ರಾಜ್ಯ

ಮಂತ್ರಾಲಯದಲ್ಲೂ ಮೂಲರಾಮನ ಮೂರ್ತಿ ಅನಾವರಣ!

ಮಂತ್ರಾಲಯ: ಜನವರಿ ೨೨ರಂದು ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ಲೋಕಾರ್ಪಣೆ ಹಾಗೂ ಬಾಲ ರಾಮನ ಪ್ರತಿಷ್ಠಾಪನೆಯಾಗುತ್ತಿದ್ದು, ಅದೇ ದಿನ ಶ್ರೀ ಕ್ಷೇತ್ರ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮೂಲ ದೇವರಾದ ಶ್ರಿಮನ್‌ ಮೂಲರಾಮದೇವರ ರಪ್ರತಿಮೆ ಅನಾವರಣಗೊಳ್ಳಿದೆ.

ಈ ಮೂಲಕ ಅಯೋಧ್ಯೆ ರಾಮ ಮಂದಿರ ಹಾಗೂ ಮಂತ್ರಾಲಯ ಮೂಲ ರಾಮ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಒಂದಕ್ಕೊಂದು ತಳಕು ಹಾಕಿಕೊಂಡಿದೆ.

ಜ.೨೨ ರಂದು ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳು ಸಾಂಕೇತಿಕವಾಗಿ ಮೂಲರಾಮ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ. ಮೂರ್ತಿ ಹಾಗೂ ಕಟ್ಟಡಗಳ ಕಾಮಗಾರಿ ಸಂಪೂರ್ಣವಾದ ಬಳಿಕ ಪ್ರತಿಮೆಯನ್ನು ಶಾಸ್ತ್ರೋಕ್ತವಾಗಿ ಲೋಕಾರ್ಪಣೆ ಮಾಡಲಾಗುವುದಾಗಿ ಶ್ರೀಮಠದ ಆಡಳಿತ ಮಂಡಳಿ ತಿಳಿಸಿದೆ.

೫೪ ಅಡಿ ಎತ್ತರದ ಭವ್ಯ ರಾಮ ಪ್ರತಿಮೆ
ಮಂತ್ರಾಲಯದಲ್ಲಿ ನೆಲೆನಿಲ್ಲಲಿರುವ ಮೂಲರಾಮ ದೇವರ ಪ್ರತಿಮೆ ಸುಮಾರು ೨೫೦ ಟನ್‌ ತೂಕ ೫೪ ಅಡಿ ಎತ್ತರವಿದೆ. ಈಗಾಗಲೆ ಪ್ರತಿಮೆಯ ಕೆಲಸ ೯೦ ಭಾಗ ಸಂಪೂರ್ಣವಾಗಿದ್ದು, ಇನ್ನೇನು ಕೊನೆ ಹಂತದ ಕೆಲಸ ಬಾಕಿ ಉಳಿದಿದೆ. ಕಾಮಗಾರಿ ಸಂಪೂರ್ಣವಾದ ಬಳಿಕ ಹೋಮ-ಹವನ, ವೇದಮಂತ್ರಗಳೊಂದಿಗೆ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಆಯೋಧ್ಯೆ ರಾಮನಿಗೂ ಮಂತ್ರಾಲಯದ ಶ್ರೀಮಠದಲ್ಲಿ ಪೂಜಿಸಲ್ಪಡುವ ಮೂಲರಾಮ ದೇವರಿಗೂ ನಂಟು ಇದೆ. ದೇವಲೋಕದಲ್ಲಿ ಪ್ರತಿಮಾ ಮಾಧ್ಯಮದಲ್ಲಿ ಬ್ರಹ್ಮದೇವರು ಭಗವಂತನನ್ನು ಆರಾಧನೆ ಮಾಡಬೇಕು ಎಂದು ಸಂಪಲ್ಪಿಸಿ ವಿಶ್ವಕರ್ಮರಿಂದ ಶುದ್ಧ ತಾಮ್ರದ ಪ್ರತಿಮೆಯನ್ನು ಮಾಡಿಸಿದರು. ಸಕಲ ಸಲ್ಲಕ್ಷಣಗಳಿಂದ ಕೂಡಿದ ಪ್ರತಿಮೆಯನ್ನು ಬ್ರಹ್ಮದೇವರು ಪೂಜಿಸಿದರು. ಕಾಲಕ್ರಮೇಣ ಎಲ್ಲಾ ದೇವಾನು ದೇವತೆಗಳು, ಋಷಿ ಮುನಿಗಳು ಈ ಮೂರ್ತಿಯನ್ನು ಪೂಜಿಸಿದ್ದಾರೆ. ಹಾಗೇ ಅಯೋಧ್ಯೆಗೂ ಈ ಮೂರ್ತಿ ಬಂದಿದೆ. ರಾಮನ ಪೂರ್ವಜರೂ ಈ ಮೂರ್ತಿಯನ್ನು ಪೂಜಿಸಿದ್ದಾರೆ. ಸ್ವತಃ ರಾಮನೂ ಈ ಮೂರ್ತಿಯನ್ನು ಪೂಜೆ ಮಾಡಿದ ನಂತರ ಈ ಮೂರ್ತಿ ಮೂಲರಾಮನಾಗಿ ಪರ್ವರ್ತನೆಯಾಗಿದ್ದು. ಈ ರೀತಿ ಶ್ರೀ ಮಠದ ಮೂಲರಾಮರಿಗೂ ಆಯೋಧ್ಯೆ ರಾಮರಿಗೂ ಅವಿನಾಭಾವ ಸಂಬಂಧವಿದೆ.
– ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳು
ಪೀಠಾಧಿಪತಿಗಳು, ಶ್ರೀ ರಾಘವೇಂದ್ರಸ್ವಾಮಿಗಳ ಮಠ, ಮಂತ್ರಾಲಯ

andolanait

Recent Posts

ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ಪುರಭವನ?

ಮೈಸೂರು : ಸಾಂಸ್ಕೃತಿಕ ನಗರದ ಹೃದಯ ಭಾಗದಲ್ಲಿ ರುವ ಐತಿಹಾಸಿಕ ರಂಗಾಚಾರ್ಲು ಪುರಭವನ ಇದೀಗ ನಿರ್ಲಕ್ಷ್ಯದ ಪರಿಣಾಮ ಶಿಥಿಲಾವಸ್ಥೆಯತ್ತ ಸಾಗುತ್ತಿದೆ.…

57 mins ago

ಹಿಜಾಬ್‌ ವಿವಾದ : ಹೊಸ ಆದೇಶ ಸಕಾರಾತ್ಮಕ ಬೆಳವಣಿಗೆಗೆ ಸಹಾಯ

ಸಂವಿಧಾನಾತ್ಮಕ ಹಕ್ಕು ಅನುಷ್ಠಾನದಲ್ಲಿ ಎಚ್ಚರಿಕೆ ಅಗತ್ಯ ನಿರಂಜನಾರಾಧ್ಯ ವಿ.ಪಿ.ಅಭಿವೃದ್ಧಿ ಶಿಕ್ಷಣ ತಜ್ಞ ಹಿಂದೆ ೨೦೨೨ರಲ್ಲಿ ಹಿಜಾಬ್ ನಿಷೇಧಿಸಿ ಬಿಜೆಪಿ ನೇತೃತ್ವದ…

2 hours ago

ಗಾಂಧಿ ಅಭಿಯಾನ ಅರಿವಿನ ಯಾನ ; ಗಾಂಧಿ ಮುಟ್ಟಿದ ನನ್ನೂರಿನ ಮನಸುಗಳು…

• ಎಸ್.ಗಂಗಾಧರಯ್ಯ ಗಾಂಧಿ ಎಂಬುದೊಂದು ತಾಯ್ತನದ ಭಾವ, ಅದು ಅಂದು ಇಂದು ಮುಂದೆ ಯಾವತ್ತೂ ಎದೆಯ ಕತ್ತಲಿಗೆ ಹಚ್ಚಿದ ತುಂಬಿಹೋಗದ…

2 hours ago

ಗಾಂಧಿ ಅಭಿಯಾನ ಅರಿವಿನ ಯಾನ : ಇಲ್ಲಿದೆ ಗಾಂಧಿ ಆತ್ಮಕತೆಯ ಆಯ್ದ ತುಣುಕು

ನನ್ನ ನಡೆತೆಯನ್ನು ಬಹು ಎಚ್ಚರಿಕೆಯಿಂದ ಕಾಯ್ದುಕೊಂಡಿದ್ದೆ ನನ್ನ ಮದುವೆಯಾದ ಕಾಲಕ್ಕೆ ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದೆ. ನಾನು ಉಪಾಧ್ಯಾಯರ ಪ್ರೀತಿಯನ್ನು ಯಾವಾಗಲೂ…

3 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಮೇ.16 ಶನಿವಾರ  

6 hours ago

ಮನೆಯ ಚಾವಣಿ ಕುಸಿದು ನಾಲ್ವರು ಸಾವು ; ತಲಾ 5 ಲಕ್ಷ ಪರಿಹಾರ ಘೋಷಣೆ

ವಿಜಯಪುರ : ಭಾರೀ ಗಾಳಿ ಮತ್ತು ಮಳೆಯಿಂದಾಗಿ ಹಳೆಯ ಮನೆಯ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ದುರ್ಮರಣವನ್ನಪ್ಪಿದ ಘಟನೆ…

23 hours ago