ಆಂದೋಲನ 50

ನಂ… ಜನರ… ಗೂಡು !

ನಂಜುಂಡನ ನೆಲೆ ವೀಡು
ರಸ ಬಾಳೆಯ ಬೀಡು
ನಂ ಜನರ ಗೂಡು
ನಮ್ಮ ಹೆಮ್ಮೆಯ ನಂಜನಗೂಡು

ಜುಳು ಜುಳು ಹರಿಯುತ
ತೀರ್ಥಕ್ಷೇತ್ರವಾಗಿಹುದಿಲ್ಲಿ
ಕಪಿಲೆಯ ಮಡಿಲು
ಹಚ್ಚಹಸಿರಾಗಿಹುದು
ಮಾತೆಯ ಒಡಲು!

ಸುತ್ತಮುತ್ತೆಲ್ಲ ಸುಕ್ಷೇತ್ರಗಳ ಲೀಲೆ
ಸುತ್ತೂರು, ದೇವನೂರು
ಸನ್ನಿಧಿಗಳ ಸಂಗಮ
ಮಲ್ಲನಮೂಲೆ

ಸಿನಿ ಕ್ಷೇತ್ರದ ದಿಗ್ಗಜರು
ಎಚ್‌ ಎಲ್‌ ಏನ್‌ ಸಿಂಹ,
ಜಿ. ವಿ. ಅಯ್ಯರು,
ಮರೆಯಲಾದೀತೆ ಪತ್ರಕರ್ತೆ
ಧೀರ ವನಿತೆ ತಿರುಮಲಾಂಬ

ಎಷ್ಟೊಂದು ಪ್ರಸಿದ್ಧಿ
ಗರಳಪುರಿಯ ಗರಿಗರಿ ಪುರಿ!
ಪಾಮರರೂ ಬಳಸುವ
‘ಪಂಡಿತರ’ ಹಲ್ಲು ಪುಡಿ

ಅಬ್ಬಾ ! ಎಂಥ ಹೆಸರು
ನಮ್ಮೂರ ರಸ್ತೆಗಳಿಗೆ ?!
ಒಂದು ರಾಷ್ಟ್ರಪತಿ ರಸ್ತೆ
ಮತ್ತೊಂದು ‘ರಾಷ್ಟ್ರಪಿತ’ನ ರಸ್ತೆ !

ತಲೆಯೆತ್ತಿವೆಯಿಲ್ಲಿ
ನೂರಾರು ಕೈಗಾರಿಕೆಗಳು
ಅಭಿವೃದ್ಧಿ ಮಾತಾಗಿರಲಿ
ಶಾಂತಿಯ ತೋಟದಲಿ
ನಿತ್ಯ ಅರಳುತ್ತಿವೆ
ಜನಮಾನಸದ ಹೂಗಳು!

-ಮ.ಗು.ಬಸವಣ್ಣ, ಜೆ ಎಸ್‌ ಎಸ್‌ ಸಂಸ್ಥೆ, ಸುತ್ತೂರು, ಮೈಸೂರು.

andolana

Recent Posts

ಮದ್ದೂರು ಬಳಿಯ ವಳೆಗೆರೆಹಳ್ಳಿಯಲ್ಲಿ ಮಳೆರಾಯನಿಗಾಗಿ ಪೂಜೆ

ಮದ್ದೂರು: ಹುಯ್ಯೋ ಹುಯ್ಯೋ ಮಳೆರಾಯ ತೆಂಗಿನ ತೋಟಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ, ಬಾರಪ್ಪ ಮಳೆರಾಯ…

8 hours ago

ಸಮರ್ಥವಾಗಿ ಕಾರ್ಯನಿರ್ವಹಿಸದ ಸಚಿವರನ್ನು ಬದಲಾಯಿಸಿ: ಶಾಸಕ ರವಿಕುಮಾರ್‌ ಗಣಿಗ

ಮಂಡ್ಯ: ಹಲವು ಶಾಸಕರು ಸಚಿವರಾಗುವ ಆಸೆ ಹೊಂದಿದ್ದು, ಮೂರು-ನಾಲ್ಕು ಬಾರಿ ಗೆದ್ದಿರುವ ಹಿರಿಯ ಶಾಸಕರು ಸಹ ಮಂತ್ರಿಗಿರಿಗಾಗಿ ದೆಹಲಿಗೆ ತೆರಳುತ್ತಿದ್ದಾರೆ.…

8 hours ago

ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು

ಮಡಿಕೇರಿ: ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ಸಹ ಕಲಾವಿದ ಹರೀಶ್‌ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ…

8 hours ago

ಹಾಸನ: ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

ಹಾಸನ: ಅಪಘಾತದಿಂದ ಮೆದುಳು ನಿಷ್ಕ್ರಿಯವಾಗಿದ್ದ ಮಗಳ ಅಂಗಾಂಗ ದಾನ ಮಾಡಿ ಪೋಷಕರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಹಾಸನ ಜಿಲ್ಲೆಯಲ್ಲಿ…

8 hours ago

ಶಿವಮೊಗ್ಗ: ಪಶುವೈದ್ಯೆ ಕೊಂದಿದ್ದ ನೀರಾನೆಗೆ ಬಹು ಅಂಗಾಂಗ ವೈಫಲ್ಯ

ಶಿವಮೊಗ್ಗ: ತ್ಯಾವರಕೊಪ್ಪದ ಮೃಗಾಲಯದಲ್ಲಿ ಪಶುವೈದ್ಯೆ ಸಮೀಕ್ಷಾ ಅವರ ಮೇಲೆ ದಾಳಿ ಮಾಡಿ ಕೊಂದಿದ್ದ ನೀರಾನೆ ಹಂಸಿನಿಯ ಮರಿ ಗರ್ಭದಲ್ಲೇ ಸಾವನ್ನಪ್ಪಿದೆ.…

8 hours ago

ಪಾಕ್‌ ಜನತೆಗೆ ಮತ್ತೊಂದು ಶಾಕ್:‌ ವಿದ್ಯುತ್‌ ದರ ದುಪ್ಪಟ್ಟು ಹೆಚ್ಚಳ

ಇಸ್ಲಾಮಾಬಾದ್:‌ ಇಂಧನ ಬೆಲೆ ಏರಿಕೆ ನಂತರ ಪಾಕಿಸ್ತಾನ ಈಗ ವಿದ್ಯುತ್‌ ದರವನ್ನು ದುಪ್ಪಟ್ಟು ಹೆಚ್ಚಿಸಿದೆ. ಮಾಸಿಕ ಇಂಧನ ವೆಚ್ಚ ಹೊಂದಾಣಿಕೆಯ…

8 hours ago