ಆಂದೋಲನ 50

ಸಾಮಾಜಿಕ ನ್ಯಾಯಕ್ಕಾಗಿ ಸದಾ ಬದ್ಧವಾದ ಆಂದೋಲನ ; ಭಾಗ-3

ಬದನವಾಳು ದುರಂತ: ವೃತ್ತಿ ಧರ್ಮಕ್ಕೆ ಚ್ಯುತಿ ತಾರದ ‘ಆಂದೋಲನ’

-ಶ್ರೀಧರ್ ಆರ್ ಭಟ್ಟ

ಗಾಂಧೀಜಿ ಭೇಟಿ ನೀಡಿದ್ದ ಬದನವಾಳು ಗ್ರಾಮದಲ್ಲಿ ನಡೆದ ದುರಂತದ ಕಪ್ಪುಚುಕ್ಕಿ ಈಗ ಇತಿಹಾಸದ ಪುಟದಲ್ಲಿ ಸೇರಿ ಹೋಗಿದೆ. ಅದಾಗಿ ಈಗಾಗಲೇ ೨೯ ವರ್ಷಗಳೇ ಗತಿಸಿ ಹೋಗಿವೆ. ೧೯೯೩ರ ಆರಂಭದಲ್ಲೇ ಇಲ್ಲೊಂದು ಅಮಾನವೀಯ ಘಟನೆ ನಡೆದು ಕಡು ದ್ವೇಷ, ಅಸೂೆುಂಗಳ ಗೂಡಾಗಿ ದುರಂತಕ್ಕೆ ಕಾರಣವಾಗಿ ಹೋಯಿತು.

೧೯೯೩ರ ಜನವರಿಯಲ್ಲಿ ಆರಂಭವಾದ ಈ ದುರಂತದ ವಿವರಗಳನ್ನು ನಿರ್ಭೀತವಾಗಿ ಪ್ರಕಟಿಸಿದ ಏಕೈಕ ದಿನಪತ್ರಿಕೆ ‘ಆಂದೋಲನ’ ಎಂದರೆ ತಪ್ಪಾಗಲಾರದು.

‘ಆಂದೋಲನ’ ಸಂಪಾದಕರಾಗಿದ್ದ ರಾಜಶೇಖರ ಕೋಟಿಯವರು ಸತ್ಯಸಂಗತಿಯ ವರದಿಗಳನ್ನು ಯಾವುದೇ ಮುಲಾಜಿಲ್ಲದೆ ಪ್ರಕಟಿಸುವ ಮೂಲಕ ‘ನಾನಿದ್ದೇನೆ’ ಎಂಬ ಸ್ಪಷ್ಟ ಸಂದೇಶವೂ ರವಾನಿಸಿದಂತೆ ಕೆಲಸ ನಡೆದಿತ್ತು. ನಂಜನಗೂಡು ತಾಲ್ಲೂಕು ಬದನವಾಳು ಗ್ರಾಮದ ಹೊರವಲಯದಲ್ಲಿರುವ ಶ್ರೀ ಸಿದ್ಧೇಶ್ವರ ದೇವಾಲಯದ ಪ್ರವೇಶವೇ ಈ ದುರಂತಕ್ಕೆ ಮೂಲವಾಗಿತ್ತು.ಬೂದಿ ಮುಚ್ಚಿದ ಕೆಂಡವಾಗಿದ್ದ ಪರಸ್ಪರರ ಅನುಮಾನದ ಹುತ್ತ ಒಡೆಯಲು ದೇವಾಲಯದ ಪ್ರವೇಶ ನೆಪವಾಯಿತು.

ಜನವರಿ ೩೦, ೧೯೯೩ ರಂದು ನಿಗದಿಯಾಗಿದ್ದ ಈ ದೇವಾಲಯದ ಉದ್ಘಾಟನಾ ಸಮಾರಂಭದಿಂದ ಆರಂಭವಾದ ‘ಆಂದೋಲನ’ ಬದನವಾಳಿನ ವರದಿ ಮಾರ್ಚ್ ೨೫, ೧೯೯೩ರಂದು ನಡೆದ ದಲಿತರ ಹತ್ಯೆ, ನಂತರ ನಡೆದ ಪರ ವಿರೋಧ ಮೆರವಣಿಗೆ, ಏಪ್ರಿಲ್ ೨೬ ರಂದು ನಡೆದ ಗೋಲಿಬಾರ್ ಹಾಗೂ ಅದರ ದಳ್ಳುರಿಯ ಸುದ್ದಿ ..ಇದೆಲ್ಲವನ್ನೂ ಸವಿವರವಾಗಿ ವರದಿ ಮಾಡಿದ್ದ ‘ಆಂದೋಲನ’ ಪತ್ರಿಕಾ ಧರ್ಮದ ಇತಿ ಮಿತಿಯಲ್ಲಿ ಸಮಾಜದ ಸೇತುವಾಗಿಯೂ ಕೆಲಸ ಮಾಡಿತು. ತನ್ನ ನಿಷ್ಠುರ ವರದಿಗಳಿಂದಾಗಿ ಪತ್ರಿಕೆ ಪರ-ವಿರೋಧಿಗಳ ಹೊಗಳಿಕೆ, ತೆಗಳಿಕೆಗಳನ್ನೂ ಅಂದು ಎದುರಿಸಬೇಕಾಯಿತು.
ಆದರೂ ಅಂದಿನ ‘ಆಂದೋಲನ’ ಸಂಪಾದಕ ಮಂಡಳಿ ಎದೆಗುಂದದೆ ಈ ವಿಷಯವನ್ನು ನಿರ್ಭೀತಿಯಿಂದ ವರದಿ ಮಾಡಿ ಈ ಭಾಗದ ಜನಸಾಮಾನ್ಯರ ಪ್ರೀತಿ ಮತ್ತು ಅಭಿಮಾನಕ್ಕೆ ‘ಪತ್ರಿಕೆ’ ಕಾರಣವಾಯಿತು.

andolana

Recent Posts

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

4 hours ago

ನಾಳೆಯೊಳಗೆ ಪ್ರಯಾಣಿಕರಿಗೆ ಮರುಪಾವತಿ ಮಾಡಿ: ಇಂಡಿಗೋ ಏರ್‌ಲೈನ್ಸ್‌ಗೆ ಗಡುವು ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…

4 hours ago

ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಮಾಜಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…

5 hours ago

ನನ್ನನ್ನು ಹೆದರಿಸ್ತೀನಿ ಅಂದ್ರೆ ಅದು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಹಾಸನ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್‌ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…

5 hours ago

ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಭರವಸೆ

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…

6 hours ago

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

6 hours ago