ಆಂದೋಲನ 50

ಸಾಮಾಜಿಕ ನ್ಯಾಯಕ್ಕಾಗಿ ಸದಾ ಬದ್ಧವಾದ ಆಂದೋಲನ ; ಭಾಗ-3

ಬದನವಾಳು ದುರಂತ: ವೃತ್ತಿ ಧರ್ಮಕ್ಕೆ ಚ್ಯುತಿ ತಾರದ ‘ಆಂದೋಲನ’

-ಶ್ರೀಧರ್ ಆರ್ ಭಟ್ಟ

ಗಾಂಧೀಜಿ ಭೇಟಿ ನೀಡಿದ್ದ ಬದನವಾಳು ಗ್ರಾಮದಲ್ಲಿ ನಡೆದ ದುರಂತದ ಕಪ್ಪುಚುಕ್ಕಿ ಈಗ ಇತಿಹಾಸದ ಪುಟದಲ್ಲಿ ಸೇರಿ ಹೋಗಿದೆ. ಅದಾಗಿ ಈಗಾಗಲೇ ೨೯ ವರ್ಷಗಳೇ ಗತಿಸಿ ಹೋಗಿವೆ. ೧೯೯೩ರ ಆರಂಭದಲ್ಲೇ ಇಲ್ಲೊಂದು ಅಮಾನವೀಯ ಘಟನೆ ನಡೆದು ಕಡು ದ್ವೇಷ, ಅಸೂೆುಂಗಳ ಗೂಡಾಗಿ ದುರಂತಕ್ಕೆ ಕಾರಣವಾಗಿ ಹೋಯಿತು.

೧೯೯೩ರ ಜನವರಿಯಲ್ಲಿ ಆರಂಭವಾದ ಈ ದುರಂತದ ವಿವರಗಳನ್ನು ನಿರ್ಭೀತವಾಗಿ ಪ್ರಕಟಿಸಿದ ಏಕೈಕ ದಿನಪತ್ರಿಕೆ ‘ಆಂದೋಲನ’ ಎಂದರೆ ತಪ್ಪಾಗಲಾರದು.

‘ಆಂದೋಲನ’ ಸಂಪಾದಕರಾಗಿದ್ದ ರಾಜಶೇಖರ ಕೋಟಿಯವರು ಸತ್ಯಸಂಗತಿಯ ವರದಿಗಳನ್ನು ಯಾವುದೇ ಮುಲಾಜಿಲ್ಲದೆ ಪ್ರಕಟಿಸುವ ಮೂಲಕ ‘ನಾನಿದ್ದೇನೆ’ ಎಂಬ ಸ್ಪಷ್ಟ ಸಂದೇಶವೂ ರವಾನಿಸಿದಂತೆ ಕೆಲಸ ನಡೆದಿತ್ತು. ನಂಜನಗೂಡು ತಾಲ್ಲೂಕು ಬದನವಾಳು ಗ್ರಾಮದ ಹೊರವಲಯದಲ್ಲಿರುವ ಶ್ರೀ ಸಿದ್ಧೇಶ್ವರ ದೇವಾಲಯದ ಪ್ರವೇಶವೇ ಈ ದುರಂತಕ್ಕೆ ಮೂಲವಾಗಿತ್ತು.ಬೂದಿ ಮುಚ್ಚಿದ ಕೆಂಡವಾಗಿದ್ದ ಪರಸ್ಪರರ ಅನುಮಾನದ ಹುತ್ತ ಒಡೆಯಲು ದೇವಾಲಯದ ಪ್ರವೇಶ ನೆಪವಾಯಿತು.

ಜನವರಿ ೩೦, ೧೯೯೩ ರಂದು ನಿಗದಿಯಾಗಿದ್ದ ಈ ದೇವಾಲಯದ ಉದ್ಘಾಟನಾ ಸಮಾರಂಭದಿಂದ ಆರಂಭವಾದ ‘ಆಂದೋಲನ’ ಬದನವಾಳಿನ ವರದಿ ಮಾರ್ಚ್ ೨೫, ೧೯೯೩ರಂದು ನಡೆದ ದಲಿತರ ಹತ್ಯೆ, ನಂತರ ನಡೆದ ಪರ ವಿರೋಧ ಮೆರವಣಿಗೆ, ಏಪ್ರಿಲ್ ೨೬ ರಂದು ನಡೆದ ಗೋಲಿಬಾರ್ ಹಾಗೂ ಅದರ ದಳ್ಳುರಿಯ ಸುದ್ದಿ ..ಇದೆಲ್ಲವನ್ನೂ ಸವಿವರವಾಗಿ ವರದಿ ಮಾಡಿದ್ದ ‘ಆಂದೋಲನ’ ಪತ್ರಿಕಾ ಧರ್ಮದ ಇತಿ ಮಿತಿಯಲ್ಲಿ ಸಮಾಜದ ಸೇತುವಾಗಿಯೂ ಕೆಲಸ ಮಾಡಿತು. ತನ್ನ ನಿಷ್ಠುರ ವರದಿಗಳಿಂದಾಗಿ ಪತ್ರಿಕೆ ಪರ-ವಿರೋಧಿಗಳ ಹೊಗಳಿಕೆ, ತೆಗಳಿಕೆಗಳನ್ನೂ ಅಂದು ಎದುರಿಸಬೇಕಾಯಿತು.
ಆದರೂ ಅಂದಿನ ‘ಆಂದೋಲನ’ ಸಂಪಾದಕ ಮಂಡಳಿ ಎದೆಗುಂದದೆ ಈ ವಿಷಯವನ್ನು ನಿರ್ಭೀತಿಯಿಂದ ವರದಿ ಮಾಡಿ ಈ ಭಾಗದ ಜನಸಾಮಾನ್ಯರ ಪ್ರೀತಿ ಮತ್ತು ಅಭಿಮಾನಕ್ಕೆ ‘ಪತ್ರಿಕೆ’ ಕಾರಣವಾಯಿತು.

andolana

Recent Posts

ನೇಪಾಳದಲ್ಲಿ ಭೀಕರ ಪ್ರವಾಹ ; ಭಾರತೀಯರ ನೆರವಿಗೆ ಸಹಾಯವಾಣಿ ಆರಂಭ

ಕಠ್ಮಂಡು : ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಂತ್ರಸ್ತರಾಗಿರುವ ಭಾರತೀಯ ಪ್ರಜೆಗಳ ನೆರವಿಗಾಗಿ ಭಾರತವು ಸಹಾಯವಾಣಿ ಆರಂಭಿಸಿದೆ.…

7 hours ago

ಸಂಪುಟದಲ್ಲಿ ಚರ್ಚಿಸಿ ಬರ ಘೋಷಣೆ ; ಡಿಸಿಎಂ ಪರಮೇಶ್ವರ್‌

ಬೆಂಗಳೂರು : ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ಅವಲೋಕನ ನಡೆಯುತ್ತಿದೆ. 102 ತಾಲ್ಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದ್ದು, ಮುಂದಿನ…

8 hours ago

ಸ್ವಚ್ಛತಾ ಅಭಿಯಾನ | ವಿವಿಧೆಡೆ 15 ಟನ್‌ ತ್ಯಾಜ್ಯ ವಿಲೇವಾರಿ

ಮೈಸೂರು : 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಹಾನಗರ ಪಾಲಿಕೆಯ ವತಿಯಿಂದ 80 ಜಿವಿಪಿ ನಿರ್ಮೂಲನೆ ಅಭಿಯಾನದಲ್ಲಿ ಮಂಗಳವಾರ ವಲಯ-3ರ ವ್ಯಾಪ್ತಿಗೆ…

9 hours ago

ನೇಪಾಳ ಪ್ರವಾಹ | 105 ಭಾರತೀಯರು ಸೇರಿ 400 ಮಂದಿ ನಾಪತ್ತೆ

ಕಠ್ಮಂಡು : ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಉತ್ತರದ ರಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಕನಿಷ್ಠ…

10 hours ago

ನೇಪಾಳದಲ್ಲಿ ಭೀಕರ ಪ್ರವಾಹ | ಹತ್ತಾರು ಹಳ್ಳಿಗಳು ಜಲಾವೃತ ; ನಾಪತ್ತೆಯಾದ ಪ್ರವಾಸಿಗರು

ಕಠ್ಮಂಡು : ನೆರೆಯ ರಾಷ್ಟ್ರ ನೇಪಾಳದಲ್ಲಿ ಹಿಮಕುಸಿತದ ಪರಿಣಾಮ ಉಂಟಾದ ಭೀಕರ ಆಕಸ್ಮಿಕ ಪ್ರವಾಹ ಜಲಪ್ರಳಯವನ್ನೇ ಸೃಷ್ಟಿಸಿದೆ. ಕೋಶಿ ನದಿಯ…

10 hours ago

ರಾಜೀನಾಮೆ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ: ಸಚಿವ ನಾಗೇಂದ್ರ

ಬೆಂಗಳೂರು: ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಚರ್ಚೆ ನಡೆದಿಲ್ಲ. ನನ್ನ ರಾಜೀನಾಮೆ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಸಚಿವ…

14 hours ago