ಆಂದೋಲನ 50

ನನ್ನ ಪರವಾಗಿ ಪೇದೆಗೆ ತರಾಟೆ ತೆಗೆದುಕೊಂಡಿದ್ದ ಕೋಟಿ

-ಸ.ರ.ಸುದರ್ಶನ
ಕನ್ನಡಪರ ಹೋರಾಟಗಾರರು

‘ಆಂದೋಲನ’ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿಯವರು ನನಗೆ ನಿಕಟವಾಗಿದ್ದು ಗೋಕಾಕ್ ಚಳವಳಿಯಲ್ಲಿ. ಆ ಚಳವಳಿಯಲ್ಲಿ ಒಂದು ದಿನ ಆಗಿನ ಮುಖ್ಯಮಂತ್ರಿ ಗುಂಡೂರಾವ್ ವಿರುದ್ಧ ಪ್ರದರ್ಶನಕ್ಕೆ ತೀರ್ಮಾನಿಸಲಾಗಿತ್ತು. ಮಾನಸಗಂಗೋತ್ರಿಯಲ್ಲಿ ನಡೆದ ಸಮಾರಂಭದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಸಭೆಯೊಳಗೆ ಸೇರಿದ ನಾವುಗಳು ಗುಂಡೂರಾವ್ ಬರುತ್ತಿದ್ದಂತೆ ಘೋಷಣೆ ಕೂಗಿ ಮುತ್ತಿಗೆ ಹಾಕಿದೆವು. ಆಗ ಪೊಲೀಸರು ನನ್ನನ್ನು ಎಳೆದುಕೊಂಡು ಹೋಗಿ ಒಂದು ವ್ಯಾನಿನೊಳಗೆ ದೂಡಿದರು. ನಾನು ಅದರೊಳಗಿನ ಆಸನದ ಮೇಲೆ ಕುಳಿತೆ. ಅಲ್ಲಿದ್ದ ಒಬ್ಬ ಪೇದೆ ನನ್ನನ್ನು ಕೆಳಗೆ ಕುಳಿತುಕೊಳ್ಳೋ ಎಂದು ಗದರಿಸಿದ. ಆಗ ನಾನೊಬ್ಬನೇ ವ್ಯಾನಿನೊಳಗೆ ಇದ್ದವನು. ಆ ವೇಳೆಗಾಗಲೇ ಘೋಷಣೆ ಕೂಗುತ್ತಿದ್ದಾಗ ಎತ್ತಿದ ಕೈ ಗೆ ಸೋಕಿದ ಲಾಠಿಯಿಂದ ಉರಿಯತೊಡಗಿತ್ತು. ಮತ್ತೆ ಹೊಡೆದಾನು ಎಂದು ಹೆದರಿ ಕೆಳಗೆ ಇಟ್ಟಿದ್ದ ಟೈರಿನ ಮೇಲೆ ಕುಳಿತೆ. ಆದರೆ ಅದು ನನ್ನ ಸ್ವಾಭಿಮಾನಕ್ಕೆ ಪೆಟ್ಟುಕೊಟ್ಟಿತ್ತು. ಆದರೆ ಅದೇ ಮೊದಲ ಸಲ ಪೊಲೀಸರ ಒಡನಾಟ. ಆ ಪೇದೆಯ ಮಾತು ಧಿಕ್ಕರಿಸಲು ಧೈರ್ಯ ಬರಲಿಲ್ಲ.

ಹತ್ತು ನಿಮಿಷಗಳ ನಂತರ ಘೋಷಣೆ ಕೂಗುತ್ತಿದ್ದ ಇನ್ನೊಬ್ಬ ಚಳವಳಿಗಾರನನ್ನು, ಪೊಲೀಸನೊಬ್ಬ ಕರೆತಂದು ವ್ಯಾನಿಗೆ ಹತ್ತಿಸಿದ. ಅವರೇ ರಾಜಶೇಖರ ಕೋಟಿ. ಅವರು ವ್ಯಾನಿನೊಳಗೆ ಬಂದಾಗ ನನಗೆ ನೂರು ಆನೆಬಲ ಬಂದಂತಾಯಿತು. ‘‘ನೋಡಿ ಕೋಟಿ, ಈ ಪೊಲೀಸ್ ನನ್ನನ್ನು ಆಸನದ ಮೇಲೆ ಕೂರಬೇಡ ಎನ್ನುತ್ತಾನೆ’’ ಎಂದೆ. ರೋಷಾವಿಷ್ಟರಾದ ಕೋಟಿ ಆತನನ್ನು ತರಾಟೆಗೆ ತೆಗೆದುಕೊಂಡರು. ಕೂತ್ಕೊಳ್ರಿ ಮೇಲೆ ಎಂದು ನನಗೆ ಹೇಳಿದರು.

ಸಾಮಾನ್ಯವಾಗಿ ಪತ್ರಕರ್ತರು ಹೋರಾಟದ ವರದಿಗಳನ್ನು ಮಾಡುತ್ತಾರೆ. ಆದರೆ ತಾವೇ ಭಾಗವಹಿಸುವುದಿಲ್ಲ. ಅದೇ ರೀತಿ ಕೆಲವು ದೊಡ್ಡ ಸಾಹಿತಿಗಳು ಲೇಖನ ಬರೆಯುವಲ್ಲಿ ಮಾತ್ರ ಸಕ್ರಿಯ ಹೋರಾಟಗಾರರಾಗಿದ್ದರು. ಆದರೆ ಕೋಟಿಯ ಅಂತರಾಳದ ಒಳಗಿದ್ದ ಹೋರಾಟಗಾರನೊಬ್ಬ ಅವರನ್ನು ಬೀದಿಗೆ ಎಳೆದು ತಂದಿದ್ದ. ಕೆಲವು ಹಿರಿಯ ಪತ್ರಕರ್ತರು ಅವರು ಸಕ್ರಿಯವಾಗಿ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದರು. ಆದರೆ ಕೋಟಿ ಅದಕ್ಕೆ ಸೊಪ್ಪು ಹಾಕಲಿಲ್ಲ.

andolanait

Recent Posts

IND vs SA | ಹರಿಣಗಳ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಡಿಯಾ ; 76 ರನ್‌ಗಳ ಸೋಲು

ಕೋಲ್ಕತ್ತಾ : ಟಿ20 ವಿಶ್ವಕಪ್​​ನ ಸೂಪರ್​ 8 ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ ನೀಡಿದ್ದ…

1 hour ago

ಈ ಭಾರಿ ವಾಡಿಕೆಗಿಂತ ಹೆಚ್ಚು ಬಿಸಿಲು ; ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು : ಈ ವರ್ಷ ರಾಜ್ಯದಲ್ಲಿ ಬೇಸಿಗೆಯ ಬಿಸಿಲು ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)…

3 hours ago

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅರ್ಜಿ ವಜಾ

ಬೆಂಗಳೂರು : ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಅವರು ಹೂಡಿರುವ ಮಾನಹಾನಿ ಪ್ರಕರಣವನ್ನು ರದ್ದುಗೊಳಿಸುವಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ…

3 hours ago

HPCLನಲ್ಲಿ 608 ಅಪ್ರೆಂಟಿಸ್ ಟ್ರೈನಿ ನೇಮಕಾತಿ

ಬೆಂಗಳೂರು : ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) 608 ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದು…

4 hours ago

ಬಾಯಿ ಮುಚ್ಚಿಕೊಂಡಿದ್ದರೆ ಒಳ್ಳೆದು ; ಮೂವರು ಶಾಸಕರಿಗೆ ಡಿಸಿಎಂ ಡಿ.ಕೆ.ಶಿ ಎಚ್ಚರಿಕೆ

ಬೆಂಗಳೂರು : ಸಿಎಂ ಸ್ಥಾನ ಬದಲಾವಣೆ, ಡಿಸಿಎಂ ದಿಲ್ಲಿ ಪ್ರವಾಸ, ಹೈಕಮಾಂಡ್ ಭೇಟಿ ಹೀಗೆ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ಶಾಸಕರು…

4 hours ago

ದಿಲ್ಲಿಯಲ್ಲಿ ದಾಳಿಗೆ ಸಂಚು : 8 ಮಂದಿ ಬಂಧನ

ಹೊಸದಿಲ್ಲಿ : ದೆಹಲಿಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಐಎಸ್‌ಐ ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಗುಂಪುಗಳ ಬೆಂಬಲದೊಂದಿಗೆ ಭಯೋತ್ಪಾದಕ ಪಿತೂರಿ ನಡೆಸುತ್ತಿದ್ದ…

6 hours ago