ರಾಜ್ಯ

ಆಫ್ರಿಕಾದಲ್ಲಿ ಭಾರತದ ಮೊದಲ ಸರ್ಕಾರಿ ಕೌಶಲ್ಯ ಪಾಲುದಾರಿಕೆ

ಬೆಂಗಳೂರು : ಭಾರತ-ಆಫ್ರಿಕಾ ನಡುವಿನ ಮಹತ್ವದ ಸಹಕಾರದಲ್ಲಿ ಹೆಗ್ಗುರುತು ಮೂಡಿದೆ. ಕರ್ನಾಟಕದ ಸರ್ಕಾರಿ ಸ್ವಾಮ್ಯದ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರವನ್ನು (GTTC) ನಮೀಬಿಯಾ ಈಗ ತನ್ನ ತಾಂತ್ರಿಕ ಜ್ಞಾನ ಮತ್ತು ವೃತ್ತಿಪರ ತರಬೇತಿ ಪಾಲುದಾರನಾಗಿ ಆಯ್ಕೆ ಮಾಡಿದೆ.

ಆಫ್ರಿಕಾದ ನೆಲದಲ್ಲಿ ಭಾರತೀಯ ಸರ್ಕಾರಿ ಜ್ಞಾನ ಸಂಸ್ಥೆಯೊಂದು ಮೀಸಲಾದ ಘಟಕವನ್ನು ಅಲ್ಲಿ ಸ್ಥಾಪಿಸುತ್ತಿದೆ. ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ಅವರ ಸಮ್ಮುಖದಲ್ಲಿ ಜಿಟಿಟಿಸಿಯ ಡಾ. ವೈ.ಕೆ. ದಿನೇಶ್ ಕುಮಾರ್ ಮತ್ತು ಆಫ್ರಿಕಾ ಇಂಡಿಯಾ ಎಕನಾಮಿಕ್ ಫೌಂಡೇಶನ್ (AIEF) ಪ್ರಧಾನ ಕಾರ್ಯದರ್ಶಿ ಅನಿಲ್ ಶಿಂಧೆ ಅವರು ಸಹಯೋಗವನ್ನು ಔಪಚಾರಿಕಗೊಳಿಸುವ ತಿಳಿವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದರು.

ಐದು ದಶಕಗಳ ಇತಿಹಾಸ ಹೊಂದಿರುವ ಜಿಟಿಟಿಸಿ ಕರ್ನಾಟಕದಾದ್ಯಂತ 20 ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಪ್ರತಿ ವರ್ಷ ಸಾವಿರಾರು ಜನರಿಗೆ ನಿಖರ ಉಪಕರಣ ತಯಾರಿಕೆ, ಸಿಎನ್‌ಸಿ ಕಾರ್ಯಾಚರಣೆ, ಮೆಕಾಟ್ರಾನಿಕ್ಸ್ ಮತ್ತು ರೊಬೊಟಿಕ್ಸ್‌ನಲ್ಲಿ ತರಬೇತಿ ನೀಡುತ್ತಿದೆ. ಇದರ ಹಳೆಯ ವಿದ್ಯಾರ್ಥಿಗಳ ಜಾಲವು ಐದು ಲಕ್ಷಕ್ಕೂ ಹೆಚ್ಚು ಕೌಶಲ್ಯಪೂರ್ಣ ವೃತ್ತಿಪರರನ್ನು ಹೊಂದಿದೆ ಮತ್ತು ಅದರ ಪಠ್ಯಕ್ರಮವು ಪ್ರಸ್ತುತ ಉದ್ಯಮದ ಅಗತ್ಯಗಳಿಗೆ ನಿಕಟವಾಗಿ ಹೊಂದಿಕೊಂಡಿದೆ.

ಜಿಟಿಟಿಸಿಯು ಆಫ್ರಿಕಾದ ಕೈಗಾರಿಕಾ ಕೌಶಲ್ಯ ಅಗತ್ಯಗಳಿಗೆ ಒಂದು ದೃಢವಾದ ಮಾದರಿಯಾಗಿದೆ. ಇದು “ಆಫ್ರಿಕನ್ ಪರಿಸ್ಥಿತಿಗೆ ಹೊಂದಿಕೊಳ್ಳುವ” ಸಾಮರ್ಥ್ಯವನ್ನು ಹೊಂದಿದೆ. ಈ ಪಾಲುದಾರಿಕೆಯು ನಮೀಬಿಯಾದಲ್ಲಿ ಕೌಶಲ್ಯಪೂರ್ಣ ಪ್ರತಿಭೆಯ ಕಣಜ ನಿರ್ಮಿಸುತ್ತದೆ. ಆಫ್ರಿಕಾದಾದ್ಯಂತ ಜಿಟಿಸಿಸಿ ಪದವೀಧರರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಸಚಿವರು ತಿಳಿಸಿದರು.

ಕರ್ನಾಟಕ ಮೂಲದ ಎಂಎಸ್‌ಎಂಇಗಳಿಗೆ ಹೆಚ್ಚುವರಿ ಮಾರುಕಟ್ಟೆ ಅವಕಾಶ ಒದಗಿಸಲಿದೆ ಮತ್ತು ಶಿಕ್ಷಣ, ಕೌಶಲ್ಯದಲ್ಲಿ ಜಾಗತಿಕ ಮನ್ನಣೆಯನ್ನು ನೀಡಲಿದೆ. ಶಿಕ್ಷಣ ರಾಜತಾಂತ್ರಿಕತೆಯ ಮೂಲಕ ಕರ್ನಾಟಕದ ಶಕ್ತಿಯನ್ನು ಸಬಲೀಕರಣಗೊಳಿಸಲಿದೆ ಎಂದು ಎಂದು ಸಚಿವರು ಹೇಳಿದರು.

ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಡಾ. ವೈ.ಕೆ ದಿನೇಶ್ ಕುಮಾರ್, ಈ ಉಪಕ್ರಮವು ಕರ್ನಾಟಕವನ್ನು ಕೌಶಲ್ಯ ಅಭಿವೃದ್ಧಿಯಲ್ಲಿ ಜಾಗತಿಕ ನಾಯಕನನ್ನಾಗಿ ಮಾಡಿದೆ ಎಂದು ಹೇಳಿದರು. “ಉಪಕರಣಗಳ ತಯಾರಿಕೆ ಮತ್ತು ಮುಂದುವರಿದ ಉತ್ಪಾದನೆಯಲ್ಲಿ ಜಿಟಿಟಿಸಿಯ ಪರಿಣತಿಯು ಈಗ ಜಾಗತಿಕ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದರು.

ಭಾರತ-ಆಫ್ರಿಕನ್‌ ರಾಷ್ಟ್ರಗಳ ನಡುವೆ ಸಹಯೋಗ: ಭಾರತ ಮತ್ತು 54 ಆಫ್ರಿಕನ್ ರಾಷ್ಟ್ರಗಳ ನಡುವೆ ಜ್ಞಾನ, ತಂತ್ರಜ್ಞಾನ ಮತ್ತು ಹೂಡಿಕೆ ಸಹಯೋಗವನ್ನು ಬೆಳೆಸಲು ಸ್ಥಾಪಿಸಲಾದ ಎಐಇಎಫ್‌, ಅಡಿಸ್ ಅಬಾಬಾದಲ್ಲಿ ನಡೆದ ಶೃಂಗಸಭೆ 2020 ರಲ್ಲಿ ಅದರ ಉಪಕ್ರಮಗಳನ್ನು ಔಪಚಾರಿಕವಾಗಿ ಸ್ವಾಗತಿಸಿದ ಆಫ್ರಿಕನ್ ಒಕ್ಕೂಟದಿಂದ ಅನುಮೋದನೆಗಳನ್ನು ಪಡೆದಿದೆ.

ಎಐಇಎಫ್‌ ಅಧಿಕಾರಿಗಳು ನಮೀಬಿಯಾದ ಪಾಲುದಾರಿಕೆ ಬಗ್ಗೆ ತಿಳಿಸಿದರು. ಯುರೇನಿಯಂ, ವಜ್ರಗಳು, ಚಿನ್ನ ಮತ್ತು ಅಪರೂಪದ ಭೂಮಿಯ ಖನಿಜಗಳು ಸೇರಿದಂತೆ ಅದರ ಶ್ರೀಮಂತ ನೈಸರ್ಗಿಕ ಸಂಪನ್ಮೂಲಗಳು ಹಾಗೂ ಸಮುದ್ರ, ಇಂಧನ, ಕೃಷಿ ವ್ಯವಹಾರ, ಲಾಜಿಸ್ಟಿಕ್ಸ್ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಅದರ ತ್ವರಿತ ಅಭಿವೃದ್ಧಿಯನ್ನು ಉಲ್ಲೇಖಿಸಿದರು. ದೇಶದ ರಾಜಕೀಯ ಸ್ಥಿರತೆ, ಇಂಗ್ಲಿಷ್ ಮಾತನಾಡುವ ಜನಸಂಖ್ಯೆ ಮತ್ತು ವ್ಯವಹಾರ ಸ್ನೇಹಿ ವಾತಾವರಣವು ಭಾರತೀಯ ಕೌಶಲ್ಯ ಮಾದರಿಯನ್ನು ಜಾರಿಗೆ ತರಲಿದೆ. ಅಲ್ಲದೇ ಇದು ಅತ್ಯುತ್ತಮ ಕೌಶಲ್ಯ ತಾಣವಾಗಿರಲಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಚಾ.ಬೆಟ್ಟ: ಮೂಲ ಸ್ವರೂಪಕ್ಕೆ ಧಕ್ಕೆಯಾಗದಿರಲಿ

ಚಾಮುಂಡಿ ಬೆಟ್ಟದಲ್ಲಿ ಪ್ರಸಾದ ಯೋಜನೆಯಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಪ್ರಜ್ಞಾವಂತ…

3 hours ago

ಓದುಗರ ಪತ್ರ: ಕೆಎಚ್‌ಬಿ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಿ

ಮೈಸೂರು ತಾಲ್ಲೂಕಿನ ಧನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆಂಚಲಗೂಡು ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ)ಯಿಂದ ನಿರ್ಮಿಸಿರುವ ಬಡಾವಣೆಯಲ್ಲಿ ನೀರು,…

3 hours ago

ಓದುಗರ ಪತ್ರ: ಬೈಕ್ ಟ್ಯಾಕ್ಸಿ ಚಾಲಕರು ನಿಯಮ ಪಾಲಿಸಲಿ

ಮೈಸೂರಿನಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣ ಮೊದಲಾದ ಕಡೆಗೆ ತೆರಳುವವರು, ಅದರಲ್ಲೂ ಮುಖ್ಯವಾಗಿ ಒಬ್ಬರೇ ಪ್ರಯಾಣಿಸುವವರು ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ…

3 hours ago

ಓದುಗರ ಪತ್ರ: ‘ಉದಯರವಿ’ಯನ್ನು ಸ್ಮಾರಕವನ್ನಾಗಿ ರೂಪಿಸಿ

ರಾಷ್ಟ್ರಕವಿ ಕುವೆಂಪು ಅವರು ವಾಸವಿದ್ದ ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ‘ಉದಯರವಿ’ ಮನೆಯನ್ನು ಸ್ಮಾರಕವನ್ನಾಗಿ ಮಾಡಬೇಕೆಂದು ಸಾಹಿತ್ಯಾಸಕ್ತರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದರೂ ಸಂಬಂಧಪಟ್ಟವರು…

3 hours ago

ಪ್ರೊ.ಆರ್.ಎಂ.ಚಿಂತಾಮಣಿ ಅವರ ವಾರದ ಅಂಕಣ: ಸಮರ್ಥ ಕಾಯ್ದೆ ಪಾಲನಾ ವ್ಯವಸ್ಥೆ ಮುಖ್ಯ

ಪ್ರೊ.ಆರ್.ಎಂ.ಚಿಂತಾಮಣಿ ನುರಿತ ಹಣಕಾಸು ಆಡಳಿತಗಾರ ಮತ್ತು ದೇಶದ ಹಣಕಾಸು ಮತ್ತು ಬಂಡವಾಳ ಪೇಟೆಗಳ ಬೆಳವಣಿಗೆ ಮತ್ತು ನಿಯಂತ್ರಣದ ಉನ್ನತಾಧಿಕಾರವುಳ್ಳ ಭಾರತೀಯ…

3 hours ago

ಕಾಫಿ ಬೆಳೆಗಾರರ ನಿದ್ದೆಗೆಡಿಸಿದ ದರ ಕುಸಿತ

ಲಕ್ಷ್ಮಿಕಾಂತ್ ಕೊಮಾರಪ್ಪ ಹತ್ತಾರು ಸಮಸ್ಯೆಗಳ ನಡುವೆಯೂ ಕಾಫಿ ಬೆಳೆದಿದ್ದವರಿಗೆ ನಷ್ಟದ ಭೀತಿ; ಮತ್ತಷ್ಟು ದರ ಕುಸಿತಗೊಳ್ಳುವ ಸಾಧ್ಯತೆ ಸೋಮವಾರಪೇಟೆ: ಕಾರ್ಮಿಕರ ಕೊರತೆ,…

3 hours ago