Andolana originals

ನಿಯಮ ಮೀರಿ ವಾಹನ ನಿಲುಗಡೆ ಶುಲ್ಕ ವಸೂಲಿ

ಎಸ್.ಎಸ್.ಭಟ್

ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ನಿಲ್ಲಿಸುವ ವಾಹನಗಳ ಚಾಲಕರಿಂದ ಹಗಲು ದರೋಡೆ 

ನಂಜನಗೂಡು: ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ನಿಲ್ಲಿಸಲಾಗುವ ವಾಹನಗಳ ಶುಲ್ಕದ ವಸೂಲಿಯಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಒಂದು ವರ್ಷದ ಅವಧಿಗೆಂದು ಗುತ್ತಿಗೆ ಪಡೆದ ಗುತ್ತಿಗೆದಾರರು ೩೦ ರೂ.ವಸೂಲಿ ಮಾಡುವಲ್ಲಿ ೫೦ ರೂ., ೫೦ ರೂ. ವಸೂಲಿ ಮಾಡಬೇಕಾದಲ್ಲಿ ೮೦ ರೂ., ಕನ್ನಡ ಭಾಷೆ ಗೊತ್ತಿಲ್ಲದವರಿಂದ ೧೦೦ ರೂ.ಗಳನ್ನು ವಸೂಲಿ ಮಾಡುತ್ತಿರುವುದು ದಾಖಲೆ ಸಹಿತ ಬಯಲಿಗೆ ಬಂದಿದೆ.

ಮೋಟಾರ್ ಬೈಕ್‌ಗಳಿಗೆ ೫ ರೂ., ಕಾರು-ಜೀಪುಗಳಿಗೆ ೨೫ ರೂ., ಟೆಂಪೋ, ಮ್ಯಾಕ್ಸಿ ಕ್ಯಾಬ್‌ಗಳಿಗೆ ೩೫ ರೂ., ಬಸ್ ಹಾಗೂ ಲಾರಿಗಳಾದರೆ ೫೦ ರೂ. ವಸೂಲಿ ಮಾಡಬೇಕೆಂಬ ನಿಬಂಧನೆಯೊಂದಿಗೆ ೧೯.೯.೨೦೨೫ರಿಂದ ೧೮.೯.೨೦೨೬ವರಿಗೆ ಗುತ್ತಿಗೆ ಪಡೆದ ಈ ನಿಯಮಾವಳಿಗಳನ್ನು ಗಾಳಿಗೆ ತೂರಿ ೮೦ ರೂ. ವಸೂಲಿ ಮಾಡುತ್ತಿರುವ ಕುರಿತಂತೆ ಅವರು ನೀಡುತ್ತಿರುವ ಮುದ್ರಿತ ರಶೀದಿಗಳೇ ಸಾಕ್ಷಿಯಾಗಿವೆ.

ಕಳೆದ ತಿಂಗಳು ಶ್ರೀಕಂಠೇಶ್ವರ ದೇವಾಲಯದ ಆವರಣಕ್ಕೆ ಬಂದಿದ್ದ ಶಾಸಕ ದರ್ಶನ್ ಧ್ರುವನಾರಾಯಣ ವಾಹನ ಶುಲ್ಕದ ಹೆಚ್ಚುವರಿ ವಸೂಲಿ ಕುರಿತಂತೆ ಗುತ್ತಿಗೆದಾರರ ಮೇಲೆ ಕೃಮ ಕೈಗೊಳ್ಳಬೇಕು. ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಶುಲ್ಕದ ದರೋಡೆ ನಿಲ್ಲಿಸಬೇಕು ಎಂದು ದೇವಾಲಯದ ಅಂದಿನ ಅಧಿಕಾರಿಗೆ ತಾಕೀತು ಮಾಡಿದ್ದರು. ಆದರೆ ಇಂದಿಗೂ ಹೆಚ್ಚುವರಿ ವಸೂಲಿ ನಿಂತಿಲ್ಲ. ದೇವಾಲಯಕ್ಕೆ ವಾಹನಗಳಲ್ಲಿ ಆಗಮಿಸುವ ಭಕ್ತರಿಂದ ಸುಲಿಗೆ ನಡೆಯುತ್ತಲೇ ಇದೆ. ಇದಕ್ಕೆ ಟೆಂಡರ್‌ನಲ್ಲಿ ಇಲ್ಲದ ೮೦ ರೂ.ಗಳ

ರಶೀದಿಗಳೇ ಸಾಕ್ಷಿಯಾಗಿದ್ದು, ತಕ್ಷಣ ಗುತ್ತಿಗೆ ರದ್ದು ಮಾಡಿ ದೇವಾಲಯದಿಂದಲೇ ಹಣ ವಸೂಲಿ ಮಾಡಿ ಎನ್ನುವ ಒತ್ತಾಯ ಭಕ್ತರಿಂದ ಕೇಳಿ ಬರುತ್ತಿದೆ. ಈ ಆವರಣದಲ್ಲಿ ನಿಲ್ಲಿಸಲಾಗುವ ವಾಹನಗಳ ಜವಾಬ್ದಾರಿ ಗುತ್ತಿಗೆದಾರರದ್ದು ಎಂಬ ನಿಯಮ ಎಲ್ಲೆಡೆ ಇದ್ದರೆ, ಇಲ್ಲಿ ಮಾತ್ರ ಆ ಜವಾಬ್ದಾರಿ ಮಾಲೀಕರದ್ದು ಎಂಬ ಫಲಕ ನೇತುಹಾಕಲಾಗಿದೆ.

ಅದು ಜಾರಿಯಲ್ಲಿದ್ದರೂ ಅದೇ ಫಲಕದಲ್ಲಿರುವ ನಿಗದಿಪಡಿಸಿದ ದರ ಮಾತ್ರ ಜಾರಿಯಲ್ಲಿ ಇಲ್ಲದೆ ಹೆಚ್ಚುವರಿ ವಸೂಲಿಯಾಗುತ್ತಿದ್ದು, ಈಗಲಾದರೂ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಈ ಹಗಲು ದರೋಡೆಗೆ ಕಡಿವಾಣ ಹಾಕಬೇಕು ಎನ್ನುತ್ತಾರೆ ನಿಲುಗಡೆಯ ವಾಹನಗಳ ಮಾಲೀಕರು.

” ವಾಹನ ನಿಲುಗಡೆ ಫಲಕದಲ್ಲಿ ಇರುವುದು ೫, ೨೫, ೩೫, ೫೦ ರೂ. ಆದರೆ ಗುತ್ತಿಗೆದಾರರು ನೀಡುವ ರಶೀದಿ ಮಾತ್ರ ೩೦ ರೂ. ಅಥವಾ ೮೦ ರೂ.”

” ಹೆಚ್ಚುವರಿ ಹಣದ ವಸೂಲಿ ತಮ್ಮ ಗಮನಕ್ಕೆ ಬಂದ ತಕ್ಷಣ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ (ಬ್ಲಾಕ್ ಲೀಸ್ಟ್) ಸೇರಿಸಿ ಗುತ್ತಿಗೆ ರದ್ದು ಮಾಡಿ ಎಂದು ಅಂದೇ ಅಧಿಕಾರಿಗಳಿಗೆ ಸೂಚಿಸಿದ್ದೆ. ಇದೀಗ ಹೊಸ ಅಧಿಕಾರಿ ಬಂದಿದ್ದು, ಅವರು  ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ.”

– ದರ್ಶನ್ ಧ್ರುವನಾರಾಯಣ, ಶಾಸಕ

” ಹೊಸದಾಗಿ ಬಂದಿರುವ ನನಗೆ ವಾಹನಗಳಿಂದ ಈ ಹೆಚ್ಚುವರಿ ವಸೂಲಿ ನಡೆಯುತ್ತಿರುವುದು ಇದೀಗ ಗಮನಕ್ಕೆ ಬಂದಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಜರುಗಿಸಲಾಗುವುದು.”

-ಕೃಷ್ಣ, ಶ್ರೀಕಂಠೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ

 

 

 

ಆಂದೋಲನ ಡೆಸ್ಕ್

Recent Posts

ಮೈಸೂರು | ಪೊಲೀಸರ ಬಲೆಗೆ ಬಿದ್ದ ಸುಪಾರಿ ಗ್ಯಾಂಗ್‌

ಮೈಸೂರು : ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ರೌಡಿ ಹಬೀದ್ ಪಾಷಾ ಇದೀಗ ಸುಫಾರಿ ಹಂತಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ…

14 mins ago

ಗ್ರಾಹಕರಿಕೆ ಶಾಕ್‌ : ಪೆಟ್ರೋಲ್‌, ಡಿಸೇಲ್‌ ಬೆಲೆ ಮತ್ತೆ ಏರಿಕೆ

ನವದೆಹಲಿ : ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯ ಹೊರೆ ಜನರ ಮೇಲೆ ಬಿದ್ದಿದೆ. ಸೋಮವಾರ ಪೆಟ್ರೋಲ್ ದರವನ್ನು ಲೀಟರ್‍ಗೆ…

2 hours ago

ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ:ಈಶ್ವರ ಖಂಡ್ರೆ

ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲು ಸಮಿತಿ ರಚನೆ: ಈಶ್ವರ ಖಂಡ್ರೆ ಕಾರ್ಕಳ : ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶದಲ್ಲಿ ಸರ್ಕಾರಿ…

3 hours ago

ಪಶ್ಚಿಮ ಬಂಗಾಳ : ಒಬಿಸಿ ಪಟ್ಟಿ ಮರುಸಂರಚನೆ

ಆರ್‌ಎಸ್‌ಎಸ್‌ ಕಾರ್ಯಸೂಚಿಗಳು ಜಾರಿ ಬಿ.ಶ್ರೀಪಾದ ಭಟ್‌ 2026ರ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು…

4 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ | ಆಳುವ ಸರ್ಕಾರ ಎಚ್ಚರ ತಪ್ಪಿದರೆ ಪ್ರತಿರೋಧ ಖಚಿತ

ಆರ್ಥಿಕ ಸಂಕಷ್ಟದ ಸಮಯದಲ್ಲಿ ಜಾಗ್ರತೆಯಿಂದ ಕಾರ್ಯನಿರ್ವಹಣೆ ಅಗತ್ಯ ಇದು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆ. ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.…

4 hours ago

ಆಂದೋಲನ ಸಂಪಾದಕೀಯ | ಇಂಧನ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಲಿ

ಕೇವಲ ಹತ್ತು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಮೂರು ಬಾರಿ ಹೆಚ್ಚಳವಾಗಿದೆ. ಇದು ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ…

5 hours ago