ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮಕ್ಕೆ ೧೯೨೭ರಲ್ಲಿ ಭೇಟಿ ನೀಡಿದ್ದ ಮಹಾತ್ಮಾ ಗಾಂಧಿ ಅವರು ಬದನವಾಳು ನೂಲುವ ಪ್ರಾಂತ್ಯ ಎಂಬ ಕಲ್ಲನ್ನು ಶಿಲಾನ್ಯಾಸ ಮಾಡಿದರು. ಆ ಮೂಲಕ ಬದನವಾಳು ಖಾದಿ ಗ್ರಾಮೋದ್ಯೋಗ ಸಹಕಾರ ಸಂಘ ಎಂಬ ಸಂಸ್ಥೆ ಉದಯಕ್ಕೆ ಕಾರಣರಾದರು. ಆನಂತರ ಬದನವಾಳಿನಲ್ಲಿ ಖಾದಿ ಬಟ್ಟೆ, ಅವಲಕ್ಕಿ, ಎಣ್ಣೆ, ಬೆಂಕಿ ಪೊಟ್ಟಣ, ಕಾಗದ ತಯಾರಿ ಸೇರಿದಂತೆ ೧೪ಕ್ಕೂ ಹೆಚ್ಚು ಬಗೆಯ ಸ್ವದೇಶಿ ಉತ್ಪನ್ನಗಳನ್ನು ತಯಾರಿಸುವ ಕಾರ್ಯ ಆರಂಭಗೊಂಡಿತ್ತು. ಮತ್ತೊಮ್ಮೆ
೧೯೩೨ರಲ್ಲಿ ಬದನವಾಳಿಗೆ ಭೇಟಿ ನೀಡಿದ ಗಾಂಧೀಜಿ, ಸುಮಾರು ೭೦೦ಕ್ಕೂ ಹೆಚ್ಚು ಮಂದಿ ಕೆಲಸ ನಿರ್ವಹಿಸುವ ಮೂಲಕ ಗ್ರಾಮೀಣ ಉದ್ಯೋಗಾವಕಾಶದ ಕೇಂದ್ರವಾಗಿದ್ದ ಬದನವಾಳನ್ನು ನೋಡಿ ಖುಷಿಪಟ್ಟಿದ್ದಾರೆ ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.
ಕೈಗಾರಿಕೋದ್ಯಮ ಜಾಸ್ತಿಯಾದಂತೆ ಬದನವಾಳು ಕೇಂದ್ರದಲ್ಲಿ ಚಟುವಟಿಕೆ ಕಡಿಮೆಯಾಗತೊಡಗಿತು. ೧೯೮೬ರ ವೇಳೆ ಮುಚ್ಚುವ ಹಂತಕ್ಕೆ ತಲುಪಿದ್ದ ಬದನವಾಳು ಖಾದಿ ಕೇಂದ್ರವನ್ನು ಹೊಳೆ ನರಸೀಪುರ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಕ್ಕೆ ಹಸ್ತಾಂತರಿಸುವ ಮೂಲಕ ಪುನಶ್ಚೇತನ ಕಾರ್ಯನಡೆಯಿತು. ಅಂದಿನಿಂದ ನಡೆದುಕೊಂಡು ಬಂದ ಕೇಂದ್ರದಲ್ಲಿ ಇದೀಗ ಒಂದಷ್ಟು ಸುಧಾರಣೆ ಕಂಡುಬಂದಿದ್ದು ೨೦೧೬-೧೭ನೇ ಸಾಲಿನಲ್ಲಿ ಬದನವಳೂ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ೨೦ ಲಕ್ಷ ರೂ.ಗೂ ಹೆಚ್ಚು ಮೊತ್ತದ ನೂಲು ಮತ್ತು ಖಾದಿ ಉತ್ಪನ್ನಗಳ ಮಾರಾಟ ಮಾಡಿ ಗಮನ ಸೆಳೆದಿದೆ.
ವ್ಯಾಟಿಕನ್ : ಕಳೆದ ಸೋಮವಾರ ನಿಧನರಾದ ಪೋಪ್ ಫ್ರಾನ್ಸಿಸ್ ಅವರ ಅಂತ್ಯಸಂಸ್ಕಾರದ ಪ್ರಕ್ರಿಯೆಗಳು ವ್ಯಾಟಿಕನ್ ಸಿಟಿಯ ಬೆಸಿಲಕಾದಾ ಸಾಂಟಾ ಮಾರಿಯ…
ಮೈಸೂರು: ನಾನು ಯುದ್ದದ ಪರ ಅಲ್ಲ, ಶಾಂತಿಯ ಪರ. ಯುದ್ದದ ಬದಲು ಪಾಕಿಸ್ತಾನ ಮತ್ತು ಉಗ್ರರ ವಿರುದ್ಧ ಕಠಿಣ ಕ್ರಮ…
ಮೈಸೂರು : ಕೇಂದ್ರ ಸರ್ಕಾರದ ಸೂಚನೆಯಂತೆ, ಕರ್ನಾಟಕ ರಾಜ್ಯದಲ್ಲಿರಬಹುದಾದ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಮಾಹಿತಿ ಕಲೆಹಾಕಿ, ಅವರನ್ನು ವಾಪಸ್ಸು ಕಳಿಸಲು…
ಮೈಸೂರು : ಸಂಘ ಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟಕ್ಕೆ ಬರಲೇ ಇಲ್ಲ. ಈಗ ದೇಶಭಕ್ತಿ ಬಗ್ಗೆ ಮಾತಾಡ್ತಾರೆ. ಸಾವರ್ಕರ್ ಮತ್ತು…
ಮೈಸೂರು : ಇಲ್ಲಿನ ಬಿಜೆಪಿ ಕಚೇರಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಶನಿವಾರ ಭೇಟಿ ನೀಡಿದರು. ಸೌಜನ್ಯಯುತ…
ಚಾಮರಾಜನಗರ : ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ದೊರಕದೆ ಮೃ*ತಪಟ್ಟ ಕುಟುಂಬಗಳಿಗೆ ಸರಕಾರಿ ನೌಕರಿ ನೀಡುವ ಬಗ್ಗೆ ಮಲೆ ಮಹದೇಶ್ವರ…