ಆಂದೋಲನ 50

ತಿ.ನರಸೀಪುರ ತಾಲ್ಲೂಕಿನ ಸಾಧಕರಿಬ್ಬರಿಗೆ ಆತ್ಮೀಯ ಸನ್ಮಾನ

ಭತ್ತದ ತಳಿ ಸಂರಕ್ಷಕ ಎಂ.ಕೆ.ಶಂಕರ್ ಗುರು, ಕ್ರೀಡಾ ರತ್ನ ಪುರಸ್ಕೃತ ಎಂ.ವೀಣಾ ಅವರಿಗೆ ಗೌರವ ಸಲ್ಲಿಕೆ

ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನಲ್ಲಿ ‘ಆಂದೋಲನ’ ದಿನಪತ್ರಿಕೆ ೫೦ ಸಾರ್ಥಕ ಪಯಣ ಕಾರ್ಯಕ್ರಮದಲ್ಲಿ ಸಾಧಕರಿಬ್ಬರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ವಿದ್ಯೋದಯ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕರಾದ ಭತ್ತದ ತಳಿ ಸಂರಕ್ಷಕ ಎಂ.ಕೆ.ಶಂಕರ್ ಗುರು, ಕ್ರೀಡಾ ರತ್ನ ಪುರಸ್ಕೃತ ಎಂ.ವೀಣಾ ಅವರನ್ನು ಸಂಸದ ವಿ.ಶ್ರೀನಿವಾಸಪ್ರಸಾದ್, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಎಂ.ಅಶ್ವಿನ್‌ಕುಮಾರ್, ಡಾ.ಎನ್.ಎಲ್.ಭಾರತೀಶಂಕರ್ ಸಮ್ಮುಖದಲ್ಲಿ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಭತ್ತದ ತಳಿ ಸಂರಕ್ಷಕ ಎಂ.ಕೆ.ಶಂಕರ್ ಗುರು: ತಿ.ನರಸೀಪುರ ತಾಲ್ಲೂಕಿನಲ್ಲಿ ಮಾದರಹಳ್ಳಿ ಗ್ರಾಮದ ಪ್ರಗತಿ ಪರ ರೈತ ಎಂ.ಕೆ.ಶಂಕರ್ ಗುರು ಪ್ರಮುಖರು. ಕಳೆದ ಮೂರು ೩ ದಶಕಗಳಿಂದ ಭತ್ತದ ಹೊಸ ತಳಿಗಳನ್ನು ಬೆಳೆಸುವುದರ ಜೊತೆಗೆ ಸಾಂಪ್ರದಾಯಿಕ ತಳಿಗಳ ಬೀಜ ಸಂಗ್ರಹ ಮತ್ತು ಸಂರಕ್ಷಣೆುಂಲ್ಲೂ ಶಂಕರ್ ಮಹತ್ತರ ಪಾತ್ರ ವಹಿಸಿದ್ದಾರೆ.
ಶಂಕರ್ ಅಭಿವೃದ್ಧಿಪಡಿಸಿರುವ ಸುಧಾರಿತ ತಳಿ ‘ಓಒ-೨’ ಭತ್ತದ ತಳಿುಂನ್ನು ಭಾರತ ಸರ್ಕಾರದ ಸಸ್ಯ ಪ್ರಭೇದಗಳ ನೋಂದಣಿ ಸಂಸ್ಥೆಯು ಗುರುತಿಸಿ ಅನುಮೋದನೆಯು ಮುದ್ರೆ ಒತ್ತಿದೆ. 2014ರಲ್ಲಿ ಪ್ಲಾಂಟ್ ಜಿನೋಮ್ ಸೇವರ್ ಫಾರ್ಮರ್ ಮನ್ನಣೆಯನ್ನು ನೀಡಿ ಗೌರವಿಸಿದೆ. ಶಂಕರ್ ಅವರು, ‘ರತ್ನಚೂಡಿ ತಳಿ ಎಂಬ ಔಷಧಿಯ ಗುಣವುಳ್ಳ ತಳಿಯನ್ನೂ ಸಂರಕ್ಷಿಸಿದಾರೆ. ‘ಜೀರಗ ಸಣ್ಣ ಎಂಬ ಇನ್ನೊಂದು ಅಕ್ಕಿ ತಳಿ ಪರಿಮಳ ಭರಿತವಾಗಿದ್ದು ಬೆಳೆಗಾರರಲ್ಲಿ ಜನಪ್ರಿಯವಾಗಿದೆ.

ಕ್ರೀಡಾ ರತ್ನ ಪುರಸ್ಕೃತ ಎಂ.ವೀಣಾ
ತಿ.ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದ ಎಂ.ವೀಣಾ( ೨೨) ಅವರು ಖೋಖೋದಲ್ಲಿ ರಾಜ್ಯ ಸರ್ಕಾರ ನೀಡುವ ಕ್ರೀಡಾ ರತ್ನ (೨೦೧೭) ಪ್ರಶಸ್ತಿ ಪಡೆದು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದವರು. ೧೨ ವರ್ಷಗಳ ಹಿಂದೆ ೫ನೇ ತರಗತಿಯಲ್ಲಿ ಓದುತ್ತಿರುವಾಗಲೇ ವೀಣಾ ಖೋಖೋ ಆಟದ ಅಭ್ಯಾಸ ಆರಂಭಿಸಿದರು. ನಂತರ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖೋಖೋ ಪಂದ್ಯಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ. ೨೦೧೯-೨೦ನೇ ಸಾಲಿನ ೫೩ನೇ ನ್ಯಾಷನಲ್ ಸೀನಿಯರ್ಸ್ ಖೋಖೋ ಚಾಂಪಿಯನ್ ಶಿಪ್‌ನಲ್ಲಿ ರಾನ್ಸಿರಾಣಿ ಲಕ್ಷ್ಮೀಭಾಯಿ ಪ್ರಶಸ್ತಿ ಪಡೆದಿದ್ದಾರೆ. ಅಸ್ಸಾಂನಲ್ಲಿ ನಡೆದ ೧೨ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ದಿಲ್ಲಿಯಲ್ಲಿ ನಡೆದ ೪ನೇ ಏಷ್ಯನ್ ಗೇಮ್ಸ್ ಖೋಖೋ ಅಂತಾರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಇವರು ಕುರುಬೂರು ಮಹದೇವ ಸ್ವಾಮಿ ಮತ್ತು ಮಾದಲಾಂಬಿಕಾ ಅವರ ಪುತ್ರಿ, ಬಿಕಾಂ ಪದವೀಧರೆ ವೀಣಾ, ಈಗ ದೈಹಿಕ ಶಿಕ್ಷಕಿಯಾಗುವ ಉದ್ದೇಶದಿಂದ ಎಂಪಿ.ಎಡ್ ಮಾಡುತ್ತಿದ್ದಾರೆ.

 

andolanait

Recent Posts

ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ

ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…

2 hours ago

ಅರಮನೆ ಫಲಪುಷ್ಪ ಪ್ರದರ್ಶನ | ಸಂಗೀತ ಸಂಜೆಯಲ್ಲಿ ಪ್ರೇಕ್ಷಕರು ತಲ್ಲೀನ

ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…

5 hours ago

ಎತ್ತಿನ ಗಾಡಿಗೆ ಸಾರಿಗೆ ಬಸ್‌ ಡಿಕ್ಕಿ : ಎತ್ತು ಸಾವು

ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…

5 hours ago

ಮುತ್ತತ್ತಿ : ಕಾವೇರಿ ನದಿ ಸೆಳೆತಕ್ಕೆ ಸಿಲುಕಿ ಯುವಕ ಸಾವು

ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…

5 hours ago

ಪೊಲೀಸ್‌ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ ದಲಿತ ಮಹಿಳೆಯರು : ಶಾಂತಿ ಸಭೆಯಲ್ಲಿ ಪಂಚ ಬೇಡಿಕೆ

ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…

5 hours ago

ಅಕ್ರಮ ವಿದ್ಯುತ್‌ ಸಂಪರ್ಕ: 31 ಪ್ರಕರಣ ದಾಖಲು, 2.17 ಲಕ್ಷ ರೂ. ದಂಡ

ಮೈಸೂರು : ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…

5 hours ago