ದರಿದ್ರ ಸಮಾಜ
ಇಂದಿನ ಸಮಾಜದಲ್ಲಿ
ಒಳ್ಳೆಯ ಮನಸ್ಸುಗಳಿಗೆ ಬೆಲೆಯಿಲ್ಲ
ಸುಳ್ಳಾಡುವವರನ್ನು ನಂಬಿಸಿ ವಂಚಿಸುವವರನ್ನು
ಸಮಾಜ ಒಪ್ಪಿಕೊಂಡು ಅಪ್ಪಿಕೊಂಡಿದೆ
ನಿಯತ್ತಾಗಿ ಕೆಲಸ ಮಾಡಿದವರನ್ನು
ಜಾಡಿಸಿ ಒದೆಯುತ್ತಿದೆ
ಅನ್ಯಾಯ ಮಾಡಿದವರನ್ನು
ಈ ಸಮಾಜ ಕೈ ಹಿಡಿದುಕೊಂಡಿದೆ
ಬುದ್ಧಿ ಹೇಳಿ ತಿದ್ದುವರನ್ನು
ತಪ್ಪೆಂದು ಹೇಳಿ ಬಾಯಿ ಮುಚ್ಚಿಸಿ ದೂರ ನೂಕಿದೆ
ಬಣ್ಣ ಬಣ್ಣದ ಮಾತನಾಡುವವರನ್ನು
ಬಾ ಎಂದು ಕರೆದು ಆಶ್ರಯ ಕೊಟ್ಟು ವಿಶ್ರಾಂತಿ ನೀಡಿದೆ
ಎಲ್ಲಿದೆ ನ್ಯಾಯ? ಯಾರಲ್ಲಿದೆ ಮಾನವೀಯತೆ?
ಹೇಳಿದಂತೆ ಕೇಳಿದವರಿಗೆ ಸಲ್ಮಾನ
ಸತ್ಯದ ಪರ ನಿಂತವರಿಗೆ ಅವಮಾನ
ಬಾಯಿ ಮಾತಿಗೆ ನೀ ಒಳ್ಳೆವ ಎನ್ನುವ ಈ ಸಮಾಜ
ಕೊನೆಗೆ ದುರ್ಜನರಿಗೆ ನೀಡುವುದು ಬಹುಮಾನ
– ಹೊಂಗನೂರು ಮಂಜುನಾಥ್
ಟಾಂಗಾ ಸವಾರಿ ವಲಯ ನಿರ್ಮಾಣಕ್ಕೆ ೨.೭೧ ಕೋಟಿ ರೂ. ಮಂಜೂರು ಕೇಂದ್ರದ ಸ್ವದೇಶ ದರ್ಶನ ಯೋಜನೆಯಡಿ ಗ್ರೀನ್ ಟೂರ್ಗೆ ಆದ್ಯತೆ …
ಹಾಸನ ಜಿಲ್ಲೆ ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಆಯೋಜನೆ: ಡಾ.ಅನಂತರಾವ್ ಮಂಡ್ಯ: ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ…
ಕೋಟಿಗಾನಹಳ್ಳಿ ರಾಮಯ್ಯ ಇದು ಕದಡಿದ ನೀರಿನಂತಹ ಕಾಲ. ಈ ಮಬ್ಬಿನ ವಾತಾವರಣದಲ್ಲಿ ಬಹುರೂಪಿ ರಂಗಾಯಣದಲ್ಲಿ ‘ಬಹುರೂಪಿ ಅಂಬೇಡ್ಕರ್’ ಎಂಬ ಆಶಯ…
ಸ್ಟ್ಯಾನ್ಲಿ ‘ನನ್ನಮ್ಮ ರೋಸ್ಮಂಡ್ ವಾನಿಂಗನ್ ಆಂಗ್ಲ ಮಹಿಳೆಯಾಗಿದ್ದರೂ, ಅವಳು ನಂಜನಗೂಡಿನ ನಂಜಿಯಾಗಿದ್ದಳು. ಬಿಸಿಲ್ ಮಂಟಿ ಗ್ರಾಮಸ್ಥರು ಆಕೆಗೆ ಇಟ್ಟಿದ್ದ ಹೆಸರಾಗಿತ್ತದು.…
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…