ರಾಜ್ಯ

ಮಂತ್ರಾಲಯದಲ್ಲೂ ಮೂಲರಾಮನ ಮೂರ್ತಿ ಅನಾವರಣ!

ಮಂತ್ರಾಲಯ: ಜನವರಿ ೨೨ರಂದು ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ಲೋಕಾರ್ಪಣೆ ಹಾಗೂ ಬಾಲ ರಾಮನ ಪ್ರತಿಷ್ಠಾಪನೆಯಾಗುತ್ತಿದ್ದು, ಅದೇ ದಿನ ಶ್ರೀ ಕ್ಷೇತ್ರ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮೂಲ ದೇವರಾದ ಶ್ರಿಮನ್‌ ಮೂಲರಾಮದೇವರ ರಪ್ರತಿಮೆ ಅನಾವರಣಗೊಳ್ಳಿದೆ.

ಈ ಮೂಲಕ ಅಯೋಧ್ಯೆ ರಾಮ ಮಂದಿರ ಹಾಗೂ ಮಂತ್ರಾಲಯ ಮೂಲ ರಾಮ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಒಂದಕ್ಕೊಂದು ತಳಕು ಹಾಕಿಕೊಂಡಿದೆ.

ಜ.೨೨ ರಂದು ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳು ಸಾಂಕೇತಿಕವಾಗಿ ಮೂಲರಾಮ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ. ಮೂರ್ತಿ ಹಾಗೂ ಕಟ್ಟಡಗಳ ಕಾಮಗಾರಿ ಸಂಪೂರ್ಣವಾದ ಬಳಿಕ ಪ್ರತಿಮೆಯನ್ನು ಶಾಸ್ತ್ರೋಕ್ತವಾಗಿ ಲೋಕಾರ್ಪಣೆ ಮಾಡಲಾಗುವುದಾಗಿ ಶ್ರೀಮಠದ ಆಡಳಿತ ಮಂಡಳಿ ತಿಳಿಸಿದೆ.

೫೪ ಅಡಿ ಎತ್ತರದ ಭವ್ಯ ರಾಮ ಪ್ರತಿಮೆ
ಮಂತ್ರಾಲಯದಲ್ಲಿ ನೆಲೆನಿಲ್ಲಲಿರುವ ಮೂಲರಾಮ ದೇವರ ಪ್ರತಿಮೆ ಸುಮಾರು ೨೫೦ ಟನ್‌ ತೂಕ ೫೪ ಅಡಿ ಎತ್ತರವಿದೆ. ಈಗಾಗಲೆ ಪ್ರತಿಮೆಯ ಕೆಲಸ ೯೦ ಭಾಗ ಸಂಪೂರ್ಣವಾಗಿದ್ದು, ಇನ್ನೇನು ಕೊನೆ ಹಂತದ ಕೆಲಸ ಬಾಕಿ ಉಳಿದಿದೆ. ಕಾಮಗಾರಿ ಸಂಪೂರ್ಣವಾದ ಬಳಿಕ ಹೋಮ-ಹವನ, ವೇದಮಂತ್ರಗಳೊಂದಿಗೆ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಆಯೋಧ್ಯೆ ರಾಮನಿಗೂ ಮಂತ್ರಾಲಯದ ಶ್ರೀಮಠದಲ್ಲಿ ಪೂಜಿಸಲ್ಪಡುವ ಮೂಲರಾಮ ದೇವರಿಗೂ ನಂಟು ಇದೆ. ದೇವಲೋಕದಲ್ಲಿ ಪ್ರತಿಮಾ ಮಾಧ್ಯಮದಲ್ಲಿ ಬ್ರಹ್ಮದೇವರು ಭಗವಂತನನ್ನು ಆರಾಧನೆ ಮಾಡಬೇಕು ಎಂದು ಸಂಪಲ್ಪಿಸಿ ವಿಶ್ವಕರ್ಮರಿಂದ ಶುದ್ಧ ತಾಮ್ರದ ಪ್ರತಿಮೆಯನ್ನು ಮಾಡಿಸಿದರು. ಸಕಲ ಸಲ್ಲಕ್ಷಣಗಳಿಂದ ಕೂಡಿದ ಪ್ರತಿಮೆಯನ್ನು ಬ್ರಹ್ಮದೇವರು ಪೂಜಿಸಿದರು. ಕಾಲಕ್ರಮೇಣ ಎಲ್ಲಾ ದೇವಾನು ದೇವತೆಗಳು, ಋಷಿ ಮುನಿಗಳು ಈ ಮೂರ್ತಿಯನ್ನು ಪೂಜಿಸಿದ್ದಾರೆ. ಹಾಗೇ ಅಯೋಧ್ಯೆಗೂ ಈ ಮೂರ್ತಿ ಬಂದಿದೆ. ರಾಮನ ಪೂರ್ವಜರೂ ಈ ಮೂರ್ತಿಯನ್ನು ಪೂಜಿಸಿದ್ದಾರೆ. ಸ್ವತಃ ರಾಮನೂ ಈ ಮೂರ್ತಿಯನ್ನು ಪೂಜೆ ಮಾಡಿದ ನಂತರ ಈ ಮೂರ್ತಿ ಮೂಲರಾಮನಾಗಿ ಪರ್ವರ್ತನೆಯಾಗಿದ್ದು. ಈ ರೀತಿ ಶ್ರೀ ಮಠದ ಮೂಲರಾಮರಿಗೂ ಆಯೋಧ್ಯೆ ರಾಮರಿಗೂ ಅವಿನಾಭಾವ ಸಂಬಂಧವಿದೆ.
– ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳು
ಪೀಠಾಧಿಪತಿಗಳು, ಶ್ರೀ ರಾಘವೇಂದ್ರಸ್ವಾಮಿಗಳ ಮಠ, ಮಂತ್ರಾಲಯ

andolanait

Recent Posts

ಓದುಗರ ಪತ್ರ: ಮುತ್ತತ್ತಿ ನದಿ ಬಳಿ ಪೊಲೀಸರನ್ನು ನಿಯೋಜಿಸಿ

ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ಕಾವೇರಿ ನದಿ ನೀರಿಗೆ ಇಳಿದು ಸೆಲ್ಛಿ ತೆಗೆದುಕೊಳ್ಳಲು ಹೋದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು…

1 hour ago

ಓದುಗರ ಪತ್ರ: ಚಪ್ಪಲಿ ಎಸೆತ ಪ್ರಕರಣ ಎಳೆದಾಡುವುದು ಬೇಡ

ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರ ಮೇಲೆ ಜಾ.ದಳ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಎಸೆದಿದ್ದು, ಈಗಾಗಲೇ ಆ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.…

1 hour ago

ಓದುಗರ ಪತ್ರ: ತರಬೇತಿಗೆ ಅರ್ಜಿ ಏಕೆ ಕರೆದಿಲ್ಲ?

ಸರ್ಕಾರದ ಯಾವುದೇ ಯೋಜನೆ, ಕಾರ್ಯಕ್ರಮ, ಸವಲತ್ತು ಮೊದಲು ದಲಿತ, ದಮನಿತ, ಶೋಷಿತ ವರ್ಗಕ್ಕೆ ತಲುಪಬೇಕು. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆ…

1 hour ago

ಓದುಗರ ಪತ್ರ: ಬಿಡದಿ ಟೌನ್ ಶಿಪ್: ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡುವ ಮೊದಲು ಮತ್ತೊಮ್ಮೆ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿ…

1 hour ago

‘ರಾಮ ರಾಜಕಾರಣಕ್ಕೆ ಅಗ್ನಿ ಪರೀಕ್ಷೆ..!

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ನೀಡಿದ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಹಣ, ಆಭರಣಗಳ ಕಳ್ಳತನ ಪ್ರಕರಣ ರಾಮಭಕ್ತರ ವಿಶ್ವಾಸವನ್ನು…

1 hour ago

ಇದು ಶೌಚಾಲಯ… ಈಗ ಅನುಪಯುಕ್ತ ವಸ್ತುಗಳ ಗೋದಾಮು!

ಎಚ್.ಎಸ್.ದಿನೇಶ್ ಕುಮಾರ್ ಮೈಸೂರಿನ ಶ್ರೀರಾಂಪುರದ ಉದ್ಯಾನದಲ್ಲಿರುವ ಶೌಚಾಲಯದ ದುಸ್ಥಿತಿ ಮೈಸೂರು: ಜನರ ಲಕ್ಷಾಂತರ ರೂ. ತೆರಿಗೆ ಹಣವನ್ನು ವ್ಯಯಿಸಿ ಕಟ್ಟಿಸಿರುವ…

2 hours ago