ಕಳೆದ ವರ್ಷ ಮೈಸೂರಿನ ಶ್ರೀರಾಂಪುರ ಬಡಾವಣೆಯಲ್ಲಿ ನೂತನವಾಗಿ ಅಂಚೆ ಕಚೇರಿಯನ್ನು ತೆರೆದು, ನೂತನ ಪಿನ್ಕೋಡ್ (570 034) ಅನ್ನು ಈ ಹೊಸ ಅಂಚೆ ಕಚೇರಿಗೆ ನೀಡಲಾಗಿತ್ತು.
ಈ ಅಂಚೆ ಕಚೇರಿಗೆ ಕುವೆಂಪುನಗರದ ಎನ್-ಬ್ಲಾಕ್, ಅರವಿಂದ ನಗರ, ಐಶ್ವರ್ಯಾ ನಗರ, ವಿವೇಕಾನಂದ ನಗರದ ಸ್ವಲ್ಪ ಭಾಗವನ್ನು ಸೇರಿಸಲಾಗಿತ್ತು.
ಈ ಹಿಂದೆ ಕುವೆಂಪುನಗರದ ಎನ್-ಬ್ಲಾಕ್ ಸೇರಿದಂತೆ ಹಲವು ಬಡಾವಣೆಗಳು ಕುವೆಂಪುನಗರದ ಅಂಚೆಕಚೇರಿಯ ವ್ಯಾಪ್ತಿಗೆ ಸೇರಿದ್ದು, ಪಿನ್ಕೋಡ್ ಸಂಖ್ಯೆ 570023 ಆಗಿತ್ತು. ಇದರಿಂದಾಗಿ ಕುವೆಂಪುನಗರದ ನಿವಾಸಿಗಳಿಗೆ ತಲುಪಬೇಕಿದ್ದ ಪತ್ರಗಳು ನಿಗದಿತ ಸಮಯಕ್ಕೆ ತಲುಪುತ್ತಿದ್ದವು. ಆದರೆ ಈಗ ಶ್ರೀರಾಂಪುರದ ನೂತನ ಅಂಚೆಕಚೇರಿಯ ವ್ಯಾಪ್ತಿಗೆ ಕುವೆಂಪುನಗರವನ್ನು ಸೇರಿಸಿರುವುದರಿಂದ ಪಿನ್ಕೋಡ್ ಕೂಡ ಬದಲಾಗಿದ್ದು, ಹಳೆಯ ಪಿನ್ ಕೋಡ್ ಬಳಸಿ ಬರೆದ ಪತ್ರಗಳು ಮೊದಲು ಕುವೆಂಪುನಗರದ ಅಂಚೆಕಚೇರಿಗೆ ಹೋಗಿ ಅಲ್ಲಿಂದ ಶ್ರೀರಾಂಪುರ ಅಂಚೆಕಚೇರಿಗೆ ಬಂದು ನಂತರ ಸಂಬಂಧಪಟ್ಟವರ ಕೈ ಸೇರುತ್ತಿವೆ. ಇನ್ನು ಸ್ಪೀಡ್ ಪೋಸ್ಟ್ ಪತ್ರಗಳೂ 2-3 ದಿನಗಳು ತಡವಾಗಿ ಸಂಬಂಧಪಟ್ಟವರ ಕೈ ಸೇರುತ್ತಿವೆ. ಈ ಬಗ್ಗೆ ಅಂಚೆಕಚೇರಿಯಲ್ಲಿ ವಿಚಾರಿಸಿದಾಗ ಪಿನ್ಕೋಡ್ ಬದಲಾಗಿರುವುದರಿಂದ ಪತ್ರಗಳು ತಡವಾಗಿ ಬರುತ್ತಿವೆ ಎನ್ನುತ್ತಿದ್ದಾರೆ.
ಕುವೆಂಪುನಗರದ ಜನರು ಕಳೆದ 20 ವರ್ಷಗಳಿಂದಲೂ ಹಳೆಯ ಪಿನ್ ಕೋಡನ್ನೇ ಬಳಸುತ್ತಿದ್ದು, ಕುವೆಂಪುನಗರದಲ್ಲಿರುವವರಿಗೆ ಪತ್ರ ಬರೆಯುವವರೂ ಹಳೆಯ ಪಿನ್ಕೋಡ್ ಬಳಸಿಯೇ ಪತ್ರ ಬರೆಯುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕುವೆಂಪುನಗರಕ್ಕೆ ಈ ಹಿಂದೆ ಇದ್ದ ಹಳೆಯ ಪಿನ್ಕೋಡನ್ನೇ ಮುಂದುವರಿಸಬೇಕಿದೆ.
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.
ಕೊಡಗು: ಜಿಲ್ಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶ ನೀಡಿರುವ…
ಅದು ೨೦೦೬ರ ಸಮಯ. ಮೈಸೂರು ಈಗಿನಂತಿರಲಿಲ್ಲ. ಆದರೂ ಮೈಸೂರು ಇಂದಿಗಿಂತ ಹಿಂದೆಯೇನೂ ಇರಲಿಲ್ಲ. ಈಗಿನಷ್ಟೇ ಪ್ರವಾಸಿಗರು, ಹೂಡಿಕೆದಾರರನ್ನು ಆಕರ್ಷಿಸುತ್ತಿತ್ತು. ಮೈಸೂರಿನಲ್ಲಿ…
ಮನೆಗಳ ಗೇಟಿನ ಮುಂದೆಯೇ ಅಪರಿಚಿತರ ಕಾರು ನಿಲ್ಲಿಸುವ ಕೆಟ್ಟ ಪರಂಪರೆಯನ್ನು ಅನೇಕ ಕಡೆ ಕಾಣಬಹುದು. ಸೂರ್ಯಬೇಕರಿ ಬಳಿಯ ಎರಡನೇ ಅಡ್ಡರಸ್ತೆಯಲ್ಲಿ…
ಭಾರತೀಯ ರೈಲ್ವೆಯನ್ನು ನೆಚ್ಚಿಕೊಂಡಿರುವವರು ಕೊಟ್ಯಂತರ ಮಂದಿ ಇದ್ದಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ರೈಲು ನಿಲ್ದಾಣಗಳಲ್ಲಿ ರೈಲು ನೀರಿನ ಬಾಟಲಿಗಳ…
ಬೆಲೆ ಹೆಚ್ಚಳವೆಂಬುದು ಈಗ ಅನಿರೀಕ್ಷಿತವಲ್ಲವೆಂಬುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಸದ್ಯದಲ್ಲೆ ಇದಕ್ಕೆ ಸೇರ್ಪಡೆಯಾಗುವಂತಿದೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್…
ಪಂಜು ಗಂಗೊಳ್ಳಿ ಅವರ ವಾರದ ಅಂಕಣ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ‘ಲೋಟಸ್ ಪೆಟಲ್ ಫೌಂಡೇಶನ್’ ಸ್ಥಾಪನೆ ಜಾರ್ಖಂಡಿನ ರಾಂಚಿಯ ಕುಶಾಲ್ ರಾಜ್…