ರಾಜ್ಯ

ಅನಿಮಲ್‌, ಟೈಗರ್‌ 3 ಪೋಸ್ಟರ್‌ ಕಿತ್ತೊಗೆದು ʼಯುವರತ್ನʼನ ಚಿತ್ರ ಬಿಡಿಸಿ ಪರಿವರ್ತನೆ ಪಾಠ ಮಾಡಿದ ಯೂತ್ಸ್‌

ʼಈ ಗೋಡೆ ಮೇಲೆ ಪೋಸ್ಟರ್‌ಗಳನ್ನು ಅಂಟಿಸಬಾರದುʼ ಎಂಬ ಬರಹ ಸರ್ವೇ ಸಾಮಾನ್ಯ. ಇದನ್ನು ಬಗೆಬಗೆಯಾಗಿ ಬೇಡಿಕೆ ರೂಪದಲ್ಲಿ ಹಾಗೂ ಎಚ್ಚರಿಕೆಯ ರೂಪದಲ್ಲಿ ಬರೆದರೂ ಸಹ ಯಾವುದೇ ಉಪಯೋಗವಾಗಿಲ್ಲ. ಇದನ್ನು ತಡೆಯುವ ಸಲುವಾಗಿಯೇ ಬೆಂಗಳೂರು ಮಹಾನಗರ ಪಾಲಿಕೆ ನಗರದ ಹಲವು ಗೋಡೆಗಳ ಮೇಲೆ ರಾಜ್ಯದ ಹಲವಾರು ಕವಿಗಳು, ಸಾಧಕರ ಚಿತ್ರಗಳನ್ನು ಬಿಡಿಸುವ ಯೋಜನೆಯನ್ನು ಆರಂಭಿಸಿತ್ತು. ಇದು ಸಫಲತೆಯನ್ನೂ ಸಹ ಕಂಡಿತ್ತು.

ನಗರದ ಪ್ರಮುಖ ರಸ್ತೆಗಳಲ್ಲಿನ ಗೋಡೆಗಳ ಮೇಲೆ ಬಿಬಿಎಂಪಿ ಇಂತಹ ಚಿತ್ರಗಳನ್ನು ಬಿಡಿಸಿದ್ದು, ಇದರಿಂದ ವಂಚಿತವಾದ ಗೋಡೆಗಳೇ ನಗರದಲ್ಲಿ ಹೆಚ್ಚಿವೆ. ಇಂತಹ ಗೋಡೆಗಳನ್ನು ಸ್ಥಳೀಯ ಚಿತ್ರಮಂದಿರಗಳು, ಉತ್ಪನ್ನಗಳ ಮಾರಾಟಗಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದು ತಮ್ಮ ಚಿತ್ರಗಳ ಹಾಗೂ ಉತ್ಪನ್ನಗಳ ಕುರಿತ ಪೋಸ್ಟರ್‌ಗಳನ್ನು ಅದರ ಮೇಲೆ ಅಂಟಿಸಿ ಪ್ರಚಾರ ಮಾಡುತ್ತಾ ಬರುತ್ತಿವೆ.

ಪೋಸ್ಟರ್‌ ಮೇಲೆ ಪೋಸ್ಟರ್‌ ಅಂಟಿಸಿ ಪರಿಸರ ಮಾಲಿನ್ಯ ಮಾಡುವುದರ ಜೊತೆಗೆ ನಗರದ ಸೌಂದರ್ಯವನ್ನೂ ಸಹ ಹಾಳು ಮಾಡಿದ್ದಾರೆ. ಇದೀಗ ಇಂತಹ ಚಟುವಟಿಕೆಗಳ ವಿರುದ್ಧ ‌ʼಯೂತ್‌ ಫಾರ್ ಪರಿವರ್ತನ್‌ʼ ಎಂಬ ತಂಡ ತೊಡೆ ತಟ್ಟಿದೆ. ವಿದ್ಯಾರ್ಥಿಗಳ ಈ ಗುಂಪು ಬೆಂಗಳೂರಿನ ಹಲವೆಡೆ ಈಗಾಗಲೇ ಹದಗೆಟ್ಟಿದ್ದ ಗೋಡೆಗಳಿಗೆ ಬಣ್ಣ ಹಚ್ಚಿ, ಸಾಧಕರ ಚಿತ್ರ ಬರೆದು ಸ್ವಚ್ಛತೆಯನ್ನು ಕಾಪಾಡಿ ಎಂಬ ಸಂದೇಶವನ್ನು ನೀಡಿದ್ದಾರೆ.

ಇದೀಗ ಚಿಕ್ಕಲಸಂದ್ರ ಎಂಬ ಪ್ರದೇಶದಲ್ಲಿ ಈ ತಂಡ ಇಂತಹದ್ದೇ ಕೆಲಸವನ್ನು ಮಾಡಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇಲ್ಲಿನ ಗೋಡೆಯೊಂದರಲ್ಲಿ ಸ್ಥಳೀಯ ಚಿತ್ರಮಂದಿರಗಳು ಅಂಟಿಸಿದ್ದ ಸಿನಿಮಾಗಳ ಪೋಸ್ಟರ್‌ ಹಾಗೂ ಇತರೆ ಉತ್ಪನ್ನಗಳ ಪೋಸ್ಟರ್‌ಗಳನ್ನು ಕಿತ್ತು ಹಾಕಿರುವ ತಂಡ ಗೋಡೆಗೆ ಬಣ್ಣ ಬಳಿದು, ಅಂದದ ಚಿತ್ರಗಳನ್ನು ಬಿಡಿಸಿ, ಜತೆಗೆ ನಟ ಪುನೀತ್‌ ರಾಜ್‌ಕುಮಾರ್‌ ಅವರ ಚಿತ್ರವನ್ನೂ ಸಹ ರಚಿಸಿ ʼಸ್ವಚ್ಛ ಬೆಂಗಳೂರು ನಮ್ಮೆಲ್ಲರ ಜವಾಬ್ದಾರಿʼ ಎಂದು ಬರೆದು ಇತರರಿಗೆ ಮಾದರಿಯಾಗಿದ್ದಾರೆ.

andolana

Recent Posts

ಶ್ರೀ ಮುತ್ತಪ್ಪ ಭಗವತಿ ದೇವಾಲಯದ ವಾರ್ಷಿಕೋತ್ಸವಕ್ಕೆ ತೆರೆ

ಸಿದ್ದಾಪುರ: ಇಲ್ಲಿನ ಶ್ರೀ ಮುತ್ತಪ್ಪ ದೇವಾಲಯದ 51ನೇ ವರ್ಷದ ಹಾಗೂ ಭಗವತಿ ದೇವಾಲಯದ 25ನೇ ವಾರ್ಷಿಕೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ…

7 hours ago

ಹನೂರು| ಆಕಸ್ಮಿಕ ಬೆಂಕಿ ತಗುಲಿ ಜೋಳದ ಮೆದೆ ಸಂಪೂರ್ಣ ನಾಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ತಾಲ್ಲೂಕಿನ ಮೂಗೆಗೌಡದೊಡ್ಡಿ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಜೋಳದ ಮೆದೆ…

7 hours ago

ಗಾಂಜಾ ಮಾರಾಟ, ಸೇವನೆ: ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರ ಬಂಧನ

ಸಿದ್ದಾಪುರ: ನಿಷೇದಿತ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣಗಳಲ್ಲಿ ಇಲ್ಲಿನ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.…

7 hours ago

ಹನೂರು| ತಾಲ್ಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ವೆಂಕಟೇಶ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ…

7 hours ago

ಟಿ.ನರಸೀಪುರ: ಕೆಎಸ್‌ಐಸಿ ಫ್ಯಾಕ್ಟರಿ ಆವರಣದಲ್ಲಿ ಸ್ಟೇಡಿಯಂ ನಿರ್ಮಿಸುವ ಪ್ರಸ್ತಾವನೆ: ಬೀದಿಗಿಳಿದ ಕಾರ್ಮಿಕರು

ಟಿ.ನರಸೀಪುರ: ಟಿ.ನರಸೀಪುರದಲ್ಲಿರುವ ಕೆಎಸ್‌ಐಸಿ ಫಿಲೇಚರ್‌ ಫ್ಯಾಕ್ಟರಿ ಆವರಣದ ಐದು ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದೆ. ಇಂದು…

7 hours ago

ಕೇರಳ ಇನ್ನು ಮುಂದೆ ಕೇರಳಂ: ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಅಸ್ತು

ನವದೆಹಲಿ: ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ಕೇರಳಂ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ…

8 hours ago