ಡಿಸೆಂಬರ್ 14ರಿಂದ 22ರವರೆಗೆ ಬೆಂಗಳೂರು ಹಾಗೂ ಮಂಗಳೂರು ಮತ್ತು ಮೈಸೂರು – ಮಂಗಳೂರು, ಮೈಸೂರು ಅರಸಿಕೆರೆ, ಮೈಸೂರು – ತಾಳಗುಪ್ಪ ನಡುವೆ ಸಂಚರಿಸುವ ಬಹುತೇಕ ಎಲ್ಲಾ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಹಾಸನ ಜಂಕ್ಷನ್ ರೈಲು ನಿಲ್ದಾಣ ಯಾರ್ಡ್ ಅನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಈ ವ್ಯತ್ಯಯವಾಗಲಿದೆ.
ಈ ಸಮಯದಲ್ಲಿ ಹಾಸನ ಜಂಕ್ಷನ್ನ ಸಿಗ್ನಲಿಂಗ್, ಇಂಟರ್ಲಾಕ್ ಹಾಗೂ ವಿವಿಧ ಇಂಜಿನಿಯರಿಂಗ್ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸಲು ರೈಲ್ವೆ ಸಚಿವಾಲಯ ಅನುಮತಿ ನೀಡಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ರದ್ದಾದ ರೈಲುಗಳ ಮಾಹಿತಿ:
ಡಿಸೆಂಬರ್ 14ರಿಂದ 22ರವರೆಗೆ ರದ್ದಾದ ರೈಲುಗಳು
06214 ಮೈಸೂರು-ಅರಸೀಕೆರೆ
06213 ಅರಸೀಕೆರೆ – ಮೈಸೂರು
16207 ಯಶವಂತಪುರ-ಮೈಸೂರು
16208 ಮೈಸೂರು-ಯಶವಂತಪುರ
16222 ಮೈಸೂರು -ತಾಳಗುಪ್ಪ
06268 ಮೈಸೂರು-ಅರಸೀಕೆರೆ
06267 ಅರಸೀಕೆರೆ – ಮೈಸೂರು
06269 ಮೈಸೂರು -ಎಸ್ಎಂವಿಟಿ ಬೆಂಗಳೂರು
16221 ತಾಳಗುಪ್ಪ – ಮೈಸೂರು ( ಡಿಸೆಂಬರ್ 15 ರಿಂದ ಡಿಸೆಂಬರ್ 23ರವರೆಗೆ )
ಬೆಂಗಳೂರು- ಮಂಗಳೂರು- ಕಣ್ಣೂರು ಮಾರ್ಗವಾಗಿ ಸಂಚರಿಸಲಿರುವ ಮತ್ತು ರೈಲು ಸಂಖ್ಯೆ ರೈಲು ಸಂಖ್ಯೆ 16511 ಹಾಗೂ ಬೆಂಗಳೂರು- ಕಾರವಾರ ಪಂಚಗಂಗಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ 16595 ಅನ್ನು ಡಿಸೆಂಬರ್ 16ರಿಂದ ಡಿಸೆಂಬರ್ 20ರವರೆಗೆ ರದ್ದು ಮಾಡಲಾಗಿದೆ.
ಕಣ್ಣೂರು- ಮಂಗಳೂರು- ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿರುವ ರೈಲು ಸಂಖ್ಯೆ 16512 ಮತ್ತು ರೈಲು ಸಂಖ್ಯೆ ಕಾರವಾರ – ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್ 16596 ಅನ್ನು ಡಿಸೆಂಬರ್ 17 ರಿಂದ ಡಿಸೆಂಬರ್ 21 ತನಕ ರದ್ದು ಮಾಡಲಾಗಿದೆ. ವಾರಕ್ಕೆ ಮೂರು ಬಾರಿ ಸಂಚರಿಸಲಿರುವ ಗೊಮ್ಮಟೇಶ್ವರ ಎಕ್ಸ್ಪ್ರೆಸ್ ( ಯಶವಂತಪುರ – ಮಂಗಳೂರು 16575 ) ಅನ್ನು ಡಿಸೆಂಬರ್ 14, 17, 19 ಹಾಗೂ 21ರಂದು ರದ್ದು ಮಾಡಲಾಗಿದೆ. ಮಂಗಳೂರು ಜಂಕ್ಷನ್ನಿಂದ ಯಶವಂತಪುರಕ್ಕೆ ಸಂಚರಿಸುವ ಗೊಮ್ಮಟೇಶ್ವರ ಎಕ್ಸ್ಪ್ರೆಸ್ 16576 ಅನ್ನು ಡಿಸೆಂಬರ್ 15, 18, 20 ಹಾಗೂ 22ರಂದು ರದ್ದುಗೊಳಿಸಲಾಗಿದೆ. ಯಶವಂತಪುರ – ಕಾರವಾರ ಎಕ್ಸ್ಪ್ರೆಸ್ ರೈಲು ಸಂಖ್ಯೆ 16515 ಅನ್ನು ಡಿಸೆಂಬರ್ 13, 15, 18, 20 ಹಾಗೂ 22ರಂದು ರದ್ದು ಮಾಡಲಾಗಿದೆ.
ಹಾಗೆಯೇ ಕಾರವಾರ – ಯಶವಂತಪುರ ಎಕ್ಸ್ಪ್ರೆಸ್ ರೈಲು 16516 ಅನ್ನು ಡಿಸೆಂಬರ್ 14, 16, 19, 21 ಹಾಗೂ 23ರಂದು ರದ್ದು ಮಾಡಲಾಗಿದೆ. ಡಿಸೆಂಬರ್ 16 ಹಾಗೂ 17ರಂದು ಯಶವಂತಪುರ – ಮಂಗಳೂರು ಸಾಪ್ತಾಹಿಕ ರೈಲನ್ನು ( 16539 / 16540 ) ರದ್ದು ಮಾಡಲಾಗಿದೆ.
ಯಾವ ರೈಲುಗಳು ಕೆಲಸ ನಿರ್ವಹಿಸಲಿವೆ?
ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು – ಮುರಡೇಶ್ವರ – ಬೆಂಗಳೂರು ( 16585 / 16586 ) ರೈಲು ಕಾರ್ಯ ನಿರ್ವಹಿಸಲಿದ್ದು, ಇದು ಈ ಸಮಯದಲ್ಲಿ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ಭಾಗವನ್ನು ಸಂಪರ್ಕಿಸುವ ಏಕೈಕ ರೈಲಾಗಿದೆ. ಈ ರೈಲು
16585 ರೈಲು: 14.12.2023 to 16.12.2023ರವರೆಗೆ ಬೆಂಗಳೂರು, ಯಶವಂತಪುರ ಬೈಪಾಸ್, ಚಿಕ್ಕಬಾಣಾವರ, ನೆಲ ಮಂಗಲ, ಶ್ರವಣಬೆಳಗೊಳ ಮತ್ತು ಹಾಸನ ಈ ಬದಲಾದ ಮಾರ್ಗದಲ್ಲಿ ಚಲಿಸಲಿದೆ. ಮತ್ತು 17.12.2023 to 22.12.2023ರವರೆಗೆ ಎಸ್ಎಂವಿಟಿ ಬೆಂಗಳೂರು, ಯಶವಂತಪುರ ಬೈಪಾಸ್, ತುಮಕೂರು, ಅರಸೀಕೆರೆ, ಹಾಸನ ಮಾರ್ಗದಲ್ಲಿ ಚಲಿಸಲಿದೆ.
16586 ರೈಲು: 14.12.2023 to 16.12.2023ರವರೆಗೆ ಹಾಸನ, ಶ್ರವಣಬೆಳಗೊಳ, ನೆಲಮಂಗಲ, ಚಿಕ್ಕಬಾಣಾವರ, ಯಶ ವಂತಪುರ ಬೈಪಾಸ್ ಮತ್ತು ಎಸ್ಎಂವಿಟಿ ಬೆಂಗಳೂರು ಈ ಬದಲಿ ಮಾರ್ಗದಲ್ಲಿ ಚಲಿಸಲಿದೆ. ಮತ್ತು 17.12.2023 to 22.12.2023ರವರೆಗೆ ಹಾಸನ, ಅರಸೀಕೆರೆ, ತುಮಕೂರು, ಯಶವಂತಪುರ ಬೈಪಾಸ್ ಮತ್ತು ಎಸ್ಎಂವಿಟಿ ಬೆಂಗಳೂರು ಈ ಬದಲಿ ಮಾರ್ಗದಲ್ಲಿ ಚಲಿಸಲಿದೆ.
ಹುಣಸೂರು : ತಾಲೂಕಿನ ಹನಗೋಡು ಹೋಬಳಿಯ ಹೆಮ್ಮಿಗೆ ಬಳಿಯ ಜಮೀನಿನಲ್ಲಿ ಹಗಲು ವೇಳೆಯೇ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು…
ಟಿ.ನರಸೀಪುರ : ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದ ಘಟನೆ ಟಿ.ನರಸೀಪುರ ತಾಲ್ಲೂಕಿನ ಶ್ರೀರಂಗರಾಜಪುರ ಗ್ರಾಮದಲ್ಲಿ ನಡೆದಿದೆ. ಕಳೆದ…
ಮೈಸೂರು: ಎಂಎಲ್ಸಿ ಸ್ಥಾನಕ್ಕಾಗಿ ರಕ್ತದಲ್ಲಿ ಸಹಿ ಮಾಡಿ ಮನವಿ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೊಬ್ಬರು ತಮ್ಮ…
ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…
ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ…
ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಪಟ್ಟಣದಿಂದ ಊಟಿ ಮತ್ತು ಸುಲ್ತಾನ್ ಬತ್ತೇರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ಮತ್ತು…