ದೇಶ- ವಿದೇಶ

20 ವರ್ಷ ಕೋಮದಲ್ಲಿದ್ದ ಸೌದಿಯ ಪ್ರಿನ್ಸ್‌ ಇನ್ನಿಲ್ಲ

ಸೌದಿ ಅರೆಬೀಯಾ : ಕಳೆದ 20 ವರ್ಷಗಳಿಂದ ಕೋಮದಲ್ಲಿದ್ದ ಸೌದಿ ಅರೆಬೀಯಾ ರಾಜಕುಮಾರ್ ಆಲ್‌ವಲೀದ್ ಬಿನ್ ಖಾಲೀದ್ ಬಿನ್ ತಲಾಲ್ ಆಲ್ ಸೌದ್ ನಿನ್ನೆ ನಿಧನರಾಗಿದ್ದಾರೆ. 20 ವರ್ಷಗಳಿಂದ ಕೋಮದಲ್ಲಿದ್ದ ಅವರನ್ನು ಸ್ವೀಪಿಂಗ್ ಪ್ರಿನ್ಸ್ ಎಂದೇ ಕರೆಯಲಾಗುತ್ತಿತ್ತು.

ಸೌದಿ ರಾಜಮನೆತನದ ಹಿರಿಯ ಸದಸ್ಯರಾದ ಖಲೀದ್ ಬಿಬ್ ತಲಾಲ್ ಅವರ ಮಗ ಬಿಲೆನೀಯರ್ ಪ್ರಿನ್ಸ್‌ ಆಲ್‌ವಲೀದ್ ಬಿನ್ ತಲಾಲ್ ಅವರ ಸೋದರ ಅಳಿಯ ವಲೀದ್ ಅವರು 1990 ಏಪ್ರಿಲ್ ನಲ್ಲಿ ಜನಿಸಿದ್ದರು. 2005 ರಲ್ಲಿ ಲಂಡನ್‌ನಲ್ಲಿ ಮಿಲಿಟರಿ ತರಬೇತಿ ಸಮಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಆಗ ಅವರ ಮೆದುಳಿಗೆ ತೀವ್ರ ಗಾಯವಾಗಿ ಕೋಮಗೆ ಜಾರಿದ್ದರು.

ಸೌದಿ ಸರ್ಕಾರ ರಾಜಕುಮಾರನಿಗೆ ಚಿಕಿತ್ಸೆ ನೀಡಲು ಅಮೆರಿಕಾ ಮತ್ತು ಸ್ಪೇನ್‌ನಿಂದ ನುರಿತ ತಜ್ಞರನ್ನ ಕರೆಸಿತ್ತು. ಆದರೆ ಎಂದು ಪ್ರಜ್ಞೆ ಮರಳಿ ಬರಲೇ ಇಲ್ಲ. ದೇಹದಲ್ಲಿ ಚಲನೆ ಇತ್ತು. ಹೀಗಾಗಿ ಯಾವತ್ತಾದರೂ ಒಂದು ದಿನ ಏಳಬಹುವುದು ಎಂಬ ಆಸೆಯಲ್ಲಿ ಕುಟುಂಬದವರು ಇದ್ದರು.

ಆದರೆ ವೈದ್ಯರು ಅವರು ಎಂದೂ ಮೇಲೇಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಆದರೆ ಅವರ ತಂದೆ ಪ್ರಿನ್ಸ್ ಖಾಲಿದ್ ಮಾತ್ರ ಚಿಕಿತ್ಸೆ ನಿಲ್ಲಿಸಲು ನಿರಾಕರಿಸಿದರು. ಇದಾದ ನಂತರ ಅವರನ್ನು ರೀಯಾದ್ ಅರಮನೆಯಲ್ಲಿ ವಿಶೇಷ ಕೋಣೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಕೈ ಮತ್ತು ಕಣ್ಣು ರೆಪ್ಪೆಗಳು ಚಲನೆ ಇತ್ತು. ಆದರೆ ಒಂದು ದಿನ ಅವರು ಮರಳಿ ಬರಬಹುದೆಂಬ ಭರವಸೆಯನ್ನ ಜನರಿಗೆ ನೀಡಲಾಗಿತ್ತು. ಇದೀಗ ಅವರು ತನ್ನ 36 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅಂತಿಮವಾಗಿ ರಾಜಕುಮಾರ ಖಾಲಿದ್ ಬಿನ್ ತಲಾಲ್ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮೂಲಕ ತಮ್ಮ ಮಗನ ಸಾವನ್ನು ದೃಢಪಡಿಸಿದರು. ಅವರು ಭಾವನಾತ್ಮಕ ಸಂದೇಶದಲ್ಲಿ ಹೀಗೆ ಬರೆದಿದ್ದಾರೆ – ‘ ಅಲ್ಲಾಹುನ ಇಚ್ಛೆ ಮತ್ತು ಹಣೆಬರಹವನ್ನು ನಂಬಿ, ನಾವು ನಮ್ಮ ಮಗನ ಸಾವಿನ ಸುದ್ದಿ ತೀವ್ರ ದುಃಖದಿಂದ ತಿಳಿಸುತ್ತಿದ್ದೇವೆ ಎಂದು ಬರೆದಿದ್ದಾರೆ.

2005 ರಲ್ಲಿ ಲಂಡನ್‌ನ ಮಿಲಿಟರಿ ಅಕಾಡೆಮಿಯಲ್ಲಿ ಓದುತ್ತಿದ್ದಾಗ ಪ್ರಿನ್ಸ್ ಅಲ್ವಲೀದ್ ಗಂಭೀರ ರಸ್ತೆ ಅಪಘಾತದಲ್ಲಿ ಸಿಲುಕಿದ್ದರು. ಈ ಅಪಘಾತದಲ್ಲಿ ಅವರ ತಲೆಗೆ ತೀವ್ರ ಪೆಟ್ಟಾಯಿತು. ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿರುವಾಗ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವವಾಯಿತು.

ಅವರ ತಂದೆ, ಪ್ರಿನ್ಸ್ ಖಾಲಿದ್ ಬಿನ್ ತಲಾಲ್, ಕಳೆದ ಎರಡು ದಶಕಗಳಲ್ಲಿ ತಮ್ಮ ಮಗನನ್ನು ನೋಡಿಕೊಳ್ಳುವಲ್ಲಿ ಯಾವುದೇ ಲೋಪ ಮಾಡಲಿಲ್ಲ. ಪ್ರತಿ ವರ್ಷ ರಂಜಾನ್, ಈದ್ ಮತ್ತು ಇತರ ಧಾರ್ಮಿಕ ಸಂದರ್ಭಗಳಲ್ಲಿ, ಅವರು ತಮ್ಮ ಮಗನ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದರು.

ಅನೇಕ ಬಾರಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್‌ಗಳನ್ನು ಸಹ ಬರೆದರು. ಈ ವರ್ಷ, ಬಕ್ರೀದ್‌ನ ಮೂರನೇ ದಿನದಂದು , ಅವರು ತಮ್ಮ ಇತರ ಪುತ್ರರೊಂದಿಗೆ ಆಸ್ಪತ್ರೆಗೆ ಹೋಗಿ ಅಲ್ವಲೀದ್‌ಗಾಗಿ ಪ್ರಾರ್ಥಿಸಿದರು.

ಜುಲೈ 22 ರವರೆಗೆ ಅಲ್-ಫಖಾರಿಯಾದಲ್ಲಿರುವ ರಾಜಕುಮಾರ ಅಲ್ವಲೀದ್ ಬಿನ್ ತಲಾಲ್ ಅವರ ಅರಮನೆಯಲ್ಲಿ ಸಂತಾಪ ಸೂಚಿಸಲಾಗುವುದು. ರಾಜಕುಮಾರ ಅಲ್ವಲೀದ್ ಅವರ ಸಾವು ಸೌದಿ ಅರೇಬಿಯಾದಾದ್ಯಂತ ಶೋಕ ಅಲೆಗಳನ್ನು ಉಂಟುಮಾಡಿದೆ. ಜೀವನ ಮತ್ತು ಮರಣಕ್ಕಾಗಿ ರಾಜಕುಮಾರನ ದೀರ್ಘ ಹೋರಾಟವು ಪ್ರಪಂಚದಾದ್ಯಂತ ಜನರನ್ನು ಭಾವುಕರಾಗಿಸಿದೆ. ಅವರ ಅಂತ್ಯಕ್ರಿಯೆ ಭಾನುವಾರ ನೆರವೇರಿತು.

ಆಂದೋಲನ ಡೆಸ್ಕ್

Recent Posts

ಶಿವಸ್ವಾಮಿಯವರೊಳಗಿನ ಕನ್ನಡದ ಮೇಷ್ಟ್ರು ನಿವೃತ್ತರಾಗುವುದಿಲ್ಲ

ಸಿ.ಎಂ.ನರಸಿಂಹಮೂರ್ತಿ ಪಾಠ ಪ್ರವಚನಗಳ ಜೊತೆ ವಿದ್ಯಾರ್ಥಿಗಳ ನೋವು ನಲಿವುಗಳಿಗೂ ಸ್ಪಂದಿಸುತ್ತಿದ್ದ ಈ ಗುರುಗಳ ಗುಣ ದೊಡ್ಡದು ಶಿವಸ್ವಾಮಿ ಎಂಬ ಕನ್ನಡದ…

3 hours ago

ಸಸ್ಯಾಹಾರಿಗಳ ದುಃಸ್ವಪ್ನ ಮಕಾವ್ ಮತ್ತು ಹಾಂಗ್‌ಕಾಂಗ್…

ಸಿರಿ ಮೈಸೂರು ಮಾಂಸಾಹಾರಿಗಳಿಗೆ ಮಾತ್ರ ಇಲ್ಲಿ ಸಿಗುವಷ್ಟು ವೈವಿಧ್ಯದ ಆಹಾರಗಳು ಇನ್ನೆಲ್ಲೂ ಸಿಗಲಾರವು. ನೀವೂ ಮಾಂಸಾಹಾರಿ ಆಗಿದ್ದರೆ ಹಾಂಗ್‌ಕಾಂಗ್‌ಗೆ ಬಂದಾಗ…

3 hours ago

ವಿಶ್ವ ಸಂಗೀತ ದಿನದಂದು ರಮ್ಮನಹಳ್ಳಿಯ ಜನಪದ ಗಾಯಕ ಅಂಕಪ್ಪನವರ ಕುರಿತು…

ಡಾ.ಮೈಸೂರು ಉಮೇಶ್ ಹತ್ತಾರು ಜನಪದ ಕಾವ್ಯ, ನೂರಾರು ತತ್ವಪದ ಮತ್ತು ಭಜನೆ ಪದಗಳನ್ನು ಹಾಡುವ ಅಂಕಪ್ಪ ಈ ನೆಲದ ಸಂಪತ್ತು …

3 hours ago

ಕರ್ತೋಜಿಯಲ್ಲಿ ಸುಸಜ್ಜಿತ ತಡೆಗೋಡೆ ನಿರ್ಮಾಣ

ನವೀನ್ ಡಿಸೋಜ ಮಡಿಕೇರಿ-ಮಂಗಳೂರು ಹೆದ್ದಾರಿಯ ಈ ಪ್ರದೇಶ ಈಗ ಸುರಕ್ಷಿತ ೧೧ ಸೂಕ್ಷ್ಮ ಪ್ರದೇಶಗಳಲ್ಲಿ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿ  ಮಡಿಕೇರಿ:…

3 hours ago

ಸಂಪುಟ ವಿಸ್ತರಣೆ: ಮೈಸೂರು ಭಾಗದ ‘ಕೈ’ಶಾಸಕರ ಕಸರತ್ತು

ಕೆ.ಬಿ.ರಮೇಶನಾಯಕ ಮೈಸೂರು: ರಾಜ್ಯಸಭೆ, ರಾಜ್ಯ ವಿಧಾನ ಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಚಟುವಟಿಕೆ ಚುರುಕುಗೊಂಡಿದ್ದು, ಮೈಸೂರು ಭಾಗದ…

3 hours ago

‘ಪ್ರಾಮಾಣಿಕ ಸೇವೆ; ಪಾರದರ್ಶಕ ಆಡಳಿತಕ್ಕೆ ಬದ್ಧʼ

ಸಂದರ್ಶನ: ಶ್ರೀಧರ್ ಆರ್ ಭಟ್ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ  ಮೈಸೂರು: ನಗರಾಭಿವೃದ್ಧಿ ಇಲಾಖೆಯಲ್ಲಿ ಹಲವಾರು ಸವಾಲುಗಳಿವೆ. ಸಚಿವನಾಗಿ…

3 hours ago