ಆಂದೋಲನ 50

ನ್ಯಾಯದ ಪರ ‘ಆಂದೋಲನ’

 

ಎಂ.ಎನ್.ಸುಮನಾ, ವಕೀಲರು
ನಮ್ಮ ತಂದೆ ಟಿ.ಎನ್.ನಾಗರಾಜ್ ಮೂಲತಃ ಸಮಾಜವಾದಿ. ಯಾವುದೇ ಸಮಾಜವಾದದ ಹೋರಾಟ ಮೂಂಚೂಣಿ ನಮ್ಮಲ್ಲಿಯೇ  ಪ್ರಾರಂಭವಾಗುತ್ತಿತ್ತು. ಆಂದೋಲನ ದಿನಪತ್ರಿಕೆ ಪ್ರಾರಂಭಕ್ಕೂ ಮುನ್ನ ಸಮಾಜವಾದದ ಹೋರಾಟಗಳಲ್ಲಿ ರಾಜಶೇಖರ ಕೋಟಿ ಅವರು ನಮ್ಮ ತಂದೆಯವರೊಂದಿಗೆ ಪಾಲ್ಗೊಳ್ಳುತ್ತಿದ್ದರು.

೧೯೮೦ರ ಹಾಸುಪಾಸಿನಲ್ಲಿ ಆಂದೋಲನ ದಿನಪತ್ರಿಕೆ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಸಮಾಜವಾದ ಹೋರಾಟದ ಹಿನ್ನೆಲೆಯಲ್ಲಿ ಆಂದೋಲನ ಪತ್ರಿಕೆ ಭಾಗವಾಗಿ ರಾಜಶೇಖರ ಕೋಟಿ ಅವರು ಪಾಲ್ಗೊಳ್ಳುತ್ತಿದ್ದರು. ನಮ್ಮ ತಂದೆ ಕಾಲನಂತರವೂ ಕೋಟಿ ಅವರೊಂದಿಗಿನ ಒಡನಾಟ ಬೆಳೆಯಿತು. ರಾಜಶೇಖರ ಕೋಟಿ ಅವರು ಮಹಿಳಾ ಸಂಘಟನೆಯ ಹೋರಾಟಗಳನ್ನು ಬೆಂಬಲಿಸಿ, ಪ್ರೋತ್ಸಾಹಿಸುತ್ತಿದ್ದರು.

೧೯೯೫ರ ವೇಳೆಗೆ ಸಮತಾ ಅಧ್ಯಯನ ಕೇಂದ್ರ ಒಂದು ಟ್ರಸ್ಟ್ ಆಗಿ ಪರಿವರ್ತನೆಯಾಯಿತು. ರಾಜಶೇಖರ ಕೋಟಿ ಅವರು ನ್ಯಾಯದ ಪರ ನಿಲ್ಲುತ್ತಿದ್ದಂತೆ ಆಂದೋಲನ ದಿನಪತ್ರಿಕೆಯೂ ನಮ್ಮ ಪರ ನಿಲ್ಲುತ್ತಿತ್ತು. ಸಮತಾ ಟ್ರಸ್ಟ್ ಸ್ಥಾಪನೆಗೆ ಸ್ಥಳದ ಕುರಿತು ವಿವಾದ ಹುಟ್ಟಿಕೊಂಡಾಗ ಆಂದೋಲನ ಪತ್ರಿಕೆ ನೈಜ ವರದಿಗಳನ್ನು ದಾಖಲಿಉತ್ತಾ ನ್ಯಾಯಸಿಗುವಂತೆ ಮಾಡಿತ್ತು.
ನಂತರ ೧೯೯೮ರಲ್ಲಿ ರಾಜಶೇಖರ ಕೋಟಿ ಅವರೊಂದಿಗೆ ಅನೇಕ ಮಹಿಳಾ ಹೋರಾಟಗಾರರು ಶಕ್ತಿಧಾಮದ ಟ್ರಸ್ಟಿಗಳಾಗಿ ಸೇರಿಕೊಂಡೆವು. ಅಲ್ಲಿನ ಅನೇಕ ಚಟುವಟಿಕೆಗಳನ್ನು ಆಂದೋಲನ ದಿನಪತ್ರಿಕೆ ಪ್ರೋತ್ಸಾಹಿಸುತ್ತಿತ್ತು.

ಒಂದೊಮ್ಮೆ ಕಾಡುಗಳ್ಳ ವೀರಪ್ಪನ್ ಡಾ.ರಾಜ್‌ಕುಮಾರ್‌ಅವರನ್ನು ಅಪಹರಿಸಿದ್ದ ಸಮಯದಲ್ಲಿ ಪಾರ್ವತಮ್ಮ ಅವರೂ ಇತ್ತ ಬರಲಾಗಲಿಲ್ಲ. ಈ ವೇಳೆ ಸುಮಾರು ೨ ವರ್ಷಗಳ ಕಾಲ ಶಕ್ತಿಧಾಮಕ್ಕೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಾಗಿತ್ತು. ಆಗ ನಮ್ಮ ಸಂಕಷ್ಟಕ್ಕೆ ಸ್ಪಂಧಿಸಿದ್ದು ರಾಜಶೇಖರ ಕೋಟಿ ಅವರು, ಸಾವಿರಾರು ರೂ. ಜಾಹೀರಾತುಗಳನ್ನು ಉಚಿತವಾಗಿ ಪತ್ರಿಕೆಯಲ್ಲಿ ಪ್ರಕಟಿಸಿಕೊಡುವ ಮೂಲಕ ಸಂಸ್ಥೆಗೆ ನೆರವಾದರು. ಸಂಸ್ಥೆಯ ಬೆಳವಣಿಗೆಗೂ ರಚನಾತ್ಮಕ ಸಲಹೆ ಸೂಚನೆ ಕೊಡುತ್ತಿದ್ದರು. ಯಾವುದೇ ಸಂದರ್ಭದಲ್ಲಿ ಸಹಾಯ ಕೇಳಿದರೂ ಸಹಕರಿಸುತ್ತಿದ್ದರು. ಅವರ ಮನೆ ಬಾಗಿಲು ಮುಚ್ಚಿದ್ದನ್ನೇ ನಾವು ನೋಡಿರಲಿಲ್ಲ.

ಮಹಿಳೆಯರು ಎಂದರೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದ ಕಾಲಘಟ್ಟದಲ್ಲಿ, ನಮ್ಮ ವಿಚಾರ ಚಿಂತೆಗಳನ್ನು ಹೊರಹಾಕಲು ವೇದಿಕೆ ಕಲ್ಪಿಸಿದ್ದು, ವೇದಿಕೆಯಾಗಿಯೇ ಇದ್ದದ್ದು ಆಂದೋಲನ ದಿನಪತ್ರಿಕೆ.

andolanait

Recent Posts

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

59 mins ago

ನಾಳೆಯೊಳಗೆ ಪ್ರಯಾಣಿಕರಿಗೆ ಮರುಪಾವತಿ ಮಾಡಿ: ಇಂಡಿಗೋ ಏರ್‌ಲೈನ್ಸ್‌ಗೆ ಗಡುವು ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…

1 hour ago

ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಮಾಜಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…

2 hours ago

ನನ್ನನ್ನು ಹೆದರಿಸ್ತೀನಿ ಅಂದ್ರೆ ಅದು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಹಾಸನ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್‌ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…

2 hours ago

ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಭರವಸೆ

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…

3 hours ago

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

3 hours ago