ಆಂದೋಲನ 50

ಹತ್ತು ಮಂದಿಯನ್ನು ಬಲಿ ಪಡೆದ ಕರಾಳ ದಿನ!

 

-ಬೆಟ್ಟಯ್ಯ ಕೋಟೆ

೫೦ನೇ ವರ್ಷ ಪೂರೈಸುತ್ತಿರುವ ‘ಆಂದೋಲನ’ ದಿನಪತ್ರಿಕೆಯು ದಲಿತ ಚಳವಳಿಯ ಬೆನ್ನೆಲುಬು ಎಂದೇ ಹೇಳಬಹುದು. ಹೌದು, ಇಲ್ಲಿನ ಸರಸ್ವತಿಪುರಂನ ಯಜಮಾನ ಪ್ರಕಾಶನದಲ್ಲಿ ನಮ್ಮ ಹಾಗೂ ರಾಜಶೇಖರ ಕೋಟಿ ಅವರ ನಡುವಿನ ಮೊದಲ ಭೇಟಿಯಾಯಿತು. ಆಗಿನ್ನೂ ‘ಆಂದೋಲನ’ ಪತ್ರಿಕೆ ಆರಂಭವಾಗಿರಲಿಲ್ಲ.

ಪತ್ರಿಕೆ ಹುಟ್ಟಿಕೊಂಡ ಆರಂಭದಲ್ಲಿ ಅದನ್ನು ಚಳವಳಿಯ ಕರಪತ್ರಗಳಂತೆ ಕೋಟಿಯವರೊಂದಿಗೆ ಸೇರಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೆವು. ಈ ನಿಟ್ಟಿನಲ್ಲಿ ಆಂದೋಲನ- ದಲಿತ ಸಂಘರ್ಷ ಸಮಿತಿ ಹಾಗೂ ಚಳವಳಿಗಳ ಜೊತೆಯಾಗಿ ಬೆಳೆದು ಬಂದಿತು. ಕೋಟಿಯವರು ದಸಂಸದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ನಾವೂ ಕೂಡ ಕೋಟಿ ಅವರನ್ನು ಹೊರತುಪಡಿಸಿ ಯಾವುದೇ ಕಾರ್ಯಕ್ರಮ ಮಾಡುತ್ತಿರಲಿಲ್ಲ. ಏಕೆಂದರೆ ಅವರೇ ನಮ್ಮ ಚಳವಳಿಗೆ ಬೆಂಗಾವಲಾಗಿ, ಬೆಂಬಲಿಗರಾಗಿ, ಮಾರ್ಗದರ್ಶಕರಾಗಿ ಬಹಳಷ್ಟು ತಮ್ಮದೇ ಆದ ಕೊಡುಗೆಯನ್ನೂ ನೀಡಿದ್ದರು.

೧೯೯೬, ಡಿ.೨೩ರಂದು ಮೈಸೂರಿನಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ‘ಶೋಷಿತರ ಐಕ್ಯತಾ ಸಮಾವೇಶ’ದ ಬ್ಯಾನರ್‌ಅಡಿಯಲ್ಲಿ ಆಚರಣೆ ಮಾಡಲಾಗುತ್ತಿತ್ತು. ಆ ದಿನ ಎಚ್.ಡಿ.ಕೋಟೆ ಭಾಗದ ಸುಮಾರು ೨ ಸಾವಿರ ದಸಂಸ ಕಾರ್ಯಕರ್ತರು ಮೈಸೂರಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ನಾನೇ ಕುಳಿತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ಅದರಲ್ಲಿದ್ದ ೧೦ ಮಂದಿ ಕಾರ್ಯಕರ್ತರು ತೀರಿಕೊಂಡರು. ಅದು ನಮ್ಮ ಪಾಲಿನ ಕರಾಳದಿನವಾಗಿತ್ತು. ಗಂಭೀರ ಹಾಗೂ ಸಣ್ಣಪುಟ್ಟ ಗಾಯಗಳಾದವರು ಬದುಕಿಕೊಂಡರು. ಅಂದು ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್ ಅವರು ತಮ್ಮದೇ ಕ್ಷೇತ್ರದಲ್ಲಿ ಅಪಘಾತದಲ್ಲಿ ಮೃತಪಟ್ಟ ಜನರಿಗೆ ಪರಿಹಾರ ನೀಡಿದರೇ ವಿನಃ, ನಮ್ಮ ಕಾರ್ಯಕರ್ತರ ನೆರವಿಗೆ ಬರಲೇ ಇಲ್ಲ. ಈ ವೇಳೆ ರಾಜಶೇಖರ ಕೋಟಿ ಅವರು ಜವಾಬ್ದಾರಿ ತೆಗೆದುಕೊಂಡು, ‘ಪತ್ರಿಕೆ’ಯ ಮೂಲಕ ವಂತಿಗೆ ಸಂಗ್ರಹಿಸಿ ನೊಂದ ಕುಟುಂಬಗಳಿಗೆ ಸಹಕರಿಸುವ ಕೆಲಸ ಮಾಡಿದರು. ಹಾಗಾಗಿ ಮೈಸೂರಿನಲ್ಲಿ ದಲಿತ ಚಳವಳಿಗೆ ಭರವಸೆಯ ಬೆಳಕಾಗಿ ‘ಆಂದೋಲನ’ ಪತ್ರಿಕೆ ಹಾಗೂ ಕೋಟಿ ಅವರು ನಿಂತರು. ದಸಂಸ ಚಳವಳಿ ಮೈಸೂರಿನಲ್ಲಿ ತನ್ನ ನೆಲೆ ಗಟ್ಟಿಗೊಳಿಸಿಕೊಳ್ಳಲು ಕೋಟಿ ಅವರೇ ಕಾರಣ. ಅವರ ಆದರ್ಶಗಳನ್ನು ಇನ್ನಷ್ಟು ಹೆಚ್ಚಾಗಿ ಮೈಗೂಡಿಸಿಕೊಳ್ಳಬೇಕಿದೆ.

ಜೈಲಿನಲ್ಲಿದ್ದಾಗ ನೆರವಿಗೆ ನಿಂತ ‘ಆಂದೋಲನ’
ಧರ್ಮಾಪುರದಲ್ಲಿ ಭೂ ಅಕ್ರಮ ಹೋರಾಟದ ಸಂದರ್ಭದಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆಗಳು ದಸಂಸ ಕಾರ್ಯಕರ್ತರನ್ನು ಬಂಧಿಸಿ, ದೌರ್ಜನ್ಯವನ್ನೂ ನಡೆಸುತ್ತಿತ್ತು. ಈ ವೇಳೆ ‘ಆಂದೋಲನ’ ದಿನಪತ್ರಿಕೆ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಹೋರಾಟದ ರೂಪುರೇಷೆಗಳನ್ನು, ಅರಣ್ಯ ಮತ್ತು ಪೊಲೀಸ್ ಇಲಾಖೆಗಳ ಅಕ್ರಮಗಳನ್ನು ಬಯಲಿಗೆಳೆಯುತ್ತಾ ಲೇಖನಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದು ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಯಿತು. ಹಾಗಾಗಿ ದಲಿತ ಸಂಘರ್ಷ ಸಮಿತಿಯ ಎಲ್ಲ ಹೋರಾಟಗಳಲ್ಲೂ ‘ಆಂದೋಲನ’ದ ಕುರುಹು ಇದೆ.

andolanait

Recent Posts

ಟಿವಿಕೆ ಗೆಲುವು : ಹನೂರಲ್ಲಿ ಸಂಭ್ರಮಾಚರಣೆ

ಹನೂರು : ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿರುವುದಕ್ಕೆ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ…

11 hours ago

ಪ.ಬಂಗಾಳ | ವಿಟೋ ಅಧಿಕಾರ ಬಳಸಿ ಮಂತ್ರಿಮಂಡಳ ವಿಸರ್ಜಿಸಿದ ರಾಜ್ಯಪಾಲ ; ದೀದಿಗೆ ಹಿನ್ನೆಡೆ

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಬಹು ಮತ ಗಳಿಸದೇ ಸೋಲನ್ನು ಅನುಭವಿಸಿದರೂ ಮುಖ್ಯಮಂತ್ರಿ…

11 hours ago

ಹನೂರು | ಕಾಡು ಹಂದಿ ದಾಳಿ ; ರೈತನಿಗೆ ಗಂಭೀರ ಗಾಯ

ಹನೂರು : ತಾಲ್ಲೂಕಿನ ದಿನ್ನಳ್ಳಿ ರಸ್ತೆಯ ಸಮೀಪದ ಜಮೀನೊಂದರಲ್ಲಿ ಕಾಡು ಹಂದಿ ದಾಳಿ ನಡೆಸಿ ರೈತನಿಗೆ ಗಂಭೀರ ಗಾಯಗೊಳಿಸಿರುವ ಘಟನೆ…

11 hours ago

ಡಿಎಂಕೆ-ಎಐಎಡಿಎಂಕೆ ಮೈತ್ರಿ ವದಂತಿ ; ಸ್ಟಾಲಿನ್‌ ಹೇಳಿದ್ದೇನು?

ಚೆನ್ನೆ : ತಮಿಳುನಾಡಿನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಸರ್ಕಾರ ರಚನೆಯ ಕಸರತ್ತು ಜೋರಾಗಿದೆ. 108 ಸ್ಥಾನಗಳೊಂದಿಗೆ ಅತಿ ದೊಡ್ಡ…

12 hours ago

ಮೇಲು-ಕೀಳು ಕಳೆಯಲಿ ; ಸರ್ವರೂ ಒಂದೇ ಎಂಬ ಮನೋಭಾವ ಮೂಡಲಿ : ಮೋಹನ್‌ ಭಾಗವತ್‌

ಮೈಸೂರು : ಮೇಲು-ಕೀಳು ಎಂಬ ಮನೋಭಾವ ಕಳೆದು ಸರ್ವರೂ ಒಂದೇ ಎಂಬ ಏಕ ಭಾವ ಭಾರತೀಯರಲ್ಲಿ ಮೂಡಬೇಕು ಎಂದು ರಾಷ್ಟ್ರೀಯ…

12 hours ago

ಬೆಂಗಳೂರು ಕೈತಪ್ಪಿದ ಐಪಿಎಲ್‌ ಫೈನಲ್‌ ಪಂದ್ಯ : ಕೆಎಸ್‌ಸಿಎ ಹೇಳಿದ್ದೇನು?

ಬೆಂಗಳೂರು : ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್) 2026ರ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಧಿಕೃತವಾಗಿ ಸ್ಥಳಾಂತರಿಸಿದ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್…

12 hours ago