ಆಂದೋಲನ 50

ವನ್ಯಲೋಕಕ್ಕೆ ವರದಾನವಾದ ಕಬಿನಿ

 ಸ್ವಾತಂತ್ರ್ಯಪೂರ್ವದಲ್ಲಿ ಕಬಿನಿಗಿಂತ ಕಾಕನಕೋಟೆಯ ಹೆಸರೇ ಹೆಚ್ಚು ಪ್ರಚಲಿತದಲ್ಲಿತ್ತು. ಮೈಸೂರಿನ ಅರಸರಿಗೆ ಮತ್ತು ಬ್ರಿಟಿಷರಿಗೆ ಇದು ಶಿಕಾರಿ ಕೇಂದ್ರವಾಗಿತ್ತು. ಕಬಿನಿ ಜಲಾಶಯ ಈ ಪ್ರದೇಶದ ಮಾತ್ರವಲ್ಲ, ನಾಡಿನ ವನ್ಯಲೋಕದ ದಿಕ್ಕು ದೆಶೆಗಳನ್ನು ಬದಲಿಸಿತು.

 ಐದು ದಶಕಗಳ ಹಿಂದಿನ ಮಾತು. ಸ್ಥಳೀಯರಿಗೆ ಕಪಿಲೆಯಾಗಿ, ಹೊರಗಿನವರಿಗೆ ಕಬಿನಿಯಾಗಿದ್ದ ನದಿಯೊಂದು ಕಾವೇರಿಯೊಂದಿಗೆ ಲೀನಗೊಂಡು ತನ್ನ ಪಾಡಿಗೆ ತಾನು ಸಮುದ್ರ ಸೇರುತ್ತಿತ್ತು. ಕಾವೇರಿ, ತುಂಗೆ, ಭದ್ರಾ, ಕೃಷ್ಣೆ, ಭೀಮೆಗಳಿಗಿದ್ದಷ್ಟು ಪ್ರಾಮುಖ್ಯತೆ ಈ ನದಿಗೆ ಇರಲಿಲ್ಲ. ಕೇರಳದಲ್ಲಿ ಹುಟ್ಟಿ ಕರ್ನಾಟಕದ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಹರಿದು ಕಾವೇರಿಯಲ್ಲಿ ಒಂದಾಗುತ್ತಿದ್ದ ನದಿಯು ಜನರಿಗಿಂತ ಹೆಚ್ಚಾಗಿ ತನ್ನ ದಂಡೆಯ ಮೇಲೆ ವಿಶಾಲವಾಗಿ ಹರಡಿದ್ದ ನಾಗರಹೊಳೆ ಮತ್ತು ಬಂಡೀಪುರ ಕಾಡಿಗೆ ಆಸರೆಯಾಗಿತ್ತು. ಇದರ ನಡುವೆ ತಲೆಮಾರುಗಳಿಂದ ಜೀವಿಸಿದ್ದ ಒಂದಷ್ಟು ಹಾಡಿಗಳಿದ್ದವು.

೬೦ರ ದಶಕದ ಕೊನೆಯಲ್ಲಿ ಕಪಿಲಾ ನದಿಗೆ ಅಡ್ಡಲಾಗಿ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಸಮೀಪ ಕಬಿನಿ ಎಂಬ ಅಣೆಕಟ್ಟು ನಿರ್ಮಾಣದ ಪ್ರಸ್ತಾಪ ಬಂತು. ಅಲ್ಲಿ ಶತಮಾನಗಳಿಂದ ನೆಲೆ ನಿಂತಿದ್ದ ೧೦ಕ್ಕೂ ಅಧಿಕ ಗ್ರಾಮಗಳನ್ನು ಬೇರೆಡೆ ಸ್ಥಳಾಂತರ ಮಾಡುವ ಜೊತೆಗೆ, ಅಪಾರ ಪ್ರಮಾಣದ ಕಾಡನ್ನು ಕಡಿದು ಜಲಾಶಯಕ್ಕೆ ಬುನಾದಿ ಹಾಕುವ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಎದುರಾಯಿತು. ೨೨ ಹಳ್ಳಿಗಳು ಮತ್ತು ೧೪ ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಕೃಷಿ ಭೂಮಿಗೆ ನೀರು ಒದಗಿಸುವ ಉದ್ದೇಶಕ್ಕಾಗಿ ಇಷ್ಟೊಂದು ಪ್ರಮಾಣದಲ್ಲಿ ಕಾಡು ನಾಶ ಮಾಡುವ ಅವಶ್ಯಕತೆ ಇತ್ತೇ ಎಂಬ ಚರ್ಚೆಯ ನಡುವೆಯೇ ಯೋಜನೆಯ ರೂಪುರೇಷೆ ಪೂರ್ಣಗೊಂಡಿತ್ತು. ಕಾಡಿನ ಜನರ ನೆಲೆಗಳು ನದಿಪಾಲಾಯಿತು. ನೂರಾರು ಬಗೆಯ ಜೀವ ವೈವಿಧ್ಯತೆಯ ಬದುಕು ಜಲಗರ್ಭದಲ್ಲಿ ಒಂದಾಯಿತು. ೨೨೮೪ ಅಡಿ ಉದ್ದದ ೧೯.೫೨ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯ ನಿರ್ಮಾಣ ೧೯೭೪ರಲ್ಲಿ ಮುಕ್ತಾಯವಾಯಿತು.

ಕಾಡನ್ನು ನುಂಗಿ, ಕಾಡಿನ ಜನರನ್ನು ಎತ್ತಂಗಡಿ ಮಾಡಿದ ಯೋಜನೆಯೇ ಮುಂದೊಂದು ದಿನ ಈ ಸ್ಥಳಕ್ಕೆ ವಿಶ್ವ ಭೂಪಟದಲ್ಲಿ ಮಾನ್ಯತೆ ತಂದುಕೊಡುವುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಈ ಜಲಾಶಯವೇ ಮುಂದೆ ಸಾವಿರಾರು ವನ್ಯಜೀವಿಗಳಿಗೆ ನೀರ ಆಸರೆಯಾಗಿ ಅವುಗಳ ಕಾಯಂ ನೆಲೆಯಾಗಲು ಸಹಕಾರಿಯಾಯಿತು. ಕಬಿನಿಯ ಹಿನ್ನೀರು ಕಾಡಿನ ಜೀವ ವೈವಿಧ್ಯತೆಗೆ ಹೊಸ ರೂಪ ನೀಡಿತು. ಬೇಸಿಗೆಯಲ್ಲಿ ನೀರನ್ನು ಹುಡುಕಿಕೊಂಡು ಅಲೆದಾಡುತ್ತಿದ್ದ ಬಂಡೀಪುರ ಮತ್ತು ನಾಗರಹೊಳೆಯ ವನ್ಯಜೀವಿಗಳಿಗೆ ಕಾಯಂ ನೀರಿನ ಸೆಲೆ ಸಿಕ್ಕಿದ್ದು ವರದಾನವಾಯಿತು. ಕಾಡಂಚಿನಲ್ಲಿ ನಿತ್ಯ ಹಸಿರ ಹೊದಿಕೆ ಸಿಕ್ಕಿದ್ದರಿಂದ ಮೇವಿನ ಬರವೂ ನೀಗಿತು. ನೀರಾವರಿ ಜತೆಗೆ ೨೪ ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಕೂಡ ಇಲ್ಲಿ ಉತ್ಪಾದನೆಯಾಗುತ್ತಿದೆ.

andolana

Recent Posts

ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ರಾಮನಗರ: ದೇವರ ದರ್ಶನಕ್ಕೆಂದು ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗಲೇ ವ್ಯಕ್ತಿಯೋರ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಕೆಂಪನಹಳ್ಳಿ…

30 mins ago

ನಾಳೆಯಿಂದ ಬೆಳಗಾವಿಯ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ

ಬೆಂಗಳೂರು: ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭವಾಗುವ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬಿಗಿ ಭದ್ರತೆ ಆಯೋಜಿಸಲಾಗಿದೆ. ಸುಮಾರು ಆರು…

35 mins ago

ಗೋವಾದಲ್ಲಿ 25 ಮಂದಿ ಸಜೀವ ದಹನ: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಉತ್ತರ ಗೋವಾದ ಬಾಗಾ ಬೀಚ್‌ ಬಳಿಯ ಅರ್ಪೊರಾದ ನೈಟ್‌ಕ್ಲಬ್‌ ಬೀರ್ಚ್‌ ಬೈ ರೋಮಿಯೋ ಲೇನ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ…

1 hour ago

ಮೈಸೂರು| ಕಣ್ಣಿಗೆ ಕಾರದಪುಡಿ ಎರಚಿ ಹಲ್ಲೆ ಬಳಿಕ ಅಪಹರಣ

ಮೈಸೂರು: ಕಣ್ಣಿಗೆ ಕಾರದಪುಡಿ ಎರಚಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಅಪಹರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯನಗರ ಮೂರನೇ ಹಂತದಲ್ಲಿ ಈ…

1 hour ago

ಗೋವಾದಲ್ಲಿ ಘೋರ ದುರಂತ: ಬಾಗಾ ಬೀಚ್‌ ಬಳಿ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ಅವಘಡ: 25 ಮಂದಿ ಸಜೀವ ದಹನ

ಗೋವಾ: ಇಲ್ಲಿನ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 25 ಜನ ಸಾವನ್ನಪ್ಪಿದ್ದಾರೆ. ಉತ್ತರ ಗೋವಾದ ಅರ್ಪೋರಾದಲ್ಲಿರುವ ನೈಟ್‌…

1 hour ago

ಓದುಗರ ಪತ್ರ: ಅಮೃತ ಬೇಕರಿ ನಿಲ್ದಾಣದಲ್ಲಿ ಬಸ್ ತಂಗುದಾಣ ನಿರ್ಮಿಸಿ

ಮೈಸೂರಿನ ಶ್ರೀರಾಂಪುರದ ಮಾರ್ಗದಲ್ಲಿ ಬರುವ ಅಮೃತ್ ಬೇಕರಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ತಂಗುದಾಣ ಹಾಳಾಗಿದ್ದು, ಬಸ್‌ಗಾಗಿ ಕಾಯುವವರು ರಸ್ತೆಯಲ್ಲಿ ನಿಲ್ಲಬೇಕಾದ…

2 hours ago