ಷ ಪರಿಹಾರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…

1 hour ago

ಹನೂರಿನಲ್ಲಿ ಮೂವರ ಎನ್‌ಕೌಂಟರ್ ಪ್ರಕರಣ: ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯ…

2 hours ago

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

5 hours ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

5 hours ago

ಅಸಮಾಧಾನದ ಬೇಗೆ: ಸಿಎಂ ಡಿಕೆಶಿಗೆ ಹೈಕಮಾಂಡ್ ‘ಎಸಿ’

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ಕಾಂಗ್ರೆಸ್‌ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುತ್ತದೆಯೇ? ಇಂತಹದೊಂದು ಪ್ರಶ್ನೆಗೆ ತಕ್ಷಣ ಉತ್ತರ…

6 hours ago