Andolana originals

ಕುಂಚದಲ್ಲಿ ಅರಳಿದ ಅಮ್ಮನ ನಿತ್ಯ ಜೀವನ!

ಸಾಲೋಮನ್

ಕಲಾವಿದೆ ಅಭಿರಾಮಿ ಚಿತ್ರಿಸಿದ ಅಮ್ಮನ ಬದುಕುಬವಣೆ ಬಹುರೂಪಿಯಲ್ಲಿ ಅನಾವರಣ

ಮೈಸೂರು: ಈ ಜೀವ ಎಂದಿಗೂ ಮರೆಯಲೇ ಬಾರದ ಒಂದು ಸಂಬಂಧ ಹಾಗೂ ನೆನಪುಗಳೆಂದರೆ ಅದು ಅಮ್ಮನು ತಾನೇ. ಅಮ್ಮ ಎದೆ ತುಂಬಾ ಆವರಿಸಿಕೊಂಡಿರುತ್ತಾಳೆ. ಕೆಲವರು ಮಾತಿನ ಮೂಲಕ, ಮತ್ತೆ ಕೆಲವರು ತಮ್ಮ ಬರವಣಿಗೆಯ ಮೂಲಕ ಅಮ್ಮನ ಬಗ್ಗೆ ಹೇಳಿಕೊಂಡಿzರೆ. ಆದರೆ, ಇಲ್ಲೊಬ್ಬರು ಚಿತ್ರ ಕಲಾವಿದೆ ಇಡೀ ಗ್ಯಾಲರಿಯ ಗೋಡೆಗಳಲ್ಲಿ ತುಂಬಾ ಅಮ್ಮನ ನಿತ್ಯದ ಬದುಕು, ಬವಣೆ ಹಾಗೂ ನಿರ್ವಹಿಸುವ ಜವಾಬ್ದಾರಿಗಳನ್ನು ಚಿತ್ರಿಸಿದ್ದಾರೆ.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಕಿರುರಂಗಮಂದಿರದ ಕಲಾಗ್ಯಾಲರಿಯಲ್ಲಿ ಮೈಸೂರಿನ ಕಾವಾದಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಅಭಿರಾಮಿ ರಾಜೇಂದ್ರ ಅವರು ‘ಕ್ರಿಯೇಟರ್’ ಎಂಬ ಪರಿಕಲ್ಪನೆಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿ ಸಿದ್ದು, ಗ್ಯಾಲರಿಯ ಗೋಡೆಗಳ ಮೇಲೆ ಕುಟುಂಬದಲ್ಲಿ ಅಮ್ಮ ನಿರ್ವಹಿಸುವ ಜವಾಬ್ದಾರಿಗಳನ್ನು ನೈಜವಾಗಿ ಚಿತ್ರಿಸಿದ್ದಾರೆ.

ಮುಂಜಾನೆಯಿಂದ ರಾತ್ರಿವರೆಗೂ ಮನೆಯ ಕೆಲಸಗಳೆಲ್ಲವನ್ನೂ ಮಾಡುವ ಅಮ್ಮನ ಸುಮಾರು ೩೦ಕ್ಕೂ ಹೆಚ್ಚು ಚಿತ್ರಗಳನ್ನು ಕ್ಯಾನ್ವಾಸ್‌ನಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಬೆಳಿಗ್ಗೆ ಎದ್ದು ಒಲೆ ಮುಂದೆ ನಿಲ್ಲುವ ಅಮ್ಮ, ಬಟ್ಟೆ ಒಗೆದು ಒಣಗಿಸುವುದು, ಮನೆ ಸ್ವಚ್ಛ ಮಾಡುವುದು, ನೀರು ತುಂಬುವುದು, ತೋಟಕ್ಕೆ ನೀರು ಹಾಯಿಸುವುದು, ಅಡುಗೆ ಮಾಡುವುದು ಹೀಗೆ ನಿತ್ಯವೂ ಸಾಲು ಸಾಲು ಕೆಲಸಗಳನ್ನು ಮಾಡುವ ಚಿತ್ರಗಳನ್ನು ಬಿಡಿಸಿ ಅಮ್ಮನ ಕಾಯಕಕ್ಕೆ ಜೀವ ತುಂಬಿದ್ದಾರೆ.

ಮೂಲತಃ ಕೇರಳದ ಕೊಟ್ಟಾಯಂನ ಕಲಾವಿದೆ ಅಭಿರಾಮಿ ಅವರು ರಾಜೇಂದ್ರ-ಬಿಂದು ದಂಪತಿಯ ಮುದ್ದಿನ ಮಗಳು. ಈಕೆಗೆ ಬಾಲ್ಯದಿಂದಲೂ ಚಿತ್ರ ಬಿಡಿಸುವ ಹವ್ಯಾಸ. ಅಕ್ಷರಕಲಿಯುವು ದಕ್ಕಿಂತ ನೋಟ್ ಪುಸ್ತಕದಲ್ಲಿ ಚಿತ್ರ ಬಿಡಿಸಿದ್ದೇ ಹೆಚ್ಚು. ಪಿಯುಸಿ ಮುಗಿದಾಗ ಚಿತ್ರಕಲೆಯ ಮುಂದುವರಿಯಬೇಕು ಎನಿಸಿ ದಾಗ ಮೈಸೂರಿನ ಕಾವಾಗೆ ಬಂದರು. ಈ ಬಾರಿ ಬಹು ರೂಪಿಯಲ್ಲಿ ಚಿತ್ರ ಪ್ರದರ್ಶನಕ್ಕೆ ಸಿಕ್ಕ ಅವಕಾಶದಲ್ಲಿ ಕುಟುಂಬದ ನಿರ್ವಹಣೆಯಲ್ಲಿ ಅಮ್ಮನ ಜವಾಬ್ದಾರಿ, ಸಂಕಷ್ಟ, ಸಂತೋಷ, ನೋವು, ನಲಿವುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

” ಅಮ್ಮ ಮದುವೆಗೂ ಮುಂಚೆ ಅಥ್ಲ್ಲೀಟ್ ಆಗಿದ್ದರು. ನಂತರ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ್ದರು. ಮದುವೆಯಾಗಿ ಮಕ್ಕಳಾದ ಮೇಲೆ ತನ್ನೆಲ್ಲ ಕನಸುಗಳನ್ನು ಬದಿಗಿಟ್ಟು ಸಂಸಾರದ ಜವಾಬ್ದಾರಿಯನ್ನುನಿರ್ವಹಿಸಿದ್ದಾರೆ. ಮನೆಯಲ್ಲಿರುವ ಮುದ್ದಿನ ನಾಯಿ, ಬೆಕ್ಕುಗಳು ಅಮ್ಮನಿಗೆ ಸಂಗಾತಿಗಳಾಗಿವೆ. ಗಂಡ – ಮಕ್ಕಳಿಗಾಗಿ ಅಮ್ಮ ದೊಡ್ಡ ಜವಾಬ್ದಾರಿ ನಿರ್ವಹಿಸುತ್ತಾರೆ.”

ಅಭಿರಾಮಿ ರಾಜೇಂದ್ರ, ಚಿತ್ರ ಕಲಾವಿದೆ

ಆಂದೋಲನ ಡೆಸ್ಕ್

Recent Posts

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

4 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

4 hours ago

ಓದುಗರ ಪತ್ರ: ಇ-ಕೊಲಿ ಬ್ಯಾಕ್ಟೀರಿಯಾ ಪತ್ತೆ: ಮನಸ್ಸುಗಳಿಗಿಲ್ಲ ‘ಕೂಲ್‌ಕೂಲ್’

ದೇಶದ ಬಹುತೇಕ ರೈಲು ನಿಲ್ದಾಣದ ಫ್ಲಾಟ್‌ ಫಾರ್ಮ್‌ಗಳಲ್ಲಿ  ಸಾರ್ವಜನಿಕರು ಕುಡಿಯುವ ವಾಟರ್ ಕೂಲರ್‌ಗಳಲ್ಲಿ, ಇ-ಕೊಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ಕಂಟ್ರೋಲರ್…

7 hours ago

ಓದುಗರ ಪತ್ರ: ಕೆಎಸ್‌ಪಿಸಿಬಿಯನ್ನು ರಾಜಕೀಯ ಮುಕ್ತಗೊಳಿಸಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉನ್ನತ ಹುದ್ದೆಗಳಿಗೆ ತಜ್ಞರನ್ನು ಬಿಟ್ಟು ರಾಜಕೀಯ ವ್ಯಕ್ತಿಗಳನ್ನು ನೇಮಿಸುತ್ತಿರುವುದು ರಾಜ್ಯದ ಪರಿಸರ ಆಡಳಿತಕ್ಕೆ…

7 hours ago

ಓದುಗರ ಪತ್ರ: ಪರಸ್ಪರ ಗೌರವಕ್ಕೆ ಮತ್ತೊಮ್ಮೆ ಕನ್ನಡಿ

ದೇಶದ ೮೦ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಕ್ಷಣಗಳಲ್ಲಿ, ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ‘ಬುರ್ಜ್ ಖಲೀಫಾ’ದಲ್ಲಿ ಭಾರತದ ತ್ರಿವರ್ಣ…

7 hours ago

ನಡೆಯದ ಸಂಸತ್ ಕಲಾಪ; ಕುಗ್ಗಿದ ಮೋದಿ-ಶಾ ವರ್ಚಸ್ಸು

ದೆಹಲಿ ಕಣ್ಣೋಟ ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಸಂಸತ್ ಎಂದರೆ ಪ್ರಜಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಿಕೊಂಡು ದೇಶದ ಸಮಸ್ಯೆಗಳು ಮತ್ತು…

7 hours ago