ಆಂದೋಲನ 50

ಆಂದೋಲನದ ಜತೆ ನಿಂತ ಓದುಗರು

ಎಚ್.ಡಿ.ಕೋಟೆ, ಸರಗೂರು ತಾಲೂಕಿಗೆ ಸಂಬಂಧಿಸಿದ ಒಂದಲ್ಲ ಒಂದು ಸುದ್ದಿಗಳನ್ನು ಪ್ರತಿನಿತ್ಯವೂ ಪ್ರಕಟಿಸುವ ಮೂಲಕ ಆಂದೋಲನ ದಿನಪತ್ರಿಕೆ ಕಳೆದ ೨೫ ವರ್ಷಗಳಿಂದ ಓದುಗರ ಹೃದಯದಲ್ಲಿ ಭದ್ರ ಸ್ಥಾನ ಪಡೆದಿದೆ. ತಾಲೂಕಿನ ಸಮಸ್ಯೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮುಂದಿಟ್ಟು ಅವರ ಕಣ್ತೆರೆಸುವ ಕೆಲಸವನ್ನು ಪತ್ರಿಕೆ ನಿರಂತರವಾಗಿ ಮಾಡುತ್ತಾ ಬಂದಿದೆ. ಈ ಕಾರಣಕ್ಕಾಗಿಯೇ ರಾಜ್ಯ ಮಟ್ಟದ ಪತ್ರಿಕೆಗಳ ದರ ಸಮರದ ಹೊರತಾಗಿಯೂ ಸುದ್ದಿ ಮೌಲ್ಯಕ್ಕೆ ಆದ್ಯತೆ ನೀಡಿದ ‘ಆಂದೋಲನ’ ನಂಬರ್ ವನ್ ಪತ್ರಿಕೆಯಾಗಿ ಮುಂದುವರಿದಿದೆ.

ಆಂದೋಲನ ಪತ್ರಿಕೆಯಲ್ಲಿ ಯಾವುದೇ ಸುದ್ದಿಗಳು ಪ್ರಕಟವಾದರೆ ಸಂಬಂಧಪಟ್ಟವರು ತಕ್ಷಣ ಸ್ಪಂದಿಸುತ್ತಾರೆ ಎನ್ನುವ ಓದುಗರ ನಂಬಿಕೆ ಇದುವರೆಗೆ ಸುಳ್ಳಾಗಿಲ್ಲ. ಆಂದೋಲನ ವರದಿ ಫಲಶ್ರುತಿಯ ಕೆಲವು ಉದಾಹರಣೆಗಳು ಇಲ್ಲಿವೆ.

ಸುಮಾರು ೨೦ ವರ್ಷಗಳ ಹಿಂದಿನ ಮಾತು. ತಾಲ್ಲೂಕಿನ ಅಂತರಸಂತೆ ವಿಎಸ್ಸೆಸ್ಸೆನ್ ಸೊಸೈಟಿಯಲ್ಲಿ ಪಡಿತರದಾರರಿಗೆ ವಿತರಿಸದೆ ಸುಮಾರು ನೂರು ಕ್ವಿಂಟಾಲ್‌ಗೂ ಹೆಚ್ಚು ಅಕ್ಕಿ ಮತ್ತು ಗೋಧಿ ದಾಸ್ತಾನು ಮಾಡಲಾಗಿತ್ತು. ಇದನ್ನು ಕೇರಳಕ್ಕೆ ಸಾಗಿಸುವ ಹುನ್ನಾರದ ಸುಳಿವು ಪಡೆದ ಪತ್ರಿಕೆ ಸಚಿತ್ರ ವರದಿ ಮಾಡಿತ್ತು. ಪರಿಣಾಮ ಆಹಾರ ಶಿರಸ್ತೇದಾರ್, ಫುಡ್ ಇನ್‌ಸ್ಪೆಕ್ಟರ್, ಕಾರ‌್ಯದರ್ಶಿ ಅಮಾನತುಗೊಂಡರು. ಅಂಬೇಡ್ಕರ್ ಭವನದ ಕಾಮಗಾರಿ ವಿಳಂಬದ ಬಗ್ಗೆ ಪತ್ರಿಕೆ ವಿವರವಾದ ವರದಿ ಪ್ರಕಟಿಸಿದ ಬಳಿಕ ಕಟ್ಟಡ ಉದ್ಘಾಟನೆಗೆ ಸಿದ್ಧಗೊಂಡಿತ್ತು. ಕೋಟೆ ಪಟ್ಟಣ ಪಂಚಾಯಿತಿಯ ಖಾತೆ ಅವ್ಯವಹಾರವನ್ನು ಪತ್ರಿಕೆ ಬಯಲಿಗೆಳೆದ ಬಳಿಕ ಹಲವು ಜನಪ್ರತಿನಿಧಿಗಳ ಮೇಲೆ ಕೇಸು ದಾಖಲಾಯಿತು.

ಜಿಪಂ ಕಾಮಗಾರಿಯ ೪ ಕೋಟಿ ರೂ. ಮೊತ್ತದ ಹಗರಣವನ್ನೂ ಆಂದೋಲನ ಬಯಲಿಗೆಳೆದಿತ್ತು. ಈ ಸಂಬಂಧ ಎಂಜಿನಿಯರ್ ಅಮಾನತಾಗಿದ್ದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಸ್ತಿ ಪರಭಾರೆ ಸಂಚನ್ನು ಪತ್ರಿಕೆಯ ವರದಿ ವಿಫಲಗೊಳಿಸಿತ್ತು. ಠಾಣೆಯಲ್ಲಿಯೇ ತನ್ನ ಗೆಳೆಯನ ಹುಟ್ಟು ಹಬ್ಬ ಆಚರಿಸಿದ ಸರಗೂರು ಸಬ್ ಇನ್‌ಸ್ಪೆಕ್ಟರ್ ಪತ್ರಿಕೆಯ ವರದಿಯ ಪರಿಣಾಮ ವರ್ಗಾವಣೆ ಶಿಕ್ಷೆಗೆ ಗುರಿಯಾದರು. ಪಟ್ಟಣದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕ್ಲಬ್‌ಗಳ ಮೇಲೆ ಪತ್ರಿಕೆ ವರದಿಯನ್ನು ಆಧರಿಸಿ ನಿರ್ಬಂಧ ಹೇರಲಾಯಿತು. ಇದು ನೆನಪಿನಾಳದಿಂದ ಹೆಕ್ಕಿದ ಕೆಲವೇ ಪ್ರಕರಣಗಳು. ಇಂತಹ ಅನೇಕ ಉದಾಹರಣೆಗಳನ್ನು ಪಟ್ಟಿ ಮಾಡಬಹುದು.

andolana

Recent Posts

ಮಂಡ್ಯ ಟು ಇಂಡಿಯಾ: ಬೃಹತ್‌ ಉದ್ಯೋಗ ಮೇಳ

ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು ಹಾಗೂ ಕ್ಷೇತ್ರದ ಸಂಸದರೂ ಆಗಿರುವ ಎಚ್. ಡಿ. ಕುಮಾರಸ್ವಾಮಿ…

18 mins ago

ಮೈಮುಲ್‌: ನಿರೀಕ್ಷೆಗೂ ಮೀರಿ ಕ್ಷೀರಧಾರೆ

ಮೈಸೂರು: ದುಡಿಯಲು ಉದ್ಯೋಗ ಇಲ್ಲದೆ ನಗರ ಪ್ರದೇಶಗಳತ್ತ ಯುವ ಸಮುದಾಯ ವಲಸೆ ಹೋಗುತ್ತಿರುವುದು ಹೆಚ್ಚುತ್ತಿರುವ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ…

28 mins ago

ಮೇಲುಕೋಟೆಯಲ್ಲಿ ಸರಣಿ ಕಳ್ಳತನ

ಬೀಗ ಹಾಕಿದ್ದ ಮನೆಗಳೇ ಕಳ್ಳರ ಟಾರ್ಗೆಟ್, ಲಾಕರ್‌ಗಳನ್ನು ಒಡೆದು ನಗ,ನಾಣ್ಯ ದೋಚಿದ ದುಷ್ಕರ್ಮಿಗಳು ಮೇಲುಕೋಟೆ: ಇಲ್ಲಿನ ಒಕ್ಕಲಿಗರ ಬೀದಿಯ ಸುತ್ತಮುತ್ತಲ…

39 mins ago

ಕಾರ್ಯಾಚರಣೆ ತಂಡವನ್ನೇ ಹಿಮ್ಮೆಟ್ಟಿಸಿದ ಕಾಡಾನೆಗಳು!

ದಾ. ರಾ. ಮಹೇಶ್ ವೀರನಹೊಸಹಳ್ಳಿ: ಮೂರು ದಿನಗಳಿಂದ ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳ ಹಿಂಡನ್ನು ಓಡಿಸಲು ಹೋದ ಜನರ ಗುಂಪನ್ನೇ ಆನೆಗಳು…

45 mins ago

ಶಾಸಕ ಬಸವನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಎಫ್‌ಐಆರ್‌ ದಾಖಲು

ದಾವಣಗೆರೆ: ಇಲ್ಲಿನ ಗಾಂಧಿ ನಗರ ಪೊಲೀಸ್‌ ಠಾಣೆಯಲ್ಲಿ ವಿಜಯಪುರ ಶಾಸಕ ಪಾಟೀಲ ಯತ್ನಳ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ರಾಜ್ಯ ಕಾಂಗ್ರೆಸ್‌…

10 hours ago

ಅಸ್ಸಾಂ: ಹಳಿ ತಪ್ಪಿದ ಲೋಕಮಾನ್ಯ ತಿಲಕ ಎಕ್ಸ್‌ಪ್ರೆಸ್‌ ರೈಲು

ಅಸ್ಸಾಂ: ಅಸ್ಸಾಂನ ಅಗರ್ತಲಾದಿಂದ ಮುಂಬೈಗೆ ತೆರಳುತ್ತಿದ್ದ ಲೋಕಮಾನ್ಯ ತಿಲಕ್‌ ಎಕ್ಸ್‌ಪ್ರೆಸ್‌ ರೈಲು ಡಿಬಾಲೊಂಗ್‌ ನಿಲ್ದಾಣದ ಬಳಿ ಹಳಿ ತಪ್ಪಿವೆ ಎಂದು…

11 hours ago