ಕಳೆದ ವರ್ಷ ಮೈಸೂರಿನ ಶ್ರೀರಾಂಪುರ ಬಡಾವಣೆಯಲ್ಲಿ ನೂತನವಾಗಿ ಅಂಚೆ ಕಚೇರಿಯನ್ನು ತೆರೆದು, ನೂತನ ಪಿನ್ಕೋಡ್ (570 034) ಅನ್ನು ಈ ಹೊಸ ಅಂಚೆ ಕಚೇರಿಗೆ ನೀಡಲಾಗಿತ್ತು.
ಈ ಅಂಚೆ ಕಚೇರಿಗೆ ಕುವೆಂಪುನಗರದ ಎನ್-ಬ್ಲಾಕ್, ಅರವಿಂದ ನಗರ, ಐಶ್ವರ್ಯಾ ನಗರ, ವಿವೇಕಾನಂದ ನಗರದ ಸ್ವಲ್ಪ ಭಾಗವನ್ನು ಸೇರಿಸಲಾಗಿತ್ತು.
ಈ ಹಿಂದೆ ಕುವೆಂಪುನಗರದ ಎನ್-ಬ್ಲಾಕ್ ಸೇರಿದಂತೆ ಹಲವು ಬಡಾವಣೆಗಳು ಕುವೆಂಪುನಗರದ ಅಂಚೆಕಚೇರಿಯ ವ್ಯಾಪ್ತಿಗೆ ಸೇರಿದ್ದು, ಪಿನ್ಕೋಡ್ ಸಂಖ್ಯೆ 570023 ಆಗಿತ್ತು. ಇದರಿಂದಾಗಿ ಕುವೆಂಪುನಗರದ ನಿವಾಸಿಗಳಿಗೆ ತಲುಪಬೇಕಿದ್ದ ಪತ್ರಗಳು ನಿಗದಿತ ಸಮಯಕ್ಕೆ ತಲುಪುತ್ತಿದ್ದವು. ಆದರೆ ಈಗ ಶ್ರೀರಾಂಪುರದ ನೂತನ ಅಂಚೆಕಚೇರಿಯ ವ್ಯಾಪ್ತಿಗೆ ಕುವೆಂಪುನಗರವನ್ನು ಸೇರಿಸಿರುವುದರಿಂದ ಪಿನ್ಕೋಡ್ ಕೂಡ ಬದಲಾಗಿದ್ದು, ಹಳೆಯ ಪಿನ್ ಕೋಡ್ ಬಳಸಿ ಬರೆದ ಪತ್ರಗಳು ಮೊದಲು ಕುವೆಂಪುನಗರದ ಅಂಚೆಕಚೇರಿಗೆ ಹೋಗಿ ಅಲ್ಲಿಂದ ಶ್ರೀರಾಂಪುರ ಅಂಚೆಕಚೇರಿಗೆ ಬಂದು ನಂತರ ಸಂಬಂಧಪಟ್ಟವರ ಕೈ ಸೇರುತ್ತಿವೆ. ಇನ್ನು ಸ್ಪೀಡ್ ಪೋಸ್ಟ್ ಪತ್ರಗಳೂ 2-3 ದಿನಗಳು ತಡವಾಗಿ ಸಂಬಂಧಪಟ್ಟವರ ಕೈ ಸೇರುತ್ತಿವೆ. ಈ ಬಗ್ಗೆ ಅಂಚೆಕಚೇರಿಯಲ್ಲಿ ವಿಚಾರಿಸಿದಾಗ ಪಿನ್ಕೋಡ್ ಬದಲಾಗಿರುವುದರಿಂದ ಪತ್ರಗಳು ತಡವಾಗಿ ಬರುತ್ತಿವೆ ಎನ್ನುತ್ತಿದ್ದಾರೆ.
ಕುವೆಂಪುನಗರದ ಜನರು ಕಳೆದ 20 ವರ್ಷಗಳಿಂದಲೂ ಹಳೆಯ ಪಿನ್ ಕೋಡನ್ನೇ ಬಳಸುತ್ತಿದ್ದು, ಕುವೆಂಪುನಗರದಲ್ಲಿರುವವರಿಗೆ ಪತ್ರ ಬರೆಯುವವರೂ ಹಳೆಯ ಪಿನ್ಕೋಡ್ ಬಳಸಿಯೇ ಪತ್ರ ಬರೆಯುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕುವೆಂಪುನಗರಕ್ಕೆ ಈ ಹಿಂದೆ ಇದ್ದ ಹಳೆಯ ಪಿನ್ಕೋಡನ್ನೇ ಮುಂದುವರಿಸಬೇಕಿದೆ.
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.
ರಾಮನಗರ: ಬೆಂಗಳೂರು ಮತ್ತು ಮೈಸೂರು ನಡುವೆ ನಿತ್ಯ ಸಂಚರಿಸುವ ಒಡೆಯರ್ ಎಕ್ಸ್ಪ್ರೆಸ್ ರೈಲಿಗೆ ಈಗ ರಾಮನಗರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ…
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಟಿವಿಕೆ ಪಕ್ಷವು ಇದೀಗ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಚೆನ್ನೈನ ಪಣಿಯೂರಿನಲ್ಲಿರುವ…
ಬೆಂಗಳೂರು: ತಮಿಳುನಾಡಿನ ಮತದಾರರು ಬದಲಾವಣೆ ಬಯಸಿದ್ದರು. ಅದರಂತೆ ಬದಲಾವಣೆಗೆ ಮತ ಹಾಕಿದ್ದಾರೆ. ಈ ಫಲಿತಾಂಶ ತುಂಬಾ ಆಶ್ಚರ್ಯಕರವಾಗಿದೆ ಎಂದು ಸಿಎಂ…
ಚೆನ್ನೈ: ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರಿಂದು ತಮಿಳುನಾಡು ಸಿಎಂ ಹುದ್ದಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಲೋಕಭವನದಲ್ಲಿರುವ…
ಮೈಸೂರು: ಸೂರ್ಯ ಉದಯಿಸುವ ಮುನ್ನವೇ ಮೈಸೂರಿನ ಉದಯಗಿರಿಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಉದಯಗಿರಿ ಪೊಲೀಸ್ ಠಾಣೆಯಿಂದ ಕೇವಲ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಾಮಾಪುರ ವ್ಯಾಪ್ತಿಯಲ್ಲಿ ಜಮೀನುಗಳಲ್ಲಿ ಇರುತ್ತಿದ್ದ ನೀರೆತ್ತುವ ಪಂಪ್ ಸೆಟ್ ಮೋಟಾರ್ಗಳನ್ನು…