ಆಂದೋಲನ 50

ಇತಿಹಾಸಕ್ಕೂ ಸಾಕ್ಷಿ ಹೇಳುತ್ತಿದೆ ನಂಜುಂಡನ ಸನ್ನಿಧಿ

ನಂಜನಗೂಡು ಶ್ರೀಕಂಠೇಶ್ವರ ದೇಗುಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ ಐತಿಹಾಸಿಕ ತಾಣವೂ ಹೌದು. ಇಲ್ಲಿರುವ ಪ್ರತಿಯೊಂದು ವಿಗ್ರಹ, ಪ್ರತಿಮೆಗಳು, ಕೆತ್ತನೆಗಳು, ಶಾಸನಗಳು, ಶಿಲಾ ಫಲಕಗಳು ಇತಿಹಾಸದತ್ತ ಬೆಳಕು ಚೆಲ್ಲುತ್ತವೆ. ದೇಗುಲದೊಳಗೆ ಶಿವ ನಾರಾಯಣರ ಆರಾಧನೆ ಶೈವ ಮತ್ತು ವೈಷ್ಣವ ಪರಂಪರೆಯ ಸಾಮರಸ್ಯಕ್ಕೆ ಉದಾಹರಣೆಯಾದರೆ ರಾಮಾನುಜಾಚಾರ‌್ಯರ ವಿಗ್ರಹ ಅಂದಿನ ವೈಷ್ಣವ ಪರಂಪರೆಯ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. ತಮಿಳುನಾಡಿನ ಶೈವ ಪರಂಪರೆಗೆ ಸೇರಿದ ಸುಮಾರು ೪೦ ನಾಯನಾರ್ ಗಳ ಪ್ರತಿಮೆಗಳೂ ಇಲ್ಲಿವೆ. ಈ ಪ್ರತಿಮೆಗಳು ಶೈವ ಪಂಥ ಉತ್ತುಂಗದಲ್ಲಿದ್ದಾಗ ಸ್ಥಾಪನೆಯಾದ ಸಾಧ್ಯತೆ ಇದೆ. ನಾಯನಾರರು ಅಥವಾ ನಾಳ್ವರ್ ಗಳು ಕ್ರಿ.ಶ. ಐದನೇ ಮತ್ತು ಹತ್ತನೇ ಶತಮಾನಗಳ ನಡುವೆ ತಮಿಳುನಾಡಿನಲ್ಲಿ ಸಕ್ರಿಯರಾಗಿದ್ದ ಶಿವ ಭಕ್ತ ಸಂತ ಕವಿಗಳು. ತಮಿಳು ಶೈವ ಸಂತಚರಿತೆ ‘ಪೆರಿಯ ಪುರಾಣಂ’ ಕೃತಿಯಲ್ಲಿ ೬೩ ನಾಯನಾರರ ಇತಿಹಾಸವಿದೆ. ಸುಂದರನ್‌ರ ಎಂಟನೇ ಶತಮಾನದ ಕೃತಿ ‘ ತಿರುಕೊಂಡರ್ ತೋಗೈ’ ನಲ್ಲೂ ೬೦ ಶೈವ ಸಂತರ ಪಟ್ಟಿ ಇದೆ.

ಈ ಪ್ರತಿಮೆಗಳು ನಂಜುಂಡನ ಸನ್ನಿಧಿಗೆ ಬರುವುದಕ್ಕೂ ಒಂದು ದಂತಕಥೆಯಿದೆ. ಬಾದಾಮಿ ಯುದ್ಧದಲ್ಲಿ ಇಮ್ಮಡಿ ಪುಲಕೇಶಿಯನ್ನು ಸೋಲಿಸಿದ ಪಲ್ಲವರ ದೊರೆ ೧ನೇ ನರಸಿಂಹವರ್ಮ ತನ್ನ ಸೇನಾಪತಿ ಪರಂಜ್ಯೋತಿಯ ಶೌರ್ಯ, ಸಾಹಸ ಮೆಚ್ಚಿ ಯುದ್ಧದಲ್ಲಿ ಲೂಟಿ ಮಾಡಿದ ಸಂಪತ್ತಿನಲ್ಲಿ ಕಾಲು ಭಾಗವನ್ನು ಕೊಡುತ್ತಾನೆ. ಪರಂಜ್ಯೋತಿ ಆಸ್ತಿಯನ್ನು ವಿಂಗಡಿಸುತ್ತಿದ್ದಾಗ ಆತನಿಗೆ ಒಂದು ಗಣಪತಿ ವಿಗ್ರಹ ಸಿಗುತ್ತದೆ. ಅದನ್ನು ನೋಡಿದ ನಂತರ ಆತನಲ್ಲಿದ್ದ ಕ್ಷಾತ್ರ ಗುಣ ಕಳೆದು ಹೋಗಿ ಸನ್ಯಾಸಿಯಾಗುತ್ತಾನೆ. ಈ ವಿಗ್ರಹವನ್ನು ತೆಗೆದುಕೊಂಡು ಒಂದು ದೇವಸ್ಥಾನದಲ್ಲಿಡುತ್ತಾನೆ. ಬಳಿಕ ಈತ ಸೇರಿ ೪೦ ಮಂದಿ ನಾಯನಾರ್‌ಗಳಾಗಿ ಪರಿವರ್ತನೆಯಾಗಿ ದೇಶ ಪರ್ಯಟನೆ ಕೈಗೊಂಡು ಶೈವ ಪಂಥವನ್ನು ಪ್ರಚಾರ ಮಾಡುತ್ತಾರೆ. ನೂರಾರು ವರ್ಷಗಳ ಬಳಿಕ ಸಂಗೀತ ವಾಗ್ಗೇಯಕಾರರಾದ ಮುತ್ತುಸ್ವಾಮಿ ದೀಕ್ಷಿತರು ಬಾದಾಮಿಯಿಂದ ತೆಗೆದುಕೊಂಡು ಹೋದ ಇದೇ ಗಣಪತಿ ವಿಗ್ರಹದ ಕುರಿತು ‘ವಾತಾಪಿ ಗಣಪತಿ’ ಕೃತಿ ರಚಿಸುತ್ತಾರೆ. ವಾತಾಪಿ ಬಾದಾಮಿಯ ಮೂಲ ಹೆಸರು. ಈ ಗಣಪತಿ ವಿಗ್ರಹ ಇಂದಿಗೂ ತಮಿಳುನಾಡಿನಲ್ಲಿ ಇದೆ. ಇಂತಹ ಇತಿಹಾಸಕ್ಕೆ ಕಾರಣರಾದ ಪರಂಜ್ಯೋತಿ ಮತ್ತು ೪೦ ನಯನಾರ್‌ಗಳ ಪ್ರತಿಮೆಗಳು ನಂಜನಗೂಡಿನ ಪ್ರತಿಷ್ಠಾಪನೆಯಾಗುತ್ತದೆ. ಪರಂಜ್ಯೋತಿಯ ಹೆಸರು ಜನಪದ ಕಥನಗಳಲ್ಲೂ ಕೇಳಿ ಬರುವ ಹೆಸರು.


ನಂಜನಗೂಡು ವಾಸ್ತುಶಿಲ್ಪ

ಕಳಲೆ ದಳವಾಯಿಗಳು ವಾಸ್ತುಶಿಲ್ಪ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ. ಕಳಲೆ ಗ್ರಾಮದಲ್ಲಿರುವ ಹಲವಾರು ದೇವಾಲಯಗಳು ಇದಕ್ಕೆ ನಿದರ್ಶನವಾಗಿದೆ. ಇಲ್ಲಿರುವ ಪ್ರಸಿದ್ದ ಲಕ್ಷ್ಮೀಕಾಂತ ದೇವಾಲಯವನ್ನು ಕಳಲೆ ಅರಸರು ನಿರ್ಮಿಸಿದರು. ಈ ಸುಂದರ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಗರ್ಭಗುಡಿಯಲ್ಲಿ ಲಕ್ಷ್ಮೀಕಾಂತನ ಪ್ರಭಾವಳಿ ಸಹಿತವಾದ ೩.೫ ಅಡಿ ಎತ್ತರವಾದ ವಿಗ್ರಹವಿದೆ. ಅಕ್ಕಪಕ್ಕದಲ್ಲಿ ಪತ್ನಿಯರ ವಿಗ್ರಹಗಳಿವೆ. ಇವೆಲ್ಲವೂ ಲೋಹದ ಪ್ರತಿಮೆಗಳಾಗಿವೆ. ದೇವಾಲಯದ ಹೆಬ್ಬಾಗಿಲಿನ ದಕ್ಷಿಣ ಮತ್ತು ಉತ್ತರಭಾಗದಲ್ಲಿ ಎರಡು ವಿಶಾಲವಾದ ಮಂಟಪಗಳಿವೆ. ಇವುಗಳನ್ನು ನವರಾತ್ರಿ ಹಾಗೂ ಕಾರ್ತಿಕ ಮಂಟಪಗಳೆಂದು ಕರೆಯುತ್ತಾರೆ. ಇಡೀ ದೇವಾಲಯ ಯಾವುದೇ ನಿರ್ದಿಷ್ಟವಾದ ಅವಧಿಯಲ್ಲಿ ನಿರ್ಮಾಣ ಗೊಳ್ಳದೆ ೧೭ ನೇ ಶತಮಾನದ ಆರಂಭದಿಂದ ೧೮ ನೇ ಶತಮಾನದ ಮದ್ಯಭಾಗ ದವರೆಗೂ ವಿವಿಧ ಹಂತಗಳಲ್ಲಿ ನಿರ್ಮಾಣಗೊಂಡಿರುವಂತೆ ಕಾಣುತ್ತದೆ

andolana

Recent Posts

ಕಾಂಕ್ರೋಚ್‌ಗಳ ಮೇಲೆ ಲಾಠಿಚಾರ್ಜ್:‌ ವಿಡಿಯೋ ನೋಡಲು ಟೈಮ್‌ ಇಲ್ಲ ಎಂದ ಸುಪ್ರೀಂಕೋರ್ಟ್‌

ನವದೆಹಲಿ: ನೀಟ್‌ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ನಡೆಸಿದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ…

11 hours ago

ಓದುಗರ ಪತ್ರ: ರೈಲಿನಲ್ಲಿ ತಿನಿಸು ಮಾರುವವರು ವೈಯಕ್ತಿಕ ಸ್ವಚ್ಛತೆಗೂ ಗಮನ ನೀಡಲಿ

ರೈಲ್ವೆ ಇಲಾಖೆಯಿಂದ ಅನುಮತಿ ಪಡೆದ ಮಾರಾಟಗಾರರು ಪ್ರತಿನಿತ್ಯ ರೈಲುಗಳಲ್ಲಿ ಕಾಫಿ, ಟೀ, ಇಡ್ಲಿ, ರೈಸ್ ಬಾತ್ ಮೊದಲಾದ ಆಹಾರ ಪದಾರ್ಥಗಳು,…

20 hours ago

ಓದುಗರ ಪತ್ರ: ‘ಗೃಹಜ್ಯೋತಿ’ ಗೊಂದಲ ನಿವಾರಿಸಿ

ಕರ್ನಾಟಕ ವಿದ್ಯುತ್ ಮಂಡಳಿಯು ರಾಜದ್ಯಂತ ಗೃಹ ಜ್ಯೋತಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಮನೆ ಬಾಗಿಲಿಗೆ ಬಂದು ಸಮೀಕ್ಷೆ ಕಾರ್ಯ ಮಾಡುತ್ತಿದೆ.…

20 hours ago

ಓದುಗರ ಪತ್ರ: ಬರಪೀಡಿತ ಜಿಲ್ಲೆಗಳೆಂದು ಘೋಷಿಸಿ

ಕರ್ನಾಟಕದಲ್ಲಿ ಶೇ.೬೦ ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದ್ದು, ಮೈಸೂರು, ವಿಜಯಪುರ, ಧಾರವಾಡ, ಗದಗ, ಬೆಳಗಾವಿ, ಕೊಪ್ಪಳ, ಕಲಬುರಗಿ,ಬೀದರ್, ಹಾಸನ, ದಾವಣಗೆರೆ,…

20 hours ago

ಓದುಗರ ಪತ್ರ: ಸಂಸತ್ ಚಲೋ ತಡೆಗೆ ನಡೆದಿತ್ತೆ ಹುನ್ನಾರ?

ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಹೊಸದಿಲ್ಲಿಯಲ್ಲಿ ಕಾಕ್ರೋಚ್ ಜನತಾ ಪಕ್ಷ…

20 hours ago

ಇ-20 ಇಂಧನಕ್ಕೆ ಭಾರತ ಪ್ರಯೋಗಾಲಯವಾಯಿತೆ?!

ಶುಭಾ ಖಟಾವಕರ ಮ್ಹೆತ್ರಸ್ ಸುಪ್ರೀಂ ಕೋರ್ಟ್‌ನಲ್ಲಿ ಸ್ವತಃ ಅಟಾರ್ನಿ ಜನರಲ್ ಹೇಳಿಕೆ! ೨೦೨೩ರ ನಂತರ ತಯಾರಾದ ವಾಹನಗಳಿಗೆ ಮಾತ್ರ ಇ-೨೦…

20 hours ago