Andolana originals

ತಣ್ಣಗೆ ಕಾಣುವ ಬಣ್ಣದ ಮಡಕೆ: ಆರೋಗ್ಯಕ್ಕೆ ಹಿತವೆ? ಅಹಿತವೇ?

‘ಆಂದೋಲನ’ ತಂಡದಿಂದ ರಿಯಾಲಿಟಿ ಚೆಕ್

ಮೈಸೂರು: ಸಾಂಸ್ಕ ತಿಕ ನಗರಿ ಮೈಸೂರಿನಲ್ಲಿ ಬೇಸಿಗೆಯ ತಾಪ ಏರುತ್ತಿದ್ದಂತೆ, ದಾಹ ತಣಿಸಿಕೊಳ್ಳಲು ಜನರು ನೈಸರ್ಗಿಕ ‘ಫ್ರಿಜ್’ ಎಂದೇ ಕರೆಯಲ್ಪಡುವ ಮಣ್ಣಿನ ಮಡಕೆಗಳ ಮೊರೆ ಹೋಗುತ್ತಿದ್ದಾರೆ.

ನಗರದ ಪ್ರಮುಖ ರಸ್ತೆಗಳ ಫುಟ್‌ಪಾತ್‌ಗಳಲ್ಲಿ ಬಣ್ಣ ಬಣ್ಣದ ಆಕರ್ಷಕ ಮಡಕೆಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಆದರೆ, ತಾವು ಖರೀದಿಸುವ ಈ ಮಡಕೆಗಳು ನಿಜವಾಗಿಯೂ ಮಣ್ಣಿನಿಂದ ಮಾಡಲ್ಪಟ್ಟಿವೆಯೇ ಅಥವಾ ಬೇರೇನಾದರೂ ಮಿಶ್ರಣ ಮಾಡಿ ತಯಾರಿಸಲಾಗಿದೆಯೇ? ಎನ್ನುವ ಅನುಮಾನ ಸಾರ್ವಜನಿಕರನ್ನು ಕಾಡಿದೆ. ಈ ವಸ್ತುಸ್ಥಿತಿಯನ್ನು ತಿಳಿಯಲು ‘ಆಂದೋಲನ’ ತಂಡವು ವಿಶೇಷ ರಿಯಾಲಿಟಿ ಚೆಕ್ ನಡೆಸಿತು.

ನಮ್ಮ ತಂಡವು ಮೊದಲು ಮೈಸೂರಿನ ಕಲಾಮಂದಿರದ ಪಕ್ಕದ ಫುಟ್‌ಪಾತ್‌ನಲ್ಲಿರುವ ಮಡಕೆ ಮಳಿಗೆಗಳಿಗೆ ಭೇಟಿ ನೀಡಿತು. ಅಲ್ಲಿ ಗುಜರಾತ್‌ನಿಂದ ತರಿಸಲಾದ ಆಕರ್ಷಕ ಮಡಕೆಗಳ ಮಾರಾಟ ಜೋರಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಹಿನ್ನೆಲೆಯಲ್ಲಿ, ನಮ್ಮ ತಂಡವು ಅಲ್ಲಿ ಒಂದು ಮಡಕೆಯನ್ನು ಖರೀದಿಸಿ ಪರೀಕ್ಷೆಗಾಗಿ ತಜ್ಞರ ಬಳಿ ಕೊಂಡೊಯ್ಯಿತು.

ಗುಣಮಟ್ಟದ ತಪಾಸಣೆಗಾಗಿ ಮೈಸೂರಿನ ಹೆಬ್ಬಾಳುವಿನಲ್ಲಿರುವ ವಿಜ್ಞಾನ ಲೇಖಕ ಕೊಳ್ಳೇಗಾಲ ಶರ್ಮ ಅವರನ್ನು ಭೇಟಿ ಮಾಡಲಾಯಿತು. ಮಡಕೆಯನ್ನು ಪರಿಶೀಲಿಸಿದ ಅವರು, ಇದನ್ನು ಸಂಪೂರ್ಣ ಮಣ್ಣಿನಿಂದ ತಯಾರಿಸಿಲ್ಲ, ಮಣ್ಣಿನ ಜೊತೆಗೆ ಅಲ್ಪ ಪ್ರಮಾಣದಲ್ಲಿ ಸಿಮೆಂಟ್ ಮಿಶ್ರಣ ಮಾಡಲಾಗಿದೆ. ಆದರೆ ಆತಂಕಪಡುವ ಅಗತ್ಯವಿಲ್ಲ. ಏಕೆಂದರೆ ನಮ್ಮ ಮನೆಯ ನೀರಿನ ಟ್ಯಾಂಕ್‌ಗಳು ಸಿಮೆಂಟ್ ನಿಂದಲೇ ಆಗಿರುತ್ತವೆ. ಆದರೆ ಹೊರಭಾಗದ ಹೊಳಪಿನ ಕೆಂಪು ಬಣ್ಣ ಆರೋಗ್ಯಕ್ಕೆ ಹಿತಕರವಲ್ಲ ಎಂದು ತಿಳಿಸಿದರು.

ಬಳಿಕ ಮೈಸೂರಿನವರೇ ಆದ ಸಿವಿಲ್ ಇಂಜಿನಿಯರ್ ಜೆ.ರಮೇಶ್ ಅವರ ನಿವಾಸದಲ್ಲಿ ಮಡಕೆಯ ಒಂದು ಚೂರಿಗೆ ಆಸಿಡ್ ದ್ರಾವಣವನ್ನು ಹಾಕಿ ಪರೀಕ್ಷಿಸಲಾಯಿತು. ಆಸಿಡ್ ಹಾಕಿದಾಗ ಮಡಕೆಯ ಚೂರಿನಿಂದ ನೊರೆ ಬರಲು ಪ್ರಾರಂಭವಾಯಿತು. ಇದು ಅದರಲ್ಲಿ ಸಿಮೆಂಟ್ ಮಿಶ್ರಣವಿರುವುದನ್ನು ದೃಢಪಡಿಸಿತು. ಗ್ರಾಹಕರು ಹೊರಗಿನ ಆಕರ್ಷಣೆಗೆ ಮರುಳಾಗದೆ, ಒಳಭಾಗದಲ್ಲಿ ಬಣ್ಣವಿಲ್ಲದ ಮತ್ತು ಸಾಧ್ಯವಾದಷ್ಟು ನೈಸರ್ಗಿಕ ಮಣ್ಣಿನ ಮಡಕೆಗಳನ್ನು ಆರಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಾಗಿದೆ.

” ಮಡಕೆಯ ಹೊರಭಾಗಕ್ಕೆ ಹಚ್ಚಿರುವ ಆಕರ್ಷಕ ಕೆಂಪು ಬಣ್ಣವು ‘ಯೂನಿಟಿಂಟ್’ ಎಂಬ ಸಿಂಥೆಟಿಕ್ ಬಣ್ಣವಾಗಿದೆ. ಇದು ನೈಸರ್ಗಿಕ ಮಣ್ಣಿನ ಬಣ್ಣವಲ್ಲದ ಕಾರಣ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನೈಸರ್ಗಿಕ ಮಡಕೆಗಳಲ್ಲಿನ ಸಣ್ಣ ರಂಧ್ರಗಳು ನೀರನ್ನು ಬೇಗ ತಂಪಾಗಿಸುತ್ತವೆ. ಆದರೆ ಸಿಮೆಂಟ್ ಮತ್ತು ಬಣ್ಣ ಲೇಪಿತ ಮಡಕೆಗಳಲ್ಲಿ ಈ ಪ್ರಕ್ರಿಯೆ ಎಷ್ಟು ಪರಿಣಾಮಕಾರಿ ಎಂಬುದು ಪರೀಕ್ಷಿಸಬೇಕಾದ ವಿಷಯ.”

– ಕೊಳ್ಳೇಗಾಲ ಶರ್ಮ, ವಿಜ್ಞಾನ ಲೇಖಕ, ಮೈಸೂರು

” ಅಸಲಿ ಮಣ್ಣಿನ ಮಡಕೆಗೆ ಆಸಿಡ್ ಹಾಕಿದಾಗ ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ. ಆದರೆ ಪರೀಕ್ಷಿಸಿದ ಮಡಕೆಯಲ್ಲಿ ನೊರೆ ಬಂದಿರುವುದು ಸಿಮೆಂಟ್ ಮತ್ತು ಮರಳಿನ ಮಿಶ್ರಣವನ್ನು ಖಚಿತಪಡಿಸಿದೆ. ಈ ಮಡಕೆಯಲ್ಲಿ ನೀರು ಶೇಖರಿಸಿದಾಗ ಅದು ಪ್ರತ್ಯಾಮ್ಲೀಯವಾಗಿ ಬದಲಾಗುತ್ತದೆ, ಇದು ದೇಹಕ್ಕೆ ಒಳ್ಳೆಯದು. ಆದರೆ ಮಡಕೆಯ ಒಳಭಾಗದಲ್ಲಿ ಯಾವುದೇ ಕಾರಣಕ್ಕೂ ಬಣ್ಣ ಇರಬಾರದು.”

-ಜೆ.ರಮೇಶ್, ಸಿವಿಲ್ ಇಂಜಿನಿಯರ್, ಮೈಸೂರು

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮಹಿಳಾ ಪೌರಕಾರ್ಮಿಕರಿಗೆ ರೇಷ್ಮೆ ಸೀರೆ ವಿತರಣೆ ಶ್ಲಾಘನೀಯ

ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…

9 hours ago

ಓದುಗರ ಪತ್ರ: ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಖಂಡನೀಯ

ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…

9 hours ago

ಓದುಗರ ಪತ್ರ: ಸದ್ದಿಲ್ಲದೇ ನೀರಿನ ದರ ಏರಿಸಿದ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…

9 hours ago

ಆಧುನೀಕರಣದ ಭರದಲ್ಲಿ ಮೈಸೂರಿನ ಪ್ರಕೃತಿಗೆ ಧಕ್ಕೆ?

ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ  ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…

9 hours ago

ದಸರಾ ವೇಳೆಗೆ ಹುರಾ ಭಾಗದ ಕೆರೆಗಳಿಗೆ ನೀರು

ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ  ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…

9 hours ago