ಆಂದೋಲನ 50

ಟೈಟ್ ಜಾಕೆಟ್ ಆರೆಂಜ್‌ಗೆ ಮರು ಹುಟ್ಟು

ಕೊಡಗಿನಲ್ಲಿ ವಿಶೇಷ ಕಿತ್ತಳೆ ತಳಿಗೆ ಸುಮಾರು ೧೮೦ ವರ್ಷಗಳ ಹಿಂದಿನ ಇತಿಹಾಸವಿದೆ.ಹಿಂದೊಮ್ಮೆ ಸಾವಿರ ಲಾರಿಗಳ ಕಿತ್ತಳೆ ಲೋಡು ಕೊಡಗಿಂದ ಹೊರಡುತ್ತಿತ್ತು.ನಂತರ ದಿನಗಳಲ್ಲಿ ಗ್ರೇನಿಂಗ್ ರೋಗ ಬಾಧೆಯಿಂದ ಕೊಡಗಿನ ಕಿತ್ತಳೆಯ ವೈಭವ ಇಳಿಮುಖವಾಯಿತು. ಅದರ ಜಾಗವನ್ನು ನಾಗಪುರದ ಕಿತ್ತಳೆ ಆವರಿಸಿಕೊಂಡಿತ್ತು. ಈಗ ರೋಗ ನಿಧಾನಕ್ಕೆ ನಿಯಂತ್ರಣಕ್ಕೆ ಬಂದಿದ್ದು ಕೊಡಗಿನಲ್ಲಿ ಕಿತ್ತಳೆ ಬೆಳೆ ಚೇತರಿಕೆ ಕಾಣುತ್ತಿದೆ.

ಪುನೀತ್ ಮಡಿಕೇರಿ

ಕೊಡಗಿನ ಕಿತ್ತಳೆ ಗಾತ್ರ, ಬಣ್ಣ, ರುಚಿ ಹಾಗೂ ಔಷಧೀಯ ಗುಣಗಳಿಂದ ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಾದ್ಯಂತ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ.
ಕೊಡಗಿನಲ್ಲಿ ಕಾಫಿ, ಕಾಳು ಮೆಣಸು ತೋಟದ ಜತೆಯಲ್ಲಿಯೇ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತದೆ. ಕಳೆದ ೧೨ ವರ್ಷಗಳಿಂದ ರೋಗಗಳಿಗೆ ತುತ್ತಾಗಿ ಅವನತಿಯತ್ತ ಸಾಗುತ್ತಿದ್ದ ಕಿತ್ತಳೆ ಇಂದು ಚೇತರಿಕೆ ಕಾಣುತ್ತಿದೆ.
ಭಾರತದಲ್ಲಿನ ಮೂರು ಪ್ರಮುಖ ಕಿತ್ತಳೆ ತಳಿಗಳೆಂದರೆ ನಾಗಪುರ ಕಿತ್ತಳೆ, ಖಾಸಿ ಕಿತ್ತಳೆ ಮತ್ತು ಕೊಡಗಿನ ಕಿತ್ತಳೆ. ಅದರಲ್ಲೂ ಕೊಡಗಿನ ಕಿತ್ತಳೆಗೆ ಹೆಚ್ಚಿನ ಬೇಡಿಕೆಯಿದೆ. ಸಿಪ್ಪೆಯು ಒಳಗಿನ ಹಣ್ಣಿನ ಭಾಗಕ್ಕೆ ಸಡಿಲವಾಗಿ ಅಂಟಿಕೊಳ್ಳುವ ಗುಣವಿರುವ ನಾಗಪುರ ಕಿತ್ತಳೆ ತಳಿಗೆ ಲೂಸ್ ಜಾಕೆಟ್ ಆರೆಂಜ್ ಅಂತ ಕರೆಯಲಾಗುತ್ತದೆ. ಸಿಪ್ಪೆಯು ಒಳಗಿನ ಹಣ್ಣಿಗೆ ಬಿಗಿಯಾಗಿ ಅಂಟಿಕೊಳ್ಳುವ ಗುಣವಿಶೇಷದ ಕೊಡಗಿನ ಕಿತ್ತಳೆಯು ಟೈಟ್ ಜಾಕೆಟ್ ಆರೆಂಜ್ ಎಂದೇ ಪ್ರಸಿದ್ಧವಾಗಿದೆ.

ಕೊಡಗಿನ ಕಿತ್ತಳೆಯ ಸಿಪ್ಪೆ ತೆಳು. ನೀರಿನಂಶ ಜಾಸ್ತಿ. ಬಾಯಲ್ಲಿ ನೀರೂರಿಸುವ ಹುಳಿಮಿಶ್ರಿತ ಸಿಹಿಯೇ ಕೊಡಗಿನ ಕಿತ್ತಳೆಯ ವಿಶೇಷ. ಅದರ ಸ್ವಾದಿಷ್ಟ ರಸ, ರುಚಿ ಹಾಗು ಕಾಂತಿಗಳು ಅದನ್ನು ಫೇಸ್ ಪ್ಯಾಕಿಗಾಗಿ ಹಾಗು ಮತ್ತಿತರ ಔಷಧೀಯ ಉಪಯೋಗಕ್ಕಾಗಿ ಜನರು ಬಳಸಿಕೊಳ್ಳುವಂತೆ ಆಕರ್ಷಿಸಿವೆ.
ಕಿತ್ತಳೆ ರಸವನ್ನು ಕೂದಲು ಉದುರದಂತೆ ತಡೆಯಲು, ತಲೆತುರಿಕೆ ಹಾಗೂ ಕೂದಲ ಹೊಟ್ಟು ಆಗದಂತೆ ತಡೆಯಲು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಕೊಡಗಿನ ಕಿತ್ತಳೆಯು ಈ ಪ್ರದೇಶಕ್ಕೆ ಸೀಮಿತವಾದ ವಿಶೇಷ ಬೆಳೆಯಾದ ಹಿನ್ನೆಲೆಯಲ್ಲಿ ಭೌಗೋಳಿಕ ಮಾನ್ಯತೆ ( ಜಿಐ ಟ್ಯಾಗ್ ) ದೊರೆತಿದೆ.

 

ಕುಗ್ಗದ ಬೆಳೆಗಾರರ ಆಸಕ್ತಿ

ಕೊಡಗಿನ ಕಿತ್ತಳೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಪ್ರತಿವರ್ಷ ತೋಟಗಾರಿಕಾ ಇಲಾಖೆಯಲ್ಲಿ ಕಿತ್ತಳೆ ಸಸಿಗಳನ್ನು ಅಭಿವೃದ್ಧಿಪಡಿಸಿ ಬೆಳೆಗಾರರಿಗೆ ವಿತರಿಸಲಾಗುತ್ತಿದೆ. ಜತೆಗೆ, ಖಾಸಗಿ ನರ್ಸರಿಗಳಲ್ಲಿಯೂ ಕಿತ್ತಳೆ ಗಿಡಗಳನ್ನು ಬೆಳೆಯಲಾಗುತ್ತಿದ್ದು ಮುಂಗಾರಿನ ಅವಧಿಯಲ್ಲಿ ಬೆಳೆಗಾರರು ಕಿತ್ತಳೆ ಗಿಡಗಳನ್ನು ಖರೀದಿಸಿ ತೋಟಗಳಲ್ಲಿ ನೆಡುತ್ತಾರೆ. ಕೊಡಗಿನ ಕಿತ್ತಳೆ ಹಣ್ಣಿಗೆ ಅಧಿಕ ಬೇಡಿಕೆ ಇರುವುದರಿಂದ ಬೆಳೆಗಾರರ ಆಸಕ್ತಿ ಕುಗ್ಗಿಲ್ಲ. ನರ್ಸರಿಗಳಲ್ಲಿ ಗಿಡಗಳನ್ನು ಬೆಳೆದು ರೈತರು ಲಾಭಗಳಿಸುತ್ತಿದ್ದಾರೆ.

ರೋಗ ಬಾಧೆಗೆ ತುತ್ತಾಗಿದ್ದ ಕೊಡಗಿನ ಕಿತ್ತಳೆ ೧೨ ವರ್ಷಗಳ ನಂತರ ಚೇತರಿಕೆ ಕಾಣುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು ೬೬೩೯ ಹೆಕ್ಟರ್‌ನಲ್ಲಿ ಬೆಳೆಯಲಾಗುತ್ತಿದ್ದು, ಸುಮಾರು ಒಂದೂವರೆ ಲಕ್ಷ ಮೆಟ್ರಿಕ್ ಟನ್ ಇಳುವರಿ ಬರುತ್ತಿದೆ.ಕೇರಳದಲ್ಲಿ ಕೊಡಗಿನ ಕಿತ್ತಲೆಗೆ ಹೆಚ್ಚು ಬೇಡಿಕೆ ಇದೆ. ಜತೆಗೆ ಜಿಲ್ಲೆಯ ಹಾಪ್ ಕಾಮ್ಸ್ ನಲ್ಲಿ ಖರೀದಿ ಮಾಡಲಾಗುತ್ತದೆ.

-ಸಿ.ಎಂ.ಪ್ರಮೋದ್, ಉಪನಿದೇರ್ಶಕರು(ಪ್ರಭಾರ), ತೋಟಗಾರಿಕೆ ಇಲಾಖೆ.

 

 

 

 

andolana

Recent Posts

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ ಸಾಂಸ್ಕೃತಿಕ ನಗರಿ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ದಸರಾ ಕೆಲಸಗಳು ಭರದಿಂದ ಸಾಗುತ್ತಿವೆ. ನಾಡಹಬ್ಬ…

1 min ago

ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ: ಅಮಿತ್‌ ಶಾ ಗಂಭೀರ ಆರೋಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಸ್ಥಾಪಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌…

19 mins ago

ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್‌

ರಾಮನಗರ: ಕನಕಪುರ ತಾಲ್ಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತ ನೀರಾವರಿ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪರೀಕ್ಷಾರ್ಥ ಚಾಲನೆ…

31 mins ago

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

9 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

9 hours ago

‘ಕೋಣ’ದ ಕಥೆಯೊಂದಿಗೆ ಬಂದ ಕೋಮಲ್

ಕೋಮಲ್‍ ಈಗಾಗಲೇ ‘ಕಾಲಾಯ ನಮಃ’, ‘ರೋಲೆಕ್ಸ್’, ‘ಎಲಾ ಕುನ್ನಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.…

10 hours ago