ಆಂದೋಲನ 50

ನಂಜನಗೂಡಿನಲ್ಲಿದೆ ದೇಶದ ಮೊದಲ ರೈಲ್ವೆ ಸೇತುವೆ !

ಎರಡೂವರೆ ಶತಮಾನಗಳನ್ನು ದಾಟಿರುವ ನಂಜನಗೂಡಿನ ಈ ರೈಲ್ವೆ ಸೇತುವೆ ಕಪಿಲಾ ನದಿಯಲ್ಲಿ ಪ್ರತಿವರ್ಷ ಬರುವ ನೂರಾರು ಪ್ರವಾಹಗಳನ್ನು ಕಂಡಿದೆ. ಆದರೆ ಬಗ್ಗದೆ, ಜಗ್ಗದೆ ಇಂದಿಗೂ ಗಟ್ಟಿಮುಟ್ಟಾಗಿದೆ. ಇಂಥ ಸೇತುವೆಯನ್ನು ದುರಸ್ತಿಗೊಳಿಸಿ ಪಾರಂಪರಿಕ ಸೇತುವಾಗಿ ಉಳಿಸಿಕೊಂಡರೆ ಮೈಸೂರಿನ ಪಾರಂಪರಿಕ ಸೊಬಗಿಗೆ ಮತ್ತೊಂದು ಸೇರ್ಪಡೆ.

ಆರ್.ಎಲ್.ಮಂಜುನಾಥ್

ಭಾರತದ ಮೊತ್ತ ಮೊದಲ ರೈಲ್ವೆ ಸೇತುವೆ ಮೈಸೂರು ಜಿಲ್ಲೆಯಲ್ಲಿದೆ ಎಂಬ ಸಂಗತಿ ನಿಮಗೆ ಗೊತ್ತೆ? ಹೌದು ೨೮೧ ವರ್ಷಗಳ ಹಳೆಯ ಸೇತುವೆ ಜಿಲ್ಲೆಯ ನಂಜನಗೂಡು ಸಮೀಪದ ಮಲ್ಲನಮೂಲೆ ಬಳಿ ಇದೆ. ಇದರ ಮತ್ತೊಂದು ವಿಶೇಷವೆಂದರೆ, ಈ ರೈಲ್ವೆ ಸೇತುವೆ ಪ್ರಪಂಚದ ಮೊದಲ ೧೦ ರೈಲ್ವೆ ಸೇತುವೆಗಳಲ್ಲಿ ಒಂದು.

ಒಟ್ಟು ೨೨೫ ಮೀ. ಉದ್ದದ ಈ ಸೇತುವೆಯನ್ನು ೧೭೩೫ರಲ್ಲಿ ಅಂದಿನ ಮೈಸೂರು ಸಂಸ್ಥಾನದಲ್ಲಿದ್ದ ಮಹಾಪ್ರಧಾನಿ, ದಳವಾಯಿ ಕಳಲೆ ದೇವರಾಜಯ್ಯ ಅವರು ನಿರ್ಮಿಸಿದ್ದಾರೆ. ಈ ಸೇತುವೆಯನ್ನು ಅಂದು ಸೈನಿಕರ, ಸಾರ್ವಜನಿಕರ ಓಡಾಟಕ್ಕೆ, ಎತ್ತಿನಗಾಡಿ, ಕುದುರೆಗಳ ಸಂಚಾರಕ್ಕೆ ನಿರ್ಮಿಸಲಾಗಿತ್ತು. ಆದರೆ, ನಂತರ ಬಂದ ಬ್ರಿಟಿಷರು ೧೮೯೯ರಲ್ಲಿ ಈ ಸುಸಜ್ಜಿತ ಸೇತುವೆಯನ್ನು ಕಂಡು ಇದರ ಮೇಲೆ ರೈಲ್ವೆ ಹಳಿಯನ್ನು ನಿರ್ಮಿಸಿದರು.

ಈ ಮಾರ್ಗದಲ್ಲಿ ೧೦೦ ವರ್ಷಗಳಿಗೂ ಹೆಚ್ಚು ಕಾಲ ರೈಲುಗಳು ಸಂಚರಿಸಿವೆ. ಆದರೆ, ೨೦೦೭ರಲ್ಲಿ ಬ್ರಾಡ್‌ಗೇಜ್ ಅಳವಡಿಕೆ ಮಾಡಿ, ಹೊಸ ಸೇತುವೆ ನಿರ್ಮಿಸಿದಾಗಿನಿಂದ ಮೀಟರ್‌ಗೇಜ್ ಆಗಿದ್ದ ಈ ರೈಲ್ವೆ ಸೇತುವೆ ನಿಷ್ಕ್ರಿಯವಾಗಿದೆ. ಇಂತಹ ಐತಿಹಾಸಿಕ ಹಿರಿಮೆಯನ್ನು ಹೊಂದಿರುವ ಈ ರೈಲ್ವೆ ಸೇತುವೆ ಈಗ ನಿರ್ಲಕ್ಷ್ಯಕ್ಕೆ ಒಳಗಾಗಿ, ಗಿಡ-ಗಂಟಿಗಳಿಂದ, ಜೊಂಡುಗಳಿಂದ ಆವೃತವಾಗಿದೆ. ದೇಶದ ರೈಲ್ವೆ ಇತಿಹಾಸದ ಕೊಂಡಿಯಾಗಿರುವ ಈ ಸೇತುವೆಯನ್ನು ಪಾರಂಪರಿಕ ಸೇತುವಾಗಿ ಅಭಿವೃದ್ಧಿಪಡಿಸಬೇಕೆನ್ನುವುದು ಸ್ಥಳೀಯರ ಆಗ್ರಹ.

ಕೆಲವು ವರ್ಷಗಳ ಹಿಂದೆ ರೈಲ್ವೆ ಇಲಾಖೆ ಈ ಐತಿಹಾಸಿಕ ರೈಲ್ವೆ ಸೇತುವೆಯ ಬಗ್ಗೆ ಜನರಿಗೆ ಮಾಹಿತಿ ನೀಡುವ ಸಲುವಾಗಿ ಅಲ್ಲಿ ರೈಲ್ವೆ ಬೋಗಿಯೊಂದನ್ನು ಇಟ್ಟು, ಮಾಹಿತಿ ಫಲಕ ಅಳವಡಿಸಿ ಪ್ರಚಾರ ನಡೆಸಿತ್ತು. ಸೇತುವೆ ಸುತ್ತಮುತ್ತ ಸ್ವಚ್ಛಗೊಳಿಸಿ ಅಭಿವೃದ್ಧಿಗೊಳಿಸುವ ಕಾರ‌್ಯ ನಡೆದಿತ್ತು. ಈ ಕೆಲಸ ಮತ್ತೆ ನನೆಗುದಿಗೆ ಬಿದ್ದಿದೆ.

andolana

Recent Posts

ನೇಪಾಳದಲ್ಲಿ ಭೀಕರ ಪ್ರವಾಹ ; ಭಾರತೀಯರ ನೆರವಿಗೆ ಸಹಾಯವಾಣಿ ಆರಂಭ

ಕಠ್ಮಂಡು : ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಂತ್ರಸ್ತರಾಗಿರುವ ಭಾರತೀಯ ಪ್ರಜೆಗಳ ನೆರವಿಗಾಗಿ ಭಾರತವು ಸಹಾಯವಾಣಿ ಆರಂಭಿಸಿದೆ.…

5 hours ago

ಸಂಪುಟದಲ್ಲಿ ಚರ್ಚಿಸಿ ಬರ ಘೋಷಣೆ ; ಡಿಸಿಎಂ ಪರಮೇಶ್ವರ್‌

ಬೆಂಗಳೂರು : ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ಅವಲೋಕನ ನಡೆಯುತ್ತಿದೆ. 102 ತಾಲ್ಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದ್ದು, ಮುಂದಿನ…

5 hours ago

ಸ್ವಚ್ಛತಾ ಅಭಿಯಾನ | ವಿವಿಧೆಡೆ 15 ಟನ್‌ ತ್ಯಾಜ್ಯ ವಿಲೇವಾರಿ

ಮೈಸೂರು : 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಹಾನಗರ ಪಾಲಿಕೆಯ ವತಿಯಿಂದ 80 ಜಿವಿಪಿ ನಿರ್ಮೂಲನೆ ಅಭಿಯಾನದಲ್ಲಿ ಮಂಗಳವಾರ ವಲಯ-3ರ ವ್ಯಾಪ್ತಿಗೆ…

6 hours ago

ನೇಪಾಳ ಪ್ರವಾಹ | 105 ಭಾರತೀಯರು ಸೇರಿ 400 ಮಂದಿ ನಾಪತ್ತೆ

ಕಠ್ಮಂಡು : ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಉತ್ತರದ ರಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಕನಿಷ್ಠ…

7 hours ago

ನೇಪಾಳದಲ್ಲಿ ಭೀಕರ ಪ್ರವಾಹ | ಹತ್ತಾರು ಹಳ್ಳಿಗಳು ಜಲಾವೃತ ; ನಾಪತ್ತೆಯಾದ ಪ್ರವಾಸಿಗರು

ಕಠ್ಮಂಡು : ನೆರೆಯ ರಾಷ್ಟ್ರ ನೇಪಾಳದಲ್ಲಿ ಹಿಮಕುಸಿತದ ಪರಿಣಾಮ ಉಂಟಾದ ಭೀಕರ ಆಕಸ್ಮಿಕ ಪ್ರವಾಹ ಜಲಪ್ರಳಯವನ್ನೇ ಸೃಷ್ಟಿಸಿದೆ. ಕೋಶಿ ನದಿಯ…

8 hours ago

ರಾಜೀನಾಮೆ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ: ಸಚಿವ ನಾಗೇಂದ್ರ

ಬೆಂಗಳೂರು: ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಚರ್ಚೆ ನಡೆದಿಲ್ಲ. ನನ್ನ ರಾಜೀನಾಮೆ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಸಚಿವ…

12 hours ago