ಆಂದೋಲನ 50

ಯೋಗಾಚಾರ್ಯರ ನೆಲೆ ಮೈಸೂರು

ಡಾ. ಕೆ. ರಾಘವೇಂದ್ರ ಆರ್. ಪೈ

ಯೋಗ ಭಾರತದ ಶ್ರೇಷ್ಠ ಪರಂಪರೆಯ ಭಾಗ. ಸುಮಾರು ೨೫೦ ವರ್ಷಗಳಷ್ಟು ಹಿಂದೆಯೇ ಮೈಸೂರು ಸಾಹಿತ್ಯ, ಕಲೆ, ಸಂಗೀತ, ಯೋಗ, ಕ್ರೀಡೆ ಇತ್ಯಾದಿಗಳ ಬಗ್ಗೆ ಸಮಗ್ರ ಹಾಗೂ ಸಮೃದ್ಧ ಮಾಹಿತಿಯನ್ನು ನೀಡಬಲ್ಲ ಕೇಂದ್ರವಾಗಿತ್ತು. ಯೋಗ ಪರಂಪರೆಗೆ ಕೊಡುಗೆ ನೀಡಿರುವ ಮಹನೀಯರಲ್ಲಿ ಮೈಸೂರು ರಾಜಮನೆತನದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಣಿಕೆ ಮಹತ್ವದ್ದು. ಅವರ ‘ ಶ್ರೀತತ್ತ್ವನಿಧಿ’ ಕೃತಿಯಲ್ಲಿ ಪ್ರಾಚೀನ ಸಾಹಿತ್ಯ, ಕಲೆ, ಯೋಗ ಹಾಗೂ ಇತರ ವಿಷಯಗಳನ್ನೊಳಗೊಂಡ ಸಮಗ್ರ ಮಾಹಿತಿಯನ್ನು ನೀಡಲಾಗಿತ್ತು. ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ಗ್ರಂಥವನ್ನು ವ್ಯವಸ್ಥಿತವಾಗಿ ಒಂದು ಗೂಡಿಸಿದರು.

ಈ ಕೃತಿಯಲ್ಲಿ ೧೨೨ ಆಸನಗಳನ್ನು ಸಚಿತ್ರವಾಗಿ ವಿವರಿಸಿ ನೀಡಲಾಗಿದೆ. ಈ ಹಸ್ತಪ್ರತಿಯ ಆಧಾರದ ಮೇರೆಗೆ ತಿಳಿದು ಬರುವುದೆಂದರೆ ಆ ಕಾಲದಲ್ಲಿ ಯೋಗ ಚಟುವಟಿಕೆ ವಿಫುಲವಾಗಿ ನಡೆಯುತ್ತಿತ್ತು. ಗ್ರಂಥಾಧಾರ ಪ್ರಕಾರ ಈ ಪದ್ಧತಿ ಮೈಸೂರಲ್ಲಿ ಕನಿಷ್ಠ ೧೦೦ ರಿಂದ ೧೫೦ ವರ್ಷಗಳಷ್ಟು ಹಿಂದಿನದು ಎಂದು ತಿಳಿದು ಬರುತ್ತದೆ.
೧೯೩೦ರಿಂದ ೧೯೪೦ರ ತನಕ ಮೈಸೂರು ಮಹಾರಾಜರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಾಯೋಜಕತ್ವದಲ್ಲಿ ಕೃಷ್ಣಮಾಚಾರ್ಯರ ಮಾರ್ಗದರ್ಶನದೊಂದಿಗೆ ಯೋಗಶಾಲೆ ನಡೆಯುತ್ತಿತ್ತು. ಈ ಹೊತ್ತಿನಲ್ಲಿ ಬಿ.ಕೆ.ಎಸ್ ಅಯ್ಯಂಗಾರ್, ಪಟ್ಟಾಭಿ ಜೋಯಿಸರು ಅವರು ವಿದ್ಯಾರ್ಥಿಯಾಗಿದ್ದರು. ಭಾರತದ ಉದ್ದಗಲಕ್ಕೂ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಲು ಮಹಾರಾಜರು ನೆರವಿಗೆ ಬಂದರು. ಇದರ ಪರಿಣಾಮವೇ ಯೋಗವು ಪುನರುಜ್ಜೀವನಗೊಂಡು ಜನಪ್ರಿಯವಾಯಿತು. ಯೋಗದ ಆರಂಭದ ಬೆಳವಣಿಗೆಗೆ ಮುಖ್ಯವಾಗಿ ಅಯ್ಯಂಗಾರ್ ಮತ್ತು ಜೋಯಿಷರಿಗೆ ಧಾರಾಳ ನೆರವಿನ ಕೈಯನ್ನು ನೀಡಿದವರು ಮಹಾರಾಜರು.
ಕೃಷ್ಣಮಾಚಾರ್ಯರು ಬಳಸಿದ ಯೋಗ ಕಾರ್ಯವಿಧಾನಗಳಿಗೆ ‘ಶ್ರೀತತ್ವನಿಧಿ’ಯು ಒಂದು ಮೂಲಾಧಾರ ವಾಗಿ ಕಾಣುತ್ತದೆ. ಬಳಿಕ ಆ ದಾರಿಯನ್ನೇ ಅಯ್ಯಂಗಾರ್ ಮತ್ತು ಜೋಯಿಸರು ಅನುಸರಿಸಿದರು. ಕೃಷ್ಣಮೂರ್ತಿ ವಿರಚಿತ ಯೋಗಗ್ರಂಥಕ್ಕೆ ಈ ಹಸ್ತಪ್ರತಿಯೋ ಆಕರ ಗ್ರಂಥವಾಗಿ ರಾಜರ ನೆರವಿನಿಂದ ‘ಯೋಗ ಮಕರಂದ’ ಹೆಸರಲ್ಲಿ ೧೯೩೦ ರಲ್ಲಿ ಯೋಗ ಗ್ರಂಥವಾಗಿ ಬೆಳಕಿಗೆ ಬಂದಿತು.
ಇಂದು ಮೈಸೂರನ್ನು ಯೋಗ ನಗರಿಯಾಗಿ ವಿಶ್ವವೇ ಗುರುತಿಸಲು ಕಾರಣಕರ್ತರಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಹಾಗೂ ಅವರಿಂದ ರಾಜಾಶ್ರಯ ಪಡೆದ ಯೋಗ ಆಚಾರ್ಯರಾದ ಟಿ ಕೃಷ್ಣಮಾಚಾರ್ ಮತ್ತು ಅವರ ಶಿಷ್ಯರಾದ ಬಿ.ಕೆ.ಎಸ್ ಅಯ್ಯಂಗಾರ್, ಪಟ್ಟಾಭಿ ಜೋಯಿಸ್, ದೇಶಿಕಾಚಾರ್, ಇಂದ್ರಾದೇವಿ ಮುಂತಾದವರು ಯೋಗಾಭಿಮಾನವನ್ನು, ಯೋಗದರ್ಶನವನ್ನು ಮೆರೆದಿರುವರು.

 

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

8 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

35 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago