ಆಂದೋಲನ 50

ಮೌಲ್ಯ, ಸಾಮರಸ್ಯಗಳ ಸಂರಕ್ಷಣೆಯಾಗಲಿ : ಸುತ್ತೂರು ಶ್ರೀ

ʼಆಂದೋಲನ ೫೦ ಸಾರ್ಥಕ ಪಯಣ’ ಸಂತೋಷದ ಸಂಗತಿ. ರಾಜಶೇಖರ ಕೋಟಿ ಅವರು ಸದಾ ಧರಿಸುತ್ತಿದ್ದ ಕೆಂಪು ಟಿ-ಶರ್ಟ್ ಅನ್ನು ಆಹ್ವಾನ ಪತ್ರಿಕೆಯೇ ನೆನಪಿಗೆ ತರುತ್ತಿದೆ. ‘ಆಂದೋಲನ’ ದಿನಪತ್ರಿಕೆ ಮೈಸೂರಿನ ಸಾಕ್ಷಿಪ್ರಜ್ಞೆಯಂತಿರುವ ಒಂದು ಪ್ರಮುಖ ಸುದ್ದಿ ಮಾಧ್ಯಮ. ಅದರ ವಿಶ್ವಾಸಾರ್ಹತೆಯೇ ಅದರ ಜನಪ್ರಿಯತೆಯ ಮಾನದಂಡ, ಹಿಂದಿನ ತಲೆಮಾರಿನ ಪತ್ರಕರ್ತರ ಮೌಲ್ಯಗಳ ಸಾಕಾರ ರೂಪದಂತಿದ್ದ ರಾಜಶೇಖರ ಕೋಟಿ ಅವರು ಪತ್ರಿಕೆಯನ್ನು ಈ ಹಂತಕ್ಕೆ ತರುವಲ್ಲಿ ಪಟ್ಟ ಸಾಹಸ ಅವರ್ಣನೀಯ. ಬಹುತೇಕ ಬರಿಗೈಯಲ್ಲಿ ಪ್ರಾರಂಭವಾದ ಈ ಪತ್ರಿಕಾ ಸಾಹಸ ಸಮಾಜವಾದಿ ಸ್ನೇಹಿತರ ಕೈಯಾಸರೆಯಿಂದ ಬೆಳೆದು ಅಪಾರ  ಜನವಿಶ್ವಾಸವನ್ನು ಗಳಿಸಿರುವುದು ಸರ್ವವಿಧಿತ. ದೀನ ದಲಿತರು, ಬಡಬಗ್ಗರು, ನೊಂದವರ ಧ್ವನಿಯಾದ ಈ ಪತ್ರಿಕೆಯು ಇಂದಿನವರೆಗೂ ತಾನು ನಂಬಿದ ಮೌಲ್ಯಗಳಿಂದ ಹಿಂದೆ ಸರಿದಿಲ್ಲ. ಪತ್ರಿಕೆಯ ಸ್ಥಾಪಕ-ಸಂಪಾದಕರಾದ ರಾಜಶೇಖರ ಕೋಟಿಯವರ ಸರಳತೆ, ಸಾಮಾಜಿಕ ಬದ್ಧತೆ, ವೈಯಕ್ತಿಕ ಪರಿಶುದ್ಧತೆ ಇವುಗಳು ನಿಜಕ್ಕೂ ‘ಆಂದೋಲನ’ ಪತ್ರಿಕೆಯ ರಕ್ಷಾ ಕವಚಗಳು, ನೇರ ನಡೆ-ನುಡಿ, ಸ್ನೇಹಜೀವಿಗಳಾಗಿದ್ದ ಅವರು ತಾತ್ವಿಕ ಭಿನ್ನಾಭಿಪ್ರಾಯಗಳು ವ್ಯಕ್ತಿಗತ ಸ್ನೇಹಕ್ಕೆ ಎರವಾಗದಂತೆ ಜಾಗ್ರತೆ ವಹಿಸುತ್ತಿದ್ದರು. ನಿರ್ಮಲಾ ಕೋಟಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಿ, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಸಾಹಿತಿಗಳು, ಕಲಾವಿದರು, ಚಿಂತಕರು – ಹೀಗೆ ಎಲ್ಲರೂ  ಒಟ್ಟಿಗೇ ಭಾಗವಹಿಸಿರುವುದು ಕಾರ್ಯಕ್ರಮದ ಮತ್ತೊಂದು ವಿಶೇಷವೇ ಆಗಿದೆ.

ಯಾವುದೇ ಸಂಸ್ಥೆಯ ವಿಷಯದಲ್ಲಿ ೫೦ ವರ್ಷಗಳೆಂಬುದು ಅತ್ಯಂತ ಸಾರ್ಥಕತೆಯ ಕ್ಷಣ, ನಡೆದು ಬಂದ ದಾರಿಯ ಅವಲೋಕನ ಮಾಡಿಕೊಳ್ಳುತ್ತಲೇ ಹೊಸ ಯೋಜನೆಗಳ ನೀಲನಕ್ಷೆಯನ್ನು ರೂಪಿಸುವ ಕ್ಷಣ. ಜನಸಮುದಾಯದ ಒಳಿತಿಗಾಗಿ ಮರುಸಮರ್ಪಣೆ ಮಾಡಿಕೊಳ್ಳುವ ಕ್ಷಣ, ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಸಾಮುದಾಯಿಕ ಸಾಮರಸ್ಯವನ್ನು ಸಂರಕ್ಷಿಸಬೇಕಾದ ಕ್ಷಣ.ಪತ್ರಿಕೆ ಇದೆ ರೀತಿ ಜನರ ಪ್ರೀತಿಯ ಪತ್ರಿಕೆಯಾಗಿ ಪ್ರಕಟವಾಗುತ್ತಿರಲೆಂದು ಆಶಿಸುತ್ತೇವೆ. (ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂದೇಶ )

andolana

Recent Posts

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

2 mins ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

12 mins ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

31 mins ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

54 mins ago

ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಹಳೆ ಪ್ರಕರಣಕ್ಕೆ ಹೊಸ ಎನ್‌ಸಿಆರ್‌

ಬೆಂಗಳೂರು: ನಟ ದರ್ಶನ್‌ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಹಳೆ…

2 hours ago

ಓದುಗರ ಪತ್ರ: ಮಹಿಳಾ ಅಧಿಕಾರಿಗಳಿಗೆ ಅಭಿನಂದನೆಗಳು

ಚಾಮರಾಜನಗರದಲ್ಲಿ ಅಕ್ಟೋಬರ್ ೭ರಿಂದ ಅ. ೯ರವರೆಗೆ ಆಯೋಜಿಸಿದ್ದ ‘ಚೆಲುವ ಚಾಮರಾಜನಗರ ದಸರಾ’ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರಿಂದ…

3 hours ago