Andolana originals

60 ದಿನಗಳಲ್ಲಿ ಕಲ್ಲಂಗಡಿ ಬೆಳೆದು ಲಾಭ ಗಳಿಸಿದ ರೈತ

ಮಾಗಳಿ ರಾಮೇಗೌಡ

ಬೆಟ್ಟದಪುರ: ಕೇವಲ ೬೦ ದಿನಗಳಲ್ಲಿ ಉತ್ಪಲ ಕಂಪೆನಿಯ ತೃಪ್ತಿ ತಳಿಯ ಕಲ್ಲಂಗಡಿ ಹಣ್ಣನ್ನು ಬೆಳೆದು ಒಂದೂವರೆ ಲಕ್ಷ ರೂ. ಲಾಭ ಗಳಿಸಿದ ಯುವ ರೈತ ಹೊನ್ನಾಪುರ ಶಶಿ ಗಮನ ಸೆಳೆದಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕಿನ ಹೊನ್ನಾಪುರ ಗ್ರಾಮದ ಪ್ರಗತಿಪರ ಯುವ ರೈತ ಶಶಿರವರು ಕೇವಲ ೬೦ ದಿನಗಳಲ್ಲಿ ಉತ್ಪಲ ಕಂಪೆನಿಯ ತೃಪ್ತಿ ತಳಿಯ ಕಲ್ಲಂಗಡಿ ಗಿಡಗಳನ್ನು ನಾಟಿ ಮಾಡಿ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಪಡೆದು ಒಂದೂವರೆ ಲಕ್ಷ ರೂ. ಲಾಭ ಗಳಿಸಿದ್ದಾರೆ.

ರೈತ ಹೊನ್ನಾಪುರ ಶಶಿ ಮಾತನಾಡಿ, ಹರೀಶ್‌ರವರ ಮಾರ್ಗದರ್ಶನದಲ್ಲಿ ಈ ವರ್ಷ ಮೊದಲನೇ ಬಾರಿಗೆ ೩೦ ಕುಂಟೆ ಜಾಗದಲ್ಲಿ ಮಲ್ಚಿಂಗ್ ಶೀಟ್ ಅಳವಡಿಸಿಕೊಂಡು ಹನಿ ನೀರಾವರಿ ಪದ್ಧತಿಯಲ್ಲಿ ಉತ್ಪಲ ಕಂಪೆನಿಯ ತೃಪ್ತಿ ತಳಿಯ ೩ ಸಾವಿರ ಕಲ್ಲಂಗಡಿ ಗಿಡಗಳನ್ನು ನಾಟಿ ಮಾಡಿ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದೇನೆ. ಈ ಬೆಳೆಗೆ ರೋಗ ಕಡಿಮೆ ಇದೆ. ಉತ್ತಮ ಇಳುವರಿ ಬಂದಿದೆ. ಅಂಡಾಕಾರದ ಹಣ್ಣುಗಳಿದ್ದು ಕೆಂಪಾಗಿ, ತಿನ್ನಲು ಸಿಹಿಯಾಗಿದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು ಮುಂಬೈ, ದಿಲ್ಲಿ, ಚೆನ್ನೈ, ಕೋಲ್ಕತಾ ನಗರಗಳಿಗೆ ಸಾಗಣೆ ಮಾಡಲಾಗುತ್ತದೆ ಎಂದರು.

ಮಂಟಿ ಬಿಳಗುಲಿಯ ಅಭಿಷೇಕ್ ಮಾತನಾಡಿದರು. ಪ್ರಗತಿಪರ ಯುವ ರೈತರಾದ ಶಶಿ ಸಹೋದರರನ್ನು ಕಲ್ಲಂಗಡಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಸನ್ಮಾನಿಸಲಾಯಿತು. ಸಮೃದ್ಧವಾಗಿ ಬಂದಿರುವ ಕಲ್ಲಂಗಡಿ ಹಣ್ಣಿನ ಬೆಳೆ ವೀಕ್ಷಣೆ ಮಾಡಲು ಹೊನ್ನಾಪುರ ಸುತ್ತಮುತ್ತಲಿನ ನೂರಾರು ರೈತರು ಆಗಮಿಸಿದ್ದರು. ರೈತರಾದ ಹೊನ್ನಪುರ ಶಿವಣ್ಣ, ಶಶಿ, ಆಂಜನೇಯ, ಪ್ರಕಾಶ್, ಪುಟ್ಟಸ್ವಾಮಿ, ಗಂಗನಕುಪ್ಪೆ ಯೋಗಣ್ಣ, ಅರುಣ್, ಅಡಗೂರು ರಾಜೇಶ್, ಹರೀಶ್, ಕಣಗಾಲ್ ಮಧು, ತಮ್ಮೇಗೌಡ, ಗಣೇಶ್, ಹೆಚ್.ಹೆಚ್.ಆಂಜನೇಯ, ವೆಂಕಟೇಶ್, ರವಿಕುಮಾರ್, ಉತ್ಪಲ ಕಂಪೆನಿಯ ಆರ್. ಎಸ್.ಎಂ.ಸತೀಶ್ ವಾಡೆ, ಟಿ.ಎಸ್.ಎಂ. ಹರೀಶ್, ಅಜಯ್, ನರ್ಸರಿ ಮಾಲೀಕರಾದ ಅಭಿ, ಸುನಿಲ್, ಪುನೀತ್, ನಾಗರಾಜ್, ವಿತರಕರಾದ ಕುಬೇರ್, ವೆಂಕಟೇಶ್, ಸೋಮಣ್ಣ, ಲೋಹಿತ್, ಸ್ವಾಮಿ, ನೂರಾರು ರೈತರು ಹಾಜರಿದ್ದರು.

” ಒಂದು ಹಣ್ಣು ಐದರಿಂದ ಆರು ಕೆಜಿ ತೂಕವಿದೆ. ೬೦ ಸಾವಿರ ರೂ. ಖರ್ಚು ಮಾಡಿದ್ದೇವೆ ೨೦ ಟನ್ ಹಣ್ಣನ್ನು ನಿರೀಕ್ಷೆ ಮಾಡಿದ್ದೇವೆ. ಪ್ರಸ್ತುತಮಾರುಕಟ್ಟೆ ದರ ಪ್ರತಿ ಕೆಜಿಗೆ ೧೦ ರೂ. ಇದ್ದು, ೨ ಲಕ್ಷ ರೂ. ಸಿಗಲಿದೆ. ಖರ್ಚು ಕಳೆದು ೧.೪೦ ಲಕ್ಷ ರೂ. ಲಾಭ ಬರುವ ನಿರೀಕ್ಷೆಯಲ್ಲಿದ್ದೇನೆ.”

-ಹೊನ್ನಾಪುರ ಶಶಿ, ರೈತ 

 

 

 

ಆಂದೋಲನ ಡೆಸ್ಕ್

Recent Posts

ಹನೂರಿನಲ್ಲಿ ಮೂವರ ಎನ್‌ಕೌಂಟರ್ ಪ್ರಕರಣ: ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯ…

55 mins ago

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

4 hours ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

4 hours ago

ಅಸಮಾಧಾನದ ಬೇಗೆ: ಸಿಎಂ ಡಿಕೆಶಿಗೆ ಹೈಕಮಾಂಡ್ ‘ಎಸಿ’

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ಕಾಂಗ್ರೆಸ್‌ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುತ್ತದೆಯೇ? ಇಂತಹದೊಂದು ಪ್ರಶ್ನೆಗೆ ತಕ್ಷಣ ಉತ್ತರ…

4 hours ago

ನಾಲ್ಕು ಶೂಟೌಟ್ ಪ್ರಕರಣ; ಏಳು ಸಾವು

ಮಹಾದೇಶ ಎಂ ಗೌಡ ೨೦೧೪ರಿಂದ ೨೦೨೬ರವರೆಗೆ ನಡೆದ ಪ್ರಕರಣಗಳು ಹನೂರು: ತಾಲ್ಲೂಕಿನ ಕಾವೇರಿ ವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ…

4 hours ago