ಆಂದೋಲನ 50

ಹತ್ತು ಮಂದಿಯನ್ನು ಬಲಿ ಪಡೆದ ಕರಾಳ ದಿನ!

 

-ಬೆಟ್ಟಯ್ಯ ಕೋಟೆ

೫೦ನೇ ವರ್ಷ ಪೂರೈಸುತ್ತಿರುವ ‘ಆಂದೋಲನ’ ದಿನಪತ್ರಿಕೆಯು ದಲಿತ ಚಳವಳಿಯ ಬೆನ್ನೆಲುಬು ಎಂದೇ ಹೇಳಬಹುದು. ಹೌದು, ಇಲ್ಲಿನ ಸರಸ್ವತಿಪುರಂನ ಯಜಮಾನ ಪ್ರಕಾಶನದಲ್ಲಿ ನಮ್ಮ ಹಾಗೂ ರಾಜಶೇಖರ ಕೋಟಿ ಅವರ ನಡುವಿನ ಮೊದಲ ಭೇಟಿಯಾಯಿತು. ಆಗಿನ್ನೂ ‘ಆಂದೋಲನ’ ಪತ್ರಿಕೆ ಆರಂಭವಾಗಿರಲಿಲ್ಲ.

ಪತ್ರಿಕೆ ಹುಟ್ಟಿಕೊಂಡ ಆರಂಭದಲ್ಲಿ ಅದನ್ನು ಚಳವಳಿಯ ಕರಪತ್ರಗಳಂತೆ ಕೋಟಿಯವರೊಂದಿಗೆ ಸೇರಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೆವು. ಈ ನಿಟ್ಟಿನಲ್ಲಿ ಆಂದೋಲನ- ದಲಿತ ಸಂಘರ್ಷ ಸಮಿತಿ ಹಾಗೂ ಚಳವಳಿಗಳ ಜೊತೆಯಾಗಿ ಬೆಳೆದು ಬಂದಿತು. ಕೋಟಿಯವರು ದಸಂಸದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ನಾವೂ ಕೂಡ ಕೋಟಿ ಅವರನ್ನು ಹೊರತುಪಡಿಸಿ ಯಾವುದೇ ಕಾರ್ಯಕ್ರಮ ಮಾಡುತ್ತಿರಲಿಲ್ಲ. ಏಕೆಂದರೆ ಅವರೇ ನಮ್ಮ ಚಳವಳಿಗೆ ಬೆಂಗಾವಲಾಗಿ, ಬೆಂಬಲಿಗರಾಗಿ, ಮಾರ್ಗದರ್ಶಕರಾಗಿ ಬಹಳಷ್ಟು ತಮ್ಮದೇ ಆದ ಕೊಡುಗೆಯನ್ನೂ ನೀಡಿದ್ದರು.

೧೯೯೬, ಡಿ.೨೩ರಂದು ಮೈಸೂರಿನಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ‘ಶೋಷಿತರ ಐಕ್ಯತಾ ಸಮಾವೇಶ’ದ ಬ್ಯಾನರ್‌ಅಡಿಯಲ್ಲಿ ಆಚರಣೆ ಮಾಡಲಾಗುತ್ತಿತ್ತು. ಆ ದಿನ ಎಚ್.ಡಿ.ಕೋಟೆ ಭಾಗದ ಸುಮಾರು ೨ ಸಾವಿರ ದಸಂಸ ಕಾರ್ಯಕರ್ತರು ಮೈಸೂರಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ನಾನೇ ಕುಳಿತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ಅದರಲ್ಲಿದ್ದ ೧೦ ಮಂದಿ ಕಾರ್ಯಕರ್ತರು ತೀರಿಕೊಂಡರು. ಅದು ನಮ್ಮ ಪಾಲಿನ ಕರಾಳದಿನವಾಗಿತ್ತು. ಗಂಭೀರ ಹಾಗೂ ಸಣ್ಣಪುಟ್ಟ ಗಾಯಗಳಾದವರು ಬದುಕಿಕೊಂಡರು. ಅಂದು ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್ ಅವರು ತಮ್ಮದೇ ಕ್ಷೇತ್ರದಲ್ಲಿ ಅಪಘಾತದಲ್ಲಿ ಮೃತಪಟ್ಟ ಜನರಿಗೆ ಪರಿಹಾರ ನೀಡಿದರೇ ವಿನಃ, ನಮ್ಮ ಕಾರ್ಯಕರ್ತರ ನೆರವಿಗೆ ಬರಲೇ ಇಲ್ಲ. ಈ ವೇಳೆ ರಾಜಶೇಖರ ಕೋಟಿ ಅವರು ಜವಾಬ್ದಾರಿ ತೆಗೆದುಕೊಂಡು, ‘ಪತ್ರಿಕೆ’ಯ ಮೂಲಕ ವಂತಿಗೆ ಸಂಗ್ರಹಿಸಿ ನೊಂದ ಕುಟುಂಬಗಳಿಗೆ ಸಹಕರಿಸುವ ಕೆಲಸ ಮಾಡಿದರು. ಹಾಗಾಗಿ ಮೈಸೂರಿನಲ್ಲಿ ದಲಿತ ಚಳವಳಿಗೆ ಭರವಸೆಯ ಬೆಳಕಾಗಿ ‘ಆಂದೋಲನ’ ಪತ್ರಿಕೆ ಹಾಗೂ ಕೋಟಿ ಅವರು ನಿಂತರು. ದಸಂಸ ಚಳವಳಿ ಮೈಸೂರಿನಲ್ಲಿ ತನ್ನ ನೆಲೆ ಗಟ್ಟಿಗೊಳಿಸಿಕೊಳ್ಳಲು ಕೋಟಿ ಅವರೇ ಕಾರಣ. ಅವರ ಆದರ್ಶಗಳನ್ನು ಇನ್ನಷ್ಟು ಹೆಚ್ಚಾಗಿ ಮೈಗೂಡಿಸಿಕೊಳ್ಳಬೇಕಿದೆ.

ಜೈಲಿನಲ್ಲಿದ್ದಾಗ ನೆರವಿಗೆ ನಿಂತ ‘ಆಂದೋಲನ’
ಧರ್ಮಾಪುರದಲ್ಲಿ ಭೂ ಅಕ್ರಮ ಹೋರಾಟದ ಸಂದರ್ಭದಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆಗಳು ದಸಂಸ ಕಾರ್ಯಕರ್ತರನ್ನು ಬಂಧಿಸಿ, ದೌರ್ಜನ್ಯವನ್ನೂ ನಡೆಸುತ್ತಿತ್ತು. ಈ ವೇಳೆ ‘ಆಂದೋಲನ’ ದಿನಪತ್ರಿಕೆ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಹೋರಾಟದ ರೂಪುರೇಷೆಗಳನ್ನು, ಅರಣ್ಯ ಮತ್ತು ಪೊಲೀಸ್ ಇಲಾಖೆಗಳ ಅಕ್ರಮಗಳನ್ನು ಬಯಲಿಗೆಳೆಯುತ್ತಾ ಲೇಖನಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದು ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಯಿತು. ಹಾಗಾಗಿ ದಲಿತ ಸಂಘರ್ಷ ಸಮಿತಿಯ ಎಲ್ಲ ಹೋರಾಟಗಳಲ್ಲೂ ‘ಆಂದೋಲನ’ದ ಕುರುಹು ಇದೆ.

andolanait

Recent Posts

ಶೀಘ್ರದಲ್ಲೇ ರಾಜ್ಯದಲ್ಲಿ ಗುಟ್ಕಾ ನಿಷೇಧ ಆದೇಶ ವಾಪಸ್?‌

ಬೆಂಗಳೂರು: ಗುಟ್ಕಾ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ವಾಪಸ್‌ ಪಡೆಯುವ ಸಾಧ್ಯತೆಯಿದೆ. ಆಡಳಿತರೂಢ ಕಾಂಗ್ರೆಸ್‌ ಶಾಸಕರಿಂದಲೇ ಸರ್ಕಾರದ ನಿರ್ಧಾರಕ್ಕೆ…

41 mins ago

6 ದಿನಗಳಾದರೂ ಸಿಗದ ಟೆಕ್ಕಿ ಅದ್ವೈತ್‌ ಸುಳಿವು: ಶಿವಗಂಗೆ ಬೆಟ್ಟದಲ್ಲಿ ಶೋಧ ಕಾರ್ಯಾಚರಣೆ ಸ್ಥಗಿತ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಟದ್ವೈತ್‌ಗಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ…

2 hours ago

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್.ಪಾಟೀಲ್‌ ಸರ್ವಾನುಮತದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್.‌ಅಶೋಕ್‌ ಹಾಗೂ ಸಿಎಂ ಡಿ.ಕೆ.ಶಿವಕುಮಾರ್‌…

3 hours ago

ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗಕ್ಕೆ ನುಗ್ಗಿದ ನೀರು: 7 ಮಂದಿ ಕಾರ್ಮಿಕರು ಸಾವು

ಡೆಹ್ರಾಡೂನ್:‌ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್‌ ಯೋಜನೆಗೆ ಸಂಬಂಧಿಸಿದ ಸುರಂಗದೊಳಗೆ ಏಕಾಏಕಿ ನೀರು ಮತ್ತು ಮಣ್ಣಿನ ಅವಶೇಷಗಳು…

5 hours ago

ಓದುಗರ ಪತ್ರ: ಸ್ವಾಗತಾರ್ಹ ಸಂಕಲ್ಪ!

ಸ್ವಾಗತಾರ್ಹ ಸಂಕಲ್ಪ! ಮತ್ತೆ ಗುಡಿಗಿದ್ದಾರೆ ಮುಖ್ಯಮಂತ್ರಿಗಳು ‘ಭ್ರಷ್ಟಾಚಾರಿಗಳ ಬಡಿದು ಹಾಕುವೆ’ಎಂದು ಅಭಿವೃದ್ಧಿಗೆ ಮಾರಕ ಪ್ರಜೆಗಳ ಶೋಷಕ ಈ ಭ್ರಷ್ಟಾಚಾರ ಎಂಬ…

8 hours ago

ಓದುಗರ ಪತ್ರ: ಸತ್ಪ್ರಜೆಗಳಾಗಿ ಜೀವಿಸುವುದೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ನೀಡುವ ಗೌರವ

ಆಗಸ್ಟ್ ಹದಿನೈದು ಬಂತೆಂದರೆ ಸಾಕು, ನಮ್ಮಲ್ಲಿ ದೇಶಪ್ರೇಮದ ರೋಮಾಂಚನ. ಶಾಲೆ-ಕಚೇರಿಗಳಲ್ಲಿ ರಾಷ್ಟ್ರಧ್ವಜರೋಹಣ, ಸಿಹಿತಿಂಡಿ ಹಂಚಿಕೆ, ದೇಶಭಕ್ತಿ ಗೀತೆಗಳು ಮತ್ತು ಭಾಷಣಗಳು…

8 hours ago