ಮಹಿಳೆ

ಸರ್ಗಂ ಕೌಶಲ್ ವಿಶ್ವದ ಚೆಲುವೆಯಾಗಿದ್ದು ಹೇಗೆ ಗೊತ್ತೇ..?

ಸರ್ಗಂ ಕೌಶಲ್ ವಿಶ್ವದ ಚೆಲುವೆಯಾಗಿದ್ದು ಹೇಗೆ ಗೊತ್ತೇ..?

ಕಾಶ್ಮೀರಿ ಚೆಲುವೆಯೊಬ್ಬಳು 21 ವರ್ಷದ ಬಳಿಕ ವಿಶ್ವ ಸೌಂದರ್ಯ ಸ್ಪರ್ಧೆಯ ಕಿರೀಟವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಜಮ್ಮು ಮೂಲದ ಸರ್ಗಂ ಕೌಶಲ್ ಅವರು ಲಾಸ್ ವೆಗಾಸ್ ನಲ್ಲಿ ಡಿ.18ರಂದು ಜರುಗಿದ ಸ್ಪರ್ಧೆಯಲ್ಲಿ ಸುಮಾರು 63 ದೇಶಗಳ ಸುಂದರಿಯರೊಂದಿಗೆ ಸ್ಪರ್ಧಿಸಿ ಮಿಸೆಸ್ ವರ್ಲ್ಡ್ 2022 ಕಿರೀಟವನ್ನು ಮುಡಿಗೇರಿಸಿಕೊಂಡು ಗೆಲುವಿನ ನಗೆ ಬೀರಿದ್ದಾರೆ. ತಮ್ಮ ಸಾಧನೆಯ ಫೋಟೋಗಳನ್ನು ಅವರು ಇನ್‌ ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಆಯ್ದ ಫೋಟೋಗಳು ಇಲ್ಲಿವೆ.

 

ಮಿಸೆಸ್ ವರ್ಲ್ಡ್ ವಿವಾಹಿತ ಮಹಿಳೆಯರಿಗೆ ಮೀಸಲಾದ ಸ್ಪರ್ಧೆ. 21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಪ್ರಶಸ್ತಿ

2001ರಲ್ಲಿ ವೈದ್ಯೆಯಾಗಿದ್ದ ಅದಿತಿ ಗೋವಿತ್ರಿಕರ್ ಅವರು ಮಿಸೆಸ್ ವರ್ಲ್ಡ್ ಆಗಿ ಆಯ್ಕೆಯಾಗಿದ್ದರು. ಈಗ ಶಿಕ್ಷಕಿಯಾಗಿರುವ ಸರ್ಗಂ ಕೌಶಲ್‌ ಈ ಕಿರೀಟ ಒಲಿದಿದೆ.

 


1990ರ ಸೆ.17 ರಂದು ಜಮ್ಮುವಿನ ಜಿ.ಎಸ್. ಕೌಶಲ್ ಹಾಗೂ ರೀನಾ ಕಾಜೂರಿಯ ದಂಪತಿ ಪುತ್ರಿಯಾಗಿ ಜನಿಸಿದ ಸರ್ಗಂ ಪ್ರತಿಭಾನ್ವಿತ ವಿದ್ಯಾರ್ಥಿನಿ.

ಜಮ್ಮುವಿನ ಪ್ರೆಸೆಂಟೇಶನ್ ಕಾನ್ವೆಂಟ್, ಗಾಂಧಿನಗರ ಸೀನಿಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಸರ್ಗಂ, ಜಮ್ಮು ವಿವಿಯ ಇಂಗ್ಲೀಷ್ ಸಾಹಿತ್ಯ ಸ್ನಾತಕೋತ್ತರ ಪದವೀಧರೆ.

ಸರ್ಗಂ ಕೌಶಲ್ ಗೆ ತನಗಿಂತ ಏಳು ವರ್ಷ ಕಿರಿಯನಾದ ಮಂಥನ್ ಕೌಶಲ್ ಎಂಬ ಸಹೋದರನಿದ್ದಾನೆ.

ಸರ್ಗಂ ಕೌಶಲ್ 2018 ರಲ್ಲಿ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕರ್ನಲ್ ಆದಿತ್ಯ ಮನಮೋಹನ್ ಶರ್ಮಾ ಅವರನ್ನು ವಿವಾಹವಾಗುತ್ತಾರೆ.

 


ಇದೇ ವರ್ಷದ ಜೂನ್ ತಿಂಗಳಿನಲ್ಲಿ 2022-ರ ಮಿಸೆಸ್ ಇಂಡಿಯಾ ವರ್ಲ್ಡ್ ಸ್ಪರ್ಧೆಯನ್ನು ಗೆದ್ದ ಸರ್ಗಂ ವಿಶ್ವ ಸುಂದರಿ ಸ್ಪರ್ಧೆಗೆ ಆಯ್ಕೆಯಾಗಿದ್ದರು.

ಜಮ್ಮುವಿನ ಕೆ.ಸಿ.ಇಂಟರ್‌ ನ್ಯಾಷನಲ್ ಸ್ಕೂಲ್‌ ನಲ್ಲಿ ಶಿಕ್ಷಕಿಯಾಗಿರುವ ಸರ್ಗಂ ತನ್ನ 32 ನೇ ವಯಸ್ಸಿನಲ್ಲಿ ಮಿಸೆಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ.

ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದ ಸರ್ಗಂ, ಶುದ್ಧ ಶಾಖಾಹಾರಿ. ತಮ್ಮ ಫಿಟ್ನೆಸ್‌ ಗೆ ಆಹಾರ ಪದ್ಧತಿಯೂ ನೆರವಾಗಿದೆ ಎನ್ನುತ್ತಾರೆ ಅವರು.

ಸತತ ಪರಿಶ್ರಮ,ಬದ್ಧತೆ,ನೌಕಾದಳದಲ್ಲಿ ಸೇವೆ ಸಲ್ಲಿಸುತ್ತಿರುವ ಪತಿ ಆದಿತ್ಯ ಅವರ ಬೆಂಬಲದಿಂದ ಸರ್ಗಂ ಈ ಸಾಧನೆ ಮಾಡಲು ಸಾಧ್ಯವಾಗಿದೆ.

ಕೊನೆಯ ಹಂತದವರೆಗೂ ನಿಕಟ ಪೈಪೋಟಿ ನೀಡಿದ್ದ ಪಾಲಿನೇಶಿಯಾ ಅವರನ್ನು ಸೋಲಿಸಿ ವಿಶ್ವ ಸುಂದರಿ ಕಿರೀಟಕ್ಕೆ ಭಾಜನನರಾದ ಸರ್ಗಂ

 

andolanait

Share
Published by
andolanait

Recent Posts

ರೋಹಿತ್‌ ಬ್ಯಾಟಿಂಗ್‌ ಅಬ್ಬರ : ಭರ್ಜರಿ ಗೆಲುವು ದಾಖಲಿಸಿದ ಮುಂಬೈ

ಮುಂಬೈ : 13 ವರ್ಷಗಳ ಸೋಲಿನ ಓಟಕ್ಕೆ ಬ್ರೇಕ್‌ ಹಾಕಿದ ಮುಂಬೈ ಇಂಡಿಯನ್ಸ್‌ ಕೊನೆಗೂ ಐಪಿಎಲ್‌ನ ಮೊದಲ ಪಂದ್ಯವನ್ನು ಭರ್ಜರಿಯಾಗಿ…

5 hours ago

ಷೇರುಪೇಟೆ ವಹಿವಾಟಿನಲ್ಲಿ ಇಳಿಕೆ ; ಟಾಪ್-10 ಕಂಪನಿಗಳಲ್ಲಿ 7ಕ್ಕೆ ಭಾರೀ ನಷ್ಟ

ಹೊಸದಿಲ್ಲಿ : ಕಳೆದ ವಾರ ನಡೆದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಗಳು ಇಳಿಕೆ ಕಂಡಿದ್ದರಿಂದ ದೇಶದ ಪ್ರಮುಖ 10 ಕಂಪನಿಗಳ ಪೈಕಿ…

9 hours ago

ಎಲ್‌ಪಿಜಿ ಹೊತ್ತ ಮತ್ತೆರಡು ಹಡಗು ಭಾರತದತ್ತ

ಮುಂಬೈ : ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಭಾಗಶಃ ಅನುಮತಿ ನೀಡಿದ ನಂತರ ಭಾರತ ಧ್ವಜ ಹೊತ್ತ ಎರಡು ಎಲ್‌ಪಿಜಿ (ದ್ರವೀಕೃತ…

9 hours ago

ಮೇಲುಕೋಟೆ ಜಾತ್ರೆ | ವೈರಮುಡಿ ಕಿರೀಟಧಾರಣಾ ಮಹೋತ್ಸವದಲ್ಲಿ 2 ಲಕ್ಷ ಜನರು ಭಾಗಿ

ಮೇಲುಕೋಟೆ : ವೈಷ್ಣವ ಪರಂಪರೆಯ ಅತ್ಯಂತ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಶನಿವಾರ ರಾತ್ರಿಯಿಡಿ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ…

9 hours ago

ಅಸ್ಸಾಂ ಚುನಾವಣೆ | ಪಂಚ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ಗುವಾಹಟಿ : ಅಸ್ಸಾಂ ವಿಧಾನಸಭಾ ಚುನಾವಣೆಗೆ ರಾಜಕೀಯ ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ಪಕ್ಷವೂ ಪಂಚ ಗ್ಯಾರಂಟಿಗಳನ್ನು ಘೋಷಿಸಿದೆ. ಎಐಸಿಸಿ ಅಧ್ಯಕ್ಷ…

9 hours ago

ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ : ​ಆಹಾರ,ನಾಗರಿಕ ಸರಬರಾಜು ಇಲಾಖೆ ಸ್ಪಷ್ಟನೆ

ಬೆಂಗಳೂರು : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ‌ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ ಆಟೋ‌ ಎಲ್.ಪಿ.ಜಿಗೆ ಯಾವುದೇ…

9 hours ago