ಆಂದೋಲನ 50

ಇತಿಹಾಸಕ್ಕೂ ಸಾಕ್ಷಿ ಹೇಳುತ್ತಿದೆ ನಂಜುಂಡನ ಸನ್ನಿಧಿ

ನಂಜನಗೂಡು ಶ್ರೀಕಂಠೇಶ್ವರ ದೇಗುಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ ಐತಿಹಾಸಿಕ ತಾಣವೂ ಹೌದು. ಇಲ್ಲಿರುವ ಪ್ರತಿಯೊಂದು ವಿಗ್ರಹ, ಪ್ರತಿಮೆಗಳು, ಕೆತ್ತನೆಗಳು, ಶಾಸನಗಳು, ಶಿಲಾ ಫಲಕಗಳು ಇತಿಹಾಸದತ್ತ ಬೆಳಕು ಚೆಲ್ಲುತ್ತವೆ. ದೇಗುಲದೊಳಗೆ ಶಿವ ನಾರಾಯಣರ ಆರಾಧನೆ ಶೈವ ಮತ್ತು ವೈಷ್ಣವ ಪರಂಪರೆಯ ಸಾಮರಸ್ಯಕ್ಕೆ ಉದಾಹರಣೆಯಾದರೆ ರಾಮಾನುಜಾಚಾರ‌್ಯರ ವಿಗ್ರಹ ಅಂದಿನ ವೈಷ್ಣವ ಪರಂಪರೆಯ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. ತಮಿಳುನಾಡಿನ ಶೈವ ಪರಂಪರೆಗೆ ಸೇರಿದ ಸುಮಾರು ೪೦ ನಾಯನಾರ್ ಗಳ ಪ್ರತಿಮೆಗಳೂ ಇಲ್ಲಿವೆ. ಈ ಪ್ರತಿಮೆಗಳು ಶೈವ ಪಂಥ ಉತ್ತುಂಗದಲ್ಲಿದ್ದಾಗ ಸ್ಥಾಪನೆಯಾದ ಸಾಧ್ಯತೆ ಇದೆ. ನಾಯನಾರರು ಅಥವಾ ನಾಳ್ವರ್ ಗಳು ಕ್ರಿ.ಶ. ಐದನೇ ಮತ್ತು ಹತ್ತನೇ ಶತಮಾನಗಳ ನಡುವೆ ತಮಿಳುನಾಡಿನಲ್ಲಿ ಸಕ್ರಿಯರಾಗಿದ್ದ ಶಿವ ಭಕ್ತ ಸಂತ ಕವಿಗಳು. ತಮಿಳು ಶೈವ ಸಂತಚರಿತೆ ‘ಪೆರಿಯ ಪುರಾಣಂ’ ಕೃತಿಯಲ್ಲಿ ೬೩ ನಾಯನಾರರ ಇತಿಹಾಸವಿದೆ. ಸುಂದರನ್‌ರ ಎಂಟನೇ ಶತಮಾನದ ಕೃತಿ ‘ ತಿರುಕೊಂಡರ್ ತೋಗೈ’ ನಲ್ಲೂ ೬೦ ಶೈವ ಸಂತರ ಪಟ್ಟಿ ಇದೆ.

ಈ ಪ್ರತಿಮೆಗಳು ನಂಜುಂಡನ ಸನ್ನಿಧಿಗೆ ಬರುವುದಕ್ಕೂ ಒಂದು ದಂತಕಥೆಯಿದೆ. ಬಾದಾಮಿ ಯುದ್ಧದಲ್ಲಿ ಇಮ್ಮಡಿ ಪುಲಕೇಶಿಯನ್ನು ಸೋಲಿಸಿದ ಪಲ್ಲವರ ದೊರೆ ೧ನೇ ನರಸಿಂಹವರ್ಮ ತನ್ನ ಸೇನಾಪತಿ ಪರಂಜ್ಯೋತಿಯ ಶೌರ್ಯ, ಸಾಹಸ ಮೆಚ್ಚಿ ಯುದ್ಧದಲ್ಲಿ ಲೂಟಿ ಮಾಡಿದ ಸಂಪತ್ತಿನಲ್ಲಿ ಕಾಲು ಭಾಗವನ್ನು ಕೊಡುತ್ತಾನೆ. ಪರಂಜ್ಯೋತಿ ಆಸ್ತಿಯನ್ನು ವಿಂಗಡಿಸುತ್ತಿದ್ದಾಗ ಆತನಿಗೆ ಒಂದು ಗಣಪತಿ ವಿಗ್ರಹ ಸಿಗುತ್ತದೆ. ಅದನ್ನು ನೋಡಿದ ನಂತರ ಆತನಲ್ಲಿದ್ದ ಕ್ಷಾತ್ರ ಗುಣ ಕಳೆದು ಹೋಗಿ ಸನ್ಯಾಸಿಯಾಗುತ್ತಾನೆ. ಈ ವಿಗ್ರಹವನ್ನು ತೆಗೆದುಕೊಂಡು ಒಂದು ದೇವಸ್ಥಾನದಲ್ಲಿಡುತ್ತಾನೆ. ಬಳಿಕ ಈತ ಸೇರಿ ೪೦ ಮಂದಿ ನಾಯನಾರ್‌ಗಳಾಗಿ ಪರಿವರ್ತನೆಯಾಗಿ ದೇಶ ಪರ್ಯಟನೆ ಕೈಗೊಂಡು ಶೈವ ಪಂಥವನ್ನು ಪ್ರಚಾರ ಮಾಡುತ್ತಾರೆ. ನೂರಾರು ವರ್ಷಗಳ ಬಳಿಕ ಸಂಗೀತ ವಾಗ್ಗೇಯಕಾರರಾದ ಮುತ್ತುಸ್ವಾಮಿ ದೀಕ್ಷಿತರು ಬಾದಾಮಿಯಿಂದ ತೆಗೆದುಕೊಂಡು ಹೋದ ಇದೇ ಗಣಪತಿ ವಿಗ್ರಹದ ಕುರಿತು ‘ವಾತಾಪಿ ಗಣಪತಿ’ ಕೃತಿ ರಚಿಸುತ್ತಾರೆ. ವಾತಾಪಿ ಬಾದಾಮಿಯ ಮೂಲ ಹೆಸರು. ಈ ಗಣಪತಿ ವಿಗ್ರಹ ಇಂದಿಗೂ ತಮಿಳುನಾಡಿನಲ್ಲಿ ಇದೆ. ಇಂತಹ ಇತಿಹಾಸಕ್ಕೆ ಕಾರಣರಾದ ಪರಂಜ್ಯೋತಿ ಮತ್ತು ೪೦ ನಯನಾರ್‌ಗಳ ಪ್ರತಿಮೆಗಳು ನಂಜನಗೂಡಿನ ಪ್ರತಿಷ್ಠಾಪನೆಯಾಗುತ್ತದೆ. ಪರಂಜ್ಯೋತಿಯ ಹೆಸರು ಜನಪದ ಕಥನಗಳಲ್ಲೂ ಕೇಳಿ ಬರುವ ಹೆಸರು.


ನಂಜನಗೂಡು ವಾಸ್ತುಶಿಲ್ಪ

ಕಳಲೆ ದಳವಾಯಿಗಳು ವಾಸ್ತುಶಿಲ್ಪ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಕಳಲೆ ಗ್ರಾಮದಲ್ಲಿರುವ ಹಲವಾರು ದೇವಾಲಯಗಳು ಇದಕ್ಕೆ ನಿದರ್ಶನವಾಗಿದೆ. ಇಲ್ಲಿರುವ ಪ್ರಸಿದ್ದ ಲಕ್ಷ್ಮೀಕಾಂತ ದೇವಾಲಯವನ್ನು ಕಳಲೆ ಅರಸರು ನಿರ್ಮಿಸಿದರು. ಈ ಸುಂದರ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಗರ್ಭಗುಡಿಯಲ್ಲಿ ಲಕ್ಷ್ಮೀಕಾಂತನ ಪ್ರಭಾವಳಿ ಸಹಿತವಾದ ೩.೫ ಅಡಿ ಎತ್ತರವಾದ ವಿಗ್ರಹವಿದೆ. ಅಕ್ಕಪಕ್ಕದಲ್ಲಿ ಪತ್ನಿಯರ ವಿಗ್ರಹಗಳಿವೆ. ಇವೆಲ್ಲವೂ ಲೋಹದ ಪ್ರತಿಮೆಗಳಾಗಿವೆ. ದೇವಾಲಯದ ಹೆಬ್ಬಾಗಿಲಿನ ದಕ್ಷಿಣ ಮತ್ತು ಉತ್ತರಭಾಗದಲ್ಲಿ ಎರಡು ವಿಶಾಲವಾದ ಮಂಟಪಗಳಿವೆ. ಇವುಗಳನ್ನು ನವರಾತ್ರಿ ಹಾಗೂ ಕಾರ್ತಿಕ ಮಂಟಪಗಳೆಂದು ಕರೆಯುತ್ತಾರೆ. ಇಡೀ ದೇವಾಲಯ ಯಾವುದೇ ನಿರ್ದಿಷ್ಟವಾದ ಅವಧಿಯಲ್ಲಿ ನಿರ್ಮಾಣ ಗೊಳ್ಳದೆ ೧೭ ನೇ ಶತಮಾನದ ಆರಂಭದಿಂದ ೧೮ ನೇ ಶತಮಾನದ ಮದ್ಯಭಾಗ ದವರೆಗೂ ವಿವಿಧ ಹಂತಗಳಲ್ಲಿ ನಿರ್ಮಾಣಗೊಂಡಿರುವಂತೆ ಕಾಣುತ್ತದೆ

andolana

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

3 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

4 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

5 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

7 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

8 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

9 hours ago