Andolana originals

ಕ್ರಿಸ್‌ಮಸ್ ಹಬ್ಬಕ್ಕೆ ಅರಮನೆ ನಗರಿ ಸಜ್ಜು

ಮೈಸೂರು: ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್‌ಗಳ ಅಂಗಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಕಾರ್ಯ ನಡೆಯುತ್ತಿದೆ.

ಕ್ರೈಸ್ತ ಸಮುದಾಯದವರು ಮನೆಗಳನ್ನು ಸಿಂಗರಿಸಲು, ಬಂಧುಗಳು ಹಾಗೂ ಸ್ನೇಹಿತರಿಗೆ ಉಡುಗೊರೆಗಳನ್ನು ನೀಡಲು ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂದಿತು.

ದೇವರಾಜ ಮಾರುಕಟ್ಟೆ ಸಮೀಪದ ಶಿವರಾಂಪೇಟೆ, ವಿನೋಬಾ ರಸ್ತೆಯ ಇಕ್ಕೆಲಗಳಲ್ಲಿನ ಮಹಾರಾಜ, ಮನ್ನಾರ್ಸ್ ಸೇರಿದಂತೆ ವಿವಿಧ ಮಾರುಕಟ್ಟೆ, ಮಳಿಗೆಗಳಲ್ಲಿ ತೂಗು ಹಾಕಲಾಗಿದ್ದ ನಕ್ಷತ್ರಗಳು, ಘಂಟೆಗಳು, ಸಾಂತಾಕ್ಲಾಸ್ ಗೊಂಬೆಗಳನ್ನು ಖರೀದಿಸಿದರು. ಮನೆ ಹಾಗೂ ಚರ್ಚ್‌ಗಳಲ್ಲಿ ಗೋದಲಿ ನಿರ್ಮಿಸಿ ಅಲಂಕರಿಸುವುದು ಕ್ರಿಸ್‌ಮಸ್ ಆಚರಣೆಯ ಪ್ರಮುಖ ಆಕರ್ಷಣೆಯಾಗಿರುವುದರಿಂದ ಪುಟ್ಟ ಗೋದಲಿಯೊಳಗೆ ಆಡು, ಕುರಿ, ಕರುಗಳ ಗೊಂಬೆ ಜೋಡಿಸಲು ಖರೀದಿಸಿದರು. ಪ್ಲಾಸ್ಟಿಕ್‌ನ ನಕ್ಷತ್ರಗಳು ೧೨೦ರಿಂದ ೧,೪೦೦ ರೂ.ವರೆಗೆ, ವಿದ್ಯುತ್ ದೀಪಗಳು ೧೫೦ ರೂ.ನಿಂದ ೨,೫೦೦ ರೂ.ಗಳವರೆಗೆ ಇದ್ದವು. ಸಾಲು ಉದ್ದವಾದಷ್ಟೂ ದರವು ಹೆಚ್ಚಿತು. ಸಾಂತಾಕ್ಲಾಸ್ ಮುಖವಾಡಗಳು ಡಜನ್‌ಗೆ ೧೨೦ ರೂ. ಇತ್ತು. ಬೆಲ್ಸ್‌ಗಳು ೮೦ ರೂ.ಗಳಿಂದ ೪೦೦ ರೂ. ರವರೆಗೆ ಇತ್ತು. ಹಸಿರಿನ ರೀತ್ ಹಾಗೂಮರಗಳು ಗಾತ್ರಕ್ಕೆ ತಕ್ಕಂತೆ ದರದ ವ್ಯತ್ಯಾಸವಿತ್ತು. ೮ ಅಡಿಯ ಕ್ರಿಸ್‌ಮಸ್ ಮರದ ದರವು ೧೫ ಸಾವಿರ ರೂ. ವರೆಗೂ ಇತ್ತು.

ಗೋದಲಿ ಖರೀದಿ: ಬಿದಿರಿನಿಂದ ತಯಾರಿಸಿದ ಗೋದಲಿಗಳನ್ನು ಬಂಬೂ ಬಜಾರ್‌ನಲ್ಲಿ ಸಾರ್ವಜನಿಕರು ಖರೀದಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಗೋದಲಿಗಳು ೨೫೦ ರೂ.ನಿಂದ ೧ ಸಾವಿರ ರೂ.ವರೆಗೆ ವಿವಿಧ ಗಾತ್ರಗಳಲ್ಲಿ ದೊರೆಯುತ್ತಿದ್ದವು. ಮನೆಯ ಮುಂದೆ ತೂಗುಹಾಕಲು ಇದ್ದ ಬಿದಿರಿನ ನಕ್ಷತ್ರಗಳು ೩೦೦ ರೂ.ನಿಂದ ೫೦೦ ರೂ.ವರೆಗೆ ಲಭ್ಯವಿದ್ದವು. ಬಿದಿರಿನಿಂದ ಮಾಡಿದ ನಕ್ಷತ್ರ, ಗೋದಲಿ ಖರೀದಿ ಕಳೆದ ಬಾರಿಗಿಂತ ಈ ಬಾರಿ ಪರವಾಗಿಲ್ಲ. ಪ್ಲ್ಯಾಸ್ಟಿಕ್‌ನಿಂದ ಮಾಡಿದ್ದವನ್ನು ಖರೀದಿಸುತ್ತಿದ್ದಾರೆ. ವಯಸ್ಸಾದವರು ಮಾತ್ರ ಖರೀದಿಗೆ ಇಲ್ಲಿ ಬರುತ್ತಾರೆ’ ಎಂದು ಬಂಬೂ ಬಜಾರಿನ ವ್ಯಾಪಾರಿ ಸಿದ್ದರಾಜು ಹೇಳಿದರು.

ಸಂತ ಫಿಲೋಮಿನಾದಲ್ಲಿ ಐಫೆಲ್ ಟವರ್: ಸಂತ ಫಿಲೋಮಿನಾ ಚರ್ಚ್‌ನ ಅಂಗಳದಲ್ಲಿ ೧೬ ಅಡಿ ಎತ್ತರದ  ಐಫೆಲ್ ಟವರ್‌ನ ಮಾದರಿಯನ್ನು ನಿರ್ಮಿಸಲಾಗಿದೆ. ಹಾರ್ಡ್ವಿಕ್ ಚರ್ಚ್‌ನ ಗೋಡೆಗಳು ಹಳದಿ ಬಣ್ಣವನ್ನು ಕಂಡವು. ಕಾರ್ಮಿಕರು ಹಾಗೂ ಚರ್ಚ್‌ಗಳ ಸಿಬ್ಬಂದಿ ಅಂಗಳವನ್ನು ಸಿಂಗರಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಪ್ರಾರ್ಥನಾಲಯದ ಒಳಾಂಗಣವನ್ನು ನಕ್ಷತ್ರಗಳು, ಬೆಲ್ಸ್ಗಳು, ಇನ್ನಿತರೆ ವಸ್ತುಗಳಿಂದ ಅಲಂಕರಿಸಲಾಗಿದೆ. ಸಾಡೇ, ವೆಸ್ಲಿ, ಬಾರ್ತೊಲೋಮಿಯಾ, ಆರ್.ಎಸ್.ನಾಯ್ಡು ನಗರದ ಇನ್‌ಫೆಂಟ್ ಜೀಸಸ್, ಯಾದವಗಿರಿಯ ಸೇಕ್ರೆಡ್ ಹಾರ್ಟ್, ಜಯಲಕ್ಷ್ಮೀಪುರಂನ ಸೇಂಟ್ಜೋಸೆಫ್, ವಿಶ್ವೇಶ್ವರ ನಗರದ ಸೇಂಟ್ ಥಾಮಸ್, ಸೇಂಟ್ ಮೇರಿಸ್ ಸೇರಿದಂತೆ ನಗರದಲ್ಲಿರುವ ೪೦ಕ್ಕೂ ಹೆಚ್ಚು ಚರ್ಚ್‌ಗಳಲ್ಲಿ ವಿದ್ಯುತ್ ದೀಪಗಳನ್ನು ಅಲಂಕರಿಸಲಾಗಿದೆ. ಆವರಣಗಳಲ್ಲಿ ಸಾಂತಾಕ್ಲಾಸ್‌ನ ರಥ ಹಾಗೂ ಸಾರಂಗಗಳನ್ನು ನಿಲ್ಲಿಸಲಾಗಿದೆ. ಮಿನುಗುವ ನಕ್ಷತ್ರಗಳನ್ನು ತೂಗು ಹಾಕಲಾಗಿದೆ. ಸಿಎಸ್‌ಐ ಹೊಲ್ಡ್ ವರ್ತ್ ಸ್ಮಾರಕ ಮಿಷನ್ ಆಸ್ಪತ್ರೆ, ಸೇಂಟ್ ಜೋಸೆಫ್, ಸೇಂಟ್ ಮೇರಿಸ್ ಆಸ್ಪತ್ರೆಗಳಲ್ಲಿಯೂ ಸಿದ್ಧತೆ ನಡೆದಿತ್ತು. ಸಿಕೆಸಿ, ಸೇಂಟ್ ಜೋಸೆಫ್, ನಿರ್ಮಲಾ ಸೇರಿದಂತೆ ಹಲವು ಶಾಲೆಗಳಲ್ಲೂ ಅಲಂಕಾರಗಳಲ್ಲಿ ಸಿಬ್ಬಂದಿ ನಿರತರಾಗಿದ್ದರು.

ಆಂದೋಲನ ಡೆಸ್ಕ್

Recent Posts

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ-ನಾಗರಹೊಳೆ ಸಫಾರಿ ಆರಂಭಿಸಿ: ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ

ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌…

7 hours ago

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ

ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…

8 hours ago

ರಾಜಸ್ಥಾನದಲ್ಲಿ ಪ್ಯಾರಾಮೆಡಿಕಲ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ನಾಲ್ವರು ಅರೆಸ್ಟ್‌

ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್‌ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್‌ ಮೇಲೆ ಪೊಲೀಸರು…

8 hours ago

ಎಸ್‌ಐಆರ್‌ ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್‌

ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌…

9 hours ago

ನಾಡಿನ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್‌ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ‌ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…

9 hours ago

ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲೇ ಮೂರನೇ ಬಾರಿ ದೇಶದಲ್ಲಿ ಮಳೆ ಕೊರತೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೇ ಜೂನ್‌ ತಿಂಗಳಿನಲ್ಲಿ ಮೂರನೇ…

10 hours ago