ಮುಂಬೈ: ಭಾರತದ ದೂರ ಸಂಪರ್ಕ (ಟೆಲಿಕಾಂ) ಕ್ಷೇತ್ರದ ದೈತ್ಯ ಜಿಯೋ ಕಂಪನಿ ಹೊಸ ವರ್ಷಕ್ಕೆ ಹೊಸ ಪ್ರಿಪೇಯ್ಡ್ ಯೋಜನೆ ಜಾರಿ ಮಾಡುವ ಮೂಲಕ ಬಳಕೆದಾದರಿಗೆ ಬಂಪರ್ ಉಡುಗೊರೆ ನೀಡಿದೆ.
ತನ್ನ ಬಳಕೆದಾರರನ್ನು ಹೆಚ್ಚಿಸುವ ಜೊತೆಗೆ ಈಗಿರುವ ಬಳಕೆದಾರರಿಗೆ ಕಂಪನಿ ಹೊಸ ಆಫರ್ ನೀಡಿದೆ. ಈ ಯೋಜನೆಯಲ್ಲಿ ಜಿಯೋ ಬಳಕೆದಾರರು ಅನಿಯಮಿತ ಧ್ವನಿ ಕರೆ ಮತ್ತು ಎಸ್ಎಂಎಸ್ ಸೇವೆ ಪಡೆಯಬಹುದು.
ಜಿಯೋ ಎಂದಿನಂತೆ ಈ ಬಾರಿಯು ವರ್ಷದ ಅಂತ್ಯದಲ್ಲಿ ಹೊಸ ಆಫರ್ ಬಿಡುಗಡೆ ಮಾಡಿದೆ. ತಮ್ಮ ಚಂದದಾರರಿಗೆ 2,150ರವರೆಗೆ ಈ ಯೋಜನೆಯಲ್ಲಿ ಪ್ರಯೋಜನ ನೀಡಲಾಗಿದ್ದು, ಶಾಪಿಂಗ್ ಸೈಟ್ ರಿಯಾಯಿತಿ, ಆಹಾರ ವಿತರಣಾ ಅಪ್ಲಿಕೇಶನ್ಗಳು ಹಾಗೂ ಫ್ಲೈಟ್ ಬುಕಿಂಗ್ಗಳಿಗೂ ಪ್ರವೇಶ ನೀಡಿದೆ.
ಗ್ರಾಹಕರು ಜನವರಿ 11, 2025 ರೊಳಗೆ ಈ ಯೋಜನೆ ಖರೀದಿಸಿದರೆ ಮಾತ್ರ ಇದರ ಪ್ರಯೋಜನ ಪಡೆಯಬಹುದಾಗಿದೆ. ಇದರ ವ್ಯಾಲಿಡಿಟಿ 200 ದಿನಗಳವರೆಗೆ ಮಾತ್ರ ನೀಡಲಾಗಿದೆ.
ಈ ಯೋಜನೆ ಬಳಸುವ ಗ್ರಾಹಕರಿಗೆ ಅನಿಯಮಿತ ಕರೆ ಮತ್ತು SMS ಸೌಲಭ್ಯ ನೀಡಿದ್ದು, ಜೊತೆಗೆ 5G ಡೇಟಾ ಬೆಂಬಲವನ್ನು ನೀಡಲಾಗುತ್ತದೆ. ಅಲ್ಲದೇ, 500GB 4G ಡೇಟಾ ಅಥವಾ 2.5GB ದೈನಂದಿನ 4G ಡೇಟಾ ಸೌಲಭ್ಯ ನೀಡಲಾಗಿದೆ.
ಬಳಕೆದಾರರು ಕನಿಷ್ಠ 2500 ರೂ. ಗಳವರೆಗೆ ಹಣ ನೀಡಿ ಈ ಯೋಜನೆ ಖರೀದಿ ಮಾಡಿದರೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ನ ಚಂದದಾರಿಕೆ ಪಡೆಯಬಹುದು. ಜೊತೆಗೆ 500 ರೂಪಾಯಿ ಮೌಲ್ಯದ Ajio ದ ಕೂಪನ್ ಕೂಡ ಇದೆ. ಬಳಕೆದಾರರು ಲಿಂಕ್ ಮೂಲಕ ಶಾಪಿಂಗ್ ಮಾಡಬಹುದು.
ಇನ್ನು ಸ್ವಿಗ್ಗಿಯಿಂದ ಆರ್ಡರ್ ಮಾಡಿದರೆ 150ರೂಪಾಯಿ ರಿಯಾಯಿತಿ ಸಿಗುತ್ತದೆ. ಆದರೆ ಅದಕ್ಕಾಗಿ ಕನಿಷ್ಠ 499 ರೂಪಾಯಿ ಆರ್ಡರ್ ಮಾಡಬೇಕು. EaseMyTrip ಮುಖಾಂತರ ನೀವು ಫ್ಲೈಟ್ ಟಿಕೆಟ್ ಬುಕ್ ಮಾಡಿದರೆ 1,500 ರೂ.ಗಳ ರಿಯಾಯಿತಿ ಪಡೆಯಬಹುದು ಎಂದು ಜಿಯೋ ಕಂಪನಿ ತಿಳಿಸಿದೆ.
ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದೆ. ಈ ಹಿಂದೆ ಜಾರಿಯಲ್ಲಿದ್ದ ಶೇ.50ರಷ್ಟು…
ಚೆನ್ನೈ : ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ…
ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಎರಡನೇ ಬಾರಿಗೆ ರಾಜ್ಯಸಭೆ ಸದಸ್ಯರಾಗಲು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಲೋಕಸಭೆಯ ವಿರೋಧ…
ಬೆಂಗಳೂರು : ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ಹಠಾತ್ ರಾಜೀನಾಮೆ ಬೆನ್ನಲ್ಲೇ, ಮತ್ತೊಬ್ಬ ಹಿರಿಯ ನಾಯಕ ಹಾಗೂ ಆಹಾರ ಸಚಿವ…
ಚೆನ್ನೈ : ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬಿಜೆಪಿಗೆ ಗುಡ್ಬೈ ಹೇಳಿದ್ದಾರೆ.…
ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮದಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು, ತಡರಾತ್ರಿ ನಡೆದ ದಾಳಿಯಲ್ಲಿ ಗರ್ಭಿಣಿ ಹೆಮ್ಮೆ ಸಾವನ್ನಪ್ಪಿದ…