ಟೆಕ್‌

ಕೃತಕ ಬುದ್ದಿಮತ್ತೆ ಇನ್ನು ಮುಕ್ತ ಮುಕ್ತ

ಕೃತಕ ಬುದ್ಧಿಮತ್ತೆ ತನ್ನ ಕ್ಷೇತ್ರವನ್ನು ವಿಸ್ತರಿಸುತ್ತಿದ್ದು, ಎಲ್ಲ ದೇಶಗಳ ಹೊಸ ಹೊಸ ತಂತ್ರಜ್ಞಾನವನ್ನು ಕೃತಕ ಬುದ್ಧಿಮತ್ತೆಗೆ ವಿಸ್ತರಿಸಲಾಗುತ್ತಿದೆ.

ಈಗ ಚೀನಾದ ದೈತ್ಯ ‘ಡೀಪ್ ಸೀಕ್’ ಭಾರಿ ಸ್ಪರ್ಧೆ ಒಡ್ಡಿದ ಬೆನ್ನಲ್ಲೇ ‘ಒಪನ್ ಎಐ’ಯಿಂದ ಹೊಸ ಎಐ ಟೂಲ್ ‘ಡೀಪ್ ರಿಸರ್ಚ್’ ಬಿಡುಗಡೆಗೊಂಡಿದ್ದು, ಇದು ಕಠಿಣ ವಿಷಯಗಳ ಬಗ್ಗೆ ಬಹುಸ್ತರದ ಸಂಶೋಧನಾ ವರದಿಯನ್ನು ತಯಾರಿಸಿಕೊಡುತ್ತದೆ ಎಂದು ಕಂಪೆನಿ ಹೇಳಿದೆ.

ಮುಂಬರುವ ಒಪನ್ ಎಐ ೦೩ ಆವೃತ್ತಿಯಲ್ಲಿ ಇದು ಲಭ್ಯವಾಗಲಿದ್ದು, ದತ್ತಾಂಶ ವಿಶ್ಲೇಷಣೆ ಹಾಗೂ ವೆಬ್ ಬ್ರೌಸಿಂಗ್‌ಗೆ ಇದು ಉಪಯೋಗವಾಗಲಿದೆ ಎಂದು ಒಪನ್ ಎಐ ಹೇಳಿದೆ. ಬಳಕೆದಾರರು ಒಪನ್ ಎಐನ ಚಾಟ್ ಬಾಕ್ಸ್ ಚಾಟ್ ಜಿಪಿಟಿ ಮೂಲಕ ಇದನ್ನು ಬಳಕೆ ಮಾಡಬಹುದು. ಚಾಟ್ ಜಿಟಿಪಿಯಲ್ಲಿ ಬೇಕಾದ ಮಾಹಿತಿಯ ಬಗ್ಗೆ ಕಮಾಂಡ್ ನೀಡಿದರೆ, ಆನ್‌ಲೈನ್‌ನಲ್ಲಿ ಬರಹ, ಚಿತ್ರ ಹಾಗೂ ಪಿಡಿಎಫ್ ರೂಪದಲ್ಲಿ ಲಭ್ಯವಿರುವ ಹಲವು ಮಾಹಿತಿಗಳ ವರದಿ ತಯಾರಿಸಿ ನೀಡಲಿದೆ. ಚಾಟ್ ಜಿಪಿಟಿಯ ವೆಬ್ ಆವೃತ್ತಿಯಲ್ಲಿ ಇದು ಕಳೆದ ಭಾನುವಾರದಿಂದಲೇ ಲಭ್ಯವಿದ್ದು, ಮೊಬೈಲ್ ಹಾಗೂ ಆಪ್‌ಗಳಲ್ಲಿ ಫೆಬ್ರವರಿ ಅಂತ್ಯದೊಳಗೆ ಲಭ್ಯವಾಗಲಿದೆ ಎಂದು ಒಪನ್ ಎಐ ತಿಳಿಸಿದೆ. ಸದ್ಯಕ್ಕೆ ಆರಂಭಿಕ ಹಂತದಲ್ಲಿದ್ದು, ಕೆಲವೊಂದು ಮಿತಿಗಳನ್ನು ಹೊಂದಿದೆ. ವಿಶ್ವಾಸಾರ್ಹ ಮಾಪನಾಂಕ ನಿರ್ಣಯದಲ್ಲಿ ದೌರ್ಬಲ್ಯಗಳನ್ನು ಹೊಂದಿದೆ ಎಂದು ತಿಳಿಸಿದೆ.

ಆಂದೋಲನ ಡೆಸ್ಕ್

Recent Posts

ಮೋಟಾರ್ ವಾಹನ ಸೆಸ್ ಕೈಬಿಟ್ಟ ಮೈಸೂರು ಮಹಾನಗರ ಪಾಲಿಕೆ

ಮೈಸೂರು : ಮೈಸೂರು ಮಹಾನಗರಪಾಲಿಕೆ 2026-27ನೇ ಹಣಕಾಸು ವರ್ಷಕ್ಕೆ ಜಾರಿಗೊಳಿಸಲು ಘೋಷಿಸಿದ್ದ ಮೋಟಾರ್ ವಾಹನ ಸೆಸ್ ಅನ್ನು ರದ್ದುಗೊಳಿಸಿದೆ. ಇತ್ತೀಚಿಗೆ…

12 hours ago

ದಿಢೀರ್‌ ಕುಸಿದುಬಿದ್ದ ಲೋಕಾಯುಕ್ತ ನಿ.ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ, ಆಸ್ಪತ್ರೆಗೆ ದಾಖಲು

ಬೆಂಗಳೂರು : ಕರ್ನಾಟಕದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರೆ ಉಂಟಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ…

13 hours ago

ರೋಹಿಣಿ ಸಿಂಧೂರಿ ವಿರುದ್ಧ ತನಿಖೆ : ಮಾಜಿ ಸಚಿವ ಸಾ.ರಾ.ಮಹೇಶ್‌ ಹೇಳಿದಿಷ್ಟು?

ಮೈಸೂರು : ಬಟ್ಟೆ ಬ್ಯಾಗ್ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ…

14 hours ago

ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಧೋನಿ ಲಭ್ಯ?

ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ಸ್ನಾಯು ಸೆಳೆತದಿಂದ…

15 hours ago

24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಜೆಟ್‌ಗಳನ್ನು ಹೊಡೆದುರುಳಿಸಿದ್ದೇವೆ : ಇರಾನ್

ಟೆಹ್ರಾನ್ : ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಸ್ಟೆಲ್ತ್…

15 hours ago

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು : ಮುಖ್ಯಮಂತ್ರಿ ಟೀಕೆ

ಬಾಗಲಕೋಟೆ : ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.…

16 hours ago