ಎಚ್.ಡಿ.ಕೋಟೆ, ಸರಗೂರು ತಾಲೂಕಿಗೆ ಸಂಬಂಧಿಸಿದ ಒಂದಲ್ಲ ಒಂದು ಸುದ್ದಿಗಳನ್ನು ಪ್ರತಿನಿತ್ಯವೂ ಪ್ರಕಟಿಸುವ ಮೂಲಕ ಆಂದೋಲನ ದಿನಪತ್ರಿಕೆ ಕಳೆದ ೨೫ ವರ್ಷಗಳಿಂದ ಓದುಗರ ಹೃದಯದಲ್ಲಿ ಭದ್ರ ಸ್ಥಾನ ಪಡೆದಿದೆ. ತಾಲೂಕಿನ ಸಮಸ್ಯೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮುಂದಿಟ್ಟು ಅವರ ಕಣ್ತೆರೆಸುವ ಕೆಲಸವನ್ನು ಪತ್ರಿಕೆ ನಿರಂತರವಾಗಿ ಮಾಡುತ್ತಾ ಬಂದಿದೆ. ಈ ಕಾರಣಕ್ಕಾಗಿಯೇ ರಾಜ್ಯ ಮಟ್ಟದ ಪತ್ರಿಕೆಗಳ ದರ ಸಮರದ ಹೊರತಾಗಿಯೂ ಸುದ್ದಿ ಮೌಲ್ಯಕ್ಕೆ ಆದ್ಯತೆ ನೀಡಿದ ‘ಆಂದೋಲನ’ ನಂಬರ್ ವನ್ ಪತ್ರಿಕೆಯಾಗಿ ಮುಂದುವರಿದಿದೆ.
ಆಂದೋಲನ ಪತ್ರಿಕೆಯಲ್ಲಿ ಯಾವುದೇ ಸುದ್ದಿಗಳು ಪ್ರಕಟವಾದರೆ ಸಂಬಂಧಪಟ್ಟವರು ತಕ್ಷಣ ಸ್ಪಂದಿಸುತ್ತಾರೆ ಎನ್ನುವ ಓದುಗರ ನಂಬಿಕೆ ಇದುವರೆಗೆ ಸುಳ್ಳಾಗಿಲ್ಲ. ಆಂದೋಲನ ವರದಿ ಫಲಶ್ರುತಿಯ ಕೆಲವು ಉದಾಹರಣೆಗಳು ಇಲ್ಲಿವೆ.
ಸುಮಾರು ೨೦ ವರ್ಷಗಳ ಹಿಂದಿನ ಮಾತು. ತಾಲ್ಲೂಕಿನ ಅಂತರಸಂತೆ ವಿಎಸ್ಸೆಸ್ಸೆನ್ ಸೊಸೈಟಿಯಲ್ಲಿ ಪಡಿತರದಾರರಿಗೆ ವಿತರಿಸದೆ ಸುಮಾರು ನೂರು ಕ್ವಿಂಟಾಲ್ಗೂ ಹೆಚ್ಚು ಅಕ್ಕಿ ಮತ್ತು ಗೋಧಿ ದಾಸ್ತಾನು ಮಾಡಲಾಗಿತ್ತು. ಇದನ್ನು ಕೇರಳಕ್ಕೆ ಸಾಗಿಸುವ ಹುನ್ನಾರದ ಸುಳಿವು ಪಡೆದ ಪತ್ರಿಕೆ ಸಚಿತ್ರ ವರದಿ ಮಾಡಿತ್ತು. ಪರಿಣಾಮ ಆಹಾರ ಶಿರಸ್ತೇದಾರ್, ಫುಡ್ ಇನ್ಸ್ಪೆಕ್ಟರ್, ಕಾರ್ಯದರ್ಶಿ ಅಮಾನತುಗೊಂಡರು. ಅಂಬೇಡ್ಕರ್ ಭವನದ ಕಾಮಗಾರಿ ವಿಳಂಬದ ಬಗ್ಗೆ ಪತ್ರಿಕೆ ವಿವರವಾದ ವರದಿ ಪ್ರಕಟಿಸಿದ ಬಳಿಕ ಕಟ್ಟಡ ಉದ್ಘಾಟನೆಗೆ ಸಿದ್ಧಗೊಂಡಿತ್ತು. ಕೋಟೆ ಪಟ್ಟಣ ಪಂಚಾಯಿತಿಯ ಖಾತೆ ಅವ್ಯವಹಾರವನ್ನು ಪತ್ರಿಕೆ ಬಯಲಿಗೆಳೆದ ಬಳಿಕ ಹಲವು ಜನಪ್ರತಿನಿಧಿಗಳ ಮೇಲೆ ಕೇಸು ದಾಖಲಾಯಿತು.
ಜಿಪಂ ಕಾಮಗಾರಿಯ ೪ ಕೋಟಿ ರೂ. ಮೊತ್ತದ ಹಗರಣವನ್ನೂ ಆಂದೋಲನ ಬಯಲಿಗೆಳೆದಿತ್ತು. ಈ ಸಂಬಂಧ ಎಂಜಿನಿಯರ್ ಅಮಾನತಾಗಿದ್ದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಸ್ತಿ ಪರಭಾರೆ ಸಂಚನ್ನು ಪತ್ರಿಕೆಯ ವರದಿ ವಿಫಲಗೊಳಿಸಿತ್ತು. ಠಾಣೆಯಲ್ಲಿಯೇ ತನ್ನ ಗೆಳೆಯನ ಹುಟ್ಟು ಹಬ್ಬ ಆಚರಿಸಿದ ಸರಗೂರು ಸಬ್ ಇನ್ಸ್ಪೆಕ್ಟರ್ ಪತ್ರಿಕೆಯ ವರದಿಯ ಪರಿಣಾಮ ವರ್ಗಾವಣೆ ಶಿಕ್ಷೆಗೆ ಗುರಿಯಾದರು. ಪಟ್ಟಣದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕ್ಲಬ್ಗಳ ಮೇಲೆ ಪತ್ರಿಕೆ ವರದಿಯನ್ನು ಆಧರಿಸಿ ನಿರ್ಬಂಧ ಹೇರಲಾಯಿತು. ಇದು ನೆನಪಿನಾಳದಿಂದ ಹೆಕ್ಕಿದ ಕೆಲವೇ ಪ್ರಕರಣಗಳು. ಇಂತಹ ಅನೇಕ ಉದಾಹರಣೆಗಳನ್ನು ಪಟ್ಟಿ ಮಾಡಬಹುದು.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…