ಎಡಿಟೋರಿಯಲ್

ಪ್ರಗತಿಶೀಲ ರಾಜ್ಯಧರ್ಮ ಅನಾವರಣ ಪ್ರಧಾನಿಯ ಪರಮ ಕರ್ತವ್ಯ

ಮಹಾಪುರುಷರ ಪ್ರತಿಮೆ ಅನಾವರಣಕ್ಕೆ ಯಾರೂ ಅಡ್ಡಬರುವುದಿಲ್ಲ. ಆದರೆ ಓಟಿನ ರಾಜಕಾರಣವನ್ನು ಆಧರಿಸಿದ ಪ್ರತಿಮೆ ಆನಾವರಣ ನಿರೀಕ್ಷಿತ ಫಲ ನೀಡುವುದಿಲ್ಲ!

ಡಾ.ಬಿ.ಪಿ.ಮಹೇಶ ಚಂದ್ರ ಗುರು

ಸ್ಮಾರ್ಟ್ ಸಿಟಿಗಿಂತ ಸ್ಮಾರ್ಟ್ ಪ್ರಜೆಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತ್ಯವಶ್ಯಕ. ಕೃಷಿ ಮತ್ತು ಗ್ರಾಮೀಣ ಕ್ಷೇತ್ರಗಳ ಅಭಿವೃದ್ಧಿಯಿಂದಲೇ ಭಾರತೀಯರ ಬದುಕು ಹಸನಾಗುತ್ತದೆಂಬ ಸತ್ಯದರ್ಶನ ನಮ್ಮನ್ನು ಆಳುವವರಿಗೆ ಶೀಘ್ರದಲ್ಲೇ ಆಗಬೇಕು. ಬಹುಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ಕನಿಷ್ಟ ಅಗತ್ಯತೆಗಳ ಪೂರೈಕೆ ಮತ್ತು ದುರ್ಬಲ ವರ್ಗಗಳ ಒಳಗೊಳ್ಳುವ ಅಭಿವೃದ್ಧಿಯಿಂದ ಮಾತ್ರ ರಾಮರಾಜ್ಯ ನಿರ್ಮಿಸಬಹುದೇ ಹೊರತು ರಾಮಮಂದಿರ ನಿರ್ಮಾಣದಿಂದಲ್ಲ ಎಂಬ ಸತ್ಯವನ್ನು ಇಂದು ನಮ್ಮನ್ನಾಳುತ್ತಿರುವ ರ್ಆಎಸ್‌ಎಸ್ ಪ್ರಾಯೋಜಿತ ಸರ್ಕಾರಿ ಬಾಂಧವರು ಮನಗಾಣಬೇಕು.

ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ನಿರ್ಮಿಸಿರುವ ೧೦೮ಅಡಿ ಎತ್ತರದ ೬೪ ಕೋಟಿ ರೂ. ಮೌಲ್ಯದ ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆಯನ್ನು ಪ್ರತಿಮೆ ಅನಾವರಣ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುಸಜ್ಜಿತ ೨ನೇ ಟರ್ಮಿನಲ್ ಲೋಕಾರ್ಪಣೆ, ಮೈಸೂರು – ಬೆಂಗಳೂರು – ಚೆನ್ನೈ ನಡುವಿನ ವಂದೇಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ಮತ್ತು ಭಾರತ್ ಗೌರವ್ ದರ್ಶನ ರೈಲಿನ ಉದ್ಘಾಟನೆ ಸೇರಿದಂತೆ ಕೆಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಾಡಿನ ಜನರ ಗಮನ ಸೆಳೆದರು.

ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಬಹಳ ಹಿಂದೆಯೇ ಮುನ್ನುಡಿ ಬರೆದ ಅಪೂರ್ವ ಆಡಳಿತಗಾರ ಮತ್ತು ಅಭಿವೃದ್ಧಿಶಿಲ್ಪಿ ಎಂಬುದು ಹೆಮ್ಮೆಯ ಸಂಗತಿ. ಮೋದಿಯವರು ಪ್ರಗತಿ ಪ್ರತಿಮೆಯನ್ನು ಅನಾವರಣಗೊಳಿಸುವುದರ ಹಿಂದೆ ಇರುವ ರಾಜಕೀಯ ಲೆಕ್ಕಾಚಾರಗಳನ್ನು ನಾಡಿನ ಜನತೆ ಅರಿಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಒಕ್ಕಲಿಗರ ಮತದ ಮೇಲೆ ಕಣ್ಣಿಟ್ಟು ಈ ಕಾರ್ಯಕ್ರಮ ಆಯೋಜಿಸಿದ್ದಲ್ಲಿ ಮೋದಿಯವರಿಗೆ ಹೆಚ್ಚಿನ ಭ್ರಮನಿರಸನ ಉಂಟಾಗುವುದರಲ್ಲಿ ಆಶ್ಚರ್ಯವಿಲ್ಲ.

ಬಹುತೇಕ ಒಕ್ಕಲಿಗರು ಜಾತ್ಯಾತೀತ ಜನತಾದಳ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡುವುದು ಖಚಿತ. ಇನ್ನೊಂದೆಡೆ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ಸ್ವಾಮೀಜಿಯವರನ್ನು ಕರ್ನಾಟಕದ ಮುಂದಿನ ಮುಖ್ಯಮಂತ್ರಿಯೆಂದು ಘೋಷಿಸಿ ಒಕ್ಕಲಿಗರ ಮತ ಸೆಳೆಯುವಲ್ಲಿ ಭಾರತೀಯ ಜನತಾಪಕ್ಷ ಖಂಡಿತ ಯಶಸ್ಸು ಗಳಿಸುವುದಿಲ್ಲ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯಾನಂದರನ್ನು ಮುಖ್ಯಮಂತ್ರಿ ಮಾಡಿದಂತೆ ಕರ್ನಾಟಕದ ರಾಜಕಾರಣವನ್ನು ಧರ್ಮ ಕಾರಣವನ್ನಾಗಿ ಪರಿವರ್ತಿಸುವುದಕ್ಕೆ ಬುದ್ಧ, ಬಸವ, ಅಂಬೇಡ್ಕರ್, ದೇವರಾಜ ಅರಸ್, ರಾಮಕೃಷ್ಣ ಹೆಗ್ಗಡೆ, ಕುವೆಂಪು ಮೊದಲಾದ ದಾರ್ಶನಿಕರು ಮತ್ತು ಬೆಂಬಲಿಗರು ಅವಕಾಶ ನೀಡುವುದಿಲ್ಲ.

ಮಹಾಪುರುಷರ ಪ್ರತಿಮೆ ಅನಾವರಣಕ್ಕೆ ಯಾರೂ ಅಡ್ಡಬರುವುದಿಲ್ಲ. ಆದರೆ ಓಟಿನ ರಾಜಕಾರಣವನ್ನು ಆಧರಿಸಿದ ಪ್ರತಿಮೆ ಆನಾವರಣ ನಿರೀಕ್ಷಿತ ಫಲ ನೀಡುವುದಿಲ್ಲ. ಬಡತನ ಮುಕ್ತ ಭಾರತ, ನಿರುದ್ಯೋಗ ಮುಕ್ತ ಭಾರತ, ಹಸಿವು ಮುಕ್ತ ಭಾರತ, ಅನಾರೋಗ್ಯ ಮುಕ್ತ ಭಾರತ, ಹಿಂದುತ್ವ ಮುಕ್ತ ಭಾರತ, ಶೋಷಣಾ ಮುಕ್ತ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿಜಿಯವರ ಕೊಡುಗೆ ನಗಣ್ಯವೆಂದೇ ಹೇಳಬಹುದು. ಮೋದಿ ಸರ್ಕಾರದ ಬಹಳಷ್ಟು ಅಭಿವೃದ್ಧಿ ಯೋಜನೆಗಳು ಬಡವರ ಕಣ್ಣೀರು ಒರೆಸುವಲ್ಲಿ ವಿಫಲವಾಗಿವೆ.

ಸುಳ್ಳು ಭರವಸೆಗಳ ಮೂಲಕ ದೇಶ ಬಾಂಧವರನ್ನು ದಾರಿತಪ್ಪಿಸುವುದನ್ನು ಮೋದಿಜಿ ನಿರಂತರವಾಗಿ ಮುಂದುವರೆಸಲು ಸಾಧ್ಯವಿಲ್ಲ.
ಶ್ರೀಮಂತರ ಅಭಿವೃದ್ಧಿ ಮತ್ತು ಶ್ರೀಮಂತರ ಸಹವಾಸದಿಂದ ಮೋದಿಜಿ ಪ್ರಬುದ್ಧ ಭಾರತ ನಿರ್ಮಿಸುವುದು ಮತ್ತು ವಿಶ್ವಗುರುವಾಗುವುದು ಸಾಧ್ಯವಿಲ್ಲ. ಇಂದು ಭಾರತದ ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು ಮೊದಲಾದ ಅಂಚಿಗೆ ನೂಕಲ್ಪಟ್ಟ ಜನವರ್ಗಗಳನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಮತ್ತು ಅಭಿವೃದ್ಧಿಪಥದಲ್ಲಿ ಸಾಂವಿಧಾನಿಕ ಆಶಯಗಳಿಗೆ ಅನುಗುಣವಾಗಿ ಮುನ್ನಡೆಸುವ ಉದಾತ್ತ ಗುಣ ಮತ್ತು ಸಾಮಥ್ರ್ಯಗಳನ್ನು ನರೇಂದ್ರಮೋದಿಯವರು ಬೆಳೆಸಿಕೊಳ್ಳಬೇಕು.

ಸ್ಮಾರ್ಟ್ ಸಿಟಿಗಿಂತ ಸ್ಮಾರ್ಟ್ ಪ್ರಜೆಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತ್ಯವಶ್ಯಕ. ಕೃಷಿ ಮತ್ತು ಗ್ರಾಮೀಣ ಕ್ಷೇತ್ರಗಳ ಅಭಿವೃದ್ಧಿಯಿಂದಲೇ ಭಾರತೀಯರ ಬದುಕು ಹಸನಾಗುತ್ತದೆಂಬ ಸತ್ಯದರ್ಶನ ನಮ್ಮನ್ನು ಆಳುವವರಿಗೆ ಶೀಘ್ರದಲ್ಲೇ ಆಗಬೇಕು. ಬಹುಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ಕನಿಷ್ಟ ಅಗತ್ಯತೆಗಳ ಪೂರೈಕೆ ಮತ್ತು ದುರ್ಬಲ ವರ್ಗಗಳ ಒಳಗೊಳ್ಳುವ ಅಭಿವೃದ್ಧಿಯಿಂದ ಮಾತ್ರ ರಾಮರಾಜ್ಯ ನಿರ್ಮಿಸಬಹುದೇ ಹೊರತು ರಾಮಮಂದಿರ ನಿರ್ಮಾಣದಿಂದಲ್ಲ ಎಂಬ ಸತ್ಯವನ್ನು ಇಂದು ನಮ್ಮನ್ನಾಳುತ್ತಿರುವ ರ್ಆಎಸ್‌ಎಸ್ ಪ್ರಾಯೋಜಿತ ಸರ್ಕಾರಿ ಬಾಂಧವರು ಮನಗಾಣಬೇಕು. ಹಿಂದುತ್ವದಿಂದ ಭಾರತದ ಉದ್ಧಾರ ಸಾಧ್ಯವಿಲ್ಲ. ಬಹುತ್ವ, ಧರ್ಮ ನಿರಪೇಕ್ಷತೆ, ಸಾಮಾಜಿಕ ಪ್ರಜಾಸತ್ತೆ, ಆರ್ಥಿಕ ಸಮಾನತೆ, ಸುಸ್ಥಿರ ಅಭಿವೃದ್ಧಿ ಮೊದಲಾದವುಗಳಿಂದ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯವಾಗುತ್ತದೆ. ಪ್ರಗತಿಶೀಲ ರಾಜ್ಯಧರ್ಮ ಅನಾವರಣ ಪ್ರಧಾನಿಯ ಪರಮ ಕರ್ತವ್ಯ ಎಂಬುದನ್ನು ಪ್ರಜ್ಞಾವಂತ ಪ್ರಜೆಗಳು ಮನವರಿಕೆ ಮಾಡಿಕೊಡಬೇಕು.

andolanait

Recent Posts

ಆಂಧ್ರದಲ್ಲಿ ಮತ್ತೆ ಕೋವಿಡ್‌ ಆತಂಕ: ಇಬ್ಬರು ಬಲಿ

ಅಮರಾವತಿ: ಆಂಧ್ರಪ್ರದೇಶದಲ್ಲಿ ಮತ್ತೆ ಕೋವಿಡ್‌ ಸೋಂಕಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ವೈಎಸ್‌ಆರ್‌ ಕಡಪ ಜಿಲ್ಲೆಯಲ್ಲಿ ಇತ್ತೀಚಿನ ವಾರಗಳಲ್ಲಿ 8 ಸಕ್ರಿಯ ಕೋವಿಡ್‌…

5 hours ago

ಪಂಚಭೂತಗಳಲ್ಲಿ ಲೀನರಾದ ಗಾನಕೋಗಿಲೆ ಎಸ್.ಜಾನಕಿ

ಮೈಸೂರು: ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಅಂತ್ಯಕ್ರಿಯೆಯು ತೆಲುಗು ಬ್ರಾಹ್ಮಣ ಕುಟುಂಬದ ಸಂಪ್ರದಾಯದಂತೆ ನೆರವೇರಿತು. ಜಾನಕಿ ಅವರ ಪುತ್ರ…

5 hours ago

ಹೇಮಾವತಿ ನದಿ ಹಿನ್ನೀರಿನಲ್ಲಿ ಕಣ್ಮರೆಯಾಗಿದ್ದ ಇಬ್ಬರ ಮೃತದೇಹ ಪತ್ತೆ

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಹೇಮಾವತಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿ ಕಣ್ಮರೆಯಾಗಿದ್ದ ಸ್ಥಳೀಯ…

7 hours ago

ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ: ಹಾರ್ಮುಜ್‌ ಜಲಸಂಧಿ ಮುಚ್ಚಿದ ಇರಾನ್‌

ಟೆಹರಾನ್:‌ ಹಾರ್ಮುಜ್‌ ಜಲಸಂಧಿಯನ್ನು ಮುಚ್ಚುವುದಾಗಿ ಐಆರ್‌ಜಿಸಿ ಘೋಷಣೆ ಮಾಡಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಅಮೇರಿಕಾ ತನ್ನ ಹಸ್ತಕ್ಷೇಪವನ್ನು ಕೊನೆಗೊಳಿಸುವವರೆಗೆ ಜಲಮಾರ್ಗವನ್ನು…

7 hours ago

ರಾಜ್ಯದಲ್ಲಿ ನೈರುತ್ಯ ಮುಂಗಾರು ಮತ್ತೆ ದುರ್ಬಲ: ತೀವ್ರಗೊಂಡ ಬರದ ಛಾಯೆ

ಬೆಂಗಳೂರು: ನೈಋತ್ಯ ಮುಂಗಾರು ಮತ್ತೆ ರಾಜ್ಯದಲ್ಲಿ ದುರ್ಬಲಗೊಂಡಿದ್ದು, ಮಳೆ ಕೊರತೆಯಿಂದಾಗಿ ಬರದ ಛಾಯೆ ತೀವ್ರವಾಗತೊಡಗಿದೆ. ಜುಲೈ ತಿಂಗಳ ಮೊದಲ ವಾರದಲ್ಲಿ…

7 hours ago

ಕಣಿಯನಹುಂಡಿ ತೋಟದ ಮನೆಯಲ್ಲಿ ನೆರವೇರಲಿದೆ ಎಸ್‌.ಜಾನಕಿ ಅವರ ಅಂತ್ಯಕ್ರಿಯೆ

ಮೈಸೂರು: ಹಿರಿಯ ಗಾಯಕಿ ಎಸ್. ಜಾನಕಿ ಅವರ ಅಂತ್ಯಕ್ರಿಯೆ ಇಂದು ಮೈಸೂರಿನ ಬೋಗಾದಿ ಬಳಿಯ ಕಣಿಯನಹುಂಡಿ ತೋಟದ ಮನೆಯಲ್ಲಿ ಸಕಲ…

8 hours ago