ಟೆಕ್‌

ಕೃತಕ ಬುದ್ದಿಮತ್ತೆ ಇನ್ನು ಮುಕ್ತ ಮುಕ್ತ

ಕೃತಕ ಬುದ್ಧಿಮತ್ತೆ ತನ್ನ ಕ್ಷೇತ್ರವನ್ನು ವಿಸ್ತರಿಸುತ್ತಿದ್ದು, ಎಲ್ಲ ದೇಶಗಳ ಹೊಸ ಹೊಸ ತಂತ್ರಜ್ಞಾನವನ್ನು ಕೃತಕ ಬುದ್ಧಿಮತ್ತೆಗೆ ವಿಸ್ತರಿಸಲಾಗುತ್ತಿದೆ.

ಈಗ ಚೀನಾದ ದೈತ್ಯ ‘ಡೀಪ್ ಸೀಕ್’ ಭಾರಿ ಸ್ಪರ್ಧೆ ಒಡ್ಡಿದ ಬೆನ್ನಲ್ಲೇ ‘ಒಪನ್ ಎಐ’ಯಿಂದ ಹೊಸ ಎಐ ಟೂಲ್ ‘ಡೀಪ್ ರಿಸರ್ಚ್’ ಬಿಡುಗಡೆಗೊಂಡಿದ್ದು, ಇದು ಕಠಿಣ ವಿಷಯಗಳ ಬಗ್ಗೆ ಬಹುಸ್ತರದ ಸಂಶೋಧನಾ ವರದಿಯನ್ನು ತಯಾರಿಸಿಕೊಡುತ್ತದೆ ಎಂದು ಕಂಪೆನಿ ಹೇಳಿದೆ.

ಮುಂಬರುವ ಒಪನ್ ಎಐ ೦೩ ಆವೃತ್ತಿಯಲ್ಲಿ ಇದು ಲಭ್ಯವಾಗಲಿದ್ದು, ದತ್ತಾಂಶ ವಿಶ್ಲೇಷಣೆ ಹಾಗೂ ವೆಬ್ ಬ್ರೌಸಿಂಗ್‌ಗೆ ಇದು ಉಪಯೋಗವಾಗಲಿದೆ ಎಂದು ಒಪನ್ ಎಐ ಹೇಳಿದೆ. ಬಳಕೆದಾರರು ಒಪನ್ ಎಐನ ಚಾಟ್ ಬಾಕ್ಸ್ ಚಾಟ್ ಜಿಪಿಟಿ ಮೂಲಕ ಇದನ್ನು ಬಳಕೆ ಮಾಡಬಹುದು. ಚಾಟ್ ಜಿಟಿಪಿಯಲ್ಲಿ ಬೇಕಾದ ಮಾಹಿತಿಯ ಬಗ್ಗೆ ಕಮಾಂಡ್ ನೀಡಿದರೆ, ಆನ್‌ಲೈನ್‌ನಲ್ಲಿ ಬರಹ, ಚಿತ್ರ ಹಾಗೂ ಪಿಡಿಎಫ್ ರೂಪದಲ್ಲಿ ಲಭ್ಯವಿರುವ ಹಲವು ಮಾಹಿತಿಗಳ ವರದಿ ತಯಾರಿಸಿ ನೀಡಲಿದೆ. ಚಾಟ್ ಜಿಪಿಟಿಯ ವೆಬ್ ಆವೃತ್ತಿಯಲ್ಲಿ ಇದು ಕಳೆದ ಭಾನುವಾರದಿಂದಲೇ ಲಭ್ಯವಿದ್ದು, ಮೊಬೈಲ್ ಹಾಗೂ ಆಪ್‌ಗಳಲ್ಲಿ ಫೆಬ್ರವರಿ ಅಂತ್ಯದೊಳಗೆ ಲಭ್ಯವಾಗಲಿದೆ ಎಂದು ಒಪನ್ ಎಐ ತಿಳಿಸಿದೆ. ಸದ್ಯಕ್ಕೆ ಆರಂಭಿಕ ಹಂತದಲ್ಲಿದ್ದು, ಕೆಲವೊಂದು ಮಿತಿಗಳನ್ನು ಹೊಂದಿದೆ. ವಿಶ್ವಾಸಾರ್ಹ ಮಾಪನಾಂಕ ನಿರ್ಣಯದಲ್ಲಿ ದೌರ್ಬಲ್ಯಗಳನ್ನು ಹೊಂದಿದೆ ಎಂದು ತಿಳಿಸಿದೆ.

ಆಂದೋಲನ ಡೆಸ್ಕ್

Recent Posts

ಎಚ್.ಡಿ.ಕೋಟೆಯಲ್ಲಿ ಮತ್ತೆ ಶುರುವಾಯ್ತು ಹುಲಿ ಉಪಟಳ

ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…

18 mins ago

ಇನ್ಸ್ಟಾಗ್ರಾಮ್ ಪರಿಚಯ : ಪೊಲೀಸಪ್ಪನ ಜತೆ ಮೈಸೂರು ಮೂಲದ ಗೃಹಿಣಿ ಎಸ್ಕೇಪ್

ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…

22 mins ago

ಮೈಸೂರಲ್ಲಿ ಸಂಭ್ರಮದ ಹನುಮೋತ್ಸವ ; ಮೆರವಣಿಗೆಯಲ್ಲಿ ಸಾಗಿದ ಅತ್ಯಾಕರ್ಷಕ ಹನುಮಮೂರ್ತಿಗಳು

ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…

1 hour ago

ಫೇಸ್‌ಬುಕ್‌ ಕಹಾನಿ | ಪ್ರೀತಿ ಹರಸಿ ಬಂದವನಿಗೆ ಹನಿಟ್ರ್ಯಾಪ್‌ ಗಾಳದ ಶಂಕೆ ; ಹಣಕ್ಕೆ ಡಿಮ್ಯಾಂಡ್‌….

ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…

2 hours ago

ಯುನಿಟಿ ಮಾಲ್‌ ನಿರ್ಮಾಣಕ್ಕೆ ವಿರೋಧ ಇಲ್ಲ : ಸಂಸದ ಯದುವೀರ್‌

ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…

2 hours ago

ಮೈಸೂರಲ್ಲಿ ಎರಡು ದಿನ ಮಾಗಿ ಸಂಭ್ರಮ : ಅವರೆಕಾಯಿ ಸೊಗಡು ಜೋರು…

ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…

2 hours ago