ರಾಜ್ಯ

ರನ್ಯಾರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಸಚಿವರ ಹೆಸರು ಬಹಿರಂಗ: ಶಾಸಕ ಯತ್ನಾಳ್‌ಗೆ ಸವಾಲ್‌ ಹಾಕಿದ ಕಾಂಗ್ರೆಸ್‌ ಸಚಿವರು

ಬೆಂಗಳೂರು: ರನ್ಯಾರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಸಚಿವರ ಹೆಸರನ್ನು ಅಧಿವೇಶನದಲ್ಲಿ ಬಹಿರಂಗ ಪಡಿಸುವೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರ ಹೇಳಿಕೆಗೆ ಕಾಂಗ್ರೆಸ್‌ ಸಚಿವರು ಸವಾಲ್‌ ಹಾಕಿದ್ದಾರೆ.

ವಿಧಾನಸೌಧದಲ್ಲಿ ಇಂದು(ಮಾರ್ಚ್.‌17) ಈ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಸಚಿವ ಸಂತೋಷ್‌ ಲಾಡ್‌ ಅವರು, ಶಾಸಕ ಯತ್ನಾಳ್‌ ಅವರು ಆ ಸಚಿವರ ಹೆಸರನ್ನು ಬಹಿರಂಗ ಪಡಿಸಲಿ ಒಳ್ಳೆಯದು. ಸಚಿವರು ಯಾರೆಂದು ಹೇಳಿದರೆ ತನಿಖೆಗೂ ಅನುಕೂಲವಾಗಲಿದೆ, ಈಗಲೇ ಯಾಕೆ ಹೇಳಬಾರದು? ಅಲ್ಲದೇ ಅವರು ಹೇಳಿರುವುದು ಸುಳ್ಳಾ ಅಥವಾ ಸತ್ಯನಾ ಎಂಬುದು ರಾಜ್ಯದ ಜನತೆಗೂ ತಿಳಿಯಲಿದೆ. ಅವರು ನೀಡಿರುವ ಹೇಳಿಕೆಯಲ್ಲಿ ಸತ್ಯವಿದ್ದರೆ ಈಗಲೇ ಹೊರಬರಲಿ ಎಂದು ತಿರುಗೇಟು ನೀಡಿದ್ದಾರೆ.

ಸಚಿವ ಎಂ.ಬಿ.ಪಾಟೀಲ್‌

ಈ ಕುರಿತು ಸಚಿವ ಎಂ.ಬಿ.ಪಾಟೀಲ್‌ ಅವರು ಮಾತನಾಡಿ, ಶಾಸಕ ಯತ್ನಾಳ್‌ ಹೊರಗಡೆ ಹೇಳಿಕೆ ನೀಡುವುದು ಬೇಡ, ಅವರಿಗೆ ತಾಕತ್ತಿದ್ದರೆ ಆ ಸಚಿವರ ಹೆಸರು ಹೇಳಲಿ. ಬೇಕಾದರೆ ಅಧಿವೇಶನದಲ್ಲೇ ಬಹಿರಂಗಪಡಿಸಲಿ ಯಾರು ಬೇಡವೆಂದು ಹೇಳಿದ್ದು. ಆ ಪ್ರಕರಣದಲ್ಲಿ ಯಾರು ಯಾರು ಕೇಂದ್ರ ಸಚಿವರು, ಇದ್ದಾರೆ, ಅವರ ಪಕ್ಷದವರು ಯಾರಿದ್ದಾರೆ ಹಾಗೂ ನಮ್ಮ ಪಕ್ಷದವರು ಇದ್ದಾರೆ ಎಂದು ಹೇಳಲಿ. ಅದನ್ನು ಬಿಟ್ಟು ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದು ಬೇಡ ಟಾಂಗ್‌ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಸಚಿವ ರಾಮಲಿಂಗ ರೆಡ್ಡಿ ಅವರು ಪ್ರತಿಕ್ರಿಯಿಸಿ, ಯತ್ನಾಳ್‌ ಅವರ ಬಳಿ ಮಾಹಿತಿ ಇದ್ದರೆ ಅದನ್ನು ಬಹಿರಂಗ ಪಡಿಸಲಿ. ಈ ವಿಚಾರದಲ್ಲಿ ಅವರಿಗೆ ಯಾರದ್ದೂ ಅಡ್ಡಿ ಇಲ್ಲ. ಅವರು ಎಷ್ಟು ಬೇಗ ಆ ಸಚಿವರ ಹೆಸರು ಹೇಳುತ್ತಾರೋ ಅಷ್ಟೂ ಬೇಗ ತನಿಖೆ ಸುಲಭವಾಗಲಿದೆ ಎಂದು ಹೇಳಿದ್ದಾರೆ.

ಅರ್ಚನ ಎಸ್‌ ಎಸ್

Recent Posts

ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆ ಬಾಗಿಲು ಒಡೆದು ಇಡಿ ದಾಳಿ

ಬೆಂಗಳೂರು : ಕೆಪಿಎಸ್‌ಸಿ ಹಗರಣ ಸಂಬಂಧ ಫೋನ್ ಕರೆಗೆ ಪ್ರತಿಕ್ರಿಯಿಸದ ಹಿನ್ನೆಲೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅನುಪಸ್ಥಿತಿಯಲ್ಲಿ ಅವರ…

5 mins ago

ಚಾಮರಾಜನಗರ ಅರಣ್ಯ ವಲಯದಲ್ಲಿ ಹೆಚ್ಚಿದ ಬೇಟೆಗಾರರ ಹಾವಳಿ: 16 ವರ್ಷಗಳಲ್ಲಿ 3,289 ಪ್ರಕರಣ ದಾಖಲು..!

ಚಾಮರಾಜನಗರ: ಚಾಮರಾಜನಗರ ಅರಣ್ಯ ವಲಯದಲ್ಲಿ ಬೇಟೆಗಾರರ ಹಾವಳಿ ಹೆಚ್ಚಾಗಿದೆ. ಕಳೆದ 16 ವರ್ಷಗಳಲ್ಲಿ ಬರೋಬ್ಬರಿ 3,289 ವನ್ಯಜೀವಿ ಅಪರಾಧ ಪ್ರಕರಣಗಳು…

2 hours ago

ಹುಲಿ ನೋಡಲು ತೆರಳಿದ್ದ ಸಫಾರಿ ವಾಹನ ಅಪಘಾತ: 25 ಪ್ರವಾಸಿಗರಿಗೆ ಗಾಯ

ಎಚ್‌.ಡಿ.ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಫಾರಿಗೆ ತೆರಳಿದ್ದ ಪ್ರವಾಸಿಗರ ವಾಹನ ಅಪಘಾತಕ್ಕೀಡಾಗಿ, ಹಲವರಿಗೆ ಗಂಭೀರ ಗಾಯಗಳಾಗಿವೆ. ಸಫಾರಿಯಲ್ಲಿ ಹುಲಿ ಕಾಣಿಸಿಕೊಂಡಿರುವ…

4 hours ago

ಓದುಗರ ಪತ್ರ: ಚೌಕಾಸಿ…!

ಚೌಕಾಸಿ...! ಸಾಮಾನ್ಯವಾಗಿ ಫುಟ್ಟ್ಪಾತ್ ವ್ಯಾಪಾರದಲ್ಲಿ ನಡೆಯುವುದು ಚೌಕಾಸಿ... ಈಗ, ಫುಟ್ಪಾತ್ನಲ್ಲಿ ಪಾದಚಾರಿ-ವ್ಯಾಪಾರಿಗಳ ನಡುವೆಯೂ ನಡೆಯಬಹುದು ಓಡಾಡುವ ರಸ್ತೆಗಾಗಿ ಚೌಕಾಸಿ !…

9 hours ago

ಓದುಗರ ಪತ್ರ: ವಿಧಾನ ಮಂಡಲ ಅಧಿವೇಶನದ ಉದ್ದೇಶ ಈಡೇರುತ್ತಿದೆಯೇ?

ಕಳೆದ ಒಂದು ವಾರದಿಂದ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನ, ಡಿ. ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾದ ನಂತರ…

9 hours ago

ಓದುಗರ ಪತ್ರ: ಸಹಕಾರ ತತ್ವ ಎಲ್ಲರಿಗೂ ಕ್ಷೇಮ

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿಯ ಸಭೆಯಲ್ಲಿ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್…

9 hours ago