Andolana originals

ನಿಯಮ ಮೀರಿ ವಾಹನ ನಿಲುಗಡೆ ಶುಲ್ಕ ವಸೂಲಿ

ಎಸ್.ಎಸ್.ಭಟ್

ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ನಿಲ್ಲಿಸುವ ವಾಹನಗಳ ಚಾಲಕರಿಂದ ಹಗಲು ದರೋಡೆ 

ನಂಜನಗೂಡು: ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ನಿಲ್ಲಿಸಲಾಗುವ ವಾಹನಗಳ ಶುಲ್ಕದ ವಸೂಲಿಯಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಒಂದು ವರ್ಷದ ಅವಧಿಗೆಂದು ಗುತ್ತಿಗೆ ಪಡೆದ ಗುತ್ತಿಗೆದಾರರು ೩೦ ರೂ.ವಸೂಲಿ ಮಾಡುವಲ್ಲಿ ೫೦ ರೂ., ೫೦ ರೂ. ವಸೂಲಿ ಮಾಡಬೇಕಾದಲ್ಲಿ ೮೦ ರೂ., ಕನ್ನಡ ಭಾಷೆ ಗೊತ್ತಿಲ್ಲದವರಿಂದ ೧೦೦ ರೂ.ಗಳನ್ನು ವಸೂಲಿ ಮಾಡುತ್ತಿರುವುದು ದಾಖಲೆ ಸಹಿತ ಬಯಲಿಗೆ ಬಂದಿದೆ.

ಮೋಟಾರ್ ಬೈಕ್‌ಗಳಿಗೆ ೫ ರೂ., ಕಾರು-ಜೀಪುಗಳಿಗೆ ೨೫ ರೂ., ಟೆಂಪೋ, ಮ್ಯಾಕ್ಸಿ ಕ್ಯಾಬ್‌ಗಳಿಗೆ ೩೫ ರೂ., ಬಸ್ ಹಾಗೂ ಲಾರಿಗಳಾದರೆ ೫೦ ರೂ. ವಸೂಲಿ ಮಾಡಬೇಕೆಂಬ ನಿಬಂಧನೆಯೊಂದಿಗೆ ೧೯.೯.೨೦೨೫ರಿಂದ ೧೮.೯.೨೦೨೬ವರಿಗೆ ಗುತ್ತಿಗೆ ಪಡೆದ ಈ ನಿಯಮಾವಳಿಗಳನ್ನು ಗಾಳಿಗೆ ತೂರಿ ೮೦ ರೂ. ವಸೂಲಿ ಮಾಡುತ್ತಿರುವ ಕುರಿತಂತೆ ಅವರು ನೀಡುತ್ತಿರುವ ಮುದ್ರಿತ ರಶೀದಿಗಳೇ ಸಾಕ್ಷಿಯಾಗಿವೆ.

ಕಳೆದ ತಿಂಗಳು ಶ್ರೀಕಂಠೇಶ್ವರ ದೇವಾಲಯದ ಆವರಣಕ್ಕೆ ಬಂದಿದ್ದ ಶಾಸಕ ದರ್ಶನ್ ಧ್ರುವನಾರಾಯಣ ವಾಹನ ಶುಲ್ಕದ ಹೆಚ್ಚುವರಿ ವಸೂಲಿ ಕುರಿತಂತೆ ಗುತ್ತಿಗೆದಾರರ ಮೇಲೆ ಕೃಮ ಕೈಗೊಳ್ಳಬೇಕು. ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಶುಲ್ಕದ ದರೋಡೆ ನಿಲ್ಲಿಸಬೇಕು ಎಂದು ದೇವಾಲಯದ ಅಂದಿನ ಅಧಿಕಾರಿಗೆ ತಾಕೀತು ಮಾಡಿದ್ದರು. ಆದರೆ ಇಂದಿಗೂ ಹೆಚ್ಚುವರಿ ವಸೂಲಿ ನಿಂತಿಲ್ಲ. ದೇವಾಲಯಕ್ಕೆ ವಾಹನಗಳಲ್ಲಿ ಆಗಮಿಸುವ ಭಕ್ತರಿಂದ ಸುಲಿಗೆ ನಡೆಯುತ್ತಲೇ ಇದೆ. ಇದಕ್ಕೆ ಟೆಂಡರ್‌ನಲ್ಲಿ ಇಲ್ಲದ ೮೦ ರೂ.ಗಳ

ರಶೀದಿಗಳೇ ಸಾಕ್ಷಿಯಾಗಿದ್ದು, ತಕ್ಷಣ ಗುತ್ತಿಗೆ ರದ್ದು ಮಾಡಿ ದೇವಾಲಯದಿಂದಲೇ ಹಣ ವಸೂಲಿ ಮಾಡಿ ಎನ್ನುವ ಒತ್ತಾಯ ಭಕ್ತರಿಂದ ಕೇಳಿ ಬರುತ್ತಿದೆ. ಈ ಆವರಣದಲ್ಲಿ ನಿಲ್ಲಿಸಲಾಗುವ ವಾಹನಗಳ ಜವಾಬ್ದಾರಿ ಗುತ್ತಿಗೆದಾರರದ್ದು ಎಂಬ ನಿಯಮ ಎಲ್ಲೆಡೆ ಇದ್ದರೆ, ಇಲ್ಲಿ ಮಾತ್ರ ಆ ಜವಾಬ್ದಾರಿ ಮಾಲೀಕರದ್ದು ಎಂಬ ಫಲಕ ನೇತುಹಾಕಲಾಗಿದೆ.

ಅದು ಜಾರಿಯಲ್ಲಿದ್ದರೂ ಅದೇ ಫಲಕದಲ್ಲಿರುವ ನಿಗದಿಪಡಿಸಿದ ದರ ಮಾತ್ರ ಜಾರಿಯಲ್ಲಿ ಇಲ್ಲದೆ ಹೆಚ್ಚುವರಿ ವಸೂಲಿಯಾಗುತ್ತಿದ್ದು, ಈಗಲಾದರೂ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಈ ಹಗಲು ದರೋಡೆಗೆ ಕಡಿವಾಣ ಹಾಕಬೇಕು ಎನ್ನುತ್ತಾರೆ ನಿಲುಗಡೆಯ ವಾಹನಗಳ ಮಾಲೀಕರು.

” ವಾಹನ ನಿಲುಗಡೆ ಫಲಕದಲ್ಲಿ ಇರುವುದು ೫, ೨೫, ೩೫, ೫೦ ರೂ. ಆದರೆ ಗುತ್ತಿಗೆದಾರರು ನೀಡುವ ರಶೀದಿ ಮಾತ್ರ ೩೦ ರೂ. ಅಥವಾ ೮೦ ರೂ.”

” ಹೆಚ್ಚುವರಿ ಹಣದ ವಸೂಲಿ ತಮ್ಮ ಗಮನಕ್ಕೆ ಬಂದ ತಕ್ಷಣ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ (ಬ್ಲಾಕ್ ಲೀಸ್ಟ್) ಸೇರಿಸಿ ಗುತ್ತಿಗೆ ರದ್ದು ಮಾಡಿ ಎಂದು ಅಂದೇ ಅಧಿಕಾರಿಗಳಿಗೆ ಸೂಚಿಸಿದ್ದೆ. ಇದೀಗ ಹೊಸ ಅಧಿಕಾರಿ ಬಂದಿದ್ದು, ಅವರು  ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ.”

– ದರ್ಶನ್ ಧ್ರುವನಾರಾಯಣ, ಶಾಸಕ

” ಹೊಸದಾಗಿ ಬಂದಿರುವ ನನಗೆ ವಾಹನಗಳಿಂದ ಈ ಹೆಚ್ಚುವರಿ ವಸೂಲಿ ನಡೆಯುತ್ತಿರುವುದು ಇದೀಗ ಗಮನಕ್ಕೆ ಬಂದಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಜರುಗಿಸಲಾಗುವುದು.”

-ಕೃಷ್ಣ, ಶ್ರೀಕಂಠೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ

 

 

 

ಆಂದೋಲನ ಡೆಸ್ಕ್

Recent Posts

ಎರಡನೇ ಆಷಾಢ ಶುಕ್ರವಾರದ ಸಂಭ್ರಮ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ

ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರವಾದ ಇಂದು ನಾಡ ಅಧಿದೇವತೆ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.…

11 hours ago

ಓದುಗರ ಪತ್ರ: ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಖಂಡನೀಯ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದಿಲ್ಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರದ ಕುಮ್ಮಕ್ಕು ಹಾಗೂ ಪೊಲೀಸರ…

14 hours ago

ಓದುಗರ ಪತ್ರ: ಗ್ರಂಥಪಾಲಕರಿಲ್ಲದ ಗ್ರಂಥಾಲಯಗಳು

ಕಳೆದ ೨೫ ವರ್ಷಗಳಿಂದ ರಾಜ್ಯದಲ್ಲಿ ೧೦ ಸಾವಿರ ಗ್ರಂಥಪಾಲಕ ಹುದ್ದೆಗಳನ್ನು ಭರ್ತಿ ಮಾಡದಿರುವುದು ಸರ್ಕಾರದ ಅಕ್ಷಮ್ಯ ನಿರ್ಲಕ್ಷ್ಯ. ೧,೨೦೦ ಸರ್ಕಾರಿ…

14 hours ago

ಓದುಗರ ಪತ್ರ: ಮುಚ್ಚಿರುವ ಪಿಎಚ್‌ಸಿ ಕೇಂದ್ರ ತೆರೆಯುವುದು ಎಂದು?

ಮೈಸೂರಿನ ಕುವೆಂಪು ನಗರದ ಎಂ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು, ಕಳೆದ ಮೂರು ತಿಂಗಳಿಂದ ಮುಚ್ಚಿದೆ. ಇದಕ್ಕೆ ಕಾರಣ ತಿಳಿದಿಲ್ಲ.…

15 hours ago

ಇದು ನಮಿತ್ ಮಲ್ಹೋತ್ರ ‘ರಾಮಾಯಣ’ ದರ್ಶನ

 ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ  ‘ತಿಣಿಕಿದನು -ಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂ ತಿಣೀಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ’ ಎಂದು…

15 hours ago

ಮಡಿಕೇರಿಯಲ್ಲಿ ಬಳಂಜಿಗಿಲ್ಲ ಬೇಡಿಕೆ

ಪುನೀತ್ ಜಿಲ್ಲೆಯಲ್ಲಿ ಕ್ಷೀಣಿಸಿದ ಮಳೆಯಿಂದ ಬೇಡಿಕೆ ಕುಸಿತ; ಕುಲಕಸುಬಿಗೆ ಹೊಡೆತ  ಮಡಿಕೇರಿ: ಜಿಲ್ಲೆಯಲ್ಲಿ ಧಾರಾಕಾರ ಮಳೆಯ ವಾತಾವರಣ ಇಲ್ಲದ ಕಾರಣ…

15 hours ago